Crime News: Vice President Attacks Gramm Staff With Slippers

Crime News: ಗ್ರಾಪಂ ಸಿಬ್ಬಂದಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಉಪಾಧ್ಯಕ್ಷೆ!

Crime News: ಗ್ರಾಪಂ ಸಿಬ್ಬಂದಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಉಪಾಧ್ಯಕ್ಷೆ!

ವಿಜಯಪುರ: ತಾಲೂಕಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಗ್ರಾಮ ಪಂಚಾಯಿತಿ ಲೆಕ್ಕ ಪರಿಶೋಧನೆ ವೇಳೆ ಗಲಾಟೆ ಉಂಟಾಗಿ ಗ್ರಾಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ (Crime news) ನಡೆಸಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ಹೌದು, ಕೆರೂಟಗಿ ಗ್ರಾಮದಲ್ಲಿ ಸೆಪ್ಟೆಂಬರ್ 14ರಂದು ಈ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶರಣಮ್ಮ ಸಂದಿಮನಿ ಎಂಬುವವರೇ ದಾಳಿ ಮಾಡಿದ ಉಪಾಧ್ಯಕ್ಷೆ. ಗ್ರಾಪಂ ಕಾಯಕಮಿತ್ರ ದ್ರೌಪದಿ ಹಿರೇಮಠ ಥಳಿತಕ್ಕೆ ಒಳಗಾದವರು ಎನ್ನಲಾಗಿದೆ.

ಗ್ರಾಪಂ ಲೆಕ್ಕ ಪರಿಶೋಧಕ್ಕೆ ಉಪಾಧ್ಯಕ್ಷೆ ಶರಣಮ್ಮ ಪತಿ ರಾಜಶೇಖರ್ ಸಂದಿಮನಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಜಿಲ್ಲಾ ಪಂಚಾಯಿತಿಯಿಂದ ಆಗಮಿಸಿದ್ದ ಲೆಕ್ಕ ಪರಿಶೋಧಕರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮತ್ತು ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

ಗಲಾಟೆ ಕಾರಣದಿಂದ ಗ್ರಾಮ ಕಾಯಕ ಮಿತ್ರ ದ್ರೌಪದಿ ಹಿರೇಮಠ ಮನೆಗೆ ಬಂದಿದ್ದರು. ಆದರೂ, ದ್ರೌಪದಿಯ ಮನೆಗೆ ತೆರಳಿ ಉಪಾಧ್ಯಕ್ಷೆ ಶರಣಮ್ಮ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ, ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಹಾಕಲಾಗಿದೆ. ಇದಕ್ಕೆ ಪತ್ನಿಗೆ ಪತಿ ಕುಮ್ಮಕ್ಕು ನೀಡಿದ್ದಾನೆ ಎನ್ನಲಾಗಿದೆ.

ಬಳಿಕ ಹಲ್ಲೆಗೆ ಒಳಗಾದ ಮಹಿಳೆ ಕಲಕೇರಿ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದರೂ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೂಡ ಮಾಡಲಾಗಿದೆ. ಶರಣಮ್ಮ ಹಾಗೂ ರಾಜಶೇಖರ್ ಅವರನ್ನು ಕರೆಯಿಸಿ ಕೇವಲ ಎಚ್ಚರಿಕೆ ಕೊಟ್ಟು ಪೊಲೀಸರು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, ಮತ್ತೆ ಸೆ.17ರಂದು ದ್ರೌಪದಿ ಹಿರೇಮಠ ಮೇಲೆ ಉಪಾಧ್ಯಕ್ಷೆಯ ಪತಿ ರಾಜಶೇಖರ ಎರಡನೇ ಬಾರಿ ಹಲ್ಲೆ ಮಾಡಿದ್ದಾನೆ. ಇದರಿಂದ ಎಚ್ಚೆತ್ತ ಗ್ರಾಪಂ ಪಿಡಿಒ ಎ.ಟಿ.ಅಂಗಡಿ ಹಾಗೂ ಕಾರ್ಯದರ್ಶಿ ಎ.ಎಸ್. ಮುಜಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದರ ಪ್ರಕಾರ ರಾಜಶೇಖರ ಸಂದಿಮನಿ ವಿರುದ್ಧ ಸರ್ಕಾರಿ ಸೇವೆಗೆ ಅಡ್ಡಿ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ, ದ್ರೌಪತಿ ಹಿರೇಮಠ ನೀಡಿದ ದೂರು ಸ್ವೀಕರಿಸಬೇಕು ಮತ್ತು ಹಲ್ಲೆ ಮಾಡಿರುವ ಗ್ರಾಪಂ ಉಪಾಧ್ಯಕ್ಷೆಯ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಒತ್ತಾಯವನ್ನು ಸಾರ್ವಜನಿಕರು ಮಾಡಿದ್ದಾರೆ.

ಇದನ್ನೂ ಓದಿ: Ration card : ಪಡಿತರ ಚೀಟಿಯಲ್ಲಿ ನಿಮ್ಮ ಹೆಸರು ಇದೆಯೇ? ಇಲ್ಲವೇ? ಪರಿಶೀಲಿಸಿ..

Latest News

Eurotierce Casino Be 2026 Review

Ze gebruiken realtime data om zich aan te schikken aan tendensen

LuckyGem Casino Review Bonus: tot 3000 + 350 FS in 2026

Beveiligingsmaatregelen voor betalingen zijn onmisbaar voor een beveiligde transactieomgeving voor spelers

Beste Online Casino Ervaring in Nederland

Dit zorgt ervoor dat elk spel volledig willekeurig verloopt en geen

Cazeus Casino login & bonus: snel registreren, 500 welkom

Culinaire hoogstandjes en live entertainment versterken de aantrekkingskracht en beloven niet

ಸರ್ಕಾರಿ ಆಸ್ಪತ್ರೆಗಳ ಶುಚಿತ್ವಕ್ಕೆ ಆದ್ಯತೆಗೆ ಒತ್ತಾಯ

ಸರ್ಕಾರಿ ಆಸ್ಪತ್ರೆಗಳ ಶುಚಿತ್ವಕ್ಕೆ ಆದ್ಯತೆಗೆ ಒತ್ತಾಯ

ಮುದ್ದೇಬಿಹಾಳ : ಪಟ್ಟಣದ ಸರಕಾರಿ ಆಸ್ಪತ್ರೆಯು ಸೇರಿದಂತೆ ತಾಲ್ಲೂಕಿನಲ್ಲಿಯ ಸರ್ಕಾರಿ ಆಸ್ಪತ್ರೆಗಳ ಆವರಣ,ಒಳ ಹೊರಗಡೆ ಶುಚಿತ್ವಕ್ಕೆ ಅಲ್ಲಿಯ ಆಡಳಿತ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಳೇಶ ಗಡೇದ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಹಸಿರು ತೋರಣ ಗೆಳೆಯರ ಬಳಗ, ಆರೋಗ್ಯ ರಕ್ಷಾ ಸಮಿತಿ,ಅರಣ್ಯ ಇಲಾಖೆ ಹಾಗೂ ಪುರಸಭೆ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಡವರು,ಮಧ್ಯಮವರ್ಗದವರಿಗೆ ಕೈಗೆಟುಕುವ ಆರೋಗ್ಯ ಸೇವೆ

XXX Bet Bangladesh Review on Online Casino & Sports Betting Site 2025

Collect https://xxxbet.casino/ loyalty points on all of your wagers, which can be traded for cashback, bonuses and even lavish gifts. It promotes repeated play and is designed to add an extra level of enjoyment for serious players. Customer support at XXXBet casino works around the clock. For example, Bet365 offers