Workers' protest demanding fulfillment of various demands in the lap of rain raya

ಮಳೆರಾಯನ ಮಡಿಲಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ

ಮಳೆರಾಯನ ಮಡಿಲಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮೂರನೇ ದಿನದ ಪ್ರಾರಂಭ. ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಘಟಕದಿಂದ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲೋನಿಯಲ್ಲಿರುವ ಕಾರ್ಮಿಕರ ಭವನದ ಎದುರು ಸೋಮವಾರ ದಿಂದ ಪ್ರಾರಂಭವಾಗಿ ಇಂದಿಗೆ ಮೂರನೇ ದಿನ ಪ್ರತಿಭಟನೆ ಮುಂದುವರೆದಿದೆ.

ಮಂಗಳವಾರದಂದು ರಾತ್ರಿ ಸರಿ-ಸುಮಾರು ಎಂಟು ಗಂಟೆಗೆ ಏಕಾಏಕಿ ಧಾರಾಕಾರ ಮಳೆಯಲ್ಲಿ ಪ್ರತಿಭಟನೆ ಮುಂದುವರಿಯುತ್ತಿತ್ತು ಈ ಪ್ರತಿಭಟನೆಯು ಅನಿರ್ದಿಷ್ಟಾವಧಿ ಧರಣಿ ಆಗಿರುವುದರಿಂದ ಹುಬ್ಬಳ್ಳಿ-ಧಾರವಾಡ ಕಮಿಷನರಾದ ಎನ್ ಶಶಿಕುಮಾರ್ ಅವರು ಪ್ರತಿಭಟನಾಕಾರರೊಂದಿಗೆ ಮನವಲಿಸುವ ಪ್ರಯತ್ನ ಮಾಡಿದರು ಆದರೂ ಪ್ರತಿಭಟನಾಕಾರರು ಕಾರ್ಮಿಕರ ಇಲಾಖೆಯ ಸಚಿವರು ಬರೋವರೆಗೂ ಪ್ರತಿಭಟನೆ ಮುಂದುವರೆಯುತ್ತದೆ ಎಂದು ತಿಳಿಸಿದರು.

