ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಶಿಕ್ಷಕ,ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ; ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವುದು ಬೇಡ-ನಾಗರಳ್ಳಿ

ಮುದ್ದೇಬಿಹಾಳ : ನಾವು ಶಿಕ್ಷಣ ಕೊಡುವ ನೆಪದಲ್ಲಿ ನಮ್ಮ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದ್ದೇವೆ.ಅವರು ಆಟಗಳಲ್ಲಿ ಭಾಗಿಯಾಗುವ ಸಮಯವನ್ನು ಕಡಿಮೆಗೊಳಿಸಿದ್ದೇವೆ.ಶೇ.95 ಪಡೆದುಕೊಂಡರೂ ಮಗುವಿಗೆ ಪ್ರೋತ್ಸಾಹಿಸದೇ ಶೇ.98 ತಗೆದುಕೊಳ್ಳುವವರೆಗೂ ನಮಗಿಂದು ಸಮಾಧಾನ ಇರುವುದಿಲ್ಲ.ಅಂಕಗಳ ಬೆನ್ನು ಹತ್ತಿದ್ದೇವೆ ಎಂದು ಗದಗನ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎ.ಎನ್.ನಾಗರಳ್ಳಿ ಹೇಳಿದರು.

ಪಟ್ಟಣದ ಶ್ರೀ ಕೃಷ್ಣ ಮಂಗಲಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿoದ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಶೈಕ್ಷಣಿಕ ಕಾರ್ಯಾಗಾರ, ಉತ್ತಮ ಶಿಕ್ಷಕ,ಶಿಕ್ಷಕಿಯರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

ಮಕ್ಕಳನ್ನು ವ್ಯವಹಾರಿಕ ಜ್ಞಾನ ಹೊಂದಿದವರನ್ನಾಗಿ ಬೆಳೆಸಬೇಕು.ಸಚ್ಛಾರಿತ್ರ‍್ಯವಂತರಾಗಲು ಸಲಹೆ ಮಾಡಬೇಕು.ಓದು ಬರಹ ಮುಖ್ಯವಲ್ಲ, ಹೃದಯವೈಶಾಲ್ಯತೆಯುಳ್ಳ ಮಕ್ಕಳನ್ನು ತಯಾರು ಮಾಡಬೇಕು ಎಂದು ಶಿಕ್ಷಕರಿಗೆ ಸಲಹೆ ಮಾಡಿದರು.ಮೌಲ್ಯ ಶಿಕ್ಷಣ ಕೊಡುವ ಕಾರ್ಯ ಮುಖ್ಯವಾಗಿದೆ. ಪ್ರಾಮಾಣಿಕರಾಗಿರುವವರಿಗೆ ಸಮಾಜದಲ್ಲಿ ಬೆಲೆ ಹೆಚ್ಚು ಎಂಬುದನ್ನು ಮರೆಯಬಾರದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಗದಗ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಸ್.ಡಿ.ಗಾಂಜಿ ಮಾತನಾಡಿ,ಸಾವಿತ್ರಿಬಾಯಿ ಫುಲೆ ಎಲ್ಲ ಮಕ್ಕಳಿಗೆ ತಾಯಿಯಾಗಿ ನಾಡಿಗೆ ಅಕ್ಷರದ ಮೂಲಕ ಬೆಳಕು ಕೊಟ್ಟವರು.ಮಹಿಳೆ ಸಮಾಜದಲ್ಲಿ ಮುಖ್ಯವಾಹಿನಿಗೆ ಬಾರದಿರುವ ದಿನಗಳಲ್ಲೇ 18 ಶಾಲೆಗಳನ್ನು ಸ್ಥಾಪನೆ ಮಾಡಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಟ್ಟವರು.ಪತ್ನಿಯ ಹಂಬಲಕ್ಕೆ ಅವರ ಪತಿ ಜ್ಯೋತಿಬಾ ಫುಲೆ ಬೆಂಬಲ ನೀಡಿದರು.ರಾಜಕೀಯ,ಶೈಕ್ಷಣಿಕ,ಸಾಮಾಜಿಕವಾಗಿ ಬೆಳವಣಿಗೆಗೆ ಹೆಣ್ಣು ಮಕ್ಕಳು ಇಂದು ಬೆಳವಣಿಗೆ ಸಾಧಿಸಲು ಅದರಲ್ಲಿ ಸಾವಿತ್ರಿಬಾಯಿ ಫುಲೆ ಪಾತ್ರವಿದೆ ಎಂದರು.

