ಒಳ ಉಡುಪು ಬಿಚ್ಚಿಸಿದ ACP ಚಂದನ್: ಪುನೀತ್ ಕೆರೆಹಳ್ಳಿ ಆಕ್ರೋಶ

ಒಳ ಉಡುಪು ಬಿಚ್ಚಿಸಿದ ACP ಚಂದನ್: ಪುನೀತ್ ಕೆರೆಹಳ್ಳಿ ಆಕ್ರೋಶ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸದ್ಯ ನಾಯಿ ಮಾಂಸದ್ದೇ ದೊಡ್ಡ ಸುದ್ದಿ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ, ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿಯವರು ಎಸಿಪಿ ಚಂದನ್ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಅಕ್ರಮವಾಗಿ ಹಾಗೂ ಕಲಬೆರಕೆ ಮಾಂಸ ಬೆಂಗಳೂರಿಗೆ ಬರುತ್ತಿದೆ ಎಂಬ ಮಾಹಿತಿ ಮೇಲೆ ನಾನು ಸ್ಥಳಕ್ಕೆ ಹೋದೆ. ನಾವು ಹೋಗುವದಕ್ಕೆ ಮುನ್ನವೇ ಮಾಧ್ಯಮ ಹಾಗೂ ಹೊಯ್ಸಳ ಪೊಲೀಸರು ಇದ್ದರು. ಈ ವೇಳೆ ನಾವು ಮಾಂಸವನ್ನು ಸೀಜ್ ಮಾಡಲು ಹೇಳಿದೆವು. ಆಗ ಅವರು ನಾವು ಸೀಜ್ ಮಾಡಲು ಆಗಲ್ಲ 112ಗೆ ಕರೆ ಮಾಡಲು ತಿಳಿಸಿದರು. ಅದರಂತೆ ನಾವು 112ಗೆ ಕಾಲ್ ಮಾಡಿದೆವು. ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕ್ರಿಯೆ ಆರಂಭಿಸಿದ್ದಾರೆ.

ಈ ವೇಳೆ ಅಬ್ದುಲ್ ರಜಾಕ್ ಏಕಾಏಕಿ 5-6 ಜನರನ್ನು ಕರೆದುಕೊಂಡು ಬಂದಿದ್ದಾರೆ. ಅಲ್ಲಿಯವರೆಗೂ ಯಾವುದೇ ಗಲಾಟೆ ನಡೆದಿರಲಿಲ್ಲ ಎಂದರು.

ಅಬ್ದುಲ್ ರಜಾಕ್ ಬಂದು ಈ ಮಾಂಸ ನಮ್ಮದು. ಇದನ್ನು ಓಪನ್ ಮಾಡಲು ಬಿಡಲ್ಲ ಎಂದು ಹಠಕ್ಕೆ ಬಿದ್ದರು. ಇಷ್ಟೆಲ್ಲಾ ಆದ ಬಳಿಕ ನಾನು ಪೆನ್‌ಡ್ರೈವ್ ನನ್ನ ಬಳಿ ಇದೆ ಅದರಲ್ಲಿ ಎಲ್ಲಾ ದಾಖಲೆಗಳು ಇವೆ ಎಂದು ಬಹಿರಂಗವಾಗಿ ಹೇಳಿದೆ. ಹೀಗೆ ಹೇಳುತ್ತಿದ್ದಂತೆಯೇ ಪೊಲೀಸರು ನನ್ನನ್ನು ಅವರ ವಾಹನಕ್ಕೆ ದಬ್ಬಿದ್ರು.

ಮೊದಲೇ ಕಾಲು ನೋವಿನಿಂದ ಬಳಲುತ್ತಿದ್ದ ನನ್ನನ್ನು ಕಾಟನ್ ಪೇಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಅಲ್ಲಿ ಮಳೆಯಲ್ಲಿ ನೆನೆದು, ಮೊದಲೇ ನೋವಿದ್ದರಿಂದ ಕಾಲು ಮರಗಟ್ಟಿತ್ತು. ಹೀಗಾಗಿ ನನಗೆ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ನನ್ನಿಂದ ನಡೆಯೋಕೆ ಆಗಲ್ಲ ಅಂದಾಗ ನಾಟಕ ಆಡೋಡ ಸೂ*** ಮಗನೇ ಹೇಳಿ ಎಳೆದುಕೊಂಡು ಠಾಣೆಯೊಳಗಿರುವ ಎಂದರು.

