NATIONAL LEVEL ಮಟ್ಸೋಗಿ-ಡೊ ಟೂರ್ನಿಗೆ ಆಯ್ಕೆ; BAS ಇಂಟರ್‌ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

NATIONAL LEVEL ಮಟ್ಸೋಗಿ-ಡೊ ಟೂರ್ನಿಗೆ ಆಯ್ಕೆ; BAS ಇಂಟರ್‌ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

ಮುದ್ದೇಬಿಹಾಳ : ಜಮ್ಮು ಕಾಶ್ಮೀರದಲ್ಲಿ ಜರುಗಲಿರುವ 20 ನೇ ರಾಷ್ಟ್ರೀಯ ಮಟ್ಸೋಗಿ-ಡೊ(ಮಾರ್ಷಲ್ ಆರ್ಟ್ಸ್) ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಪಟ್ಟಣದ ಬಿಎಎಸ್ ಇಂಟರ್ ನ್ಯಾಶನಲ್ ಶಾಲೆಯ ವಿದ್ಯಾರ್ಥಿಗಳಾದ ಶಕುಂತಲಾ ಶಾರದಳ್ಳಿ, ವಿಕ್ರಾಂತ ಶಾರದಳ್ಳಿ ಅವರನ್ನು ಶಾಲಾ ಆಡಳಿತ ಮಂಡಳಿಯವರು ಮಂಗಳವಾರ ಸನ್ಮಾನಿಸಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ಮಾತನಾಡಿ, ಮಾರ್ಷಲ್ ಆರ್ಟ್ಸ್ ತರಬೇತಿದಾರ ಶಿವಕುಮಾರ ಶಾರದಳ್ಳಿ ಅವರ ನೇತೃತ್ವದಲ್ಲಿ ಉತ್ತಮ ತರಬೇತಿ ಪಡೆದಿರುವ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುವುದು ಶಾಲೆಗೆ ಹಿರಿಮೆ ತಂದಿದೆ ಎಂದರು.

ಬಿಎಎಸ್ ಶಾಲಾ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಶಾಲೆಗೆ ಕೀರ್ತಿ ತರಬೇಕು ಎಂದು ಶಾಲಾ ಆಡಳಿತ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪರವಾಗಿ ಶುಭಹಾರೈಸುತ್ತೇನೆ ಎಂದು ಹೇಳಿದರು.

ತರಬೇತಿದಾರ ಶಿವಕುಮಾರ ಶಾರದಳ್ಳಿ ಮಾತನಾಡಿ,ಜಮ್ಮು ಕಾಶ್ಮೀರದಲ್ಲಿ ಇದೇ ಡಿಸೆಂಬರ್ 28 ರಿಂದ 31 ವರೆಗೆ ನಡೆಲಿರವ 20 ನೇ ರಾಷ್ಟ್ರೀಯ ಮಟ್ಸೋಗಿ-ಡೊ(ಮಾರ್ಷಲ್ ಆರ್ಟ್ಸ್) ಕ್ರೀಡಾಕೂಟದಲ್ಲಿ ದೇಶದ ಅಂದಾಜು 15ಕ್ಕೂ ಹೆಚ್ಚು ರಾಜ್ಯಗಳ 1 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಶಾಲೆಯ ಮಾರ್ಗದರ್ಶಕರಾದ ಶಿವನಗೌಡ ಬಿರಾದಾರ, ಕಾರ್ಯದರ್ಶಿ ಸುಮಂಗಳಾ ಬಿರಾದಾರ, ಮುಖ್ಯ ಗುರುಮಾತೆ ರಿಷೀಕಾ ನಾಯ್ಕ, ಗೀತಾ ಬಿರಾದಾರ ಇದ್ದರು.

Latest News

ದಿ.ಡಿ.ಬಿ.ಮುದೂರಗೆ ನುಡಿನಮನ : ಅಸ್ಪೃಶ್ಯತೆಯ ವಿರುದ್ಧ ಡಿ.ಬಿ.ಮುದೂರ ದಿಟ್ಟ ಹೋರಾಟ -ನಾಡಗೌಡ

ದಿ.ಡಿ.ಬಿ.ಮುದೂರಗೆ ನುಡಿನಮನ : ಅಸ್ಪೃಶ್ಯತೆಯ ವಿರುದ್ಧ ಡಿ.ಬಿ.ಮುದೂರ ದಿಟ್ಟ ಹೋರಾಟ -ನಾಡಗೌಡ

ಮುದ್ದೇಬಿಹಾಳ : ಮತಕ್ಷೇತ್ರದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯ ವಿರುದ್ಧ ದಿಟ್ಟತನದ ಹೋರಾಟ ಸಂಘಟಿಸಿ ಅದರಲ್ಲಿ ಯಶಸ್ವಿಯಾಗಿದ್ದವರು

‘ಎಂ.ಎಲ್.ಎ ಬಳಿ ಹೋದ್ರೆ ಚಿನ್ನು ಧಣಿ ಬಳಿ ಹೋಗು ಅಂತಾರೆ, ಚಿನ್ನು ಧಣಿ ಚೀಫ್ ಆಫೀಸರ್ ಬಳಿ ಹೋಗು ಅನ್ನುತ್ತಾರೆ’