ಕುAಟೋಜಿ ಭಾವೈಕ್ಯತಾ ಮಠದ ಚೆನ್ನವೀರ ಶಿವಾಚಾರ್ಯರು ಮಾತನಾಡಿ, ಸೇವಾ ಅವಧಿಯಲ್ಲಿಯೇ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಕೊಟ್ಟು ಗೌರವಿಸುವ ಕೆಲಸ ಮಾಡುತ್ತಿರುವ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಇನ್ನಷ್ಟು ಉನ್ನತ ಸ್ಥಾನಕ್ಕೆ ಬೆಳೆಯಲಿ.ಸಮಯದ ಪ್ರಜ್ಞೆ,ಅರಿವು ಎಲ್ಲರಲ್ಲೂ ಬರಬೇಕು ಎಂದರು.

ಸಾವಿತ್ರಿಬಾಯಿ ಫುಲೆ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಎಂ.ಜಿ.ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ನೀಡಿರುವ ಕೊಡುಗೆ ಮಾದರಿಯಾದದ್ದು ಅವರ ಹೆಸರಿನಲ್ಲಿ ರಾಜ್ಯ,ರಾಷ್ಟçಮಟ್ಟದಲ್ಲಿ ಸಂಘಗಳು ರಚನೆಗೊಂಡು ಫುಲೆ ದಂಪತಿ ಹೆಸರು ಚಿರಸ್ಥಾಯಿ ಆಗಿದೆ ಎಂದರು.

ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಬಿ.ಅಸ್ಕಿ ಮಾತನಾಡಿ, ನಾಲ್ಕು ರಾಜ್ಯಗಳಲ್ಲಿ ಗುತ್ತಿಗೆದಾರಿಕೆಯಲ್ಲಿ ಹೆಸರು ಮಾಡಿದ್ದ ಡಿ.ವೈ.ಉಪ್ಪಾರ ಈಚೇಗೆ ನಿಧನರಾಗಿದ್ದು ವಾರ್ಷಿಕ 20 ಸಾವಿರ ಕೋಟಿ ಕೆಲಸಗಳನ್ನು ಅವರು ಮಾಡುತ್ತಿದ್ದರು.ಅಂತಹ ಗುತ್ತಿಗೆದಾರರನ್ನು ಎತ್ತರ ಮಟ್ಟಕ್ಕೆ ಬೆಳೆಯುವಂತೆ ಮಾಡಿದ್ದು ಶಿಕ್ಷಕರ ಮಾರ್ಗದರ್ಶನ ಎಂಬುದನ್ನು ಮರೆಯುವಂತಿಲ್ಲ.ಸಾವಿತ್ರಿಬಾಯಿ ಫುಲೆ ಸಂಘದವರು ಸಂಘದ ಸಭಾಭವನ ಕಟ್ಟಡ ನಿರ್ಮಿಸಲು ಮುಂದಾದರೆ ಅದಕ್ಕೆ ತಮ್ಮಿಂದ ವಯಕ್ತಿಕ ಸಹಕಾರ ಮಾಡುವುದಾಗಿ ಹೇಳಿದರು.

ಗಣ್ಯರಾದ ಐ.ಜಿ.ಬೆನಕೊಪ್ಪ,ಬಿ.ಇ.ಒ ಬಿ.ಎಸ್.ಸಾವಳಗಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅರವಿಂದ ಹೂಗಾರ, ಬಿಇಒ ಬಿ.ಎಸ್.ಸಾವಳಗಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯಶ್ರೀ ಬೆಣ್ಣಿ, ಸಂಘದ ಜಿಲ್ಲಾಧ್ಯಕ್ಷ ಎ.ಬಿ.ನಾಯಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿ.ಆರ್.ಸಿ.ಆರ್.ಬಿ.ಧಮ್ಮೂರಮಠ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎo.ಬೆಳಗಲ್, ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಜೆ.ದಖನಿ , ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎಚ್.ಮುದ್ನೂರ, ಸರ್ಕಾರಿ ನೌಕರರ ಸಂಘದ ಸದಸ್ಯ ಬಿ.ಎಸ್.ಶೇಖಣ್ಣವರ, ಆಲೂರ ಗ್ರಾಪಂ ಅಧ್ಯಕ್ಷೆ ಶೋಭಾ ಶೆಳ್ಳಗಿ,ಎಸ್,ಎಂ,ಪವಾರ,ಮೋಹನ ಚವ್ಹಾಣ ಉಪಸ್ಥಿತರಿದ್ದರು.ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು.ದೀಪಾ ಕೇಶಾಪೂರ ಹಾಗೂ ಆರತಿ ರೂಗಿ ಸ್ವಾಗತಿಸಿದರು.ಬಿ.ಎಂ.ಗದ್ದಿ ಹಾಗೂ ಆರ್.ಬಿ.ಮ್ಯಾಗೇರಿ ನಿರೂಪಿಸಿದರು.ಆರ್.ಬಿ.ಮ್ಯಾಗೇರಿ ವಂದಿಸಿದರು.

