The recent murder case in Narayanpur police station is a new twist

ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಡೆದ ಕೊಲೆ ಪ್ರಕರಣ ಹೊಸ ಟ್ವಿಸ್ಟ್

ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಡೆದ ಕೊಲೆ ಪ್ರಕರಣ ಹೊಸ ಟ್ವಿಸ್ಟ್

ನಾರಾಯಣಪುರ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಂಡಬಾವಿ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸೂಕ್ಷ್ಮವಾಗಿ ಕೊಲೆ ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸ್ ಇಲಾಖೆ ಅಧಿಕಾರಿಗಳು ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ಯಾದಗಿರಿ ಎಸ್‌ಪಿಯವರ ಆದೇಶದಂತೆ, ಸಿಪಿಐ ರವಿಕುಮಾರ್ ಹುಣಸಗಿ ವೃತ್ತ ಇವರ ತನಿಖೆ ಕೈಗೊಂಡು ಸತ್ಯಾಸತ್ಯತೆಯನ್ನು ಬಯಲಿಗೆಳೆದಿದ್ದಾರೆ.

ಮೃತ ವ್ಯಕ್ತಿಯ ಹೆಂಡತಿಯಾದ ರೇಣುಕಮ್ಮ ಗಂಡ ಗೌಡಪ್ಪ ಚವನಬಾವಿ ಸಾ. ಜೋಗಂಡಬಾವಿ ಅವರು ನೀಡಿದ ದೂರಿನ ಮೇರೆಗೆ ದಿನಾಂಕ 22 -4 – 2025 ರಂದು ಆರೋಪಿತರಾದ ನೀಲಪ್ಪ ತಂದೆ ಯಮನಪ್ಪ ಹಾಗೂ ಇನ್ನಿತರರು ಸಾ. ಜೋಗಂಡಬಾವಿ ಹಳೆಯ ವೈರತ್ವದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದರು.

ಈ ಕುರಿತು ತನಿಖೆ ಮುಂದುವರೆಸಿದ ಅಧಿಕಾರಿಗಳು ನಿಜ ಘಟನೆಯನ್ನು ಅರಿತು ದಿಗ್ಭ್ರಮೆಗೊಳಗಾಗಿದ್ದಾರೆ. ಗೌಡಪ್ಪನ ಅಕ್ಕನ ಮಗನಾದ ಸರಿಸುಮಾರು 14 ವರ್ಷದ ಬಾಲಕ (ಹೆಸರು ನಮೂದಿಸುವುದಿಲ್ಲ) ಬಡಿಗೆಯಿಂದ ತಲೆ ಹಿಂಬದಿಯಲ್ಲಿ ಹೊಡೆದಿರುತ್ತಾನೆ. ಈ ಪ್ರಕರಣವು ಕೆಂಭಾವಿ ಠಾಣೆ ವ್ಯಾಪ್ತಿಯ ಅಗತೀರ್ಥ ಸೀಮಾಂತರದಲ್ಲಿ ಕುರಿ ದೊಡ್ಡಿಯನ್ನು ಹಾಕಿರುತ್ತಾರೆ ಅಳಿಯ ಮತ್ತು ಮಾವನ ಮದ್ಯ ಯಾವುದೋ ವಿಷಯಕ್ಕೆ ಜಗಳವಾಡುತ್ತಾರೆ. ಆ ಜಗಳದಲ್ಲಿ ಅಳಿಯ ಮಾವನಿಗೆ ತಲೆ ಹಿಂಬದಿಯಲ್ಲಿ ಕಟ್ಟಿಗೆಯಿಂದ ಹೊಡೆದಿರುತ್ತಾನೆ. ಅದರೆ, ಈ ವಿಚಾರವನ್ನು ಸುಳ್ಳು ಕಟ್ಟುಕಥೆ ಕಟ್ಟಿ ಮತ್ತೊಬ್ಬರ ಮೇಲೆ ಪ್ರಕರಣ ದಾಖಲೆಯನ್ನು ಮಾಡಿಸಿರುತ್ತಾರೆ. ಈ ಘಟನೆಯಲ್ಲಿ ಕುಟುಂಬಸ್ಥರೇ ಆರೋಪಿಗಳಾಗಿದ್ದಾರೆ.

ಈ ಘಟನೆಯು ದಿನಾಂಕ 19- 4- 2025 ರಂದು ಸುಮಾರು 9:00 ಗಂಟೆ ರಾತ್ರಿ ವೇಳೆಯಲ್ಲಿ ನಡೆದಿದೆ. ಕುಟುಂಬಸ್ಥರೇ ಕೊಲೆ ಮಾಡಿ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಸಾಯಂಕಾಲ 4 ಗಂಟೆವರೆಗೆ ಶವವನ್ನಿಟ್ಟು ಪ್ರತಿಭಟನೆ ಮಾಡುತ್ತಾರೆ. ಬಾಗಲಕೋಟ ಆಸ್ಪತ್ರೆಯಿಂದ ತಂದು ಪೊಲೀಸ್ ಠಾಣೆ ಮುಂದೆ ಶವ ಇಟ್ಟು ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಪ್ರತಿಭಟನೆ ಮಾಡುದರ ಜೊತೆಗೆ ರಾತ್ರಿ 11 ಗಂಟೆ ನಂತರ ಶವವನ್ನು ತಗೆದುಕೊಂಡು ಹೋಗುತ್ತಾರೆ. ಪೊಲೀಸರೇ ಆರೋಪಿಗಳ ಎಂಬುವಂತೆ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

