Life threat from municipal staff's family: Allegation

ಪುರಸಭೆ ಸಿಬ್ಬಂದಿ ಕುಟುಂಬದಿಂದಲೇ ಜೀವ ಬೆದರಿಕೆ: ಆರೋಪ

ಪುರಸಭೆ ಸಿಬ್ಬಂದಿ ಕುಟುಂಬದಿಂದಲೇ ಜೀವ ಬೆದರಿಕೆ: ಆರೋಪ

ಮುದ್ದೇಬಿಹಾಳ : ಪುರಸಭೆಯಲ್ಲಿ ಅನಧಿಕೃತವಾಗಿ ನೇಮಕಗೊಂಡಿರುವ ಸಿಬ್ಬಂದಿಯೊಬ್ಬ ತನ್ನ ಕುಟುಂಬದವರು ಹಾಗೂ ತನ್ನ ಹಿಂಬಾಲಕರೊಂದಿಗೆ ನನಗೆ ಜೀವ ಬೆದರಿಕೆ ಒಡ್ಡಿದ್ದು ನನಗೆ ಹಾಗೂ ನನ್ನ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಪುರಸಭೆ ಸದಸ್ಯ ಶಿವು ಶಿವಪೂರ(ಹರಿಜನ) ಪೊಲೀಸರಿಗೆ ಮನವಿ ಮಾಡಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಕರೆದಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಕುಂದುಕೊರತೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಶಿವಪೂರ, ಕೋರ್ಟಿನ ಆದೇಶ ತಿರುಚಿ ಮೂಲಿಮನಿ ಎಂಬುವರು ನೌಕರಿ ಮಾಡುತ್ತಿದ್ದು ಅವರ ಮೇಲೆ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಪತ್ರ ಕೊಟ್ಟಿದ್ದಕ್ಕೆ ನನ್ನ ಮೇಲೆ ಹಗೆ ಸಾಧಿಸುತ್ತಿದ್ದಾರೆ ಎಂದು ದೂರಿದರು.
ದಲಿತ ಮುಖಂಡರಾದ ಹರೀಶ ನಾಟೀಕಾರ, ಪರಶುರಾಮ ನಾಲತವಾಡ, ಬಸವರಾಜ ಪೂಜಾರಿ, ದೇವರಾಜ ಹಂಗರಗಿ ಮತ್ತಿತರರು ಮಾತನಾಡಿ, ಕೋರ್ಟಿನ ಆದೇಶವನ್ನು ತಿರುಚಿ ಅನಧಿಕೃತವಾಗಿ ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ಮೂಲಿಮನಿ ಎಂಬ ನೌಕರನಿಂದ ಸದಸ್ಯ ಶಿವಪೂರಗೆ ಎರಡ್ಮೂರು ಬಾರಿ ಹಲ್ಲೆ ಪ್ರಯತ್ನ ನಡೆದಿದ್ದು ಜೀವ ಬೆದರಿಕೆ ಕೂಡಾ ಹಾಕಿದ್ದಾರೆ. ಈ ವಿಷಯವಾಗಿ ಜಿಲ್ಲಾಧಿಕಾರಿ, ಎಸ್ಪಿ ಅವರಿಗೂ ಪತ್ರ ಕೊಟ್ಟಿದ್ದು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಇದಕ್ಕೆ ಸ್ಪಂದಿಸಿದ ಪಿಎಸ್‌ಐ ಸಂಜಯ ತಿಪರೆಡ್ಡಿ, ಈ ವಿಷಯವಾಗಿ ಮೇಲಧಿಕಾರಿಗಳಿಂದ ಪತ್ರ ಬಂದಿದ್ದು ಎದುರುದಾರರಿಂದಲೂ ಪತ್ರ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ದಲಿತ ಮುಖಂಡರು, ಪರಿಶಿಷ್ಟ ಜಾತಿ ಜನಾಂಗದವರ ಮೇಲೆ ಶೋಷಣೆ ನಡೆಯುತ್ತಿರುವಾಗ ಎದುರುದಾರರಿಂದ ದೂರು ದಾಖಲಿಸಿಕೊಂಡು ಸಮುದಾಯದ ರಕ್ಷಣೆಯನ್ನು ಕಡೆಗಣಿಸಲಾಗುತ್ತದೆ ಎಂದು ಆರೋಪಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಪಿಐ ಮಹ್ಮದ ಫಸೀವುದ್ದೀನ್ ಸಭೆಗೆ ಭರವಸೆ ನೀಡಿದರು.

