The land records given to lease were altered and purchased by crooks: Veeranna Charantimath accused

Hunagund: ಲೀಸ್ ಗೆ ನೀಡಿದ್ದ ಭೂ ದಾಖಲೆ ತಿದ್ದಿ ಖರೀದಿಸಿದ ದುರುಳರು: ವೀರಣ್ಣ ಚರಂತಿಮಠ ಆರೋಪ

Hunagund: ಲೀಸ್ ಗೆ ನೀಡಿದ್ದ ಭೂ ದಾಖಲೆ ತಿದ್ದಿ ಖರೀದಿಸಿದ ದುರುಳರು: ವೀರಣ್ಣ ಚರಂತಿಮಠ ಆರೋಪ

ಹುನಗುಂದ: ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಶಾಲೆಯ ಆವರಣಕ್ಕೆ 99 ವರ್ಷ ಮೂರು ಎಕರೆ ಆರು ಗುಂಟೆ ಲೀಸ್ ನೀಡಿದ ಜಾಗೆಯನ್ನು ಖಾಸಗಿ ಇಬ್ಬರು ವ್ಯಕ್ತಿಗಳು ಅಧಿಕಾರ ದುರಪಯೋಗ ಪಡಿಸಿಕೊಂಡು ಲೀಸ್ ಅಂತ ಇದ್ದಿದನ್ನು ಅಳಿಸಿ ಖುಷ್ಕಿ ಜಮೀನು ಅಂತ ಜಾಗೆಯನ್ನು ಖರೀದಿ ಮಾಡಿಕೊಂಡಿದ್ದಾರೆ ಎಂದು ವಿ.ಮ.ವಿ.ವ ಸಂಘದ ಕಾಯಾಧ್ಯಕ್ಷ ವೀರಣ್ಣ ಚರಂತಿಮಠ ಆರೋಪಿಸಿದರು.

Join Our Telegram: https://t.me/dcgkannada

ಪಟ್ಟಣದ ವಿ.ಮ.ವಿ.ವ ಸಂಘದ ಕಾರ್ಯಾಲಯದಲ್ಲಿ ಗುರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಲಕಲ್ಲ ವಿಜಯ ಮಹಾಂತೇಶ ಸ್ವಾಮಿಗಳು ಅದರ ಅಧ್ಯಕ್ಷತೆಯಲ್ಲಿ ಮಾರ್ಗದರ್ಶನದಲ್ಲಿ ಈ ಸಂಸ್ಥೆಯು ನಡೆಯುತ್ತಿದ್ದು, ನೂರಾರು ವರ್ಷಗಳ ಇತಿಹಾಸ ಹೊಂದಿದ ಈ ಸಂಸ್ಥೆ ಒಂದು ಸಾರ್ವಜನಿಕವಾದ ಈ ಸಂಸ್ಥೆಯಾಗಿದೆ ಎಂದರು.

ನಾಲ್ಕು ಕ್ಯಾಂಪಸ್‌ಗಳನ್ನು ಹೊಂದಿದ್ದು ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘಕ್ಕೆ 99 ವರ್ಷಗಳ ವರೆಗೆ ಲೀಸ್ ನೀಡಿದ ಬಿಂದುರಾವ್ ಕುಲಕರ್ಣಿ ನೀಡಿದ ರಿ.ಸ.ನಂ ೪೫೮/೧ ಕ್ಷೇತ್ರ ೩ ಎಕರೆ ೬ ಗುಂಟೆ ಮೊದಲು ಲೀಸ್ ಜಮೀನು ಇದ್ದು, ಶಾಲೆಯ ಆಟದ ಮೈದಾನ ಎಂದು ನೊಂದನೆಯಾಗಿದೆ ಎಂದರು.

ಕುಲಕರ್ಣಿಯವರ ಕುಟುಂಬಸ್ಥರು ನಾಲ್ಕು ಜನರು ಸಂಸ್ಥೆಗೆ ೨೦೦೧ ರಲ್ಲಿ ೫೦ ಸಾವಿರವನ್ನು ತೆಗೆದುಕೊಂಡು ಸಂಸ್ಥೆಗೆ ಬಿಟ್ಟು ಕೊಟ್ಟಿದ್ದಾರೆ. ಇದರ ಮಧ್ಯೆ ಇಬ್ಬರು ಖಾಸಗಿ ವ್ಯಕ್ತಿಗಳು ಇನ್ನೂ ೨೨ ವರ್ಷ ಲೀಸ್ ಇದ್ದರೂ ಈ ರೀತಿಯಾಗಿ ಉದ್ದಟತನದ ಕೆಲಸವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.

