Distribution of Kits for Ramadan Celebrations: Donation should be motivation, not propaganda: Satish Oswal

ರಂಜಾನ್ ಹಬ್ಬದ ಆಚರಣೆಗೆ ಕಿಟ್ ವಿತರಣೆ:ದಾನ, ಧರ್ಮ ಪ್ರಚಾರವಾಗದೇ ಪ್ರೇರಣೆಯಾಗಿರಲಿ: ಸತೀಶ ಓಸ್ವಾಲ್

ರಂಜಾನ್ ಹಬ್ಬದ ಆಚರಣೆಗೆ ಕಿಟ್ ವಿತರಣೆ:ದಾನ, ಧರ್ಮ ಪ್ರಚಾರವಾಗದೇ ಪ್ರೇರಣೆಯಾಗಿರಲಿ: ಸತೀಶ ಓಸ್ವಾಲ್

ಮುದ್ದೇಬಿಹಾಳ : ಸಮಾಜಕ್ಕೆ ಪ್ರೇರಣೆಯಾಗುವ ಸೇವೆಯನ್ನು ನಾವೆಲ್ಲ ಮಾಡಬೇಕು ಎಂದು ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್ ಹೇಳಿದರು.

ಪಟ್ಟಣದ ಮೇಲಿನ ಓಣಿಯಲ್ಲಿ ಲಾಡ್ಲೇಮಶ್ಯಾಕ್ ನಾಯ್ಕೋಡಿ ಕುಟುಂಬದವರಿಂದ ಭಾನುವಾರ ಬಡ ಮುಸ್ಲಿಂರಿಗೆ ರಂಜಾನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಲ್ಕು ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಚಿಂತನೆಯಳ್ಳವರಿಂದ ಇಂತಹ ಕಾರ್ಯ ಸಾಧ್ಯ ಎಂದರು.

ಸಹಕಾರಿ ಧುರೀಣ ಲಾಡ್ಲೇಮಶಾಕ ನಾಯ್ಕೋಡಿ ಮಾತನಾಡಿ, ನನ್ನ ತಾಯಿಯ ಆಸೆಯಂತೆ ಏಳು ವರ್ಷದಿಂದ ಆಹಾರಧಾನ್ಯ ಕಿಟ್‌ನ್ನು ಕೊಡುವ ಕೆಲಸ ಮಾಡುತ್ತಿದ್ದೇವೆ. ನಾವು ಇದು ಪ್ರಚಾರಕ್ಕೆ ಮಾಡುತ್ತಿಲ್ಲ. ಇದು ಮತ್ತೊಬ್ಬರಿಗೆ ಪ್ರೇರಣೆದಾಯಕವಾಗಲಿ ಎಂದು ಕಿಟ್ ವಿತರಿಸುತ್ತಿದ್ದೇವೆ ಎಂದರು.

ಎಂಜಿವಿಸಿ ಕಾಲೇಜು ಪ್ರಾಧ್ಯಾಪಕ ಅಬ್ದುಲರಹೀಮ ಮುಲ್ಲಾ ಮಾತನಾಡಿ, ಶ್ರೀಮಂತರು ಧಾನ ಧರ್ಮ ಮಾಡುವೂದು ದೊಡ್ಡದಲ್ಲ. ಆದರೆ ಲಾಡ್ಲೇಮಶಾಕ ನಾಯ್ಕೋಡಿ ಅವರು ಅಷ್ಟೊಂದು ಉಳ್ಳವರಲ್ಲ. ಮಧ್ಯಮ ವರ್ಗದಲ್ಲಿದ್ದುಕೊಂಡು ತಾವು ದುಡಿದ ಆದಾಯದಲ್ಲಿ ಬಡವರಿಗೆ ಮೀಸಲಿಟ್ಟು ರಂಜಾನ ತಿಂಗಳಲ್ಲಿ ಜಕಾತಿನ ಹೆಸರಲ್ಲಿ ತಮ್ಮ ಸಮಾಜ ಅಷ್ಟೇ ಅಲ್ಲದೆ ಇತರೆ ಸಮಾಜದ ಬಡ ಕುಟುಂಬದವರನ್ನು ಮನೆಗೆ ಕರಿಯಿಸಿ ಆಹಾರಧಾನ್ಯ ಕಿಟ್ ವಿತರಿಸುವುದು ಇನೊಬ್ಬರಿಗೆ ಪೇರಣೆಯಾಗಿದೆ ಎಂದರು.

ದಿವ್ಯ ಸಾನಿದ್ಯವನ್ನು ಮೌಲಾನ ನಿಸಾರಅಹ್ಮದ ಜಾಮಿಯ ವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಮುಖಂಡರಾದ ಎಂ. ಬಿ. ಜಕ್ಕೇರಾಳ, ಹೈದರಲಿ ನಾಯ್ಕೋಡಿ, ರಫೀಕ ಶಿರೋಳ, ಅಜೀಜ್ ಢವಳಗಿ, ನಬೀಲಾಲ ನಾಯ್ಕೋಡಿ, ದಾವಲಬಿ ನಾಯ್ಕೋಡಿ, ಬುಡ್ಡೇಸಾಬ ಚಪ್ಪರಬಂದ ಇದ್ದರು.