ಕಾರ್ಯಕ್ರಮದಲ್ಲಿ ದಾನಿಗಳಾದ ಟಿ.ಎನ್.ರೂಢಗಿ,ಎಫ್.ಎಸ್.ಬಾಗವಾನ,ಶಾರದಾ ಅಡಗಲ್,ಝಡ್.ಬಿ.ಅಗ್ನಿ,ಸುಜಾತಾ ಕಡಿ,ಎಸ್.ಆರ್.ಬಾಗೇವಾಡಿ,ಶ್ರೀಕಾಂತ ಹಡಲಗೇರಿಎಸ್.ಬಿ.ತಳವಾರ,ಎಚ್.ಜಿ.ಗೌರೋಜಿ,ಅಫ್ತಾಬ ಮನಿಯಾರ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕ,ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ : ಆಲೂರು ಕ್ಲಸ್ಟರ್‌ನಿಂದ ಪಿ.ಎಸ್.ವಡವಡಗಿ,ಶಕುಂತಲಾ ಇಲಕಲ್, ರಕ್ಕಸಗಿ ಕ್ಲಸ್ಟರ್‌ನಿಂದ ಸಂಗಣ್ಣ ಟಕ್ಕಳಕಿ, ಶರಣಮ್ಮ ಬಿರಾದಾರ, ನಾಲತವಾಡ ಕ್ಲಸ್ಟರ್‌ನಿಂದ ಬಾಬು ಲಮಾಣಿ ಹಾಗೂ ಶೃತಿ ಮುರಾಳ , ತಂಗಡಗಿ ಕ್ಲಸ್ಟರ್‌ನಿಂದ ಪಿ.ಬಿ.ಗುಬಚಿ ಹಾಗೂ ಶಾಂತಾ ರಾಮವಾಡಗಿ, ಇಂಗಳಗೇರಿ ಕ್ಲಸ್ಟರ್‌ನಿಂದ ಲಕ್ಷö್ಮಣ ಚಲವಾದಿ, ಆರ್.ಸಿ.ಸಂಗಮ ,ಯರಝರಿ ಕ್ಲಸ್ಟರ್‌ನಿಂದ ಎಚ್.ಬಿ.ಲಮಾಣಿ, ರುಕ್ಮಿಣಿ ಬಾಟಿ, ಬಳಬಟ್ಟಿ ಕ್ಲಸ್ಟರ್‌ನಿಂದ ರವಿ ಹಿಪ್ಪರಗಿ ಹಾಗೂ ಜಯಶ್ರೀ ಸಾಲಿಮಠ, ಮಡಿಕೇಶ್ವರ ಕ್ಲಸ್ಟರ್‌ನಿಂದ ಎಸ್.ಎಸ್.ಮಠ ಹಾಗೂ ಟಿ.ಡಿ.ರಾಠೋಡ, ಢವಳಗಿ ಕ್ಲಸ್ಟರ್‌ನಿಂದ ಬಸಮ್ಮ ಗುಡದಿನ್ನಿ ಹಾಗೂ ಸಿ.ಪಿ.ಮುತ್ತಿನ,ಬಸರಕೋಡ ಕ್ಲಸ್ಟರ್‌ನಿಂದ ಬಿ.ಎಸ್.ಜಮದರಖಾನಿ ಹಾಗೂ ಕೆ.ಆರ್.ದೊರೆಗೋಳ,ಅಡವಿ ಸೋಮನಾಳ ಕ್ಲಸ್ಟರ್‌ನಿಂದ ಈರಪ್ಪ ಮ್ಯಾಗೇರಿ ಹಾಗೂ ಸುವರ್ಣ ಬಡಿಗೇರ,ಪ್ರಿಯಾಂಕಾ ಮುರಾಳ,ಹಡಲಗೇರಿ ಕ್ಲಸ್ಟರ್‌ನಿಂದ ಸಿ.ಬಿ.ಯರಂತೇಲಿ ಹಾಗೂ ಬಿ.ಎಸ್.ಕಡು, ಹುಲ್ಲೂರ ಕ್ಲಸ್ಟರ್‌ನಿಂದ ವಾಯ್.ಬಿ.ನಾಯ್ಕೋಡಿ ಹಾಗೂ ಹಮೀದಾಬೇಗಂ ನದಾಫ, ಹಿರೇಮುರಾಳ ಕ್ಲಸ್ಟರ್‌ನಿಂದ ಎಚ್.ವಾಯ್.ಗಲಗಲಿ ಹಾಗೂ ಎಸ್.ಎಮ್.ಕಟ್ಟಿಮಠ,ಮುದ್ದೇಬಿಹಾಳ ಉರ್ದು ಕ್ಲಸ್ಟರ್‌ನಿಂದ ರಾವುತಪ್ಪ ಕೂಡಗಿ ಹಾಗೂ ಎಂ.ಎಸ್.ಅತ್ತಾರ,ಎ.ಆಯ್.ಮOದ್ರೂಪ, ಮುದ್ದೇಬಿಹಾಳ ಕ್ಲಸ್ಟರ್‌ದಿಂದ ಶಿವಲಿಂಗೇಶ ಗುಂಡಕನಾಳ,ಎ.ಎo.ಘoಟಿಮಠ,ಶ್ರೀಮತಿ ನಾಗರತ್ನಾ, ಬಿದರಕುಂದಿ ಕ್ಲಸ್ಟರ್‌ನಿಂದ ಜಮಾಲ್‌ಶೇಖ, ಎನ್.ಬಿ.ಪಿಂಜಾರ ಅವರುಗಳಿಗೆ ಸಾವಿತ್ರಿಬಾಯಿ,ಜ್ಯೋತಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

