ಅಂಗನವಾಡಿ ನೌಕರರೊಂದಿಗೆ ಅನುಚಿತವಾಗಿ ವರ್ತಿಸಿದ ಸಿಡಿಪಿಓ ಕುಂಬಾರ ವಿರುದ್ಧ ಆಕ್ರೋಶ

ಅಂಗನವಾಡಿ ನೌಕರರೊಂದಿಗೆ ಅನುಚಿತವಾಗಿ ವರ್ತಿಸಿದ ಸಿಡಿಪಿಓ ಕುಂಬಾರ ವಿರುದ್ಧ ಆಕ್ರೋಶ

ಮುದ್ದೇಬಿಹಾಳ : ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೂರ್ತಿ ಕುಂಬಾರ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿ ತಹಶೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಿಂದ ಆರಂಭಗೊಂಡ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನಾ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತ, ರಾಘವೇಂದ್ರ ಮಠ, ಹಳೇ ಸರಕಾರಿ ದವಾಖಾನೆ, ದ್ಯಾಮವ್ವನ ಕಟ್ಟೆ, ಮುಖ್ಯರಸ್ತೆ, ಬಸವೇಶ್ವರ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷೆ ನೀಲಮ್ಮ ಪಾಟೀಲ್(ಬೋರಾವತ್) ಮಾತನಾಡಿ, ಕಾರ್ಯಕರ್ತೆಯರನ್ನು ಕಚೇರಿಯೊಳಕ್ಕೆ ಒಬ್ಬರನ್ನೆ ವಿಚಾರಣೆ ನೆಪದಲ್ಲಿ ಕರೆಯುತ್ತಾರೆ. ರಾತ್ರಿ 9 ಗಂಟೆಗೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ಕೊಡುತ್ತಾರೆ. ಯಾರು ನೋಡಲು ಸುಂದರವಾಗಿ ಇದ್ದಾರೆಯೋ ಅಂತಹ ಕಾರ್ಯಕರ್ತೆಯರ ಕೇಂದ್ರಕ್ಕೆ ಭೇಟಿ ಕೊಟ್ಟು ತಮ್ಮ ವೇಷಭೂಷಣದ ಬಗ್ಗೆ ಸಲುಗೆಯಿಂದ ಮಾತನಾಡುತ್ತಾರೆ. ಕಾರ್ಯಕರ್ತೆಯರನ್ನು ಕಾಮುಕ ದೃಷ್ಟಿಯಿಂದ ನೋಡುತ್ತಾರೆ ಎಂದು ಆರೋಪಿಸಿದರು.

ಹಿಂದಿನ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರಿದ್ದಾಗ ಇದೇ ಅಧಿಕಾರಿ ಪ್ರಭಾರಿ ಹುದ್ದೆಯಲ್ಲಿದ್ದರು. ಆಗ ಇಲಾಖೆಯಲ್ಲಿ ಕೆಲವು ಆರೋಪಗಳ ಕುರಿತು ಪತ್ರ ಬರೆದಾಗ ಅವರನ್ನು 24 ತಾಸಿನಲ್ಲಿ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದರು. ಆದರೆ ಹಾಲಿ ಶಾಸಕರು ನಮ್ಮವರೇ ಇದ್ದರೂ ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಮೀನಮೇಷ ಎಣಿಸಲಾಗುತ್ತಿದೆ.ಕಾರ್ಯಕರ್ತೆಯರನ್ನು ಬೆದರಿಸುವ ಕೆಲಸ ನಡೆಯುತ್ತಿದೆ. ಇಲಾಖೆಯ ಕಚೇರಿಯಲ್ಲಿ ಮನವಿ ಕೊಡಲು ಹೋದರೆ ಅದನ್ನು ತೆಗೆದುಕೊಳ್ಳಲು ನಿರಾಕರಣೆ ಮಾಡಲಾಗುತ್ತಿದೆ ಎಂದು ದೂರಿದರು. ಕೂಡಲೇ ಸಿಡಿಪಿಒ ಕುಂಬಾರ ಅವರನ್ನು ಇಲ್ಲಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವ ಪತ್ರ ಸಲ್ಲಿಸಿದರು ಸಂಘದ ಪದಾಧಿಕಾರಿಗಳಾದ ಶೋಭಾ ಕಾಖಂಡಕಿ, ಶೋಭಾ ಘಾಟಗೆ, ನೀಲಮ್ಮ ತೊಂಡಿಹಾಳ, ಅಯ್ಯಮ್ಮ ಮೂಕಿಹಾಳ, ಶಶಿಕಲಾ ನಾಗರಾಳ, ರಾಜಶ್ರೀ ಮಮದಾಪೂರ, ಅಯ್ಯಮ್ಮ ವಣಕಿಹಾಳ, ಶಕುಂತಲಾ ದೊಡಮನಿ,ಎಂ.ಎಸ್.ಸ್ಥಾವರಮಠ,ನಿಂಬೆಕ್ಕ ಕಾಳಾಪುರ,ಮಂಜುಳಾ ಜಾಧವ,ಚಂದ್ರಕಲಾ ಹಯಾಳ,ಸಾಹೆಬ್ಬಿ ಕೆಸರಟ್ಟಿ,ಕಮಲಾ ದೇಶಪಾಂಡೆ ಮೊದಲಾದವರು ಇದ್ದರು.

