Sneha Sangam is a team that is touched by the hardships of a poor friend

ಬಡ ಗೆಳೆಯನ ಕಷ್ಟಕ್ಕೆ ಮಿಡಿದ ಸ್ನೇಹ ಸಂಗಮ ಬಳಗ

ಬಡ ಗೆಳೆಯನ ಕಷ್ಟಕ್ಕೆ ಮಿಡಿದ ಸ್ನೇಹ ಸಂಗಮ ಬಳಗ

ಮುದ್ದೇಬಿಹಾಳ : ಗೆಳೆತನವೇ ಹಾಗೆ, ಯಾರೊಂದಿಗೂ ಹೇಳಿಕೊಳ್ಳದ ವಿಷಯವನ್ನು ಗೆಳೆಯರ ಮುಂದೆ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಂಡಿದ್ದನ್ನು ಕಂಡಿದ್ದೇವೆ.
ಮುದ್ದೇಬಿಹಾಳದ ಸ್ನೇಹ ಸಂಗಮ ಗೆಳೆಯರ ಬಳಗದ ಸದಸ್ಯರು ಮಾನವೀಯ ಕೆಲಸ ಮಾಡಿದ್ದಾರೆ.

ತಮ್ಮದೇ ಬಳಗದಲ್ಲಿ ಸದಸ್ಯನಾಗಿರುವ ದೈಹಿಕವಾಗಿ ಅಂಗವೈಕಲ್ಯತೆ ಇರುವ ಮುಸ್ತಾಕ ಹಿಪ್ಪರಗಿ ಅವರು ತಳ್ಳುವ ಗಾಡಿ ಮೇಲೆ ಬಾಡಿಗೆ ಆಧಾರದಲ್ಲಿ ಪಾನ್ ಬೀಡಾ ಅಂಗಡಿ ನಡೆಸುತ್ತಿದ್ದನ್ನು ಕಂಡ ಗೆಳೆಯರ ಬಳಗದ ಸದಸ್ಯರೆಲ್ಲ ಒಟ್ಟುಗೂಡಿ ಸ್ನೇಹಿತನ ಕಷ್ಟಕ್ಕೆ ಮಿಡಿದು ಆತನಿಗೆ ಸ್ವಂತ ತಳ್ಳುಗಾಡಿ ಕೊಟ್ಟು ಉಪಜೀವನ ನಡೆಸಲು ಆಧಾರವಾಗಿದ್ದಾರೆ.
ಭಾನುವಾರದಂದು ತಮ್ಮ ಮೆಚ್ಚಿನ ಗೆಳೆಯನಿಗೆ ಈ ತಳ್ಳುಗಾಡಿಯನ್ನು ವಿತರಿಸಿ ಆಧಾರವಾಗಿದ್ದಾರೆ.

ಸ್ನೇಹ ಸಂಗಮ ಗೆಳೆಯರ ಬಳಗದ ಅಧ್ಯಕ್ಷ ವಿಶ್ವನಾಥ್ ಪಾಟೀಲ್, ಗೌರವಾಧ್ಯಕ್ಷ ಶಿವಾಜಿ ಬಿಜಾಪುರ, ಡಾ.ಸಿ.ಕೆ. ಶಿವಯೋಗಿಮಠ, ಆನಂದ ಜಂಬಗಿ, ಪ್ರಕಾಶ ಇಲ್ಲೂರು, ಸತೀಶ್ ಕುಲಕರ್ಣಿ, ರಾಘು ನಲವಡೆ, ಮುಸ್ತಾಕ ಬಾಗವಾನ, ಸಂಗಣ್ಣ ಮೇಲಿನಮನಿ, ವಿ.ಐ.ಪತ್ತಾರ, ವಕೀಲರಾದ ಎನ್. ಬಿ. ಮುದ್ನಾಳ, ರಾಜು ರಾಯಗೊಂಡ ಈ ವೇಳೆ ಇದ್ದರು. ಸ್ನೇಹಿತರ ಕರುಣೆಯ ಸಹಾಯಹಸ್ತಕ್ಕೆ ಗೆಳೆಯ ಮುಸ್ತಾಕ ಹಿಪ್ಪರಗಿ ಭಾವುಕರಾದರು.

