ಪ್ರಜಾನಾಡು ಡಿಜಿಟಲ್ ದಿನದರ್ಶಿಕೆ ಬಿಡುಗಡೆ: ಸತ್ಯನಿಷ್ಠೆ,ಮೌಲ್ಯಾಧಾರಿತ ಪತ್ರಿಕೋದ್ಯಮ ಇಂದಿನ ಅಗತ್ಯ-ಹಿರೇಮಠ

ಪ್ರಜಾನಾಡು ಡಿಜಿಟಲ್ ದಿನದರ್ಶಿಕೆ ಬಿಡುಗಡೆ: ಸತ್ಯನಿಷ್ಠೆ,ಮೌಲ್ಯಾಧಾರಿತ ಪತ್ರಿಕೋದ್ಯಮ ಇಂದಿನ ಅಗತ್ಯ-ಹಿರೇಮಠ

ಮುದ್ದೇಬಿಹಾಳ : ಸಮಾಜದಲ್ಲಿ ಪತ್ರಕರ್ತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಸಮಾಜದ ಮುಂದೆ ಸತ್ಯವನ್ನು ತಲುಪಿಸುವ ಜವಾಬ್ದಾರಿಯುತ ಕಾರ್ಯನಿರ್ವಹಿಸುತ್ತಾರೆ.ಸಮಾಜದ ಒಳಿತಿಗಾಗಿ ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದ್ದು, ಸತ್ಯನಿಷ್ಠೆ ಮತ್ತು ಮೌಲ್ಯಾಧಾರಿತ ಪತ್ರಿಕೋದ್ಯಮ ಇಂದಿನ ಅಗತ್ಯ ಎಂದು ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ದಾನಯ್ಯಸ್ವಾಮಿ ಹಿರೇಮಠ ಹೇಳಿದರು.

ಪಟ್ಟಣದ ಶ್ರೀ ಖಾಸ್ಘತೇಶ್ವರ ಮಠದಲ್ಲಿ ಸೋಮವಾರ ಸಂಜೆ ಇಂಗಳೇಶ್ವರದ ಲಿ, ಮುನಿ ಪ್ರ, ಚನ್ನಬಸವ ಮಾಹಾಸ್ವಾಮಿಗಳ ನುಡಿಮನ ಹಾಗೂ ಪ್ರಜಾನಾಡು ಡಿಜಿಟಲ್ ಸುದ್ದಿ ವಾಹಿನಿಯ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಸಾಹಿತಿ ಎಚ್.ಆರ್. ಬಾಗವಾನ ಮಾತನಾಡಿ, ಇಂಗಳೇಶ್ವರ ಶ್ರೀಗಳ ನುಡಿಮನ ಚಿಂತನೆಗಳು ಸಮಾಜಕ್ಕೆ ದಾರಿದೀಪವಾಗಿದ್ದು, ದಿನದರ್ಶಿಕೆಯಂತಹ ಪ್ರಕಟಣೆಗಳು ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಐ.ಬಿ. ಹಿರೇಮಠ ಮಾತನಾಡಿ, ಡಿಜಿಟಲ್ ಪತ್ರಿಕೋದ್ಯಮ ವೇಗದ ಜೊತೆಗೆ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕಿದೆ ಎಂದರು. ಸಾಹಿತಿ ಶಿವಪುತ್ರ ಅಜಮನಿ ಮಾತನಾಡಿ, ಸಾಹಿತ್ಯ, ಸಂಸ್ಕೃತಿ ಮತ್ತು ಮಾಧ್ಯಮಗಳ ಸಮನ್ವಯದಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ದಿವ್ಯ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ನೀಲಮ್ಮ ಎಸ್. ವಿರಕ್ತಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಉಪಾಧ್ಯಕ್ಷೆ ಪ್ರೀತಿ ಎಸ್. ದೇಗಿನಾಳ,ಅಪ್ಪು ದೇಗಿನಾಳ, ಸಮಾಜ ಸೇವಕ ಅಶೋಕ ನಾಡಗೌಡ ಇದ್ದರು.

ಮುಖಂಡ ಮಹಾಂತೇಶ ಬೂದಿಹಾಳಮಠ, ಪ್ರಜಾನಾಡು ಡಿಜಿಟಲ್ ವಾಹಿನಿಯ ವರದಿಗಾರ ಸಚಿನ್ ಚಲವಾದಿ , ಎಸ್.ಬಿ. ಹುಗ್ಗಿ, ಪರಶುರಾಮ ನಾಲತವಾಡ, ರಫೀಕ್ ಶಿರೋಳ, ಶ್ರೀಕಾಂತ್ ಹಿರೇಮಠ, ಕಾಶಿನಾಥ್ ಹುಗ್ಗಿ, ರಾಜುಗೌಡ ತುಂಬಗಿ, ಶರಣು ಚಲವಾದಿ, ಆನಂದ ಮುದೊರ, ದೇವರಾಜ ಹಂಗರಗಿ, ಸಂಗಮೇಶ ಚಲವಾದಿ, ಸಿದ್ದು ಪಾಟೀಲ್ ಇದ್ದರು.