ಇನ್ನುಳಿದಂತೆ ನೇತಾಜಿ ನಗರಕ್ಕೆ ಹೋಗುವ ರಸ್ತೆಯ ಮುಂದೆ ಓರ್ವ ಮಹಿಳೆಯಿಂದ ಮಾಂಸ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು ಯಾವ ಅಧಿಕಾರಿಗೂ ಆಕೆ ಹೆದರುವುದಿಲ್ಲ. ಅವಳಿಂದಲೇ ಇನ್ನುಳಿದವರು ಪುರಸಭೆಯ ಅನುಮತಿ ಇಲ್ಲದೇ ಎಲ್ಲೆಂದರಲ್ಲಿ ಮಾಂಸ ಮಾರಾಟದಲ್ಲಿ ತೊಡಗಿದ್ದಾರೆ. ಅನಧಿಕೃತವಾಗಿ ಮಾಂಸ ಮಾರಾಟ ಮಾಡುವವರನ್ನು ತೆರವುಗೊಳಿಸುವ ಕೆಲಸ ಪುರಸಭೆಯಿಂದ ಮಾಡಬೇಕು. ಕಸಾಯಿಖಾನೆಯನ್ನು ಸ್ಥಳಾಂತರಿಸಬೇಕು ಎಂದು ಮುಖಂಡ ಪರಶುರಾಮ ನಾಲತವಾಡ, ಭೀಮಣ್ಣ ದಾಸರ, ಶಿವಪುತ್ರ ಅಜಮನಿ ಒತ್ತಾಯಿಸಿದರು.

ಮುಖಂಡ ತಿಪ್ಪಣ್ಣ ದೊಡಮನಿ ಮಾತನಾಡಿ, ಈಚೇಗೆ ಕೆಲವು ಪ್ರಕರಣಗಳಲ್ಲಿ ದಲಿತ ಜನಾಂಗದವರ ಮೇಲೆ ಶೋಷಣೆ ನಡೆದಾಗ ಪೊಲೀಸರ ಸ್ಪಂದನೆ ತೃಪ್ತಿಕರವಾಗಿಲ್ಲ. ದಲಿತರೊಂದಿಗೆ ಪೊಲೀಸ್ ಇಲಾಖೆ ಅಂತರ ಕಾಯ್ದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೆಲವು ಹಳ್ಳಿಗಳ ಚಹಾದ ಅಂಗಡಿಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಿದೆ. ಅಸ್ಪೃಶ್ಯತೆ ಆಚರಣೆಯ ನಿಷೇಧದ ಕುರಿತು ನಾಮಫಲಕಗಳನ್ನು ಅಳವಡಿಸುವ ಕೆಲಸ ಮಾಡಬೇಕು. ಮದ್ಯಮಾರಾಟ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು. ದಲಿತ ಹುಡುಗ ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಆ ಸಮುದಾಯದವರಿಂದ ಹುಡುಗನಿಗೆ ಬೆದರಿಕೆ ಹಾಕುವ ಕಾರ್ಯ ನಡೆದಿದ್ದು ನ್ಯಾಯಯುತವಾಗಿ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಬೇಕು. ನಾಲತವಾಡ ರಸ್ತೆಯಲ್ಲಿರುವ ದಲಿತ ಜನಾಂಗದವರ ಸ್ಮಶಾನ ಭೂಮಿ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಬೇಕು. ಗ್ರಾಮೀಣ ಭಾಗದಲ್ಲಿ ಬೀಟ್ ವ್ಯವಸ್ಥೆಗೆ ಬರುವ ಪೊಲೀಸರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದವರ ಕಾಲೋನಿಗಳಲ್ಲಿ ಬರುವುದಿಲ್ಲ. ಇದನ್ನು ಸರಿಪಡಿಸಬೇಕು. ಕೃಷ್ಣಾ ನದಿಯಲ್ಲಿನ ಮಣ್ಣು ಸಾಗಿಸಲು ಅನುಮತಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳು, ಸಮಸ್ಯೆಗಳ ಕುರಿತು ಗಮನ ಸೆಳೆದರು. ಸಿಪಿಐ ಮಹ್ಮದ ಫಸೀವುದ್ದೀನ ಮಾತನಾಡಿ, ದಲಿತ ಜನಾಂಗದವರ ಬೇಡಿಕೆಗಳು, ಸಮಸ್ಯೆಗಳನ್ನು ಆಲಿಸಿದ್ದು ಗಂಭೀರವಾಗಿರುವ ಕೆಲವು ಪ್ರಕರಣಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ಸರಿಪಡಿಸುವ ಕೆಲಸ ಮಾಡಲಾಗುವುದು. ಕಾನೂನು ಚೌಕಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಮುಖಂಡರಾದ ಪ್ರಶಾಂತ ಕಾಳೆ, ಡಿ. ಬಿ. ಮುದೂರ, ದೌರ್ಜನ್ಯ ತಡೆ ಸಮಿತಿ ಸದಸ್ಯ ಮಲ್ಲು ತಳವಾರ, ವಾಯ್. ಎಚ್. ವಿಜಯಕರ್, ಮಲ್ಲಿಕಾರ್ಜುನ ತಂಗಡಗಿ, ಪ್ರಕಾಶ ಚಲವಾದಿ, ಬಲಭೀಮ ನಾಯ್ಕಮಕ್ಕಳ, ರಾಮಣ್ಣ ರಾಜನಾಳ, ಸಿ. ಜಿ. ವಿಜಯಕರ್, ಅನಿಲ ನಾಯಕ, ನಾಗೇಶ ಭಜಂತ್ರಿ, ಭಗವಂತ ಕಬಾಡೆ ಸೇರಿದಂತೆ ಹಲವು ಮುಖಂಡರು ಇದ್ದರು.

