Muddebihal: ಶಿಕ್ಷಣ ಯಾರಿಂದಲೂ ಕಸಿದುಕೊಳ್ಳಲಾಗದ ಆಸ್ತಿ: ಪಲ್ಲವಿ

Muddebihal: ಶಿಕ್ಷಣ ಯಾರಿಂದಲೂ ಕಸಿದುಕೊಳ್ಳಲಾಗದ ಆಸ್ತಿ: ಪಲ್ಲವಿ


ಮುದ್ದೇಬಿಹಾಳ: ಸಂಘ, ಸಂಸ್ಥೆಗಳು ಎಲ್ಲರನ್ನೂ ಸೇರಿಸಿಕೊಂಡು, ಸರ್ವರ ಏಳ್ಗೆಗೆ ಶ್ರಮಿಸುವ ಕೆಲಸ ಮಾಡಬೇಕು ಎಂದು ದೇವಿಕಾ ಸುಬ್ಬರಾವ್ ಫೌಂಡೇಶನ್ ಅಧ್ಯಕ್ಷೆ, ಸಮಾಜ ಸೇವಕಿ ಪಲ್ಲವಿ ನಾಡಗೌಡ ಹೇಳಿದರು.

ಪಟ್ಟಣದ ಟಾಪ್ ಇನ್ ಟೌನ್ ಹಾಲ್ ನಲ್ಲಿ ಪ್ರಗತಿ ಜೆಸಿ ಸಂಸ್ಥೆಯ 2024-25 ನೇ ಸಾಲಿನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Join Our Telegram: https://t.me/dcgkannada

ಸಮಾಜಮುಖಿ ಕೆಲಸಗಳು ಮತ್ತು ಪಾರದರ್ಶಕತೆ ಸಂಘ ಸಂಸ್ಥೆಗಳ ಮೇಲಿನ ನಂಬಿಕೆಗೆ ಮುಖ್ಯ ಕಾರಣವಾಗುತ್ತವೆ. ಜೆಸಿ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಯಿಂದ ಅತ್ಯುತ್ತಮ ಶಿಕ್ಷಣ ನೂರಾರು ಮಕ್ಕಳಿಗೆ ಲಭಿಸುತ್ತಿರುವುದು ಸಂತಸದ ವಿಷಯ. ಶಿಕ್ಷಣದಿಂದ ದೊರಕುವ ಶಕ್ತಿ ದೊಡ್ಡದು. ಎಂದರು.

ಅತಿಥಿಗಳಾಗಿದ್ದ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಒಂದು ಸಂಸ್ಥೆಯ ನೇತೃತ್ವ ವಹಿಸಿಕೊಂಡ ಕೆಲವರು, ಕೆಲವೇ ದಿನಗಳಲ್ಲಿ ಆ ಇಡೀ ಸಂಸ್ಥೆಯನ್ನು ತಮ್ಮ ಕುಟುಂಬದ ಆಸ್ತಿಯನ್ನಾಗಿಸಿಕೊಂಡ ಜ್ವಲಂತ ಉದಾಹರಣೆಗಳು ನಮ್ಮ ಮುಂದೆ ಇವೆ. ಆದರೆ ಜೆಸಿ ಸಂಸ್ಥೆಯ ಸದಸ್ಯರು ಫಲಾಪೇಕ್ಷೆ ಇಲ್ಲದೇ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವ ತತ್ವದಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸಭೆಯಲ್ಲಿ ಬೆಂಗಳೂರು ಮಹಾ ನಗರಸಭೆಯ ವಿಶೇಷ ಆಯುಕ್ತ ಶಿವಾನಂದ ಕಲಕೇರಿ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರ ಆಪ್ತ ಕಾರ್ಯದರ್ಶಿ ಶ್ರೀಶೈಲ ಬಿದರಕುಂದಿ ಮಾತನಾಡಿದರು.

ಅಹಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ, ಜೆಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ತಡಸದ ಅಧ್ಯಕ್ಷರಾದ ಗುರುಲಿಂಗಪ್ಪಗೌಡ ಪಾಟೀಲ, ನಿಕಟಪೂರ್ವ ಅಧ್ಯಕ್ಷರಾದ ಮಹಾಬಲೇಶ್ವರ ಶಿ.ಗಡೇದ, ಕಾರ್ಯದರ್ಶಿ ಮುತ್ತು ಕಡಿ ವೇದಿಕೆಯಲ್ಲಿದ್ದರು.

