ಮುದ್ದೇಬಿಹಾಳ : ಸಮಾಜದಲ್ಲಿ ನದಾಫ/ಪಿಂಜಾರ್ ಸಮುದಾಯವನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನದಾಫ್ / ಪಿಂಜಾರ ಸಂಘದ ತಾಲ್ಲೂಕು ಘಟಕ ಶ್ರಮಿಸುತ್ತಿದೆ ಎಂದು ಮುದ್ದೇಬಿಹಾಳ ತಾಲೂಕಾ ಘಟಕದ ಅಧ್ಯಕ್ಷ ಮಲೀಕಸಾಬ ನದಾಫ ಹೇಳಿದರು.
ಪಟ್ಟಣದಲ್ಲಿ ಶನಿವಾರ ನದಾಫ / ಪಿಂಜಾರ್ ಸಂಘದಿAದ 2026ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಂಘವು ಸಮಾಜದ ಶೈಕ್ಷಣಿಕ,ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ದಿಗೆ ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ.ನೂತನ ಕ್ಯಾಲೆಂಡರ್ ಮೂಲಕ ಸಂಘದ ಮುಂದಿನ ವರ್ಷದ ಚಟುವಟಿಕೆಗಳನ್ನು ಸಮಾಜದ ಬಾಂಧವರಿಗೆ ತಲುಪಿಸುವ ಉದ್ದೇಶ ಹೊಂದಿದೆ ಎಂದರು.
ತಾಲೂಕಾ ಘಟಕದ ಉಪಾಧ್ಯಕ್ಷರಾದ ಮಕ್ತುಂಸಾಬ ನದಾಫ್, ಮೌಲಾಸಾಬ ನದಾಫ್, ಪ್ರಧಾನ ಕಾರ್ಯದರ್ಶಿ ಬಾಬು ದಿಡ್ಡಿಮನಿ,ಸಮಿತಿಯ ಸದಸ್ಯರಾದ ಎನ್.ಬಿ. ಪಿಂಜಾರ, ಎಲ್.ಕೆ. ನದಾಫ್, ಬಾಬು ನದಾಫ್, ರಜಾಕ್ ಭೈರವಾಡಗಿ, ಹುಸೇನಭಾಷಾ ನದಾಫ್, ಮುಬಿನ್ ನದಾಫ್, ಬಷೀರ್ ನದಾಫ್, ಮುತ್ತು ಮಾದಿನಾಳ, ದಾವಲಸಾಬ ವಾಲಿಕಾರ, ಇಸ್ಮಾಯಿಲ್ ದೊಡಮನಿ, ಸಮೀನಾ ನದಾಫ್, ಹಸನಸಾಬ ನದಾಫ್, ಲಾಳೇಸಾಬ ದಿಡ್ಡಿಮನಿ, ರಜಾಕ್ ಮುದ್ನಾಳ ಇದ್ದರು.ರಫೀಕ್ ನದಾಫ್ (ಮೌಲಾನಾ) ಖುರಾನ್ ಪಠಿಸಿದರು.ಬಾಬು ದಿಡ್ಡಿಮನಿ ಸ್ವಾಗತಿಸಿದರು.