ದಕ್ಷ ಅಧಿಕಾರಿ ರಾಜಶೇಖರ್ ರಾಠೋಡ ಪಿ.ಎಸ್.ಐ ನಾರಾಯಣಪುರ ಅವರ ವಿರುದ್ಧ ಶವವಿಟ್ಟು ಪ್ರತಿಭಟನೆ ಮಾಡಿ ಸುಳ್ಳು ಆರೋಪ ಮಾಡುತ್ತಾರೆ.

ವರದಿ : ಶಿವು ರಾಠೋಡ

Latest News

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಬಾಗಲಕೋಟೆ: ಎರಡು ‌ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಎರಡು ಕಾರು ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ದುರ್ಮರಣ! ಮತ್ತೊಬ್ಬ ಮಗ-ತಂದೆ ಸ್ಥಿತಿ ಗಂಭೀರ

ಬಾಗಲಕೋಟೆ: ಎರಡು ‌ಕಾರುಗಳು ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕಾರಿನಲ್ಲಿದ್ದ ಇಬ್ಬರು

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳಿ-ಅಂಗಡಿ

ಮುದ್ದೇಬಿಹಾಳ : ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ತಮ್ಮನ್ನು ಆಧುನಿಕ ಮಾಧ್ಯಮಗಳಲ್ಲಿ ಮಗ್ನರಾಗಿದ್ದು ಮಾನವೀಯ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರ ಮೂಲದ ಕಾರ್ಮಿಕ ಸಿಡಿಲಿಗೆ ಬಲಿ

ಮುದ್ದೇಬಿಹಾಳ : ಕೆಬಿಜೆಎನ್‌ಎಲ್‌ದಿಂದ ಎ.ಎಲ್.ಬಿ.ಸಿ ಕಾಲುವೆಯ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೋರ್ವ ಸಿಡಿಲಿಗೆ ಬಲಿಯಾಗಿರುವ ಘಟನೆ

ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳಿಗೆ ಬಹುಮಾನ

ತೆರಬಂಡಿ ಸ್ಪರ್ಧೆ: ರೂಢಗಿ ಎತ್ತುಗಳಿಗೆ ಬಹುಮಾನ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ತಾಂಡಾದ ಮಾರುತೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ತೆರಬಂಡಿ ಸ್ಪರ್ಧೆಯಲ್ಲಿ ಶ್ರೀ ಲಕ್ಷ್ಮಿದೇವಿ ಕಮೀಟಿ ರೂಢಗಿ ಎತ್ತುಗಳು ಪ್ರಥಮ, ರೂಢಗಿ ಎಸ್.ಕೆ.ಟಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡವು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಂತೋಷ ಚವ್ಹಾಣ, ಗ್ರಾಮೀಣ ಪ್ರದೇಶದಲ್ಲಿ ರೈತರು ಎತ್ತುಗಳ ಸಂಸ್ಕೃತಿಯನ್ನು ಜೀವಂತವಾಗಿಡುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಗ್ರಾಪಂ ಸದಸ್ಯ ಶಿವಾನಂದ ಲಮಾಣಿ, ಮಾಜಿ ಸದಸ್ಯ ಥಾವರಪ್ಪ

ಶ್ರೀ ಗದಿಗೆಪ್ಪಗೌಡ ವ್ಹಿ ಕೋನಪ್ಪನವರ ನಿಧನ.

ಶ್ರೀ ಗದಿಗೆಪ್ಪಗೌಡ ವ್ಹಿ ಕೋನಪ್ಪನವರ ನಿಧನ.

ಬಾಗಲಕೋಟೆ :ಮುರನಾಳ ಗ್ರಾಮದ ಶ್ರೀ ಗದಿಗೆಪ್ಪಗೌಡ ವೆಂಕಪ್ಪ ಕೋನಪ್ಪನವರ ( ೮೩ ) ಇವರು ವಿದ್ಯಾಗಿರಿ , ಬಾಗಲಕೋಟೆ ನಿವಾಸದಲ್ಲಿ ಸ್ವರ್ಗಸ್ಥರಾದರು. ಸೋಮವಾರ ದಿ ೧೨ ಮೇ ೨೦೨೫ ರಂದು ಬೆಳಿಗ್ಗೆ ೧೦ ಗಂಟೆಗೆ ನಂದೀಶ್ವರ ನಗರ, ವಿದ್ಯಾಗಿರಿ ಬಾಗಲಕೋಟೆ ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವದು. ಸಂಪರ್ಕ ಮೊಬೈಲ್ ನಂಬರ್9740339050 _ಓಂ ಶಾಂತಿ