ತಾಳಿಕೋಟಿ: ಆರೋಗ್ಯ ಸಮುದಾಯ ಕೇಂದ್ರದ ಆಡಳಿತದ ಪರಸ್ಥಿತಿ ದುರಾಡಳಿತ ಸಂಪೂರ್ಣ ಹದಗೆಟ್ಟು ಹೋಗಿದೆ. ಇಲ್ಲಿ ಕೇಳವರು-ಹೇಳುವವರು ಯಾರು ಇಲ್ಲದಂತಾಗಿದೆ.
ವಿಜಯಪುರ ಜಿಲ್ಲೆಯ ತಾಳಿಕೋಟಿಯ ಆರೋಗ್ಯ ಸಮುದಾಯ ಕೇಂದ್ರದಲ್ಲಿ ವೈದ್ಯರು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಬೆಳಿಗ್ಗೆ 11 ಗಂಟೆಗೆ ಬಂದು 1 ಗಂಟೆಗೆ ಹೋದವರು ಕಾಣೆಯಾಗುತ್ತಾರೆ ಎಂದು ಸಾರ್ವಜನಿಕರು ತರಾಟೆಗೆ ತಗೆದು ಕೊಂಡಿದ್ದರು.
THO ಡಾ. ಸತೀಶ ತಿವಾರಿ ಇವರು
ಸಮುದಾಯ ಅರೋಗ್ಯ ಕೇಂದ್ರದಲ್ಲಿ ಆಡಳಿತದ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ನೌಕರಿಗೆ ಹಾಜರಾಗುತ್ತಾರೋ ಇಲ್ಲೋ ಎಂಬವುದನ್ನು ವೀಕ್ಷಿಸುವುದಿಲ್ಲ. ನಿರ್ಲಕ್ಷದಿಂದ ಜವಾಬ್ದಾರಿಯನ್ನು ಮರೆತು ಬಿಟ್ಟಿದ್ದಾರೆ. ಇಲ್ಲಿನ ಸರ್ಕಾರಿ ದವಾಖಾನೆಗೆ ಆಂಬುಲೆನ್ಸ್, ನಗು ಮಗು ವಾಹನ ಲಭ್ಯವಿಲ್ಲ. ಬಾಣಂತಿಯರು ಆಟೋ ಕಾರುಗಳನ್ನು ಬಾಡಿಗೆ ಮಾಡಿಕೊಂಡು ತಮ್ಮ ಸ್ಥಳಕ್ಕೆ ಹೋಗಬೇಕು. ಈ ಆರೋಗ್ಯ ಕೇಂದ್ರದ ಸದ್ಯದ ಪರಸ್ಥಿತಿ ಚಿಂತಾಜನಕವಾಗಿದೆ.
ಬೇಸಿಗೆ ಸಮಯದಲ್ಲಿ ಹೃದಯಘಾತಕ್ಕೆ ಸಂಬಂಧಿಸಿದ ರೋಗಿಗಳು ಬಂದ್ರೆ ಅವರಿಗೆ ಯಾವುದೇ ತರಹದ ಚಿಕಿತ್ಸೆ ಲಭಿಸುವ ಔಷಧಿ ವ್ಯವಸ್ಥೆ ಇಲ್ಲ. ಸರಿಯಾದ ಸಮಯದಲ್ಲಿ ಆಕ್ಸಿಜನ್ ಲಭ್ಯವಿರುವುದಿಲ್ಲ. ಶಸ್ತ್ರ ಚಿಕಿತ್ಸೆಗೆ ಅವಶ್ಯಕವಾಗಿರುವ ವಸ್ತುಗಳು ಸಹ ಲಭ್ಯ ಇಲ್ಲ. ಕೈ ಕಾಲು ಮುರಿದರೆ ಎಕ್ಸ್-ರೇ ಮಷಿನ್ ಇದ್ರೂ ಕೂಡಾ ಬಹಳ ದಿನದಿಂದ ಕೆಟ್ಟು ಹೋಗಿದ್ದು, ಸಾರ್ವಜನಿಕರೇ ರಿಪೇರಿ ಮಾಡಿಸುವಂತ ಪರಿಸ್ಥಿತಿ ಉಂಟಾಗಿದೆ. ರೋಗಿಗಳಿಗೆ ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ಕಳಿಸುವ ವಿಧಾನ ಈ ತಾಳಿಕೋಟಿಯ ಅರೋಗ್ಯ ಸಮುದಾಯ ಕೇಂದ್ರದಲ್ಲಿ ನಿತ್ಯ ಕೇಳಿ ಬರುವ ಸಾಮಾನ್ಯ ಮಾತಾಗಿದೆ ಎಂದು ಆಸ್ಪತ್ರೆಗೆ ಬಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ವರದಿ : ಶಿವು ರಾಠೋಡ