Latest News

ಶ್ರೀಶೈಲ್‌ಗೆ ವಿಶೇಷ ಬಸ್ ವ್ಯವಸ್ಥೆ

ಶ್ರೀಶೈಲ್‌ಗೆ ವಿಶೇಷ ಬಸ್ ವ್ಯವಸ್ಥೆ

ಮುದ್ದೇಬಿಹಾಳ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ ತೆರಳುವ

ಸೌಹಾರ್ದತೆಯನ್ನು ಬೆಸೆಯುವ ಹಬ್ಬ ರಂಜಾನ್-ಸಿ.ಬಿ.ಅಸ್ಕಿ

ಸೌಹಾರ್ದತೆಯನ್ನು ಬೆಸೆಯುವ ಹಬ್ಬ ರಂಜಾನ್-ಸಿ.ಬಿ.ಅಸ್ಕಿ

ಮುದ್ದೇಬಿಹಾಳ : ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಹಿಂದೂ ಮುಸ್ಲಿಂ ಬಾಂಧವರ ಮಧ್ಯೆ ಸೌಹಾರ್ದತೆಯನ್ನು ಬೆಸೆಯುವ

ಡಿ.ಕೆ.ಶಿವಕುಮಾರ ಆಕ್ಸಿಜನ್ ಮ್ಯಾನ್-ಸದ್ದಾಂ ಕುಂಟೋಜಿ

ಡಿ.ಕೆ.ಶಿವಕುಮಾರ ಆಕ್ಸಿಜನ್ ಮ್ಯಾನ್-ಸದ್ದಾಂ ಕುಂಟೋಜಿ

ಮುದ್ದೇಬಿಹಾಳ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಡಿಸಿಎಂ ಡಿ.ಕೆ.ಶಿವಕುಮಾರ ಅವರದ್ದು ಪ್ರಧಾನ

ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ:                   ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣ-ಹಾಲಗಂಗಾಧರಮಠ

ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ: ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣ-ಹಾಲಗಂಗಾಧರಮಠ

ಮುದ್ದೇಬಿಹಾಳ : ಮಕ್ಕಳಿಗೆ ಬಾಲ್ಯದಲ್ಲಿ ಗುರುಕುಲ ಮಾದರಿ ಶಿಕ್ಷಣದಿಂದ ಸಂಸ್ಕಾರ,ಸAಸ್ಕೃತಿಯ ಅರಿವು ದೊರೆಯುತ್ತದೆ ಎಂದು

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮುದ್ದೇಬಿಹಾಳ : ಕರಾವಳಿ ಮತ್ತು ಒಳನಾಡು ಮೀನುಗಾರರ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ರಾಷ್ಟ್ರೀಯ ಮೀನುಗಾರರ ಸಂಘ ಸ್ವಾಗತಿಸುತ್ತದೆ ಎಂದು ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಗೌತಮ್ ಚೌಧರಿ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೀನುಗಾರರಿಗೆ ನೀಡುವ ಕಿಟ್ ದರವನ್ನು ₹10,000 ದಿಂದ ₹20,000ಕ್ಕೆ ಹೆಚ್ಚಿಸಿರುವುದು, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ 'ಸೆಂಟರ್ ಆಫ್ ಎಕ್ಸಲೆನ್ಸ್' ಸ್ಥಾಪನೆ, ಹಾಗೂ ಹೊಸ 'ಮತ್ಸ್ಯದರ್ಶಿನಿ'ಗಳು ಮತ್ತು ಸುಸಜ್ಜಿತ ಮೀನು ಮಾರುಕಟ್ಟೆಗಳನ್ನು ನಿರ್ಮಿಸುತ್ತಿರುವ

ಶಾಸಕ ನಾಡಗೌಡ,ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ:           ಮಾ.11 ರಿಂದ ಆರೋಗ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಶಾಸಕ ನಾಡಗೌಡ,ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಮಾ.11 ರಿಂದ ಆರೋಗ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಮುದ್ದೇಬಿಹಾಳ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ-ನೌಕರರ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸದಿದ್ದರೆ ಮಾ.11ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘದ ತಾಲ್ಲೂಕು ಪದಾಧಿಕಾರಿಗಳು ಶಾಸಕ ಸಿ.ಎಸ್.ನಾಡಗೌಡ ಹಾಗೂ ತಹಶೀಲ್ದಾರ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಇಲಾಖೆಯಿಂದ ಔಷಧಿ