ಮುದ್ದೇಬಿಹಾಳ : ಜನ್ಮದಿನ,ಮದುವೆ ವಾರ್ಷಿಕೋತ್ಸವ ಹಾಗೂ ಇನ್ನೀತರ ವಯಕ್ತಿಕ ಶುಭ ಸಂದರ್ಭಗಳಲ್ಲಿ ದುಂದುವೆಚ್ಚ ಮಾಡದೇ ನಾಲ್ಕು ಜನ ಹಸಿದವರಿಗೆ ಅನ್ನದಾನ ಮಾಡಿದರೆ ಅವರಿಗೆ ಹೊಟ್ಟೆ ತುಂಬಿಸಿದ ಪುಣ್ಯ ನಮಗೆ ದೊರಕುತ್ತದೆ ಎಂದು ಬಿಜೆಪಿ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಕಾಶೀಬಾಯಿ ಎಸ್.ರಾಂಪೂರ ಹೇಳಿದರು.
ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಗುರುವಾರ ಲಯನ್ಸ್ ಕ್ಲಬ್ ಸಹಯೋಗದಲ್ಲಿ ತಮ್ಮ ಜನ್ಮದಿನದ ನಿಮಿತ್ಯ ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳು, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕೈಗೊಂಡು ಅವರು ಮಾತನಾಡಿರು.ಹಬ್ಬ ಹಾಗೂ ವಿಶೇಷ ದಿನಗಳಂದು ಕೇಕ್ ಕತ್ತರಿಸುವುದು,ಪಟಾಕಿ ಸಿಡಿಸುವುದು,ವ್ಯರ್ಥವಾಗಿ ಹಣವನ್ನು ದುಂದುವೆಚ್ಚ ಮಾಡದೇ ಇಂತಹ ನಾಲ್ಕಾರು ಕಡೆಗಳಲ್ಲಿ ಅಗತ್ಯವಿದ್ದವರಿಗೆ ದಾಸೋಹ,ಅನ್ನದಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ನನ್ನದಾಗಿದೆ ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕನಗೌಡ ಪಾಟೀಲ ಮಾತನಾಡಿ, ಪ್ರತಿ ಗುರುವಾರದ ದಿನ ಲಯನ್ಸ್ ಕ್ಲಬ್ ದಾನಿಗಳನ್ನು ಸಂಪರ್ಕಿಸಿ ಸಾರ್ವಜನಿಕರಿಗೆ,ರೋಗಿಗಳಿಗೆ,ಬಡವರಿಗೆ ಅನ್ನಸಂತರ್ಪನೆ ಸೇವೆ ಕೈಗೊಳ್ಳುತ್ತಿದೆ.ಸಾಮಾಜಿಕ ಸೇವೆಯಲ್ಲಿ ಸಕ್ರಿಯರಾಗಿರುವ ಕಾಶೀಬಾಯಿ ರಾಂಪೂರ ಅವರನ್ನು ಸಂಪರ್ಕ ಮಾಡಿದಾಗ ತಮ್ಮ ಜನ್ಮದಿನವನ್ನು ಆಸ್ಪತ್ರೆಯಲ್ಲಿಯೇ ಆಚರಿಸಿಕೊಳ್ಳುವುದಾಗಿ ತಿಳಿಸಿ ಅನ್ನದಾಸೋಹಕ್ಕೆ ಸಹಕಾರ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಂ.ಜಿ.ಎಫ್ ಲಯನ್ಸ್ ಸದಸ್ಯ ರಾವಸಾಹೇಬ ದೇಸಾಯಿ,ಶರಣಯ್ಯ ಹಿರೇಮಠ,ಸಂಜಯಕುಮಾರ ಓಸ್ವಾಲ್, ಮಹೇಂದ್ರ ಓಸ್ವಾಲ,ರಾಜು ಹುನಗುಂದ,ಸುವರ್ಣಾ ಕತ್ತಿ,ಶಿವಯೋಗೆಪ್ಪ ರಾಂಪೂರ,ರಾಜಶೇಖರ ಮ್ಯಾಗೇರಿ, ಅಶೋಕ ಚಿನಿವಾರ , ಶೇಖರಗೌಡ ಬಿರಾದಾರ ಮೊದಲಾದವರು ಇದ್ದರು.







