ಗ್ರಾಪಂ ಮಟ್ಟದ ಸೇವೆ ಅಸ್ತವ್ಯಸ್ತ ಸಾಧ್ಯತೆ: ಗ್ರಾ.ಪಂ ನೌಕರರನ್ನು ಸಮೀಕ್ಷೆಯಿಂದ ಕೈಬಿಡಲು ಒತ್ತಾಯ

ಗ್ರಾಪಂ ಮಟ್ಟದ ಸೇವೆ ಅಸ್ತವ್ಯಸ್ತ ಸಾಧ್ಯತೆ: ಗ್ರಾ.ಪಂ ನೌಕರರನ್ನು ಸಮೀಕ್ಷೆಯಿಂದ ಕೈಬಿಡಲು ಒತ್ತಾಯ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕಾರ್ಯಕ್ಕೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು,ಎಸ್.ಡಿ.ಎಗಳನ್ನು ನಿಯೋಜಿಸಿರುವುದನ್ನು ಕೈ ಬಿಡಬೇಕು ಎಂದು ತಹಸೀಲ್ದಾರ್‌ರಗೆ ಗ್ರಾಪಂ ನೌಕರರು ಗುರುವಾರ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಗ್ರಾಪಂ ನೌಕರರು, ತಹಸೀಲ್ದಾರ್ ಕೀರ್ತಿ ಚಾಲಕ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಗ್ರಾಮ ಪಂಚಾಯಿತಿಗೆ ಸಂಬAಧಿಸಿದAತೆ ಸಾಮಾನ್ಯ ಸಭೆ ನಿರ್ವಹಣೆ, ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿ,ಕರ ವಸೂಲಾತಿ ಆಂದೋಲನ, ಇಸ್ವತ್ತು ಉತಾರೆ ಜನನ-ಮರಣ ಉತಾರೆ ವಿತರಿಸುವುದು ಅವಶ್ಯವಿರುತ್ತದೆ.ಒಂದುವೇಳೆ ನಾವು ಪಂಚಾಯಿತಿಯಲ್ಲಿ ಇಲ್ಲದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.ರೈತರಿಗೆ ಸಂಬAಧಿಸಿದAತೆ ಬೆಳೆ ಕಟಾವು ಮಾಡುವುದು, ಇಲಾಖೆಯ ಆನಲೈನ್ ಸೇವೆಗಳು ನಿರ್ವಹಿಸುವುದು,ಸೆ.17 ರಿಂದ ಅ.2ರವರೆಗೆ ಗಾಂಧೀಜಿ ಜಯಂತಿ ನಿಮಿತ್ಯ ವಿಶೇಷ ಅಭಿಯಾನ ಸ್ವಚ್ಛತಾ ಅಭಿಯಾನ,ವಾರ್ಡಸಭೆ, ಗ್ರಾಮಸಭೆ ನಡೆಸಿ ತಾಪಂ ಕಚೇರಿಗೆ ಸಲ್ಲಿಸುವ ಜವಾಬ್ದಾರಿ ಕಾರ್ಯದರ್ಶಿಗಳು,ಎಸ್‌ಡಿಎಗಳಿಗೆ ಇರುತ್ತದೆ.ಆದ್ದರಿಂದ ಈ ಎಲ್ಲ ಕೆಲಸಗಳ ಒತ್ತಡದ ಮಧ್ಯೆ ನಮಗೆ ತರಬೇತಿಯನ್ನೂ ನೀಡದೇ ಕೇಂದ್ರಸ್ಥಾನದಲ್ಲಿಯೇ ಸಮೀಕ್ಷೆಗೆ ನಿಯೋಜಿಸದೇ ಬೇರೊಂದು ಸ್ಥಳಕ್ಕೆ ನೇಮಿಸಿರುವುದು ಹತ್ತಾರು ತೊಂದರೆಗೆ ಕಾರಣವಾಗುತ್ತದೆ.ಕೂಡಲೇ ಸಮೀಕ್ಷೆ ಕಾರ್ಯದಿಂದ ಗ್ರಾಪಂ ಕಾರ್ಯದರ್ಶಿ,ಎಸ್.ಡಿ.ಎ ಅವರನ್ನು ಕೈ ಬಿಡಬೇಕು ಎಂದು ವಿನಂತಿಸಿದರು.

ಮನವಿ ಸಲ್ಲಿಕೆ ಸಮಯದಲ್ಲಿ ಎಸ್.ವಾಯ್.ದ್ಯಾಮಗೊಂಡ, ಅಶೋಕ ಕೊರವೇರ, ಎ.ಎಸ್.ಬಿರಾದಾರ, ರಂಗರಾಜು, ಪಿ.ವಾಯ್.ಚಲವಾದಿ, ಜಿ.ಎಲ್.ಬಿರಾದಾರ, ಸಿ.ಬಿ.ಹೊಳಿ, ಟಿ.ಎಂ.ಕೋಲಕಾರ, ಎಸ್.ಎಸ್.ಬಂಗಾರಗುAಡ ,ಯಮನೂರಿ ಲಮಾಣಿ, ಸಿ.ಎನ್.ಊರನ್ನವರ,ಜಿ.ಎಸ್.ಬಿರಾದಾರ,ಬಿ.ಬಿ.ಬಿರಾದಾರ, ರವಿಕಾಂತ ಮೇಟಿ, ಬಾಬು ಪೋತೆಗೋಳ ಇದ್ದರು.