ಸಿಡಿಪಿಒ ವಿರುದ್ದ ಆರೋಪಗಳ ಪರಿಶೀಲನೆ:
ಸಿಡಿಪಿಒ ವಿರುದ್ಧದ ಆರೋಪಗಳ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ ಅವರಿಗೆ ಮಾತನಾಡಿಸಿದಾಗ, ಕಾರ್ಯಕರ್ತೆಯರು ಕೊಟ್ಟಿರುವ ಮನವಿ ಪತ್ರದಲ್ಲಿರುವ ಆರೋಪಗಳ ಕುರಿತು ಪರಿಶೀಲನೆ ನಡೆಸಲಾಗುವುದು. ಮುದ್ದೇಬಿಹಾಳಕ್ಕೆ ಮಂಗಳವಾರ ಎಸ್.ಎಸ್.ಎಲ್.ಸಿ ಪರೀಕ್ಷೆ ವಿಚಾರವಾಗಿ ಭೇಟಿ ನೀಡಿದ್ದೆ ಹೊರತು ಕಾರ್ಯಕರ್ತೆಯರನ್ನಾಗಲೀ, ಸಿಡಿಪಿಒ ಅವರನ್ನಾಗಲೀ ಭೇಟಿ ಆಗಿಲ್ಲ ಎಂದು ಉಪ ನಿರ್ದೇಶಕ ಚವ್ಹಾಣ ಸ್ಪಷ್ಟಪಡಿಸಿದರು.

Latest News

ಮುದ್ದೇಬಿಹಾಳ : ಡಿ.29 ರಂದು ಅಯ್ಯಸ್ವಾಮಿ ಮಹಾಪೂಜೆ

ಮುದ್ದೇಬಿಹಾಳ : ಡಿ.29 ರಂದು ಅಯ್ಯಸ್ವಾಮಿ ಮಹಾಪೂಜೆ

ಮುದ್ದೇಬಿಹಾಳ : ಪಟ್ಟಣದ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಡಿ.29 ರಂದು ಬೆಳಗ್ಗೆ 7:30ಕ್ಕೆ

ಕೋಲಿ, ಕಬ್ಬಲಿಗ, ಅಂಬಿಗರನ್ನು ಎಸ್‌ಟಿಗೆ ಸೇರ್ಪಡೆ: ರಾಜ್ಯಪಾಲರಿಗೆ ಮನವಿ

ಯಾದಗಿರಿ: ಕೋಲಿ, ಕಬ್ಬಲಿಗ, ಅಂಬಿಗ ಸೇರಿದಂತೆ ಇತರೆ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ)

ಬಿದರಕುಂದಿ : ಮದ್ಯವರ್ಜನಾ ಶಿಬಿರಕ್ಕೆ ಚಾಲನೆ:                                                                ದುಶ್ಚಟಗಳಿಂದ ಮುಕ್ತರಾಗಿ ಒಳ್ಳೆಯ ಬದುಕು ಸಾಗಿಸಿ-ಸಂತೋಷಕುಮಾರ

ಬಿದರಕುಂದಿ : ಮದ್ಯವರ್ಜನಾ ಶಿಬಿರಕ್ಕೆ ಚಾಲನೆ: ದುಶ್ಚಟಗಳಿಂದ ಮುಕ್ತರಾಗಿ ಒಳ್ಳೆಯ ಬದುಕು ಸಾಗಿಸಿ-ಸಂತೋಷಕುಮಾರ

ಮುದ್ದೇಬಿಹಾಳ : ಧರ್ಮಸ್ಥಳದ ಧರ್ಮಾಧಿಕಾರ ವೀರೇಂದ್ರ ಹೆಗ್ಗಡೆಯವರು ಸಮಾಜದ ಕೆಳಸ್ತರದಲ್ಲಿರುವವಷ್ಟೇ ಅಲ್ಲದೇ ಮದ್ಯದ ವ್ಯಸನಿಗಳು