ಇದನ್ನೂ‌ ಓದಿ: Murder case: ಶೆಡ್‌ನಲ್ಲಿ ನಡೀತು ಮತ್ತೊಂದು ಭೀಕರ ಹತ್ಯೆ..! ಇಲ್ಲಿ ಸ್ನೇಹಿತನೇ ಕೊಲೆಗಾರ

2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಶರಣು ಅಯ್ಯಪ್ಪ ಸಜ್ಜನ ಹಾಗೂ ಕಾರ್ಯದರ್ಶಿಯಾಗಿ ಸುನೀಲ್ ಇಲ್ಲೂರ ಅಧಿಕಾರ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಜೆಸಿ ಸಂಸ್ಥೆಗೆ ಸಲಹಾ ಸಮಿತಿಯ ಸದಸ್ಯರನ್ನಾಗಿ ಬಾಲಾಜಿ ಶುಗರ್ಸನ ರಾಹುಲ ಪಾಟೀಲ ಹಾಗೂ ಆರ್.ಎಸ್.ಪಾಟೀಲ ಅವರನ್ನು ಸೇರಿಸಿಕೊಳ್ಳಲಾಯಿತು.

ಸಮಾರಂಭದಲ್ಲಿ ವಿವಿದ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಜೆಸಿ ಸದಸ್ಯರನ್ನು ಹಾಗೂ ಮಕ್ಕಳನ್ನು ಸನ್ಮಾನಿಸಲಾಯಿತು.

ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಕುಂಟೋಜಿಯ ಭಾವೈಕ್ಯತೆ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿ, ಸಂಘ, ಸಂಸ್ಥೆಗಳು ದೀನರ, ದಲಿತರ, ದುರ್ಬಲರ, ನೊಂದವರ ಜೀವನಾಡಿಯಾಗಿ ಬೆಳೆಯಬೇಕು. ಸಮಾಜದ ಸರ್ವರ ಕಲ್ಯಾಣಕ್ಕೆ ಸಮಾಜ ಸೇವಾದೀಕ್ಷೆ ಪಡೆಯಬೇಕು ಎಂದರು.

ಜೆಸಿ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಡಾ.ವೀರೇಶ ಪಾಟೀಲ ಸ್ವಾಗತಿಸಿದರು. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ಅರವಿಂದ ಜಮಖಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಸ್.ಎಸ್.ಹೂಗಾರ ಹಾಗೂ ಮಹಾಬಲೇಶ್ವರ ಗಡೇದ ನಿರೂಪಿಸಿದರು.

Latest News

ಹಂಡೆ ಹನುಮಪ್ಪ ನಾಯಕರ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸಿ

ಹಂಡೆ ಹನುಮಪ್ಪ ನಾಯಕರ ಜೀವನ ಚರಿತ್ರೆ ಪಠ್ಯದಲ್ಲಿ ಅಳವಡಿಸಿ

ಮುದ್ದೇಬಿಹಾಳ : ಹಂಡೇ ಹನುಮಪ್ಪ ನಾಯಕರ ಇತಿಹಾಸ ಈಗಾಗಲೇ ಆಂಧ್ರಪ್ರದೇಶದ ಸರ್ಕಾರ ತನ್ನ ಶಾಲೆಗಳಲ್ಲಿನ

ಹಿರೇಮುರಾಳ-ಕೇಸಾಪೂರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಹಿರೇಮುರಾಳ-ಕೇಸಾಪೂರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮುದ್ದೇಬಿಹಾಳ : ಹಿಂದಿನ ಬಿಜೆಪಿ ಸರ್ಕಾರ ಎರಡು ವರ್ಷದಲ್ಲಿ 2.20 ಲಕ್ಷ ಕೋಟಿ ರೂ.ಬಿಲ್

