Karnataka cm race: 'Bande' foreign tour; Rahul Gandhi in America before DK!

Karnataka cm race: ‘ಬಂಡೆ’ ಫಾರಿನ್​ ಟೂರ್​​​​​; ಡಿಕೆಶಿಗೂ ಮೊದಲೇ ಅಮೆರಿಕದಲ್ಲಿ ರಾಹುಲ್‌ ಗಾಂಧಿ!

Karnataka cm race: ‘ಬಂಡೆ’ ಫಾರಿನ್​ ಟೂರ್​​​​​; ಡಿಕೆಶಿಗೂ ಮೊದಲೇ ಅಮೆರಿಕದಲ್ಲಿ ರಾಹುಲ್‌ ಗಾಂಧಿ!

ಬೆಂಗಳೂರು: ಇದೇ ವರ್ಷ ನವೆಂಬರ್‌ 5ರಂದು ಅಮೆರಿಕ ಅಧ್ಯಕ್ಷರ ಆಯ್ಕೆಯ (Election of the President of the United States) ಐತಿಹಾಸಿಕ ಚುನಾವಣೆ ನಡೆಯಲಿದ್ದು, ಡೆಮಾಕ್ರೆಟಿಕ್‌ ಪಕ್ಷದಿಂದ ಭಾರತೀಯ ಮೂಲದ ಕಮಲಾ ಹ್ಯಾರೀಸ್‌‌ (Kamala Harris) ಅಭ್ಯರ್ಥಿಯಾಗಿದ್ದರೆ ರಿಪಬ್ಲಿಕನ್‌ ಪಕ್ಷದಿಂದ (Republican Party) ಡೊನಾಲ್ಡ್‌ ಟ್ರಂಪ್‌ 2ನೇ ಸಲ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ಈಗ ಕಮಲಾ ಹ್ಯಾರಿಸ್‌ ಪರವಾಗಿ ಪ್ರಚಾರ ಮಾಡಲು ಅನಿವಾಸಿ ಭಾರತೀಯರು, ಅಮೆರಿಕದಲ್ಲಿರುವ ಕನ್ನಡಿಗರ ಮತ ಸೆಳೆಯಲು ಡಿ.ಕೆ ಶಿವಕುಮಾರ್‌ (DK Shivakumar) ಅಮೆರಿಕಾಗೆ ತೆರಳಿದ್ದಾರೆ.

ಹ್ಯಾರಿಸ್‌ಗೂ ಡಿಸಿಎಂಗೂ ಹೇಗೆ ನಂಟು?

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ನಿಂತಿರುವ ಭಾರತ ಮೂಲದ ಕಮಲಾ ಹ್ಯಾರಿಸ್‌ಗೂ ಕರ್ನಾಟಕದ ಡಿ.ಕೆ.ಶಿವಕುಮಾರ್‌ಗೂ ಏನಪ್ಪಾ ಸಂಬಂಧ ಅಂತೀರಾ? ಹೌದು, ಇದು ಡಿ.ಕೆ.ಶಿವಕುಮಾರ್‌ ಆಪ್ತರು, ಕಾಂಗ್ರೆಸ್ಸಿಗರು, ಬಿಜೆಪಿ, ಜೆಡಿಎಸ್‌ನವರ ಜೊತೆ ಬಹುತೇಕ ಕನ್ನಡಿಗರನ್ನೂ ಕಾಡ್ತಿರೋ ಪ್ರಶ್ನೆಯಾಗಿದೆ. ಎಲ್ಲಿಯ ಕಮಲಾ ಹ್ಯಾರಿಸ್‌, ಎಲ್ಲಿಯ ಡಿಕೆಶಿ ಹ್ಯಾರಿಸ್‌ಗೂ ಏನು ನಂಟು ಅಂತಾ ಅದಕ್ಕೂ ಉತ್ತರ ಇದೆ ನೋಡಿ..

ಕಮಲಾ ಹ್ಯಾರಿಸ್‌-ಡಿಕೆಶಿ ಗೆಳೆತನ!

