ನಾರಾಯಣಪುರ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಂಡಬಾವಿ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸೂಕ್ಷ್ಮವಾಗಿ ಕೊಲೆ ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸ್ ಇಲಾಖೆ ಅಧಿಕಾರಿಗಳು ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ಯಾದಗಿರಿ ಎಸ್ಪಿಯವರ ಆದೇಶದಂತೆ, ಸಿಪಿಐ ರವಿಕುಮಾರ್ ಹುಣಸಗಿ ವೃತ್ತ ಇವರ ತನಿಖೆ ಕೈಗೊಂಡು ಸತ್ಯಾಸತ್ಯತೆಯನ್ನು ಬಯಲಿಗೆಳೆದಿದ್ದಾರೆ.
ಮೃತ ವ್ಯಕ್ತಿಯ ಹೆಂಡತಿಯಾದ ರೇಣುಕಮ್ಮ ಗಂಡ ಗೌಡಪ್ಪ ಚವನಬಾವಿ ಸಾ. ಜೋಗಂಡಬಾವಿ ಅವರು ನೀಡಿದ ದೂರಿನ ಮೇರೆಗೆ ದಿನಾಂಕ 22 -4 – 2025 ರಂದು ಆರೋಪಿತರಾದ ನೀಲಪ್ಪ ತಂದೆ ಯಮನಪ್ಪ ಹಾಗೂ ಇನ್ನಿತರರು ಸಾ. ಜೋಗಂಡಬಾವಿ ಹಳೆಯ ವೈರತ್ವದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದರು.
ಈ ಕುರಿತು ತನಿಖೆ ಮುಂದುವರೆಸಿದ ಅಧಿಕಾರಿಗಳು ನಿಜ ಘಟನೆಯನ್ನು ಅರಿತು ದಿಗ್ಭ್ರಮೆಗೊಳಗಾಗಿದ್ದಾರೆ. ಗೌಡಪ್ಪನ ಅಕ್ಕನ ಮಗನಾದ ಸರಿಸುಮಾರು 14 ವರ್ಷದ ಬಾಲಕ (ಹೆಸರು ನಮೂದಿಸುವುದಿಲ್ಲ) ಬಡಿಗೆಯಿಂದ ತಲೆ ಹಿಂಬದಿಯಲ್ಲಿ ಹೊಡೆದಿರುತ್ತಾನೆ. ಈ ಪ್ರಕರಣವು ಕೆಂಭಾವಿ ಠಾಣೆ ವ್ಯಾಪ್ತಿಯ ಅಗತೀರ್ಥ ಸೀಮಾಂತರದಲ್ಲಿ ಕುರಿ ದೊಡ್ಡಿಯನ್ನು ಹಾಕಿರುತ್ತಾರೆ ಅಳಿಯ ಮತ್ತು ಮಾವನ ಮದ್ಯ ಯಾವುದೋ ವಿಷಯಕ್ಕೆ ಜಗಳವಾಡುತ್ತಾರೆ. ಆ ಜಗಳದಲ್ಲಿ ಅಳಿಯ ಮಾವನಿಗೆ ತಲೆ ಹಿಂಬದಿಯಲ್ಲಿ ಕಟ್ಟಿಗೆಯಿಂದ ಹೊಡೆದಿರುತ್ತಾನೆ. ಅದರೆ, ಈ ವಿಚಾರವನ್ನು ಸುಳ್ಳು ಕಟ್ಟುಕಥೆ ಕಟ್ಟಿ ಮತ್ತೊಬ್ಬರ ಮೇಲೆ ಪ್ರಕರಣ ದಾಖಲೆಯನ್ನು ಮಾಡಿಸಿರುತ್ತಾರೆ. ಈ ಘಟನೆಯಲ್ಲಿ ಕುಟುಂಬಸ್ಥರೇ ಆರೋಪಿಗಳಾಗಿದ್ದಾರೆ.
ಈ ಘಟನೆಯು ದಿನಾಂಕ 19- 4- 2025 ರಂದು ಸುಮಾರು 9:00 ಗಂಟೆ ರಾತ್ರಿ ವೇಳೆಯಲ್ಲಿ ನಡೆದಿದೆ. ಕುಟುಂಬಸ್ಥರೇ ಕೊಲೆ ಮಾಡಿ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಸಾಯಂಕಾಲ 4 ಗಂಟೆವರೆಗೆ ಶವವನ್ನಿಟ್ಟು ಪ್ರತಿಭಟನೆ ಮಾಡುತ್ತಾರೆ. ಬಾಗಲಕೋಟ ಆಸ್ಪತ್ರೆಯಿಂದ ತಂದು ಪೊಲೀಸ್ ಠಾಣೆ ಮುಂದೆ ಶವ ಇಟ್ಟು ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಪ್ರತಿಭಟನೆ ಮಾಡುದರ ಜೊತೆಗೆ ರಾತ್ರಿ 11 ಗಂಟೆ ನಂತರ ಶವವನ್ನು ತಗೆದುಕೊಂಡು ಹೋಗುತ್ತಾರೆ. ಪೊಲೀಸರೇ ಆರೋಪಿಗಳ ಎಂಬುವಂತೆ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ದಕ್ಷ ಅಧಿಕಾರಿ ರಾಜಶೇಖರ್ ರಾಠೋಡ ಪಿ.ಎಸ್.ಐ ನಾರಾಯಣಪುರ ಅವರ ವಿರುದ್ಧ ಶವವಿಟ್ಟು ಪ್ರತಿಭಟನೆ ಮಾಡಿ ಸುಳ್ಳು ಆರೋಪ ಮಾಡುತ್ತಾರೆ.
ವರದಿ : ಶಿವು ರಾಠೋಡ