ನಂತರ ಎದ್ದೇಳು ಮೇಲೆ ಅಂದ್ರು. ಆಗ ನಾನು ಕಾಲು ನೋವಿದೆ ಎಂದು ಹೇಳಿಕೊಂಡರೂ‌ಬಿಡದೇ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಟಾರ್ಚರ್ ಕೊಟ್ಟರು. ಇದಾದ ಬಳಿಕ ಎಸಿಪಿ ಚಂದನ್ ಅವರು ಬಂದು ಏನ್ರಿ ಅವನನ್ನು‌ ಮಲಗಿಸಿದ್ದೀರಾ..? ಬೋ** ಮಗನನ್ನು ಎಬ್ಬಿಸಿ ಎಂದು ಹೇಳಿದರು.

ಆಗ ನಾನು ಎದ್ದೇಳಲು ಆಗ್ತಿಲ್ಲ ಅಂದಾಗ ನನಗೆ ಗೊತ್ತು ಹೇಗೆ ಎದ್ದೇಳಿಸಬೇಕು ಅಂದು ಲಾಠಿಯಿಂದ 8 ಬಾರಿ ಹೊಡೆದಿದ್ದಾರೆ. ಬಳಿಕ ನನ್ನ ಜುಟ್ಟು ಹಿಡಿದು ಸಂಪೂರ್ಣವಾಗಿ ಬೆತ್ತಲೆ ಮಾಡಿದ್ದಾರೆ ಎಂದು ಆರೋಪಿಸಿದರು.

Latest News

ಸೌಹಾರ್ದತೆ ಮೆರೆದ ಮನಿಯಾರ್ :                                          ಹಬ್ಬದ ಸಮಯಗಳಲ್ಲಿ ಬಡವರಿಗೆ ನೆರವಾಗಿ-ಸಿಪಿಐ ಫಸಿವುದ್ದೀನ್

ಸೌಹಾರ್ದತೆ ಮೆರೆದ ಮನಿಯಾರ್ : ಹಬ್ಬದ ಸಮಯಗಳಲ್ಲಿ ಬಡವರಿಗೆ ನೆರವಾಗಿ-ಸಿಪಿಐ ಫಸಿವುದ್ದೀನ್

ಮುದ್ದೇಬಿಹಾಳ : ಸಮಾಜದಲ್ಲಿ ಆರ್ಥಿಕವಾಗಿ ಸಬಲತೆ ಸಾಧಿಸಿದವರು ಬಡವರು,ನಿರ್ಗತಿಕರಿಗೆ ಹಬ್ಬದ ಸಮಯಗಳಲ್ಲಿ ನೆರವಾಗುವ ಕಾರ್ಯ

ಮುದ್ದೇಬಿಹಾಳ : ಅಬ್ಬರದ ಆಲಿಕಲ್ಲು ಮಳೆಗೆ ನೆಲಕಚ್ಚಿದ ದ್ರಾಕ್ಷಿ,ಚಿಕ್ಕು,ತೆಂಗಿನ ಗಿಡ

ಮುದ್ದೇಬಿಹಾಳ : ಅಬ್ಬರದ ಆಲಿಕಲ್ಲು ಮಳೆಗೆ ನೆಲಕಚ್ಚಿದ ದ್ರಾಕ್ಷಿ,ಚಿಕ್ಕು,ತೆಂಗಿನ ಗಿಡ

ಮುದ್ದೇಬಿಹಾಳ : ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮಂಗಳವಾರ ಕೆಲಕಾಲ ಸುರಿದ ಭಾರೀ

ಗ್ಯಾಸ್ ಸಿಗುತ್ತಿಲ್ಲವೇ ? ಈ ಹೆಲ್ಪಲೈನ್‌ಗೆ ಕರೆ ಮಾಡಿ…

ಗ್ಯಾಸ್ ಸಿಗುತ್ತಿಲ್ಲವೇ ? ಈ ಹೆಲ್ಪಲೈನ್‌ಗೆ ಕರೆ ಮಾಡಿ…

ಮುದ್ದೇಬಿಹಾಳ : ಕೊಲ್ಲಿ ರಾಷ್ಟ್ರಗಳ ಮಧ್ಯೆ ನಡೆದಿರುವ ಯುದ್ದದ ಸಂಘರ್ಷದಿAದ ತೈಲೋತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದ್ದು