ಕಮಲಾ ತಾಯಿ ಶ್ಯಾಮಲಾ ಗೋಪಾಲನ್‌ ತಮಿಳುನಾಡಿನವರು. ಅಮೆರಿಕದಲ್ಲಿದ್ದರೂ ಭಾರತದಲ್ಲಿ ಟ್ರಸ್ಟ್ ಮೂಲಕ ಜನಸೇವೆ ಮಾಡ್ತಿದ್ದಾರೆ. ಕಮಲಾ ಹ್ಯಾರಿಸ್‌ ತಾಯಿ ಟ್ರಸ್ಟ್‌ ಜೊತೆ ಡಿಕೆಶಿ ಅವರಿಗೆ ನಂಟಿದೆಯಂತೆ! ಕಮಲಾ ಹ್ಯಾರಿಸ್‌ ತಾಯಿ ಟ್ರಸ್ಟ್‌ಗೆ ಡಿಕೆ ಶಿವಕುಮಾರ್‌ ಎಲ್ಲಾ ರೀತಿಯ ನೆರವನ್ನೂ ಕೊಟ್ಟಿದ್ದಾರೆ ಅಂತೆ. ಹಾಗಾಗಿನೇ ಕಮಲಾ ಹ್ಯಾರಿಸ್‌ ಜೊತೆ ಡಿಕೆಶಿ ರಾಜಕೀಯ ಒಡನಾಟ ಶುರುವಾಗುವ ಲಕ್ಷಣ ಕಾಣಿಸಿದ್ದು. ಅನಿವಾಸಿ ಕನ್ನಡಿಗರ ಮತ ಸೆಳೆಯಲು ಆಹ್ವಾನ ಕೊಟ್ಟಿದ್ದಾರೆ ಎನ್ನಲಾಗಿದೆ.

ಸೆಪ್ಟೆಂಬರ್‌ 10ರಂದು ಅಮೆರಿಕದ ನಾರ್ತ್ ಕ್ಯಾರೊಲಿನಾದಲ್ಲಿ ಭವ್ಯ ಸಮಾರಂಭ ಆಯೋಜಿಸಲಾಗಿದೆ. ಆ ಕಾರ್ಯಕ್ರಮಕ್ಕೆ ಅಮೆರಿಕದಲ್ಲಿರುವ ಭಾರತೀಯ ಮತದಾರರನ್ನು ಸೇರಿಸಲಾಗ್ತಿದ್ದು ಭಾರತೀಯ ಗಣ್ಯರನ್ನೂ ಆಹ್ವಾನಿಸಲಾಗಿದ್ದು ಡಿ.ಕೆ.ಶಿವಕುಮಾರ್‌ ಕೂಡ ಒಬ್ಬರು ಅನ್ನೋದು ಪ್ರಮುಖ ವಿಷ್ಯ.

ಅಂದಹಾಗೆ, ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ದೇಶ ಬಿಟ್ಟು ಹೋಗುವಂತಿಲ್ಲ. ಹೀಗಾಗಿ ಕೋರ್ಟ್‌ನಿಂದ ಅನುಮತಿಯನ್ನೂ ಪಡೆದು ಅಮೆರಿಕಗೆ ಹೋಗಿದ್ದಾರೆ. ಸೆಪ್ಟೆಂಬರ್‌ 14ಕ್ಕೆ ಡಿಕೆಶಿ ವಾಪಸ್ಸಾಗಲಿದ್ದಾರೆ. ಆದರೆ, ಇದು ಖಾಸಗಿ ಕಾರ್ಯಕ್ರಮ ಅಷ್ಟೇ ಅಂತ ಯಾವ ಗುಟ್ಟನ್ನೂ ಡಿ.ಕೆ.ಶಿವಕುಮಾರ್‌ ಬಿಟ್ಟುಕೊಟ್ಟಿಲ್ಲ.

ಡಿಕೆಶಿಗೂ ಮೊದಲೇ ಅಮೆರಿಕ ತಲುಪಿದ ರಾಹುಲ್‌‌:

ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಿಂದಿನ ಚುನಾವಣೆಯಲ್ಲಿ ಬೆಂಬಲ ಘೋಷಿಸಿತ್ತು. ಅವತ್ತು ಮೋದಿಯವ್ರೇ ಅಮೆರಿಕಾಗೆ ತೆರಳಿ ಟ್ರಂಪ್‌ ಪರ ಮತಯಾಚಿಸಿದ್ರು. ಈಗ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಪರ ಕಾಂಗ್ರೆಸ್‌ ಪ್ರಚಾರ ಮಾಡ್ತಿದೆ. ರಾಹುಲ್ ಗಾಂಧಿಯವ್ರು ಕೂಡ 3 ದಿನಗಳ ಅಮೆರಿಕ ಪ್ರವಾಸ ನಡೆಸ್ತಿದ್ದು ಈಗಾಗ್ಲೇ ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ ತಲುಪಿದದಾರೆ ಟೆಕ್ಸಾಸ್‌ ಏರ್‌ಪೋರ್ಟ್‌ನಲ್ಲಿ ರಾಹುಲ್ ಗಾಂಧಿಯವ್ರನ್ನ ಕಾಂಗ್ರೆಸ್‌ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ ಸ್ವಾಗತಿಸಿದ್ದರು.