Latest News

ಪರಿಸರಪ್ರೇಮಿ ಎಂ.ಎಸ್.ಗಡೇದಗೆ ಕಾಯಕಯೋಗಿ ಪ್ರಶಸ್ತಿ

ಪರಿಸರಪ್ರೇಮಿ ಎಂ.ಎಸ್.ಗಡೇದಗೆ ಕಾಯಕಯೋಗಿ ಪ್ರಶಸ್ತಿ

ಮುದ್ದೇಬಿಹಾಳ : ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಲೇಶ್ವರ ಎಸ್. ಗಡೇದ ಅವರಿಗೆ

ತಮ್ಮ ಸ್ವಂತ ರಾಜಕೀಯ ಲಾಭಕ್ಕೆ ಗುತ್ತಿಗೆದಾರರಿಂದ ಸಹಾಯ-ಸಿ.ಎಸ್.ನಾಡಗೌಡ

ತಮ್ಮ ಸ್ವಂತ ರಾಜಕೀಯ ಲಾಭಕ್ಕೆ ಗುತ್ತಿಗೆದಾರರಿಂದ ಸಹಾಯ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಕೆಲವು ಗುತ್ತಿಗೆದಾರರು ಸಹಾಯ ಮಾಡುವುದು ತಮ್ಮ ರಾಜಕೀಯ ಲಾಭಕ್ಕೋಸ್ಕರ ಮಾಡುತ್ತಾರೆಯೇ ಹೊರತು

ಹುಲ್ಲೂರ ಎಸ್‌ಎನ್‌ಡಿ ಪಬ್ಲಿಕ್ ಸ್ಕೂಲ್‌ಗೆ ಶೇ.100ರಷ್ಟು ಫಲಿತಾಂಶ

ಹುಲ್ಲೂರ ಎಸ್‌ಎನ್‌ಡಿ ಪಬ್ಲಿಕ್ ಸ್ಕೂಲ್‌ಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲೂಕಿನ ಹುಲ್ಲೂರ ಗ್ರಾಮದ ಎಸ್.ಎನ್.ಡಿ ನ್ಯಾಷನಲ್ ಪಬ್ಲಿಕ್ ಶಾಲೆಗೆ 2025-26ನೇ ಸಾಲಿನಲ್ಲಿ

ಎಸ್.ಎಸ್.ಎಲ್.ಸಿ ಪರೀಕ್ಷೆ:                                         ಕವಡಿಮಟ್ಟಿಯ ಆರ್ಚ್ ಏಂಜಲ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಎಸ್.ಎಸ್.ಎಲ್.ಸಿ ಪರೀಕ್ಷೆ: ಕವಡಿಮಟ್ಟಿಯ ಆರ್ಚ್ ಏಂಜಲ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲೂಕಿನ ಸರೂರ ಕ್ರಾಸ್ ಬಳಿ ಇರುವ ಕವಡಿಮಟ್ಟಿಯ ದಿ ಆರ್ಚ್ ಏಂಜಲ್

ವಿದ್ಯಾರ್ಥಿಗೆ ಬೆಳೆಸಿದ ಶಾಲೆಗಳತ್ತ ಪಾಲಕರ ಗಮನವಿರಲಿ ಎಂ.ಎನ್.ಮದರಿ

ವಿದ್ಯಾರ್ಥಿಗೆ ಬೆಳೆಸಿದ ಶಾಲೆಗಳತ್ತ ಪಾಲಕರ ಗಮನವಿರಲಿ ಎಂ.ಎನ್.ಮದರಿ

ಮುದ್ದೇಬಿಹಾಳ : ಹಿಂದುಳಿದ,ಬಡವರ ಮಕ್ಕಳಿಗೆ ಉಚಿತ,ರಿಯಾಯಿತಿ ಶಿಕ್ಷಣ ಕೊಟ್ಟು ಒಳ್ಳೆಯ ಫಲಿತಾಂಶ ತಂದ ಮಕ್ಕಳನ್ನು ಕೆಲವು ವಿದ್ಯಾಸಂಸ್ಥೆಯವರು ಸಂಪರ್ಕಿಸಿ ಅವರನ್ನು ತಮ್ಮ ವಿದ್ಯಾಸಂಸ್ಥೆಗಳಲ್ಲಿ ಉಚಿತವಾಗಿ ಓದಿಸುವ ಭರವಸೆ ನೀಡುತ್ತಿದ್ದು ಅದಕ್ಕೆ ಪಾಲಕರ ಮಾರು ಹೋಗಬಾರದು ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು. ಪಟ್ಟಣದ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಗುರುವಾರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಶೇ.90-95ಕ್ಕೂ

ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗೆ ಆನಂದ ಪೂಜಾರಿ ನೇಮಕ

ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗೆ ಆನಂದ ಪೂಜಾರಿ ನೇಮಕ

ಮುದ್ದೇಬಿಹಾಳ : ಇಲ್ಲಿನ ಯುವ ಉದ್ಯಮಿ,ಕಾಂಗ್ರೆಸ್ ಪಕ್ಷದ ಮುಖಂಡ ಆನಂದ ಪೂಜಾರಿ ಅವರನ್ನು ಕಾಂಗ್ರೆಸ್ ಪಕ್ಷದ ಎಸ್.ಟಿ.ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರ ಶಿಫಾರಸ್ಸಿನ ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮೀತಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯ ಅಧ್ಯಕ್ಷ ಎಂ.ವಿಜಯನಾಯಕ ನೇಮಕ ಮಾಡಿ ಆದೇಶಿಸಿದ್ದಾರೆ.