‘ಎಂ.ಎಲ್.ಎ ಬಳಿ ಹೋದ್ರೆ ಚಿನ್ನು ಧಣಿ ಬಳಿ ಹೋಗು ಅಂತಾರೆ, ಚಿನ್ನು ಧಣಿ ಚೀಫ್ ಆಫೀಸರ್ ಬಳಿ ಹೋಗು ಅನ್ನುತ್ತಾರೆ’

ಮುದ್ದೇಬಿಹಾಳ : ಪಟ್ಟಣದ ಇಂದಿರಾ ನಗರದಲ್ಲಿರುವ ಬಡವರಿಗೆ ಉತಾರೆ ಕೊಡಲು ಪುರಸಭೆಯಿಂದ ಆಗುತ್ತಿಲ್ಲ.ಇದರಿಂದ ಸಾಕಷ್ಟು

ಸಾಲದ ಬಾಧೆ ತಾಳದೇ ಗಂಗೂರದಲ್ಲಿ ರೈತ ಆತ್ಮಹತ್ಯೆ

ಸಾಲದ ಬಾಧೆ ತಾಳದೇ ಗಂಗೂರದಲ್ಲಿ ರೈತ ಆತ್ಮಹತ್ಯೆ

ಮುದ್ದೇಬಿಹಾಳ : ಬೆಳೆದ ಬೆಳೆ ಸರಿಯಾಗಿ ಕೈಗೆ ಬಾರದ್ದನ್ನೇ ಮನಸಿಗೆ ಹಚ್ಚಿಕೊಂಡ ರೈತರೊಬ್ಬರು ನೇಣು

ಬಿಎಎಸ್ ಇಂಟರ್ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟ ಮಟ್ಸೋಗಿ-ಡೊ ಟೂರ್ನಿಗೆ ಆಯ್ಕೆ

ಪಟ್ಟಣದ ಬಿಎಎಸ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಜರುಗಲಿರುವ 20 ನೇ ರಾಷ್ಟ್ರೀಯ

ಚವನಭಾವಿ : ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಚವನಭಾವಿ : ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮುದ್ದೇಬಿಹಾಳ : ಎಲ್ಲಾ ಪಾಲಕರು,ಪೋಷಕರು ಐದು ವರ್ಷದ ಒಳಗಿನ ಮಕ್ಕಳ ಆರೋಗ್ಯದ ಹಾಗೂ ದೇಹದ ಸದೃಢತೆಗಾಗಿ ಪಲ್ಸ್ ಪೊಲೀಯೊ ಲಸಿಕೆಯನ್ನು ತಪ್ಪದೆ ಹಾಕಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಇಂದಿರಾ ಕುಂಬಾರ ಹೇಳಿದರು. ತಾಲ್ಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಭಾನುವಾರ ಮೊದಲ ಸುತ್ತಿನ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇದೇ ವೇಳೆ ಪಲ್ಸ್ ಪೋಲಿಯೊ ಕುರಿತು ಅಂಗನವಾಡಿ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ:                    ಎಮ್.ಜಿ.ಎಮ್.ಕೆ ಆಂಗ್ಲ ಮಾಧ್ಯಮ ಶಾಲೆಯ ಹೆಗಡೆ ಪ್ರಥಮ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ: ಎಮ್.ಜಿ.ಎಮ್.ಕೆ ಆಂಗ್ಲ ಮಾಧ್ಯಮ ಶಾಲೆಯ ಹೆಗಡೆ ಪ್ರಥಮ

ಮುದ್ದೇಬಿಹಾಳ : ಪಟ್ಟಣದ ಎಮ್.ಜಿ.ಎಮ್.ಕೆ ಆಂಗ್ಲ ಮಾಧ್ಯಮ ಶಾಲೆಯ ಅಭಿರಾಮ ಹೆಗಡೆ ವಿಜಯಪುರದ ಕಗ್ಗೋಡಿನ ಪ್ರಕೃತಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ ಧಾರ್ಮಿಕ ಪಠಣ (ಸಂಸ್ಕೃತ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿಕೊಂಡಿದ್ದಾನೆ. ವಿದ್ಯಾರ್ಥಿಯ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಎಮ್.ಎಮ್.ಕೋರಿ, ಪದವಿ ಪ್ರಾಚಾರ್ಯ ಎಸ್.ಕೆ.ಹರನಾಳ, ಮುಖ್ಯ ಗುರುಮಾತೆ ವೀಣಾ ಹಿರೇಮಠ, ಆಡಳಿತಾಧಿಕಾರಿಗಳಾದ ಎಸ್.ಎಸ್.ಆಳವಿ, ರಾಜೇಶ್ವರಿ ಬಿರಾದಾರ, ಶೋಭಾ ಬಲಕುಂದಿ, ಶಿಕ್ಷಕರಾದ ಶ್ರೀವಿಜಯ ಹಳ್ಳೂರ,