ಅಸ್ಕಿ ಫೌಂಡೇಶನ್ ನೇತೃತ್ವ :                                            ಮಾ.17 ರಂದು ಬಾವೂರನಲ್ಲಿ ಸೌಹಾರ್ದ ಇಫ್ತಾರಕೂಟ

ಅಸ್ಕಿ ಫೌಂಡೇಶನ್ ನೇತೃತ್ವ : ಮಾ.17 ರಂದು ಬಾವೂರನಲ್ಲಿ ಸೌಹಾರ್ದ ಇಫ್ತಾರಕೂಟ

ತಾಳಿಕೋಟಿ : ರಂಜಾನ್ ಹಬ್ಬದ ಪ್ರಯುಕ್ತ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ತಾಲ್ಲೂಕಿನ ಬಾವೂರ ಗ್ರಾಮದಲ್ಲಿ

ಮಾ.15 ರಂದು ಕಾಶಿನಕುಂಟಿಯಲ್ಲಿ ಇಫ್ತಾರಕೂಟ

ಮಾ.15 ರಂದು ಕಾಶಿನಕುಂಟಿಯಲ್ಲಿ ಇಫ್ತಾರಕೂಟ

ಮುದ್ದೇಬಿಹಾಳ : ರಂಜಾನ್ ಹಬ್ಬದ ನಿಮಿತ್ಯ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಮಾ.15 ರಂದು ಸಂಜೆ 5.30 ಕ್ಕೆ ನಿಡಗುಂದಿ ತಾಲ್ಲೂಕು ಕಾಶಿನಕುಂಟಿ ಗ್ರಾಮದಲ್ಲಿ ಇಫ್ತಾರಕೂಟ ಹಮ್ಮಿಕೊಂಡಿದೆ. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಈ ಬಾರಿ ಎಂಟು ಕಡೆಗಳಲ್ಲಿ ಫೌಂಡೇಶನ್ ವತಿಯಿಂದ ಇಫ್ತಾರಕೂಟ ಆಯೋಜಿಸಲಾಗಿದೆ. ಇಂದು ಕಾಶಿನಕುಂಟಿ ಗ್ರಾಮದಲ್ಲಿ ನಡೆಯಲಿರುವ ಇಫ್ತಾರಕೂಟ ಕಾರ್ಯಕ್ರಮದಲ್ಲಿ ಅಸ್ಕಿ ಫೌಂಡೇಶನ್ ಅಧ್ಯಕ್ಷರಾದ ಸಿ.ಬಿ.ಅಸ್ಕಿ ಅವರು ಪಾಲ್ಗೊಳ್ಳಲಿದ್ದಾರೆ.ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಆಗಮಿಸಿ ಇಫ್ತಾರಕೂಟದಲ್ಲಿ ಪಾಲ್ಗೊಳ್ಳುವಂತೆ ಫೌಂಡೇಶನ್ ಸಾರ್ವಜನಿಕ ಸಂಪರ್ಕಾಧಿಕಾರಿ

ಮುದ್ದೇಬಿಹಾಳ : ಬಸ್ ನಿಲ್ದಾಣದ ಪಕ್ಕದಲ್ಲೇ ಪೊಲೀಸ್ ಠಾಣೆ ಆರಂಭ-ನಾಡಗೌಡ

ಮುದ್ದೇಬಿಹಾಳ : ಬಸ್ ನಿಲ್ದಾಣದ ಪಕ್ಕದಲ್ಲೇ ಪೊಲೀಸ್ ಠಾಣೆ ಆರಂಭ-ನಾಡಗೌಡ

ಮುದ್ದೇಬಿಹಾಳ : ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹಳೇ ಸಿಪಿಐ ಕ್ವಾಟರ‍್ಸ್ನಲ್ಲಿ ಪೊಲೀಸ್ ಠಾಣೆಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಹಳೇ ಸಿಪಿಐ ಕ್ವಾರ್ಟರ್ಸ್ನ ಸ್ಥಳವನ್ನು ಶನಿವಾರ ಪೊಲೀಸ್ ಅಧಿಕಾರಿಗಳು,ನಗರದ ಗಣ್ಯರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸರಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಗ್ರಾಮೀಣ ಪೊಲೀಸ್ ಠಾಣೆ ಆರಂಭಿಸಲಾಗುವುದು ಎಂದು ತಿಳಿಸಿದೆ.ನಾನು ಯಾವ