ಸಮಾಜ ಸೇವಕ ಪ್ರಭು ಭೈರಿ ಕಾರ್ಯ ಶ್ಲಾಘನೀಯ: ಮುಖಂಡ ಭೋವಿ.

ಸಮಾಜ ಸೇವಕ ಪ್ರಭು ಭೈರಿ ಕಾರ್ಯ ಶ್ಲಾಘನೀಯ: ಮುಖಂಡ ಭೋವಿ.

ತಾಳಿಕೋಟಿ: ಸಮಾಜ ಸೇವೆಯ ಹೆಸರಿನಲ್ಲಿ ಕೇವಲ ತಮ್ಮ ಸ್ವಾರ್ಥವನ್ನೇ ಈಡೇರಿಸಿಕೊಳ್ಳುವ ಇಂದಿನ ದಿನಮಾನದಲ್ಲಿ ತಾನು ಜನಿಸಿದ ಗ್ರಾಮ ಅಭಿವೃದ್ಧಿಯಾಗಬೇಕು ಎಂಬ ಕಳಕಳಿಯಿಂದ ರೂ.25 ಲಕ್ಷ ಸ್ವಂತ ಹಣದಲ್ಲಿ ಸಿಸಿ ರಸ್ತೆ ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಿ ಪ್ರಭು ಭೈರಿಯವರು ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಮುಖಂಡ ಅಶೋಕ ಭೋವಿ ಹೇಳಿದರು. ತಾಲೂಕಿನ ಕಲಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂತೆ ಮಾರಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳ ಆವರಣದಲ್ಲಿ ವಿಶ್ವನಾಥ್ ಭೈರಿ ಮತ್ತು ಜಗನ್ನಾಥ ಭೈರಿ ಅವರ ಸ್ವರರ್ಣಾರ್ಥವಾಗಿ ಪ್ರಭು ಜಯಪ್ಪ ಭೈರಿ ಅವರು ನಿರ್ಮಿಸಿದ ಕುಡಿಯುವ ನೀರಿನ ಟ್ಯಾಂಕ್ ಮತ್ತು ಸಿಸಿ ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ರವಿವಾರ ಮಾತನಾಡಿದರು. ಮುಖಂಡ ಹಣಮಂತ ವಡ್ಡರ ಮಾತನಾಡಿ ಪ್ರಭು ಭೈರಿಯವರು ಈಗಾಗಲೇ ಗ್ರಾಮದ ಕೆಲವು ಕಡೆ ಸಿಸಿ ರಸ್ತೆಗಳನ್ನು ಹಾಗೂ ಹಲವಾರು ಸಮಾಜ ಸೇವಾ ಕಾರ್ಯಗಳನ್ನು ಮಾಡಿದ್ದಾರೆ ಅವರಿಗೆ ನಾವೆಲ್ಲರೂ ಸಹಕರಿಸುವ ಅಗತ್ಯ ಇದೆ ಎಂದರು. ಗಣ್ಯರಾದ ರಾಘು ದೇಸಾಯಿ ಹಾಗೂ ಶಾಂತು ಹೊಸಗೌಡರ ನೇತೃತ್ವದಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಈ ಸಮಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜ ಅಹ್ಮದ್ ಸಿರಸಗಿ, ಗಣ್ಯರಾದ ಕೆ.ಡಿ.ದೇಸಾಯಿ, ರಾಮರಾವ್ ದೇಶಮುಖ, ರಾಜು ಜಂಬಗಿ, ವಿನೋದ್ ವಡಗೇರಿ, ಮುತ್ತು ಬೆಂಡೆಗೊಂಬಳ, ಸುನಿಲ್ ಜಂಗಣಿ, ದೇವೇಂದ್ರ ಬಡಿಗೇರ, ವಿಶ್ವ ಮೋಪಗಾರ, ಉಮೇಶ ಹೆಗ್ಗಣದೊಡ್ಡಿ ಫಾರೂಕ್ ವಲ್ಲಿಬಾಯಿ, ಸಂಗಪ್ಪ ಗೌಂಡಿ, ಭೀಮಣ್ಣ ವಡ್ಡರ, ಮಹೆಬೂಬ ಬಾಶಾ ಮನಗೂಳಿ, ಪರುಶರಾಮ ವಡ್ಡರ,ಗ್ರಾಮ ಪಂಚಾಯತ್ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

Latest News

ಮುದ್ದೇಬಿಹಾಳ : ಜ.6 ರಂದು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಮುದ್ದೇಬಿಹಾಳ : ಜ.6 ರಂದು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಮುದ್ದೇಬಿಹಾಳ : ತಾಲ್ಲೂಕಿನ 220-110ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಬಸರಕೋಡದಿಂದ ಹಾಲಿ ಇರುವ 110

ಕೆಕೆಆರ್‌ಟಿಸಿ ನೂತನ ಘಟಕ ವ್ಯವಸ್ಥಾಪಕರಾಗಿ ಅಶೋಕಕುಮಾರ ಭೋವಿ ಅಧಿಕಾರ ಸ್ವೀಕಾರ

ಕೆಕೆಆರ್‌ಟಿಸಿ ನೂತನ ಘಟಕ ವ್ಯವಸ್ಥಾಪಕರಾಗಿ ಅಶೋಕಕುಮಾರ ಭೋವಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮುದ್ದೇಬಿಹಾಳ ಘಟಕಕ್ಕೆ

ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಚುನಾವಣೆ;                                                                                          ಠೇವಣಿ ಕಳೆದುಕೊಂಡ ಮಂಜೇಗೌಡ, ಭರ್ಜರಿ ಗೆಲುವು ಸಾಧಿಸಿದ ಆನಂದಗೌಡ

ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಚುನಾವಣೆ; ಠೇವಣಿ ಕಳೆದುಕೊಂಡ ಮಂಜೇಗೌಡ, ಭರ್ಜರಿ ಗೆಲುವು ಸಾಧಿಸಿದ ಆನಂದಗೌಡ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳಿ ನಿಯಮಿತ ಬೆಂಗಳೂರು ಈ

ಹೆಬ್ಬಾಳ ಪಬ್ಲಿಸಿಟಿ-ಜನರಕೂಗು ನ್ಯೂಸ್ ಕ್ಯಾಲೆಂಡರ್ ಬಿಡುಗಡೆ:                                                                               ಸತ್ಯ ಸಂಗತಿಗಳಿಗೆ ಮಾಧ್ಯಮ ಧ್ವನಿಯಾಲಿ-ಸಿದ್ಧಲಿಂಗ ದೇವರು

ಹೆಬ್ಬಾಳ ಪಬ್ಲಿಸಿಟಿ-ಜನರಕೂಗು ನ್ಯೂಸ್ ಕ್ಯಾಲೆಂಡರ್ ಬಿಡುಗಡೆ: ಸತ್ಯ ಸಂಗತಿಗಳಿಗೆ ಮಾಧ್ಯಮ ಧ್ವನಿಯಾಲಿ-ಸಿದ್ಧಲಿಂಗ ದೇವರು

ತಾಳಿಕೋಟಿ : ಮಾಧ್ಯಮಗಳು ಸಮಾಜದಲ್ಲಿ ನಡೆದಿರುವ ಸತ್ಯ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದು

ಮಡಿಕೇಶ್ವರದ ಹಾಲುಮತದ ಹಿರಿಯ ಜೀವಿ ಮಲ್ಲಮ್ಮ ರೂಡಗಿ ನಿಧನ

ಮಡಿಕೇಶ್ವರದ ಹಾಲುಮತದ ಹಿರಿಯ ಜೀವಿ ಮಲ್ಲಮ್ಮ ರೂಡಗಿ ನಿಧನ

ಮುದ್ದೇಬಿಹಾಳ : ತಾಲ್ಲೂಕಿನ ಮಡಿಕೇಶ್ವರ ಗ್ರಾಮದ ನಿವಾಸಿ ಮಲ್ಲಮ್ಮ ಬಸಪ್ಪ ರೂಡಗಿ ಶುಕ್ರವಾರ ನಿಧನರಾದರು. ಅಂತ್ಯಕ್ರಿಯೆ ಜ.3 ರಂದು ಮದ್ಯಾಹ್ನ 3 ಕ್ಕೆ ಮಡಿಕೇಶ್ವರದಲ್ಲಿ ನಡೆಯಲಿದೆ. ಮೃತರು ಮುದ್ದೇಬಿಹಾಳ ಬಿಇಒ ಕಚೇರಿ ಅಧೀಕ್ಷಕಿ ಎನ್.ಬಿ.ರೂಡಗಿ,ಹಾರ್ವರ್ಡ್ ಪಿಯು ಕಾಲೇಜಿನ ಪ್ರಾಚಾರ್ಯೆ ಆರ್.ಬಿ.ರೂಡಗಿ ಅವರ ತಾಯಿಯವರು ಹಾಗೂ ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಎಂ.ನೆರಬೆಂಚಿ,ಹಿರಿಯ ವಕೀಲ ಎಸ್.ಬಿ.ಬಾಚಿಹಾಳ ಅವರ ಅತ್ತೆಯವರಾಗಿದ್ದಾರೆ. .

ಆಧಾರ ರಹಿತ ಆರೋಪಗಳಿಗೆ ಬೆಲೆ ಇಲ್ಲ:                                               ಮುದ್ದೇಬಿಹಾಳ : ಅಂಜುಮನ್ ಕಮೀಟಿಯಲ್ಲಿ ಅವ್ಯವಹಾರ ನಡೆದಿಲ್ಲ-ನಾಯ್ಕೋಡಿ

ಆಧಾರ ರಹಿತ ಆರೋಪಗಳಿಗೆ ಬೆಲೆ ಇಲ್ಲ: ಮುದ್ದೇಬಿಹಾಳ : ಅಂಜುಮನ್ ಕಮೀಟಿಯಲ್ಲಿ ಅವ್ಯವಹಾರ ನಡೆದಿಲ್ಲ-ನಾಯ್ಕೋಡಿ

ಮುದ್ದೇಬಿಹಾಳ : ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿಯ ಅಧಿಕಾರ ವಹಿಸಿಕೊಂಡ ಅವಧಿಯಿಂದ ಮುಕ್ತಾಯದ ಅವಧಿಯವರೆಗೆ ನಾವು ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದೇವೆ ಹೊರತು ಒಂದು ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿಲ್ಲ.ಅAಜುಮನ್ ಸಂಸ್ಥೆಯ ಹಿತಚಿಂತಕರು ಈಚೇಗೆ ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ನಿರಾಧಾರ ಎಂದು ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಅಧ್ಯಕ್ಷ ಅಲ್ಲಾಭಕ್ಷö್ಯ ನಾಯ್ಕೋಡಿ ಹೇಳಿದರು.ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯಲ್ಲಿ ನಡೆದಿರುವ ವ್ಯವಹಾರಗಳ ಲೆಕ್ಕಪತ್ರಗಳನ್ನು ಬಿಚ್ಚಿಟ್ಟರು. ನಮ್ಮ ಅವಧಿ ಆರಂಭವಾಗಿದ್ದೇ