ಹಾಗೆ ನಮ್ಮ ಮನವಿಯನ್ನು ಸ್ವೀಕರಿಸಬೇಕು ತದನಂತರ ನಾವು ಪ್ರತಿಭಟನೆಯನ್ನು ಹಿಂಬಡಿಯುತ್ತೇವೆ ಎಂಬವ ಮಾತನ್ನು ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿಭಟನಾಕಾರರ ಬೇಡಿಕೆ ಕಾಳಜಿ ಇಲ್ಲಾ ಪ್ರತಿಭಟನೆ ನಿಲ್ಲಿಸುವದರ ಬಗ್ಗೆ ಕುತಂತ್ರಿ ಯೋಚನೆಗಳು ಹಾಗೂ ಬೇರೆಯವರಿಗೆ ಕರೆ ಮಾಡಿ ಸಂದೇಶಗಳು ತಿಳಿಸುವುದಕ್ಕಿಂತ ಮೊದಲು ಪ್ರತಿಭಟನಾಕಾರರಿಗೆ ಕರೆ ಮಾಡಿ ಅವರ ಬಗ್ಗೆ – ಅವರ ಬೇಡಿಕೆಗಳ ಬಗ್ಗೆ ಯಾರ ಜೊತೆಯೂ ಮಾತುಕತೆ ಆಡದೆ ಇರೋದು ವಿಪರ್ಯಾಸ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರ ಮಾತನಾಡಿ, ಮಕ್ಕಳಿಗೆ ಕೂಡಲೇ ಶೈಕ್ಷಣಿಕ, ಇತರೆ ಧನಸಹಾಯ ಮಂಜೂರು ಮಾಡಬೇಕು. ಅನಾವಶ್ಯಕ ಟೆಂಡ‌ರ್ ಕರೆಯುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು. 15-20 ವರ್ಷಗಳ ಹಿಂದೆ ಆಗಿರುವ ನೋಂದಣಿ ಆಧರಿಸಿ ಈಗ ಕಾರ್ಮಿಕರ ಕಾರ್ಡ್‌ಗಳನ್ನು ರದ್ದುಪಡಿಸುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು. ಹೆರಿಗೆ ಭತ್ಯೆ, ಹಿರಿಯ ಕಾರ್ಮಿಕರ ಪಿಂಚಣಿ, ಅಂತ್ಯಕ್ರಿಯೆ, ಅಪಘಾತ ಪರಿಹಾರವನ್ನು ಈವರೆಗೂ ಮಂಜೂರು ಮಾಡಿಲ್ಲ ಕೂಡಲೇ ಅದನ್ನು ಬಿಡುಗಡೆ ಮಾಡಬೇಕು. ಅರ್ಜಿ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಸ್ಥಳಕ್ಕೆ ಬಂದು ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಯಾದಗಿರಿ , ಗುಲ್ಬರ್ಗ, ರಾಯಚೂರು, ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ ವಿವಿಧ ಜಿಲ್ಲೆಗಳ ಕಾರ್ಮಿಕರ ಸಂಘಗಳು ಭಾಗವಹಿಸಿದ್ದರು. ಅಶ್ವಥ್ ಮರಿಗೌಡ್ರ, ಶಿವು ರಾಠೋಡ, ಶಿವಕುಮಾರ ಬಂಡಿವಡ್ಡರ, ವಾಸು ಲಮಾಣಿ, ಮುಸ್ತಾಕ್ ನದಾಫ್, ಎಸ್.ಪಿ. ಕರಿಸೋಮನಗೌಡ್ರ, ಶರಣಪ್ಪ ರೊಟ್ಟಿ , ಶಿವಕುಮಾರ ಗೌಡ್ರ, ಬೀರಪ್ಪ ಡೊಳ್ಳ, ರಾಜು ದೊರೆ, ಈರಪ್ಪ ವಲ್ಕಂದಿನ್ನಿ , ವೆಂಕಟೇಶ್, ತಿಮ್ಮಪ್ಪ, ತಾಯಪ್ಪ , ರವಿರಾಜ್, ದೇವಿಂದ್ರ ಕಾಲವಾ, ಶಿವಾನಂದ ಅಸೊಟ್ಟಿ, ಲಕ್ಷ್ಮಣ್, ಶಂಕರ್ ಲಂಬಾಣಿ , ಜೋತಿ ಪತ್ತಾರ, ಶಭಿನಾ ಮೇಲಿನಮನಿ, ಇನ್ನಿತರರಿದ್ದರು.

ವರದಿಗಾರ : ಶಿವು ರಾಠೋಡ

Latest News

ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ

ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ

ಮುದ್ದೇಬಿಹಾಳ : ರೈತಾಪಿ ಕುಟುಂಬದಲ್ಲಿ ಜನಿಸಿ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಯ ಮಕ್ಕಳಿಗೆ ಉತ್ತಮ ಶಿಕ್ಷಣ

ಮುದ್ದೇಬಿಹಾಳ : ನೀರಿನ ಹೊಂಡದಲ್ಲಿ ಜಾರಿ ಬಿದ್ದು ಬಾಲಕ ಸಾವು

ಮುದ್ದೇಬಿಹಾಳ : ನೀರಿನ ಹೊಂಡದಲ್ಲಿ ಜಾರಿ ಬಿದ್ದು ಬಾಲಕ ಸಾವು

ಮುದ್ದೇಬಿಹಾಳ : ಕುರಿಗಳಿಗೆ ನೀರು ಕುಡಿಸಲು ಹೋಗಿದ್ದ ಬಾಲಕನೊಬ್ಬ ಕಾಲು ಜಾರಿ ಹೊಂಡದಲ್ಲಿ ಬಿದ್ದು

ಶಿವಯೋಗಿಮಠ ಕುಟುಂಬದಿoದ ಆಯೋಜನೆ:                  ಮಾ.2 ರಂದು ಆರೋಗ್ಯ ಉಚಿತ  ತಪಾಸಣಾ ಶಿಬಿರ

ಶಿವಯೋಗಿಮಠ ಕುಟುಂಬದಿoದ ಆಯೋಜನೆ: ಮಾ.2 ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರ

ಮುದ್ದೇಬಿಹಾಳ : ಶ್ರೀ ಫಕಿರೇಶ್ವರ ವಿವಿದೋದ್ಧೇಶ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಘ ಮತ್ತು ಸೇಂಟ್

