ಬೆಂಗಳೂರು: ಚೆನ್ನೈ ವಿರುದ್ಧ ತವರಿಂನಗಳದಲ್ಲಿ ನಡೆದ ಪಂದ್ಯದಲ್ಲಿ ಆರ್.ಸಿ.ಬಿ ರೋಚಕ 2 ರನ್ ಗಳ ಜಯಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಟಗಾರರ ಅಬ್ಬರ ಹಾಗೂ ಅಂತಿಮ ಹಂತದಲ್ಲಿ ಶೆಫರ್ಡ್ ರೌದ್ರಾವತಾರದ ಆಟದ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿದ್ದು, 214 ರನ್ಗಳ ಗುರಿಯನ್ನು ನೀಡಿತ್ತು.
ಗುರಿ ಬೆನ್ನತ್ತಿದ್ದ ಸಿ.ಎಸ್.ಕೆ ತಂಡ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಕಲೆ ಹಾಕಿ ವಿರೋಚಿತ ಸೋಲು ಕಂಡಿತ್ತು.
8 ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 16 ಅಂಕಗಳನ್ನು ಪಡೆದುಕೊಂಡು ಅಗ್ರಸ್ಥಾನಕ್ಕೇರಿದೆ. ಇನ್ನು ಈ ಬಾರಿಯ ಪ್ಲೇಆಫ್ ಪ್ರವೇಶಿಸಲು ಕನಿಷ್ಟ 16 ಅಂಕಗಳು ಬೇಕಾಗುವ ಸಾಧ್ಯತೆಗಳು ಹೆಚ್ಚಿದ್ದು, ಆರ್ಸಿಬಿ ಈಗಾಗಲೇ ಆ ಅಂಕವನ್ನು ಪಡೆದುಕೊಂಡಿದೆ. ಆರ್ಸಿಬಿ ಇನ್ನೂ 3 ಪಂದ್ಯಗಳನ್ನಾಡಲಿದ್ದು ಇದರಲ್ಲಿ ಒಂದು ಪಂದ್ಯವನ್ನು ಗೆದ್ದರು 18 ಅಂಕಗಳಾಗಲಿದ್ದು, ಟಾಪ್ 2 ರಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
17ನೇ ಓವರ್ನ ಮೂರನೇ ಎಸೆತದಲ್ಲಿ ಆರ್ಸಿಬಿ ವೇಗದ ಬೌಲರ್ ಲುಂಗಿ ಎನ್ಗಿಡಿ ಸಿಎಸ್ಕೆ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ರನ್ನು ವಿಕೆಟ್ ಮುಂದೆ ಟ್ರ್ಯಾಪ್ ಮಾಡಿದರು. ಆಗ ಅಂಪೈರ್ ತಕ್ಷಣವೇ ಎಲ್ಬಿಡಬ್ಲ್ಯೂ ಔಟ್ ಎಂದು ತೀರ್ಮಾನಿಸಿದರು. ಆದರೆ, ಮೈದಾನದ ದೊಡ್ಡ ಪರದೆಯಲ್ಲಿ ಡಿಆರ್ಎಸ್ ಗಡಿಯಾರ ಕಾಣಿಸದ ಕಾರಣ, ಬ್ರೆವಿಸ್ ಎರಡು ರನ್ಗಾಗಿ ಓಡಲು ಯತ್ನಿಸಿದರು. ಆದರೆ, ಅಂಪೈರ್ ಅವರಿಗೆ ಔಟ್ ಆಗಿರುವುದನ್ನು ತಿಳಿಸಿದಾಗ, ಬ್ರೆವಿಸ್ ಡಿಆರ್ಎಸ್ ಮೂಲಕ ತೀರ್ಮಾನವನ್ನು ಪರಿಶೀಲಿಸಲು ಒತ್ತಾಯಿಸಿದರು. ಆದರೆ, ಈ ಸಂದರ್ಭದಲ್ಲಿ ಡಿಆರ್ಎಸ್ ಕರೆಗೆ ನಿಗದಿಯಾದ 15 ಸೆಕೆಂಡ್ಗಳ ಸಮಯ ಮುಗಿದಿತ್ತು. ಇದರಿಂದಾಗಿ, ಬ್ರೆವಿಸ್ ಗೋಲ್ಡನ್ ಡಕ್ನೊಂದಿಗೆ ಪೆವಿಲಿಯನ್ಗೆ ಮರಳಬೇಕಾಯಿತು.
17 ವರ್ಷಗಳ ನಂತರ ಆರ್.ಸಿ.ಬಿ ತಂಡ ಚೆನ್ನೈ ವಿರುದ್ಧ ಎರಡು ಪಂದ್ಯಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ.