ಮುದ್ದೇಬಿಹಾಳ : ವಕ್ಫ್ (ತಿದ್ದುಪಡಿ) ಕಾಯ್ದೆ 2025 ರ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕರೆ ನೀಡಿದಂತೆ ಬುಧವಾರ ರಾತ್ರಿ 9 ಗಂಟೆಗೆ ‘ಬತ್ತಿ ಗುಲ್’ ಎಂಬ ಹೆಸರಿನಲ್ಲಿ 15 ನಿಮಿಷ ಕಾಲ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಮುಸ್ಲಿಂ ಬಾಂಧವರು ದೀಪಗಳನ್ನು ಆರಿಸಿ ಮೌನ ಪ್ರತಿಭಟನೆಯಲ್ಲಿ ಭಾಗಿಯಾದರು.
ಮುದ್ದೇಬಿಹಾಳ ಪಟ್ಟಣದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಬತ್ತಿ ಗುಲ್ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಸಮುದಾಯದ ಜನರು ತಮ್ಮ ಮನೆಗಳಲ್ಲಿ ದೀಪ ಆರಿಸಿ, ಮಸೀದಿಗಳ, ಹಾದಿ ಬೀದಿಗಳಲ್ಲಿ ಕಗ್ಗತ್ತಲೆ ಆವರಿಸಿತು. ವಾಣಿಜ್ಯ ಮಳಿಗೆಗಳೂ 15 ನಿಮಿಗಳ ಕಾಲ ದೀಪ ಆರಿಸಿ ಬೆಂಬಲ ವ್ಯಕ್ತಪಡಿಸಲಾಯಿತು ಎಂದು ಮುಸ್ಲಿಂ ಸಮಾಜದ ಮುಖಂಡರಾದ ಮೌಲಾನಾ ಅಲ್ಲಾಭಕ್ಷ ಖಾಜಿ, ಇಸಾಕ್ ಮಾಗಿ, ಯುವ ಮುಖಂಡ ಗುಲಾಮೊಹ್ಮದ ದಫೇದಾರ ತಿಳಿಸಿದರು.