ಪಿಲೇಕೆಮ್ಮ ನಗರದಲ್ಲಿ ಬೇರೊಂದು ನಗರಗಳ ಪುಡಾರಿಗಳು ಬಂದು ಅನಧಿಕೃತ ಚಟುವಟಿಕೆಗಳನ್ನು ಮಾಡುತ್ತಾರೆ. ಆದರೆ ಪಿಕೆ ನಗರದ ಹೆಸರಿಗೆ ಮಸಿ ಬಳಿಯುವ ಯತ್ನ ನಡೆಯುತ್ತಿದೆ. ಅಕ್ರಮ ಚಟುವಟಿಕೆಗಳನ್ನು ಮಾಡುವವರ ಮೇಲೆ ಇಲಾಖೆ ನಿಗಾ ಇರಿಸಬೇಕು. ಹೆಗಲು ಪಿಕೆ ನಗರದವರದ್ದಾಗಿದ್ದು ಬಂದೂಕು ಬೇರೆ ನಗರದವರದ್ದಾಗಿರುತ್ತದೆ. ಆದರೆ ಹೆಸರು ಕೆಡುತ್ತಿರುವುದು ಪಿಲೇಕೆಮ್ಮ ನಗರದವರದ್ದಾಗಿದೆ. ಈ ಬಗ್ಗೆ ಇಲಾಖೆಯಿಂದ ಕಠಿಣ ಕ್ರಮ ಕೈಗೊಳ್ಳಬೇಕು.

Latest News

Redbet Local casino Opinion 2025 £2 hundred Earliest Deposit Incentive

ArticlesRedbet Cellular Gambling enterprise | william hill alkalmazásokRedbet Local casino acceptance

Betfair Extra Code & Register Provide: Bet £ten for £fifty totally free bets Oct 2025

PostsTippek a sportfogadások megnyeréséhez: 18+ T&Cs Implement Delight Play Sensibly Gambleaware.orgBetfair

Incentive Tax Calculator %

PostsSort of On line Betting Bonuses | bet at home sportszemleDo

Übersicht zum Betitall Casino und seinen Merkmalen

Das Betitall Casino ist ein online-Angebot, das den Spielern ermöglicht, ihre

MineDrop

La slot "MineDrop" è un gioco di probabilità progettato per simularne l'esperienza del giocatore, immerso nel mondo dei pozzi minatori e della corsa all'oro. È sviluppata da una società specializzata in giochi online e disponibile su diversi siti web che offrono gioco d'azzardo virtuale. Tema e Progetto Visivo Il tema

Spielbank Merkur

Als ein führendes Online-Casino-Branche in Deutschland, bietet Spielbank Merkur seinen Kunden eine umfangreiche Auswahl an Automatenspielen und anderen Casinoklassikern. Im Folgenden werden wir uns mit dem Brand-Überblick, Registrierungsprozess, Account-Funktionen, Boni, Zahlungen und Auszahlungen, Spielkategorien, Software-Anbietern, mobiler Version, Sicherheit und Lizenz, Kundenunterstützung, Benutzererfahrung und Leistungsvorgaben befassen. Brand-Überblick Spielbank Merkur wurde im