ಡಿಸಿಜಿ ನ್ಯೂಸ್ ವರದಿ ಪರಿಣಾಮ : OXFORD PATIL’S TALENT SEARCH EXAM; 21 ವಿದ್ಯಾರ್ಥಿಗಳಿಗೆ ಸಂಪೂರ್ಣ ವಸತಿ ಸಮೇತ ಉಚಿತ ಶಿಕ್ಷಣ

ಡಿಸಿಜಿ ನ್ಯೂಸ್ ವರದಿ ಪರಿಣಾಮ : OXFORD PATIL’S TALENT SEARCH EXAM; 21 ವಿದ್ಯಾರ್ಥಿಗಳಿಗೆ ಸಂಪೂರ್ಣ ವಸತಿ ಸಮೇತ ಉಚಿತ ಶಿಕ್ಷಣ

ಮುದ್ದೇಬಿಹಾಳ : ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯಿAದ 21 ವಿದ್ಯಾರ್ಥಿಗಳಿಗೆ ಎರಡು ವರ್ಷದ ಸಂಪೂರ್ಣ ಉಚಿತ ಶಿಕ್ಷಣ, 20 ವಿದ್ಯಾರ್ಥಿಗಳಿಗೆ ಎರಡು ವರ್ಷದ ಉಚಿತ ಶಿಕ್ಷಣ,ಇನ್ನುಳಿದ 40 ವಿದ್ಯಾರ್ಥಿಗಳಿಗೆ ಶಿಕ್ಷಣದ ಶುಲ್ಕದಲ್ಲಿ ರಿಯಾಯತಿ ನೀಡಲಾಗುವುದು ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ್ ಹೇಳಿದರು.
ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನಲ್ಲಿ ರವಿವಾರ ನಡೆದ ಟ್ಯಾಲೆಂಟ್ ಸರ್ಚ್ ಅವಾರ್ಡ್-2025ರ ಅಂತಿಮ ಸುತ್ತಿನ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಲೇಜಿನಲ್ಲಿ ಈಚೇಗೆ ಆಯೋಜಿಸಿದ್ದ ಟ್ಯಾಲೆಂಟ್ ಅವಾರ್ಡ್-2025ರ ಪರೀಕ್ಷೆಯಲ್ಲಿ 3555 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.ಆದರೆ ಸಂಸ್ಥೆಯಿAದ ಮುಂಚಿತವಾಗಿ ನಿಗದಿ ಪಡಿಸಿದ್ದ ಅಂಕಗಳನ್ನು ಯಾರೊಬ್ಬರೂ ಗಳಿಸದ ಕಾರಣ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲರ ಸೂಚನೆಯಂತೆ ಅದರಲ್ಲಿಯೇ ಅತೀ ಹೆಚ್ಚು ಅಂಕ ಪಡೆದ 220 ವಿದ್ಯಾರ್ಥಿಗಳನ್ನು ಅಂತಿಮ ಆಯ್ಕೆ ಸುತ್ತಿಗೆ ಪರಿಗಣಿಸಲಾಗಿದ್ದು ಅಂತಿಮವಾಗಿ ಮತ್ತೊಂದು ಪರೀಕ್ಷೆ ನಡೆಸಿದ್ದು ಅದರಲ್ಲಿ ಮೊದಲ 80 ಸ್ಥಾನ ಪಡೆದವರ ಫಲಿತಾಂಶ ಪ್ರಕಟಿಸಿದ್ದೇವೆ ಎಂದು ತಿಳಿಸಿದರು.

ತಾಳಿಕೋಟಿ ಶಿಕ್ಷಕ ಎಸ್.ಎಸ್.ಸಜ್ಜನ,ಪ್ರಮುಖರಾದ ರಾಮನಗೌಡ ಬಿರಾದಾರ,ಕೆ.ಎಸ್.ಕರೇಕಲ್ಲ, ಆಂಗ್ಲಮಾಧ್ಯಮ ಶಾಲೆಯ ಇಸ್ಮಾಯಿಲ್ ಮನಿಯಾರ್, ಮಂಜು ಮಂಕಣಿ, ರಾಜಶೇಖರ ಹಿರೇಮಠ, ರವಿ ನಾಯಕ, ಸಂಗಮೇಶ ಬಡಿಗೇರ, ರೇವಣಸಿದ್ದ ಮುರಾಳ ಮೊದಲಾದವರು ಇದ್ದರು.