ಕೋರ್ಟನಲ್ಲಿ ರಾಜೀಯಾಗಿ ಡಿಗ್ರಿಯಾಗಿದೆ. ಸಂಸ್ಥೆಯ ಆವರಣ ಅಂತ ಆಗಿದೆ. ಅಧಿಕಾರ ಇದೆ ಅಂತ ಯಾವುದೇ ಉದ್ದಟತನ ಕೆಲಸವನ್ನು ಯಾರೂ ಮಾಡಬಾರದು ಈಗಾಗಲೇ ಕರ್ನಾಟಕ ಹೈಕೋಟ್ ತಡೆಯಾಜ್ಞೆಯನ್ನು ನೀಡಿದೆ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕರಿಗೆ ಇಬ್ಬರಿಗೆ ಬೋಗಸ್ ಅಟ್ರಾಸಿಟಿ ಕೇಸ್ ಅವರು ಮಾಡಲಾಗಿದ್ದು. ಬೋಗಸ್ ಇದ್ದಾಗ ಯಾರನ್ನು ಅರೆಸ್ಟ್ ಮಾಡಲು ಬರುವುದಿಲ್ಲ ಕಾನೂನು ಕೇಳಿದ್ದೇವೆ. ಗುರವಾರ ರಾತ್ರಿ ಏಕಾಏಕಿಯಾಗಿ ಶಾಲೆಯ ಕೌಂಪೋಡನ್ನು ಎರಡು ಜೆಸಿಬಿ ಮತ್ತು ಹಿಟ್ಯಾಚಿಯಿಂದ ನಂಬರ ಪ್ಲೇಟ್ ತೆಗೆದು ಕೌಂಪೋಡ್ ಒಡೆಯುವ ಕೆಲಸವನ್ನು ಮಾಡಿದ್ದಾರೆ ಎಂದರು.

ಅವರ ಮೇಲೆ ನೂರಕ್ಕೆ ನೂರರಷ್ಟು ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇವೆ. ನ್ಯಾಯಾಲಯದ ತಡೆಯಾಜ್ಞೆ ಇರುವಾಗ ಈ ರೀತಿಯಾಗಿ ಮಾಡಿದಾಗ ಅವರ ಮೇಲೆ ಸೂಕ್ತ ಕ್ರಮವಹಿದ್ದೇವೆ ಎಂದರು.

ಅಧಿಕಾರಿಗಳು ಯಾರದೋ ಮಾತು ಕೇಳಿ ಕಾನೂನು ಬಿಟ್ಟು ಕೆಲಸ ಮಾಡಿದರೆ, ಅವರ ಮೇಲೆಯೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕಾನೂನು ಬದ್ಧವಾದ ಕೆಲಸವನ್ನು ಮಾತ್ರ ಮಾಡಬೇಕು. ಅಧಿಕಾರ ಮತ್ತು ಸರ್ಕಾರ ಇಂದು ಇರುತ್ತೇ ನಾಳೆ ಹೋಗುತ್ತೆದೆ. ಆದ್ದರಿಂದ ಅಧಿಕಾರಿಗಳು ಕಾನೂನು ಮೀರಿ ಕೆಲಸವನ್ನು ಯಾವುದೇ ಕಾರಣಕ್ಕೆ ಮಾಡಬಾರದು ಎಂದರು.

ಬೇರೆಯವರ ಮಾತು ಕೇಳಿ ಕೆಲಸವನ್ನು ಮಾಡಿದರೆ ಅಧಿಕಾರಿಗಳೇ ನೇರ ಹೋಣೆಯನ್ನು ಮಾಡಲಾಗುವುದು. ಕಾನೂನು ಬಿಟ್ಟು ನಾವು ಏನು ಮಾಡುವುದಿಲ್ಲ ಕಾನೂನು ಪ್ರಕಾರ ಕ್ರಮವಹಿಸಿ ಕೆಲ¸ವನ್ನು ಸಂಸ್ಥೆಯ ಹಿತದೃಷ್ಟಿಯಿಂದ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: Astrology: ಹಣದ ವಿಚಾರದಲ್ಲಿ ಇಂದು ನೀವು ಜಾಗರೂಕರಾಗಿ ಇರುವುದು ಉತ್ತಮ

ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ, ನಿರ್ದೇಶಕರಾದ ಅರುಣೋದಯ ದುದ್ಗಿ, ರವಿ ಹುಚನೂರ , ಬಸವರಾಜ ಕೆಂದೂರ, ಮಹಾಂತೇಶ ಕತ್ತಿ ಇತರರು ಇದ್ದರು.

Latest News

ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ಕುಳಗೇರಿ ಕ್ರಾಸ್: ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಕೊಪ್ಪದಲ್ಲಿ ಸನ್ 2025-26ನೇ ಸಾಲಿನ

ಉತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ ಪುರಸ್ಕೃತ ಶಿವಕುಮಾರಗೆ ಸನ್ಮಾನ

ಉತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ ಪುರಸ್ಕೃತ ಶಿವಕುಮಾರಗೆ ಸನ್ಮಾನ

ಮುದ್ದೇಬಿಹಾಳ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದಿಂದ ಕೊಡಮಾಡುವ ಉತ್ತಮ