ಮುದ್ದೇಬಿಹಾಳ : ಎಂ.ಕೆ.ಗುಡಿಮನಿಗೆ ಗೌರವ ಡಾಕ್ಟರೇಟ್ ಪ್ರದಾನ

ಮುದ್ದೇಬಿಹಾಳ : ಎಂ.ಕೆ.ಗುಡಿಮನಿಗೆ ಗೌರವ ಡಾಕ್ಟರೇಟ್ ಪ್ರದಾನ

ಮುದ್ದೇಬಿಹಾಳ : ಅಮೆರಿಕನ್ ವೀಸಡಂ ಫೀಸ್ ಯೂನಿವರ್ಸಿಟಿ ವತಿಯಿಂದ ಶನಿವಾರ ಹೊಸೂರಿನಲ್ಲಿ ಆಯೋಜಿಸಿದ್ದ ವಿಶೇಷ

ವಿಜಯಪುರ ಕೆಪಿಟಿಸಿಎಲ್ ಮುಸ್ಲಿಂ ನೌಕರರ ಸಂಘಕ್ಕೆ ಆಯ್ಕೆ ; ಸನ್ಮಾನ

ವಿಜಯಪುರ ಕೆಪಿಟಿಸಿಎಲ್ ಮುಸ್ಲಿಂ ನೌಕರರ ಸಂಘಕ್ಕೆ ಆಯ್ಕೆ ; ಸನ್ಮಾನ

ಮುದ್ದೇಬಿಹಾಳ : ವಿಜಯಪುರ ಕವಿಪ್ರನಿನಿ ಮುಸ್ಲಿಂ ನೌಕರರ ಕಲ್ಯಾಣ ಸಂಘದ ಸನ್ 2025-28 ನೇ ಸಾಲಿಗೆ ವಿಜಯಪುರ ವೃತ್ತಕ್ಕೆ ಸಂಘಟನಾ ಕಾರ್ಯದರ್ಶಿಯಾಗಿ ಮೈನೂದ್ದೀನ ಜಹಾಗೀರದಾರ ಹಾಗೂ ಕೇಂದ್ರ ಸಮಿತಿ ಸದಸ್ಯರಾಗಿ(ಸಿಇಸಿ) ಮುದ್ದೇಬಿಹಾಳ ಹೆಸ್ಕಾಂ ಶಾಖೆಯ ಇಬ್ರಾಹಿಂ ನಾಯ್ಕೋಡಿ ಅವರನ್ನು ಆಯ್ಕೆ ಮಾಡಲಾಗಿದ್ದು ಅವರನ್ನು ಬೆಂಗಳೂರಿನಲ್ಲಿ ಈಚೇಗೆ ಮೇವಾ ಸಂಘದಿAದ ಸನ್ಮಾನಿಸಲಾಯಿತು. ವಿಜಯಪುರ ವೃತ್ತದ ಮೇವಾ ಸಂಘದ ಹಿರಿಯ ನಾಯಕರಾದ ಆಸಿಫ್ ಮುಜಾವರ,ಅಯೂಬ್ ಮನಗೂಳಿ, ಜಾಕೀರ್ ರಿಸಾಲ್ದಾರ ,ಎಂ.ಎA.ಇನಾಮದಾರ,ಆರ್.ಕೆ.ಮಕಾನದಾರ, ಮೌಲಾ ಅವಟಿ,

ಅಂಬೇಡ್ಕರ್ ನೀಡಿದ್ದ ಸಾಂವಿಧಾನಿಕ ಹಕ್ಕಿಗೆ ಕೊಡಲಿ ಏಟು-ಬಿಜೆಪಿ ಕಿಡಿ

ಅಂಬೇಡ್ಕರ್ ನೀಡಿದ್ದ ಸಾಂವಿಧಾನಿಕ ಹಕ್ಕಿಗೆ ಕೊಡಲಿ ಏಟು-ಬಿಜೆಪಿ ಕಿಡಿ

ಮುದ್ದೇಬಿಹಾಳ : ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ಕಾಯ್ದೆಯು ಅಂಬೇಡ್ಕರ್ ಅವರು ಕೊಟ್ಟಿರುವ ಸಾಂವಿಧಾನಿಕ ಹಕ್ಕುಗಳಿಗೆ ಕೊಡಲಿಪೆಟ್ಟು ನೀಡುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಗೆ ಬುಧವಾರ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ವಿರುದ್ಧ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