ಎರಡು ವರ್ಷದ ಪೂರ್ಣ ವಸತಿ ಉಚಿತ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು :
ಶಹಾಪೂರ ಆರ್.ಎಂ.ಎಸ್.ಎ ಶಾಲೆಯ ಅಮನ್, ಶಹಾಪೂರದ ದುದುಪುಡಿ ಶಾಲೆ ನಿಸರ್ಗ ಪೊಲೀಸಪಾಟೀಲ್,ಹುಮನಾಬಾದ ಚೆನ್ನಬಸವೇಶ್ವರ ಶಾಲೆಯ ವೈಷ್ಣವಿ ರೆಡ್ಡಿ, ಮುದ್ದೇಬಿಹಾಳ ಬಿ.ಎಸ್ ಸೆಂಟ್ರಲ್ ಶಾಲೆಯ ಮೊಹ್ಮದ ಜಿಹಾಮ್,ಮೈಲೇಶ್ವರ ಬ್ರಿಲಿಯಂಟ್ ಶಾಲೆಯ ಕಾರ್ತಿಕ ಕನಕರೆಡ್ಡಿ,ಹುಮನಾಬಾದ ಚನ್ನಬಸವೇಶ್ವರ ಶಾಲೆಯ ತ್ರಿಷಾ ಕೃಷ್ಣರೆಡ್ಡಿ, ಲಿಂಗಸುಗೂರು ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ನಿಖಿತಾ ವಸ್ತçದ,ಸಿಂದಗಿ ಆರ್.ಎಂ.ಎಸ್.ಎ ಶಾಲೆಯ ಶರಧಿ ಹಿರೇಮಠ, ಬೀಸಲದಿನ್ನಿ ಎಸ್.ಎಸ್.ಪಿ.ಎಸ್ ಶಾಲೆಯ ನವೀನಕುಮಾರ ಗೌಡರ, ಜಮಖಂಡಿ ತುಂಗಳ ಶಾಲೆಯ ಸೌಮ್ಯಾ ಉತ್ನಾಳ, ಕೊರ್ಲಹಳ್ಳಿ ಆರ್,ಎಂ.ಎಸ್.ಎ ಶಾಲೆಯ ಕಾವ್ಯಾ ಉಪ್ಪಾರ , ವಿಜಯಪುರ ಶ್ರೀರಾಮಕೃಷ್ಣ ಶಾಲೆಯ ಪ್ರೀತಮ ಪತ್ತಾರ, ಯಾದಗಿರ ಜೆಎನ್‌ವಿ ಶಾಲೆಯ ಸಿದ್ದೇಶ್ವರ ಎ.ಟಿ., ಬೀಳಗಿ ವಿವೇಕಾನಂದ ಇಂಟರ್‌ನ್ಯಾಶನಲ್ ಶಾಲೆಯ ಅನನ್ಯಾ ಕೊಕಟನೂರ,ರಕಬವಿ ಪದ್ಮಾವತಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಸುಕೃತ ಸಜ್ಜನ, ಆದವೈಭವಿ ಕೆ.ಆರ್.ಸಿ.ಆರ್ ಶಾಲೆ ಶ್ರೇಯಾ ಸೊಮ್ಲೆಪ್ಪ, ಶಹಾಪೂರ ಆರ್.ಎಂ.ಎಸ್.ಎ ಶಾಲೆಯ ಪ್ರವೀಣಕುಮಾರ ದಂಡಪ್ಪ, ಯಾದಗಿರಿಯ ಜೆಎನ್‌ವಿ ಶಾಲೆ ರೇವಣಸಿದ್ದ ಆಲ್ಯಾಳ, ಕೊಲ್ಹಾರ ಜೆಎನ್‌ವಿ ಶಾಲೆಯ ತರುಣ ಕೊಲ್ಹಾರ,ರಾಜಲಬಂಡಾ ಎಂಡಿಆರ್‌ಎಸ್ ಶಾಲೆ ನಾಗರಾಜ ಅವರು ಮೊದಲ 20 ಸ್ಥಾನಗಳಲ್ಲಿ ಆಯ್ಕೆಯಾಗಿದ್ದು ಅವರಿಗೆ ವಸತಿ ಸಮೇತ ಉಚಿತ ಶಿಕ್ಷಣ,ಇನ್ನುಳಿದಂತೆ 20-40 ವಿದ್ಯಾರ್ಥಿಗಳಿಗೆ ಎರಡು ವರ್ಷದ ಶಿಕ್ಷಣ ಉಚಿತ, 40-60 ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 90 ಸಾವಿರ ರೂ. ಶುಲ್ಕ ರಿಯಾಯಿತಿ,60-80 ನೇ ಸ್ಥಾನ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಎರಡು ವರ್ಷದ ಶುಲ್ಕದಲ್ಲಿ 25 ಸಾವಿರ ರೂ.ರಿಯಾಯಿತಿ ಘೋಷಣೆ ಮಾಡಲಾಯಿತು.