ಬಸ್‌ಗೆ ಅಟೋ ಡಿಕ್ಕಿ: ಓರ್ವನಿಗೆ ಗಾಯ

ಬಸ್‌ಗೆ ಅಟೋ ಡಿಕ್ಕಿ: ಓರ್ವನಿಗೆ ಗಾಯ

ಮುದ್ದೇಬಿಹಾಳ : ಹಾಲು ಪೂರೈಸುವ ಗೂಡ್ಸ್ ವಾಹನವನ್ನು ಅಜಾಗರೂಕತೆಯಿಂದ ಚಲಾಯಿಸಿ ಬಸ್‌ಗೆ ಡಿಕ್ಕಿ ಹೊಡೆದ

ಗ್ರಾಮದೇವತೆ ಜಾತ್ರೆಗೆ ಕ್ಷಣಗಣನೆ: ಮದುವಣಗಿತ್ತಿಯಂತೆ ಶೃಂಗಾರಗೊಂಡ ಮುದ್ದೇಬಿಹಾಳ ನಗರ

ಗ್ರಾಮದೇವತೆ ಜಾತ್ರೆಗೆ ಕ್ಷಣಗಣನೆ: ಮದುವಣಗಿತ್ತಿಯಂತೆ ಶೃಂಗಾರಗೊಂಡ ಮುದ್ದೇಬಿಹಾಳ ನಗರ

ಮುದ್ದೇಬಿಹಾಳ : ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವತೆ ಜಾತ್ರೆಗೆ ಮುದ್ದೇಬಿಹಾಳ ಪಟ್ಟಣ ಮದುವಣಗಿತ್ತಿಯಂತೆ

ಹೃದಯಾಘಾತದಿಂದ ಕುಸಿದು ಬಿದ್ದ ಯುವತಿ ಸಾವು!

ಹೃದಯಾಘಾತದಿಂದ ಕುಸಿದು ಬಿದ್ದ ಯುವತಿ ಸಾವು!

ಹಾಸನ: ಇತ್ತೀಚೆಗೆ ಯುವ ಜನರೇ ಹೃದಯಾಘತಕ್ಕೆ ಬಲಿಯಾಗುತ್ತಿರುವುದು ಹೆಚ್ಚಾಗಿದ್ದು, ಇದೀಗ ಹೃದಯಾಘಾತದಿಂದ ಕುಸಿದುಬಿದ್ದು ಪದವಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಹಾಸನ ತಾಲೂಕಿನ ಕೆಲವತ್ತಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ಕೆಲವತ್ತಿ ಗ್ರಾಮದ ಪಾಪಣ್ಣ ಹಾಗೂ ಗಾಯತ್ರಿ ದಂಪತಿ ಪುತ್ರಿ ಕವನಾ ಕೆ.ವಿ. (21) ಎಂದು ಗುರುತಿಸಲಾಗಿದೆ. ಈಕೆ ಹಾಸನ ಸರ್ಕಾರಿ ಕಾಲೇಜಿನಲ್ಲಿ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜು ಮುಗಿಸಿ ಸಂಜೆ ಮನೆಗೆ ಬಂದ ಕವನಾಗೆ ಧಿಡೀರ್ ಆಗಿ ಎದೆನೋವು

ನಿಗದಿಯಂತೆ ಕಾರ್ಯಕ್ರಮ: ಮೇ.30 ರಂದು ಗ್ರಾಮ ದೇವತೆ ಜಾತ್ರೆಗೆ ಸಿದ್ಧತೆ ಪೂರ್ಣ

ನಿಗದಿಯಂತೆ ಕಾರ್ಯಕ್ರಮ: ಮೇ.30 ರಂದು ಗ್ರಾಮ ದೇವತೆ ಜಾತ್ರೆಗೆ ಸಿದ್ಧತೆ ಪೂರ್ಣ

ಮುದ್ದೇಬಿಹಾಳ : ಮೇ.30 ರಿಂದ ಪಟ್ಟಣದಲ್ಲಿ ಗ್ರಾಮದೇವತೆ ಜಾತ್ರೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಕಮೀಟಿಯ ಮುಖಂಡ ಪ್ರಭುರಾಜ ಕಲ್ಬುರ್ಗಿ ಹೇಳಿದರು. ಪಟ್ಟಣದ ಹಳೆ ತಹಸೀಲ್ದಾರ್ ಕಚೇರಿ ಬಳಿ ಇರುವ ಪೊಲೀಸ್ ಕ್ವಾರ್ಟರ್ಸ್ನಲ್ಲಿ ಮುದ್ದೇಬಿಹಾಳ ಗ್ರಾಮ ದೇವತೆ ಜಾತ್ರಾ ಕಮೀಟಿ ನೇತೃತ್ವದಲ್ಲಿ ಬುಧವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅಂದು ಬೆಳಗ್ಗೆ 8 ರಿಂದ ಗ್ರಾಮದೇವತೆ ಹಾಗೂ ಶಾರದಾ ದೇವಿಯವರ ಮೂರ್ತಿಗಳ ಭವ್ಯ ಮೆರವಣಿಗೆ ಕಿಲ್ಲಾದ ಹೊಸಮಠದಿಂದ