ಭವ್ಯ ಭಾರತ ನಿರ್ಮಾಣಕ್ಕೆ ಯೋಗ ದಿನ ಪ್ರೇರಣೆ

ಭವ್ಯ ಭಾರತ ನಿರ್ಮಾಣಕ್ಕೆ ಯೋಗ ದಿನ ಪ್ರೇರಣೆ

ಮುಧೋಳ: ಮಹಾನ್ ನಾಯಕರ ಕನಸಿನಂತೆ ಭವ್ಯ ಭಾರತ ನಿರ್ಮಾಣಕ್ಕೆ ಯೋಗ ದಿನ ಪ್ರೇರಣೆಯಾಗಿದೆ ಎಂದು

ಹಳ್ಳದಲ್ಲಿ ಕೊಚ್ಚಿಹೋದ ಬಾಲಕ-ಯುವಕ ಶವವಾಗಿ ಪತ್ತೆ!

ಹಳ್ಳದಲ್ಲಿ ಕೊಚ್ಚಿಹೋದ ಬಾಲಕ-ಯುವಕ ಶವವಾಗಿ ಪತ್ತೆ!

ಇಳಕಲ್: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್

ಅನೈತಿಕ‌ ಸಂಬಂಧಕ್ಕೆ ಆಲಮೇಲನಲ್ಲಿ ಬಿತ್ತು ಹೆಣ?

ಅನೈತಿಕ‌ ಸಂಬಂಧಕ್ಕೆ ಆಲಮೇಲನಲ್ಲಿ ಬಿತ್ತು ಹೆಣ?

ಆಲಮೇಲ: ಪಟ್ಟಣದಲ್ಲಿ ಯುವಕನನೊರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಫಾರೂಕ ಆಮದಸಾಬ ಲಾಳಸಂಗಿ (26) ಕೊಲೆಯಾದ ವ್ಯಕ್ತಿ. ಕೊಲೆಗೆ ಅನೈತಿಕ ಸಂಭದದ ಶಂಕೆ ವ್ಯಕ್ತವಾಗಿದೆ. ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸಿಂದಗಿ ಸಿಪಿಐ ನಾನಾಗೌಡ ಪೋಲಿಸ್ ಪಾಟೀಲ, ಪಿಎಸ್ಐ ಅರವಿಂದ ಅಂಗಡಿ ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಸ್ವಾನದಳ ಸಿಬ್ಬಂದಿ ಆಗಮಿಸಿ ಶೋಧ ನಡೆಸಿದ್ದಾರೆ.

ಹುಟ್ಟು ಹೋರಾಟಗಾರ ರಾಜಕೀಯ ಮುತ್ಸದಿ ಕಾಶಪ್ಪನವರ ಅಗಲಿಕೆ ಎರಡು ದಶಕಗಳು

ಹುಟ್ಟು ಹೋರಾಟಗಾರ ರಾಜಕೀಯ ಮುತ್ಸದಿ ಕಾಶಪ್ಪನವರ ಅಗಲಿಕೆ ಎರಡು ದಶಕಗಳು

ಹುನಗುಂದ-ಅಖಂಡ ವಿಜಯಪುರ ಮತ್ತು ಬಾಗಲಕೋಟಿ ಜಿಲ್ಲೆಯ ಹುನಗುಂದ ತಾಲೂಕಿನ ಕೃಷ್ಣ ನದಿಯ ದಡದಲ್ಲಿರುವ ಒಂದು ಪುಟ್ಟ ಗ್ರಾಮವಾದ ಹಾವರಗಿಯಲ್ಲಿ ಜನಿಸಿದ ಲಿಂ, ಎಸ್.ಆರ್.ಕಾಶಪ್ಪನವರ ಮೊದಲು ತಾಲೂಕ ಅಭಿವೃದ್ದಿ ಮಂಡಳಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜರ್ನಿ ಆರಂಭಿಸುವ ಮೂಲಕ ರಾಜ್ಯ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನದವರಿಗೂ ಸಾಗಿದರು. ಹಮ್ಮು ಬಿಮ್ಮಿಲ್ಲದ ಸರಳ ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು. ಜಿಗಿಟುತನ ಹಾಗೂ ಜವಾರಿ ಭಾಷೆ ಮತ್ತು ಸ್ವಭಾವ ಅವರನ್ನು ಅಲ್ಲಿಯತನಕ ಕರೆದುಕೊಂಡು