ಮುದ್ದೇಬಿಹಾಳ : ಭೋವಿ ವಡ್ಡರ ಸಮಾಜದಲ್ಲಿ ಸಾಂಪ್ರದಾಯಿಕ ಕುಲಕಸುಬು ಪ್ರಧಾನವಾಗಿದ್ದರೂ ಸಮಾಜದ ಬಾಂಧವರ ಮಕ್ಕಳು ಶೈಕ್ಷಣಿಕವಾಗಿಯೂ ಉನ್ನತ ಗುರಿ ಇಟ್ಟುಕೊಂಡು ಸಾಧನೆ ತೋರಬೇಕು ಎಂದು ಅಖಿಲ ಕರ್ನಾಟಕ ಭೋವಿ(ವಡ್ಡರ) ಯುವ ವೇದಿಕೆ ತಾಲೂಕಾ ಘಟಕದ ಉಪಾಧ್ಯಕ್ಷ ಹಣಮಂತ ಯ.ಭೈರವಾಡಗಿ ಹೇಳಿದರು.
ತಾಲೂಕಿನ ಢವಳಗಿ ಗ್ರಾಮದ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಢವಳಗಿ ಗ್ರಾಮದ ವಡ್ಡರ ಸಮಾಜ ಹಾಗೂ ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಮುದ್ದೇಬಿಹಾಳ ತಾಲೂಕಾ ಘಟಕದ ವತಿಯಿಂದ ಈಚೇಗೆ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ 2025 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಬಾಂಧವರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು.ಶಿಕ್ಷಣದಿಂದ ಸಾಮಾಜಿಕವಾಗಿ ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು.
ಭೋವಿ ವಡ್ಡರ ಸಮಾಜದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಪಾಸಾದ ವಿದ್ಯಾರ್ಥಿಗಳಾದ ಅಭಿಷೇಕ ಲೋ. ಮುರಾಳ, ಸ್ವಪ್ನಾ ರಾ. ಭೈರವಾಡಗಿ, ಹಣಮಂತಿ ನಾ. ವಡ್ಡರ, ಅಭಿಷೇಕ ಲ. ನಡವಿನಮನಿ, ವೆಂಕಟೇಶ ಗ. ಗೌಂಡಿ, ಸಂಜನಾ ಪ್ರ. ಗೌಂಡಿ, ಲಕ್ಷ್ಮಿ ಮ. ವಡ್ಡರ , ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ನಾಗಮ್ಮ ಭೀ ಗುಜ್ಜಲ, ಅಕ್ಷತಾ ವಿ ಬಂಡಿವಡ್ಡರ ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಮಾಜಿ ಸದಸ್ಯ ರವಿ ಢವಳಗಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪ್ರಕಾಶ ಭೈರವಾಡಗಿ, ನಾಗಪ್ಪ ಢವಳಗಿ, ರಾಜು ಭೈರವಾಡಗಿ, ಕಾಶಪ್ಪ ಭೈರವಾಡಗಿ, ಹಣಮಂತ ಮುತ್ತಗಿ, ರಾಜು ಢವಳಗಿ, ಗಿರೀಶ್ ಭೈರವಾಡಗಿ, ನಾಗರಾಜ ಭೈರವಾಡಗಿ,ರಾಮು ವಡ್ಡರ ಲಕ್ಷ್ಮಣ ಭೈರವಾಡಗಿ,ರಾಜ್ಯ ಕಾರ್ಯದರ್ಶಿ ಹಣಮಂತ ಭೀ ಬೆಳಗಲ್ಲ, ಪ್ರಶಾಂತ ಭೈರವಾಡಗಿ, ಹಣಮಂತ ಢವಳಗಿ, ಬಾಬು ಭೋವಿ, ಬಸವರಾಜ ಆಲಕುಂಟಿ ಇದ್ದರು.