ವರದಿ ಮಾಡಿದ್ದು ನಿಮ್ಮ ಡಿಸಿಜಿ ನ್ಯೂಸ್ :
ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ ನಡೆಸಿದ್ದ ಸಂಸ್ಥೆಯವರು ಅಂದು 3550 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿದ್ದರೂ ಬಹುಮಾನಕ್ಕೆ ಯಾರನ್ನೂ ಆಯ್ಕೆ ಮಾಡಿರಲಿಲ್ಲ.ಇದನ್ನು ನಿಮ್ಮ ಡಿಸಿಜಿ ನ್ಯೂಸ್ ವರದಿ ಮಾಡಿತ್ತು.ಅಲ್ಲದೇ ಸಾರ್ವತ್ರಿಕವಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂಬ ಕಿವಿಮಾತನ್ನು ಸಂಸ್ಥೆಯವರ ಗಮನಕ್ಕೆ ತಂದಿತ್ತು.ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ್ ಅವರು ಪ್ರತ್ಯೇಕ ಸಮಾರಂಭವ,ಸ್ಪರ್ಧೆ ಏರ್ಪಡಿಸಿ ಯಾರಿಗೂ ಅನ್ಯಾಯವಾಗದಂತೆ ವಿದ್ಯಾರ್ಥಿಗಳ ಸ್ನೇಹಿ ನಿರ್ಧಾರ ಕೈಗೊಂಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Latest News

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಂ.ಕೆ.

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ:                                       ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ: ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಮುದ್ದೇಬಿಹಾಳ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಈ ಭಾಗದಲ್ಲೂ ಎಫೆಕ್ಟ್ ಆಗಿದ್ದು ಡಿಸೇಲ್,ಪೆಟ್ರೋಲ್‌ಗಾಗಿ ಗ್ರಾಹಕರು

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಎಂ.ಬಿ.ಎಲ್.ಗ್ರೂಪ್ ನಿಂದ ಆಯೋಜಿಸಿದ್ದ ಹಾರ್ಡ್ ಟೆನ್ನಿಸ್

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ:            ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸನ್ 2026-31ನೇ ಅವಧಿಗೆ ತಾಲ್ಲೂಕಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಬಿ.ಎಚ್.ಮುದ್ನೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ನಾಗಪ್ಪ ತುರಡಗಿ,ಖಜಾಂಚಿಯಾಗಿ ಭರತೇಶ ಹೊಳಿ, ಉಪಾಧ್ಯಕ್ಷರಾಗಿ ಶಾಂತಪ್ಪ ಬಿರಾದಾರ,ರೇಣುಕಾ ಹಿರೇಮಠ,ಸಹ ಕಾರ್ಯದರ್ಶಿಯಾಗಿ ಈರಯ್ಯ ಹಿರೇಮಠ,ಶೈಲಾ ಗೊಂಗಡಿ,ಸAಘಟನಾ ಕಾರ್ಯದರ್ಶಿಗಳಾಗಿ ಬಸನಗೌಡ ಭಗವತಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎಸ್.ಕವಡಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಗರಬೆಟ್ಟದಲ್ಲಿ ಜೂನ್ ಮೊದಲ ವಾರದಲ್ಲಿ ಹೋರಾಟ ನಡೆಸಲು ನಿರ್ಧಾರ

ನಾಗರಬೆಟ್ಟದಲ್ಲಿ ಜೂನ್ ಮೊದಲ ವಾರದಲ್ಲಿ ಹೋರಾಟ ನಡೆಸಲು ನಿರ್ಧಾರ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸಲು ಆಗ್ರಹಿಸಿ ಜೂನ್ ಮೊದಲ ವಾರದಿಂದ ನಾಗರಬೆಟ್ಟದಲ್ಲಿ ರೈತರೊಡಗೂಡಿ ಹೋರಾಟ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ತಾಲ್ಲೂಕಿನ ನಾಗರಬೆಟ್ಟದ ಮಾರುತೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ದಶಕದಿಂದ ಈ ನೀರಾವರಿ ಯೋಜನೆಯಡಿ ಹೊಲಗಳಿಗೆ ನೀರು ಹರಿದಿಲ್ಲ.ರಾಜಕಾರಣಿಗಳ