ಮುದ್ದೇಬಿಹಾಳ : ಯುಪಿಎಸ್ಸಿ ಪರೀಕ್ಷೆಯಲ್ಲಿ ಪಟ್ಟಣದ ಯುವಕ ರಾಹುಲ್ ಯರಂತೇಲಿ 462ನೇ ರ್ಯಾಂಕ್ ಪಡೆದುಕೊಂಡ ಹಿನ್ನೆಲೆಯಲ್ಲಿ ಮುದ್ದೇಬಿಹಾಳದ ಗಾಣಿಗ ಸಮಾಜದಿಂದ ಈಚೇಗೆ ಸನ್ಮಾನಿಸಲಾಯಿತು.
ಬಿಇಒ ಬಿ. ಎಸ್. ಸಾವಳಗಿ ಮಾತನಾಡಿ, ರಾಹುಲ್ ಪ್ರಾಥಮಿಕ ಶಾಲಾ ಶಿಕ್ಷಕರ ಪುತ್ರನಾಗಿದ್ದುಕೊಂಡು ದೇಶವೇ ತಿರುಗಿ ನೋಡುವಂತಹ ಸಾಧನೆ ತೋರಿದ್ದು ಹೆಮ್ಮೆಯ ಸಂಗತಿ. ಸಮಾಜ ಸೇವೆ ಮುಂದುವರೆಸಲಿ ಎಂದರು.
ಅಂಜುಟಗಿ ಪಿಡಿ ಉಮಾಪತಿ ಚೌಧರಿ, ಬೇನಾಳ ಸರ್, ವಕೀಲ ಸಿ.ಎಂ.ಹಾವರಗಿ, ಡಾ. ಆರ್. ಎಸ್. ಮಸೂತಿ, ಡಾ. ಆನಂದ ಚೌಧರಿ, ಜಗದೀಶ ಪಂಪಣ್ಣವರ, ಗುರುನಾಥ ಕಡಕೋಳ, ಜಗದೀಶ ಸಜ್ಜನ, ಶಿಕ್ಷಕ ಸಜ್ಜನ, ಯಾಳವಾರ, ಬಿ. ಎಂ. ಮಟ್ಯಾಳ, ಚೆನ್ನಪ್ಪ ಯರಂತೇಲಿ ಇದ್ದರು.