Latest News

ದಿ.ಡಿ.ಬಿ.ಮುದೂರಗೆ ನುಡಿನಮನ : ಅಸ್ಪೃಶ್ಯತೆಯ ವಿರುದ್ಧ ಡಿ.ಬಿ.ಮುದೂರ ದಿಟ್ಟ ಹೋರಾಟ -ನಾಡಗೌಡ

ದಿ.ಡಿ.ಬಿ.ಮುದೂರಗೆ ನುಡಿನಮನ : ಅಸ್ಪೃಶ್ಯತೆಯ ವಿರುದ್ಧ ಡಿ.ಬಿ.ಮುದೂರ ದಿಟ್ಟ ಹೋರಾಟ -ನಾಡಗೌಡ

ಮುದ್ದೇಬಿಹಾಳ : ಮತಕ್ಷೇತ್ರದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯ ವಿರುದ್ಧ ದಿಟ್ಟತನದ ಹೋರಾಟ ಸಂಘಟಿಸಿ ಅದರಲ್ಲಿ ಯಶಸ್ವಿಯಾಗಿದ್ದವರು

‘ಎಂ.ಎಲ್.ಎ ಬಳಿ ಹೋದ್ರೆ ಚಿನ್ನು ಧಣಿ ಬಳಿ ಹೋಗು ಅಂತಾರೆ, ಚಿನ್ನು ಧಣಿ ಚೀಫ್ ಆಫೀಸರ್ ಬಳಿ ಹೋಗು ಅನ್ನುತ್ತಾರೆ’

‘ಎಂ.ಎಲ್.ಎ ಬಳಿ ಹೋದ್ರೆ ಚಿನ್ನು ಧಣಿ ಬಳಿ ಹೋಗು ಅಂತಾರೆ, ಚಿನ್ನು ಧಣಿ ಚೀಫ್ ಆಫೀಸರ್ ಬಳಿ ಹೋಗು ಅನ್ನುತ್ತಾರೆ’

ಮುದ್ದೇಬಿಹಾಳ : ಪಟ್ಟಣದ ಇಂದಿರಾ ನಗರದಲ್ಲಿರುವ ಬಡವರಿಗೆ ಉತಾರೆ ಕೊಡಲು ಪುರಸಭೆಯಿಂದ ಆಗುತ್ತಿಲ್ಲ.ಇದರಿಂದ ಸಾಕಷ್ಟು

ಸಾಲದ ಬಾಧೆ ತಾಳದೇ ಗಂಗೂರದಲ್ಲಿ ರೈತ ಆತ್ಮಹತ್ಯೆ

ಸಾಲದ ಬಾಧೆ ತಾಳದೇ ಗಂಗೂರದಲ್ಲಿ ರೈತ ಆತ್ಮಹತ್ಯೆ

ಮುದ್ದೇಬಿಹಾಳ : ಬೆಳೆದ ಬೆಳೆ ಸರಿಯಾಗಿ ಕೈಗೆ ಬಾರದ್ದನ್ನೇ ಮನಸಿಗೆ ಹಚ್ಚಿಕೊಂಡ ರೈತರೊಬ್ಬರು ನೇಣು

ಬಿಎಎಸ್ ಇಂಟರ್ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟ ಮಟ್ಸೋಗಿ-ಡೊ ಟೂರ್ನಿಗೆ ಆಯ್ಕೆ

ಪಟ್ಟಣದ ಬಿಎಎಸ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಜರುಗಲಿರುವ 20 ನೇ ರಾಷ್ಟ್ರೀಯ

ಚವನಭಾವಿ : ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಚವನಭಾವಿ : ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮುದ್ದೇಬಿಹಾಳ : ಎಲ್ಲಾ ಪಾಲಕರು,ಪೋಷಕರು ಐದು ವರ್ಷದ ಒಳಗಿನ ಮಕ್ಕಳ ಆರೋಗ್ಯದ ಹಾಗೂ ದೇಹದ ಸದೃಢತೆಗಾಗಿ ಪಲ್ಸ್ ಪೊಲೀಯೊ ಲಸಿಕೆಯನ್ನು ತಪ್ಪದೆ ಹಾಕಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕುಂಬಾರ ಹೇಳಿದರು. ತಾಲ್ಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಭಾನುವಾರ ಮೊದಲ ಸುತ್ತಿನ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ವೇಳೆ ಪಲ್ಸ್ ಪೋಲಿಯೊ ಕುರಿತು ಅಂಗನವಾಡಿ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ:                    ಎಮ್.ಜಿ.ಎಮ್.ಕೆ ಆಂಗ್ಲ ಮಾಧ್ಯಮ ಶಾಲೆಯ ಹೆಗಡೆ ಪ್ರಥಮ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ: ಎಮ್.ಜಿ.ಎಮ್.ಕೆ ಆಂಗ್ಲ ಮಾಧ್ಯಮ ಶಾಲೆಯ ಹೆಗಡೆ ಪ್ರಥಮ

ಮುದ್ದೇಬಿಹಾಳ : ಪಟ್ಟಣದ ಎಮ್.ಜಿ.ಎಮ್.ಕೆ ಆಂಗ್ಲ ಮಾಧ್ಯಮ ಶಾಲೆಯ ಅಭಿರಾಮ ಹೆಗಡೆ ವಿಜಯಪುರದ ಕಗ್ಗೋಡಿನ ಪ್ರಕೃತಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಧಾರ್ಮಿಕ ಪಠಣ (ಸಂಸ್ಕೃತ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿಕೊಂಡಿದ್ದಾನೆ. ವಿದ್ಯಾರ್ಥಿಯ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಎಮ್.ಎಮ್.ಕೋರಿ, ಪದವಿ ಪ್ರಾಚಾರ್ಯ ಎಸ್.ಕೆ.ಹರನಾಳ, ಮುಖ್ಯ ಗುರುಮಾತೆ ವೀಣಾ ಹಿರೇಮಠ, ಆಡಳಿತಾಧಿಕಾರಿಗಳಾದ ಎಸ್.ಎಸ್.ಆಳವಿ, ರಾಜೇಶ್ವರಿ ಬಿರಾದಾರ, ಶೋಭಾ ಬಲಕುಂದಿ, ಶಿಕ್ಷಕರಾದ ಶ್ರೀವಿಜಯ ಹಳ್ಳೂರ,