Latest News

ಮುದ್ದೇಬಿಹಾಳ : ಜ.14 ರಂದು ಸಾಧಕರಿಗೆ ಸನ್ಮಾನ

ಮುದ್ದೇಬಿಹಾಳ : ಜ.14 ರಂದು ಸಾಧಕರಿಗೆ ಸನ್ಮಾನ

ಮುದ್ದೇಬಿಹಾಳ : ಕೊಣ್ಣೂರಿನ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಜ.14 ರಂದು ಸಂಜೆ 5 ಗಂಟೆಗೆ

ಗಮನ ಸೆಳೆದ ಉತ್ತರ ಕರ್ನಾಟಕದ ಊಟ:                     M.R.E.M ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ

ಗಮನ ಸೆಳೆದ ಉತ್ತರ ಕರ್ನಾಟಕದ ಊಟ: M.R.E.M ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಸಂಭ್ರಮ

ಮುದ್ದೇಬಿಹಾಳ : ಉತ್ತರ ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿಯ ಮುನ್ನಾ ದಿನ

ತಂಗಡಗಿಯಲ್ಲಿ ದಿನದರ್ಶಿಕೆ ಬಿಡುಗಡೆ :                             ಸತ್ಯದ ಪರ ವರದಿಗಳಿಗೆ ಸದಾ ಜಯ-ಶ್ರೀಶೈಲ ಮರೋಳ

ತಂಗಡಗಿಯಲ್ಲಿ ದಿನದರ್ಶಿಕೆ ಬಿಡುಗಡೆ : ಸತ್ಯದ ಪರ ವರದಿಗಳಿಗೆ ಸದಾ ಜಯ-ಶ್ರೀಶೈಲ ಮರೋಳ

ಮುದ್ದೇಬಿಹಾಳ : ಸತ್ಯದ ಪರವಾಗಿರುವ ವರದಿಗಳಿಗೆ ಸದಾ ಸಾಮಾಜಿಕವಾಗಿ ಸ್ಪಂದನೆ ಇದ್ದೇ ಇರುತ್ತದೆ.ವರದಿಯನ್ನು ಉತ್ಪೇಕ್ಷೆಯಾಗಿ

ನಕಲಿ ದಾಖಲೆ ಸೃಷ್ಟಿಸಿ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಜಿಲ್ಲಾ ಅಧಿಕಾರಿಗೆ ಮನವಿ.

ಕಚಕನೂರ ಗ್ರಾಮದ : ಯಾದಗಿರಿ ಜಿಲ್ಲೆಯ, ಹುಣಸಗಿ ತಾಲೂಕಿನ ಕಚಕನೂರ ಗ್ರಾಮದ ಸ.ನಂ. 122/3

ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜು

ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜು

ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜುಮುದ್ದೇಬಿಹಾಳ : ಹಿಂದೂ ಧರ್ಮವನ್ನು ಒಪ್ಪಿಕೊಂಡಿರುವ ಎಲ್ಲ ಜಾತಿಗಳನ್ನು ಒಗ್ಗೂಡಿಸಿ ಇದೇ ಪ್ರಥಮ ಬಾರಿಗೆ ಮುದ್ದೇಬಿಹಾಳದಲ್ಲಿ ಭಾನುವಾರ ಹಿಂದೂ ಮಹಾ ಸಮ್ಮೇಳನ ನಡೆಯಲಿದ್ದು ಇದಕ್ಕಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.ಮುದ್ದೇಬಿಹಾಳದ ಬನಶಂಕರಿ ದೇವಸ್ಥಾನದಿಂದ ಮದ್ಯಾಹ್ನ 3.45 ಕ್ಕೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು ಅಂದಾಜು 20 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ.ಸಂಜೆ 5.30 ಕ್ಕೆ ಇಲ್ಲಿನ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿರುವ ಸಿದ್ದೇಶ್ವರ ವೇದಿಕೆಯಲ್ಲಿ ನಡೆಯಲಿರುವ

ಜಿಪಂ ಸದಸ್ಯೆ ಪ್ರೇಮಾಬಾಯಿ ಚವ್ಹಾಣರ ಸೊಸೆ:       ಹುಲ್ಲೂರು ತಾಂಡಾದ ದೀಪಾ ಸಿನ್ನೂರಗೆ ಡಾಕ್ಟರೇಟ್

ಜಿಪಂ ಸದಸ್ಯೆ ಪ್ರೇಮಾಬಾಯಿ ಚವ್ಹಾಣರ ಸೊಸೆ: ಹುಲ್ಲೂರು ತಾಂಡಾದ ದೀಪಾ ಸಿನ್ನೂರಗೆ ಡಾಕ್ಟರೇಟ್

ಮುದ್ದೇಬಿಹಾಳ (ವಿಜಯಪುರ ) : ಪ್ರಸ್ತುತ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ (KSAWU) ಬಯೋಇನ್ಫರ್ಮ್ಯಾಟಿಕ್ಸ್ ವಿಭಾಗದಲ್ಲಿ ಪೂರ್ಣಕಾಲಿಕ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ದೀಪಾ ಕೆ. ಸಿನ್ನೂರ ಅವರಿಗೆ ಬಿ.ಎಲ್.ಡಿ.ಇ. (ಪರಿಗಣಿತ ವಿಶ್ವವಿದ್ಯಾಲಯ) ಡಾಕ್ಟರೇಟ್ (ಪಿಎಚ್.ಡಿ.) ಪದವಿ ನೀಡಿ ಗೌರವಿಸಿದೆ. ​​        ಈಚೇಗೆ ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ​ ಬಿಎಲ್ ಡಿಇ  ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.           ಇವರು ವಿಜಯಪುರದ ಶ್ರೀ ಬಿ.