ರಾಹುಲ್‌ ಗಾಂಧಿ ವಾಷಿಂಗ್ಟನ್‌, ಡಲ್ಲಾಸ್‌ ನಗರಗಳಲ್ಲಿ, ಜಾರ್ಜ್‌ಟೌನ್‌ ಮತ್ತು ಟೆಕ್ಸಾಸ್‌ ವಿಶ್ವವಿದ್ಯಾಲಯಗಳಲ್ಲಿ ಸಂವಾದ ನಡೆಸ್ತಾರೆ. ಡಿ.ಕೆ.ಶಿವಕುಮಾರ್‌ ನಾರ್ತ್‌ ಕ್ಯಾರೊಲಿನಾದಲ್ಲಿ ಕಮಲಾ ಹ್ಯಾರಿಸ್‌ ಪರ ಪ್ರಚಾರ ಮಾಡ್ತಿದ್ದಾರೆ. ಏನೇ ಆಗ್ಲಿ ಅಮೆರಿಕಾ ಎಲೆಕ್ಷನ್‌ನಲ್ಲೂ ಭಾರತೀಯರ ಪಾತ್ರ ಅದ್ರಲ್ಲೂ ದಕ್ಷಿಣ ಭಾರತದವ್ರು, ನಮ್ಮ ಕನ್ನಡಿಗರ ಪಾತ್ರನೂ ಮುಖ್ಯವಾಗಿದೆ ಅನ್ನೋದಕ್ಕೆ ಡಿಕೆಶಿ ಅಮೆರಿಕ ಟೂರೇ ಸಾಕ್ಷಿ.

ಇದನ್ನೂ ಓದಿ: FDI: ಸಿಂಗಪುರ್ ಉದ್ಯಮಿಗಳ ಹೂಡಿಕೆಗೆ ಕರ್ನಾಟಕದಲ್ಲಿ ಮುಕ್ತ ಸ್ವಾಗತ: ಸಚಿವ ಎಂ ಬಿ ಪಾಟೀಲ

ಇದೇ ವೇಳೆ ರಾಹುಲ್ ಗಾಂಧಿ ಮತ್ತು ಡಿಕೆಶಿ ರಹಸ್ಯೆ ಸಭೆಗೆ ವೇದಿಕೆ ಸಿದ್ಧವಾಗಿದೆಯಂತೆ. ಆ ಸಭೆಯಲ್ಲಿ, ಒಂದು ವೇಳೆ ಕರ್ನಾಟಕದ ಸಿಎಂ ಬದಲಾವಣೆ ಮಾಡುವ ಪ್ರಸಂಗ ಬಂದರೆ ಆಗ ಯಾರನ್ನು ಸಿಎಂ ಮಾಡಬೇಕು ಎಂದು ನಿರ್ಧಾರ ಮಾಡಲಾಗುತ್ತದೆ ಅಂತೆ. ಡಿಕೆಶಿ ತಮಗೆ ಸಿಎಂ ಹುದ್ದೆ ನೀಡುವಂತೆ ಲಾಭಿ ಮಾಡಲು ಇದು ಸಕಾಲ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆಯಾಗಿದೆ.

Latest News

ತೆರಿಗೆ ವಸೂಲಾತಿಯಲ್ಲಿ ಸಾಧನೆ: ಆಲೂರು ಗ್ರಾ.ಪಂಗೆ ಪ್ರಶಸ್ತಿ ಪ್ರದಾನ

ತೆರಿಗೆ ವಸೂಲಾತಿಯಲ್ಲಿ ಸಾಧನೆ: ಆಲೂರು ಗ್ರಾ.ಪಂಗೆ ಪ್ರಶಸ್ತಿ ಪ್ರದಾನ

ನಾಲತವಾಡ : ತೆರಿಗೆ ವಸೂಲಾತಿಯಲ್ಲಿ ವಿಜಯಪುರ ಜಿಲ್ಲೆಗೆ ಮೂರನೇ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ಮುದ್ದೇಬಿಹಾಳ

ರಾಜ್ಯದ ಟಾಪರ್ ಸ್ಥಾನಕ್ಕೆ ಒಂದೇ ಅಂಕ ಮಿಸ್ :  ವಿದ್ಯಾರ್ಥಿನಿ ಕಣ್ಣೀರು…!                                                                 ನಾಗರಬೆಟ್ಟ ಎಸ್.ಡಿ.ಕೆ ಪ್ರೌಢಶಾಲೆ ವಿದ್ಯಾರ್ಥಿನಿ ಪೂಜಾ ಲಮಾಣಿ ಸಾಧನೆ