ಮಾ.1 ರಂದು ಹುಲ್ಲೂರಿನಲ್ಲಿ ಎಸ್.ಎನ್.ಡಿ ಸಂಸ್ಕೃತಿ ಉತ್ಸವ,ಪ್ರತಿಭಾ ಪುರಸ್ಕಾರ

ಮಾ.1 ರಂದು ಹುಲ್ಲೂರಿನಲ್ಲಿ ಎಸ್.ಎನ್.ಡಿ ಸಂಸ್ಕೃತಿ ಉತ್ಸವ,ಪ್ರತಿಭಾ ಪುರಸ್ಕಾರ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರಿನಲ್ಲಿ ಎಸ್.ಎನ್.ಡಿ.ನ್ಯಾಶನಲ್ ಪಬ್ಲಿಕ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಾ.1 ರಂದು

ಸಿಂಚನಾ ಸಜ್ಜನ ಸೈನಿಕ ಶಾಲೆಗೆ ಆಯ್ಕೆ

ಸಿಂಚನಾ ಸಜ್ಜನ ಸೈನಿಕ ಶಾಲೆಗೆ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಹಳ್ಳೂರ ಕ್ರಾಸ್ ನಲ್ಲಿರುವ ಹೊಸನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಿಂಚನಾ ಶಿವಪುತ್ರಪ್ಪ ಸಜ್ಜನ ಸನ್ 2026-27ನೇ ಸಾಲಿನ ಬೆಳಗಾವಿ ಜಿಲ್ಲೆ ಕಿತ್ತೂರ ರಾಣಿ ಚೆನ್ನಮ್ಮ ಸೈನಿಕ ವಸತಿ ಶಾಲೆಗೆ ಆಯ್ಕೆಯಾಗಿದ್ದಾಳೆ. ಸಿಂಚನಾ , ಬಿದರಕುಂದಿ ಗ್ರಾಮದ ಶಿಕ್ಷಕ ದಂಪತಿಯಾದ ಶಿವಪುತ್ರಪ್ಪ ಸಜ್ಜನ ಹಾಗೂ ಸುಮಲತಾ ಗಡಿಯಪ್ಪನವರ ಅವರ  ಪುತ್ರಿ.ವಿದ್ಯಾರ್ಥಿನಿ ಸಿಂಚನಾ ಸಾಧನೆಗೆ ಬಿದರಕುಂದಿ ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಫಾಸ್ಟ್ ,ಜಂಕ್ ಫುಡ್ ಆರೋಗ್ಯಕ್ಕೆ ಮಾರಕ-ವಿ.ಜಿ.ರಾಮಚಂದ್ರಯ್ಯ

ಫಾಸ್ಟ್ ,ಜಂಕ್ ಫುಡ್ ಆರೋಗ್ಯಕ್ಕೆ ಮಾರಕ-ವಿ.ಜಿ.ರಾಮಚಂದ್ರಯ್ಯ

ಮುದ್ದೇಬಿಹಾಳ : ಫಾಸ್ಟ್ ಫುಡ್,ಜಂಕ್ ಫುಡ್‌ನಿಂದ ದೇಹದ ಮೇಲಿನ ದುಷ್ಪರಿಣಾಮ ಬೀರುತ್ತದೆ.ಅಂತಹ ಆಹಾರ ಪದಾರ್ಥಗಳ ಸೇವನೆಯಿಂದ ದೂರ ಇರಬೇಕು ಎಂದು ವಿಬಿಸಿ ಹೈಸ್ಕೂಲ್‌ನ ಮುಖ್ಯಗುರು ವಿ.ಜಿ.ರಾಮಚಂದ್ರಯ್ಯ ಹೇಳಿದರು. ಪಟ್ಟಣದ ಕೆಬಿಎಂಪಿಎಸ್ ಶಾಲೆಯಲ್ಲಿ ಶುಕ್ರವಾರ ರಾಷ್ಟಿçÃಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾವು ದೈನಂದಿನ ಬದುಕಿನಲ್ಲಿ ಸೇವಿಸುವ ಆಹಾರದಲ್ಲೂ ವಿಜ್ಞಾನ ಅಡಗಿದೆ.ಪ್ರತಿ ವಸ್ತುಗಳಲ್ಲೂ ವೈಜ್ಞಾನಿಕ ಅಂಶಗಳನ್ನು ಒಳಗೊಂಡಿದ್ದು ಯಾವ ಪದಾರ್ಥ ನಮ್ಮ ದೇಹಕ್ಕೆ ಅತ್ಯಂತ ಸೂಕ್ತ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.