ಚಿಕ್ಕಪಡಸಲಗಿ: ಗ್ರಾಮದಲ್ಲಿಂದು ಶ್ರೀ ವೃಷಭಲಿಂಗೇಶ್ವರ ಶಿವಯೋಗಿಗಳು ಬಂತನಾಳ, ಲಚ್ಯಾಣದ ಶ್ರೀ ಕೈವಲ್ಯಧಾಮದ ಜದ್ಗುರು ಶ್ರೀ ಸಿದ್ದಲಿಂಗೇಶ್ವರ ಮಹಾರಾಜರ ಕೃಪಾಶಿರ್ವಾದದಿಂದ, ಹಳಿಂಗಳಿಯ ಶ್ರೀ ಸಿದ್ದಲಿಂಗೇಶ್ವರ ಕಮರಿಮಠದ ಪೀಠಾಧ್ಯಕ್ಷರಾದ ಪೂಜ್ಯ ಸದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳು ಕಮರಿಮಠ, ಹಳಿಂಗಳಿ, ಚಿಕ್ಕಪಡಸಲಗಿ ಇವರ ನೇತೃತ್ವದಲ್ಲಿ ಸಕಲ ಕಾರ್ಯಕ್ರಮಗಳು ಜರುಗುವವು.
ಶ್ರೀ ಸದ್ಗುರು ಶರಣಬಸವೇಶ್ವರ ಮಹಾರಾಜರ ಜಯಂತ್ಯೋತ್ಸವ ನಿಮಿತ್ಯ ಇಂದು ಮುಂಜಾನೆ ಬ್ರಾಹ್ಮೀ ಮಹೂರ್ತದಲ್ಲಿ ಹಳಿಂಗಳಿಯ ಪೂಜ್ಯ ಮಾತೋಶ್ರೀ ದ್ರಾಕ್ಷಾಯಿಣಿ ಅಮ್ಮನವರು ಪತ್ರಿವನಮಠ ಹೂವಿನಹಿಪ್ಪರಗಿ ಇವರಿಂದ 12 ಜ್ಯೋತಿಲಿಂಗಗಳ ರುದ್ರಾಭಿಷೇಕ, ಶ್ರೀ ಸಿದ್ದಲಿಂಗೇಶ್ವರ ಮತ್ತು ಶ್ರೀ ಶರಣಬಸವೇಶ್ವರರ ಲಿಂಗಾಭಿಷೇಕ ಜರುಗುವುದು, ತದನಂತರ ಕರಡಿ ಮಜಲು, ಡೊಳ್ಳಿನ ಮೇಳ, ಚೀನಿಕೋಲ ಮೇಳ, ಕುಂಭ, ಆರತಿಗಳೊಂದಿಗೆ ಶ್ರೀ ಸಿದ್ದಲಿಂಗೇಸ್ವರ ಮಹಾರಾಜರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗುವುದು, ಮುಂಜಾನೆ11 ಗಂಟೆಗೆ ಶ್ರೀ ಸದ್ಗುರು ಶರಣ ಬಸವೇಶ್ವರ ಮಹಾರಾಜರ ತೊಟ್ಟಿಲು ತೂಗುವ (ನಾಮಕರಣ) ಕಾರ್ಯಕ್ರಮ, ನಂತರ ಅನ್ನಸಂತರ್ಪಣೆ, ಹಾಗೂ ಸಾಯಂಕಾಲ 5 ಗಂಟೆಗೆ ಶ್ರೀ ಶರಣ ಬಸವೇಶ್ವರ ಮಹಾರಾಜರ ಭವ್ಯ ರಥೋತ್ಸವ ಜರುಗಲಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.