NEWS BY: SHANKAR HEBBAL

Latest News

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ:                ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಮುದ್ದೇಬಿಹಾಳ : ವಾಯುವಿಹಾರಕ್ಕೆಂದು ಹೋಗಿದ್ದ ಮೂವರು ಯುವಕರ ತಂಡವೊoದರ ಕಣ್ಣಿಗೆ ಬಿದ್ದ ಅಸ್ವಸ್ಥಗೊಂಡ ನರಿ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು;           ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು; ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಮುದ್ದೇಬಿಹಾಳ : ಇಲ್ಲಿಯ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು

S.I.R-ಮುದ್ದೇಬಿಹಾಳ ಮತಕ್ಷೇತ್ರ :  ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

S.I.R-ಮುದ್ದೇಬಿಹಾಳ ಮತಕ್ಷೇತ್ರ : ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಓಗಳು,ಮೇಲ್ವಿಚಾರಕರು,ಬಿಎಲ್‌ಎಗಳ ಹಾಗೂ ಮತದಾರರ ಸಹಕಾರದಿಂದ ಗಣತಿ ನಮೂನೆಗಳ ವಿತರಣೆ ಕಾರ್ಯದಲ್ಲಿ ಮುದ್ದೇಬಿಹಾಳ ಮತಕ್ಷೇತ್ರ ಶೇ.98.38ರಷ್ಟು ಸಾಧನೆ ಮಾಡಿ ವಿಜಯಪುರ ಜಿಲ್ಲೆಗೆ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಮತದಾರರ ನೋಂದಣಾಧಿಕಾರಿ,ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬಿ.ಎ.ಸೌದಾಗರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಕುರಿತು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.2,28,285 ಮತದಾರರಲ್ಲಿ 2,24,589 ಮತದಾರರಿಗೆ ಗಣತಿ ನಮೂನೆ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ ಬರುವುದಿಲ್ಲ.ಪಂಚ ಗ್ಯಾರಂಟಿ ಹಿಡಿದು ಗಂಗಾಕಲ್ಯಾಣ,ಮಕ್ಕಳ ಸ್ಕಾಲರಶಿಪ್ ಸೇರಿದಂತೆ ಸರ್ಕಾರಿ ಯೋಜನೆಗಳು ನಿಮಗೆ ದೊರೆಯುವುದಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಎಲ್‌ಎ-2 ಗಳಿಗಾಗಿ ಏರ್ಪಡಿಸಿದ್ದ ಎಸ್‌ಆಯ್‌ಆರ್ ಪ್ರಕ್ರಿಯೆ ಕುರಿತು ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಮತದಾನ ನಿಮ್ಮ ಜೀವನದ ಹಕ್ಕು.ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಎನ್ರೋಲಮೆಂಟ್ ಆಗುವುದು ಕಡ್ಡಾಯವಾಗಿದೆ.ಈ