ಮುದ್ದೇಬಿಹಾಳ : ಬಣ್ಣದ ಹಬ್ಬ ಪ್ರೀತಿ ಮತ್ತು ವಸಂತಗಳ ಸಂಕೇತವಾಗಿ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ.ದೇವತೆಗಳ ಶಾಶ್ವತ ಮತ್ತು ದೈವಿಕ ಪ್ರೀತಿಯನ್ನು ಇದು ಸೂಚಿಸುತ್ತದೆ.ಈ ದಿನವು ದುಷ್ಟರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ರೇಣುಕಾ ಅಕ್ಕನವರು ಹೇಳಿದರು.
ಪಟ್ಟಣದ ಹುಡ್ಕೋ ಗವಿಸಿದ್ಧೇಶ್ವರ ವೇದಿಕೆಯ ಆವರಣದಲ್ಲಿ ಸಮಾನ ಮನಸ್ಕ ಯುವ ಬಳಗದ ಆಶ್ರಯದಲ್ಲಿ ಬುಧವಾರ ಚಿಣ್ಣರ ಬಣ್ಣದ ಓಕುಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಬ್ಬ ಹಿರಣ್ಯಕಶಿಪುವಿನ ಮೇಲೆ ವಿಷ್ಣುವಿನ ನರಸಿಂಹನ ವಿಜಯವನ್ನು ಸ್ಮರಿಸುತ್ತದೆ.ಕೆಟ್ಟ ಗುಣಗಳನ್ನು ತೊಡೆದು ಹಾಕಿ ಒಳ್ಳೆಯದ ಕಡೆಗೆ ಸಾಗುವುದೇ ಹೋಳಿ ಹಬ್ಬ ಆಚರಣೆಯ ವಿಶೇಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಸುರೇಶ ತುಂಬಗಿ,ಪ್ರಭುಲಿoಗ ನಂದೆಪ್ಪನವರ,ಉದಯ ರಾಯಚೂರ,ಆನಂದ ತುಪ್ಪದ, ಬಸವರಾಜ ನಾಗೂರ, ರವಿ ತಾಳಿಕೋಟಿ, ಮಲ್ಲು ಕಡಿ. ಮಹಾಂತೇಶ ಬೂದಿಹಾಳಮಠ. ಕಿರಣ ಪಾಟೀಲ, ಮುತ್ತು ಕಂಠಿ,ಸುನೀಲ ಪತ್ತಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ವರ್ಣರಂಜಿತ ಕಾರಂಜಿಯ ವ್ಯವಸ್ಥೆ ಚಿಣ್ಣರ ಬಣ್ಣದೋಕುಳಿ ಸಡಗರವನ್ನು ಹೆಚ್ಚಿಸಿತು.ನೂರಾರು ಮಕ್ಕಳು ಬಣ್ಣದಾಟದಲ್ಲಿ ಮಿಂದೆದ್ದು ಸಂಭ್ರಮಿಸಿದರು