ರಾಜ್ಯದ ಟಾಪರ್ ಸ್ಥಾನಕ್ಕೆ ಒಂದೇ ಅಂಕ ಮಿಸ್ : ವಿದ್ಯಾರ್ಥಿನಿ ಕಣ್ಣೀರು…! ನಾಗರಬೆಟ್ಟ ಎಸ್.ಡಿ.ಕೆ ಪ್ರೌಢಶಾಲೆ ವಿದ್ಯಾರ್ಥಿನಿ ಪೂಜಾ ಲಮಾಣಿ ಸಾಧನೆ

ಮುದ್ದೇಬಿಹಾಳ : ಸನ್ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ನಾಗರಬೆಟ್ಟದ ಎಸ್.ಡಿ.ಇ

ಸೌಜನ್ಯಾ ಕಂದಕೂರಗೆ 625 ಅಂಕ :                        ನಾಗರಬೆಟ್ಟದ ಆಕ್ಸಫರ್ಡ ಪಾಟೀಲ್ಸ್ ಪ್ರೌಢಶಾಲೆಗೆ ಈ ವರ್ಷವೂ ಸ್ಟೇಟ್ ರ‍್ಯಾಂಕ್..!

ಸೌಜನ್ಯಾ ಕಂದಕೂರಗೆ 625 ಅಂಕ : ನಾಗರಬೆಟ್ಟದ ಆಕ್ಸಫರ್ಡ ಪಾಟೀಲ್ಸ್ ಪ್ರೌಢಶಾಲೆಗೆ ಈ ವರ್ಷವೂ ಸ್ಟೇಟ್ ರ‍್ಯಾಂಕ್..!

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬಳು ಈ

ವಿದ್ಯಾರ್ಥಿಗೆ ಬೆಳೆಸಿದ ಶಾಲೆಗಳತ್ತ ಪಾಲಕರ ಗಮನವಿರಲಿ ಎಂ.ಎನ್.ಮದರಿ

ವಿದ್ಯಾರ್ಥಿಗೆ ಬೆಳೆಸಿದ ಶಾಲೆಗಳತ್ತ ಪಾಲಕರ ಗಮನವಿರಲಿ ಎಂ.ಎನ್.ಮದರಿ

ಮುದ್ದೇಬಿಹಾಳ : ಹಿಂದುಳಿದ,ಬಡವರ ಮಕ್ಕಳಿಗೆ ಉಚಿತ,ರಿಯಾಯಿತಿ ಶಿಕ್ಷಣ ಕೊಟ್ಟು ಒಳ್ಳೆಯ ಫಲಿತಾಂಶ ತಂದ ಮಕ್ಕಳನ್ನು

ಲಕ್ಷ್ಮೀ ಅಡಗಿಮನಿ ರಾಜ್ಯಕ್ಕೆ 6ನೇ ಸ್ಥಾನ :                 ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಅಮೋಘ ಸಾಧನೆ

ಲಕ್ಷ್ಮೀ ಅಡಗಿಮನಿ ರಾಜ್ಯಕ್ಕೆ 6ನೇ ಸ್ಥಾನ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಅಮೋಘ ಸಾಧನೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ-1 ರಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷವೂ ರಾಜ್ಯಮಟ್ಟದಲ್ಲಿ ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಲಕ್ಷ್ಮೀ ಅಡಗಿಮನಿ 592 ಅಂಕ ಪಡೆದು ರಾಜ್ಯಕ್ಕೆ ಆರನೇ ಸ್ಥಾನ ಪಡೆದುಕೊಂಡಿದ್ದು ವಿಜಯಪುರ ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದ್ದಾಳೆ.ಭಾಗ್ಯಾ ಹೊಸಮನಿ ಹಾಗೂ ನಂದಿತಾ ರೆಡ್ಡಿ 591ಅಂಕ ಪಡೆದು ದ್ವಿತೀಯ,ಸಂಜನಾ ಡಿ. 590

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಮಾ.20 ರಂದು ನಡೆಯಲಿರುವ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಸರ್ವ ಸಮಾಜದ ಬಾಂಧವರನ್ನು ಸೇರಿಕೊಂಡು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಶುಕ್ರವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಬಸವ ಜಯಂತಿಯ ದಿನದಂದು ಕಿಲ್ಲಾದಲ್ಲಿರುವ ಹೊಸಮಠದಲ್ಲಿ ಸಂಜೆ 4ಕ್ಕೆ ಧರ್ಮಸಭೆ ನಡೆಸಿ ಅಲ್ಲಿ ಬಸವಣ್ಣನವರ ಕುರಿತು ಉಪನ್ಯಾಸವನ್ನು ನುರಿತ ಅನುಭಾವಿಗಳಿಂದ ನಡೆಸಲಾಗುವುದು.ಧರ್ಮಸಭೆಗೆ ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