Competition on the occasion of Gramdevate Jatra: Cash prize for Rangoli competition winners

ಗ್ರಾಮದೇವತೆ ಜಾತ್ರೆಯ ನಿಮಿತ್ಯ ಸ್ಪರ್ಧೆ: ರಂಗೋಲಿ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ

ಗ್ರಾಮದೇವತೆ ಜಾತ್ರೆಯ ನಿಮಿತ್ಯ ಸ್ಪರ್ಧೆ: ರಂಗೋಲಿ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ

ಮುದ್ದೇಬಿಹಾಳ : ಪಟ್ಟಣದ ಗ್ರಾಮ ದೇವತೆ ಜಾತ್ರೆಯ ಅಂಗವಾಡಿ ಅಂಬೇಡ್ಕರ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನಗಳನ್ನು ಜಾತ್ರಾ ಕಮೀಟಿಯಿಂದ ಪ್ರದಾನ ಮಾಡಲಾಯಿತು.

ಸ್ಪರ್ಧೆಯಲ್ಲಿ ವಿಜಯಲಕ್ಷ್ಮಿ ಮೋಟಗಿ ಪ್ರಥಮ, ಶಾರದಾ ಬಿರಾದಾರ ದ್ವಿತೀಯ, ದೀಪಾ ಭಜಂತ್ರಿ ತೃತೀಯ, ಶಶಿಕಲಾ ಬಡಿಗೇರ ನಾಲ್ಕನೇ ಹಾಗೂ ಶೋಭಿತಾ ಹೊರಗಿನಮಠ ಐದನೇ ಬಹುಮಾನ ಪಡೆದುಕೊಂಡರು. ಪ್ರಶಸ್ತಿ ವಿಜೇತರಿಗೆ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಬಹುಮಾನ ಪ್ರದಾನ ಮಾಡಿದರು.

ಪುರಸಭೆ ಸದಸ್ಯರಾದ ಪ್ರತಿಭಾ ಅಂಗಡಗೇರಿ, ಶಹಜಾದಬಿ ಹುಣಸಗಿ, ಸಂಗಮ್ಮ ದೇವರಳ್ಳಿ, ಭಾರತಿ ಪಾಟೀಲ, ಅಶೋಕ ವನಹಳ್ಳಿ, ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ಮಂಜುಳಾ ಕೆಸರಟ್ಟಿ, ನಿವೃತ್ತ ದೈಹಿಕ ಶಿಕ್ಷಕ ಎಸ್. ಎಲ್. ಗುರವ, ತೀರ್ಪುಗಾರರಾದ ವಿದ್ಯಾ ತಡಸದ, ರೇಖಾ ಇಲ್ಲೂರ, ಡಿ.ಬಿ.ಮಟ್ಟಿಕಲ್ಲ ಇದ್ದರು.

ಫಲಿತಾಂಶದಲ್ಲಿ ತಾರತಮ್ಯ: ನಿರ್ಣಾಯಕರು ಅಂದವಾದ ರಂಗೋಲಿಯನ್ನು ವೀಕ್ಷಿಸಿ ತೀರ್ಪು ನೀಡದೇ ತಮಗೆ ಬೇಕಾದವರಿಗೆ ತೀರ್ಪು ನೀಡಿ ತಾರತಮ್ಯ ಮಾಡಿದ್ದಾರೆ ಎಂದು ಮಾರುತಿ ನಗರದಿಂದ ಸ್ಪರ್ಧೆಗೆ ಆಗಮಿಸಿದ್ದ ಲತಾ ಪೀರಾಪೂರ ದೂರಿದರು. ಸ್ಪರ್ಧೆಯ ನಿಯಮಗಳನ್ನು ಹಾಗೂ ಬಳಸಬೇಕಾದ ಆಕೃತಿಯ ಬಗ್ಗೆ ಮುಂಚಿತವಾಗಿ ತಿಳಿಸಿರಲಿಲ್ಲ. ಆದರೂ ಆಯ್ಕೆಯಾಗದವರು ತಮ್ಮ ರಂಗೋಲಿಗೆ ಏಕೆ ಬಹುಮಾನ ಬಂದಿಲ್ಲ ಎಂದು ಪ್ರಶ್ನಿಸಿದರೆ ನಿರ್ಣಾಯಕರಿಂದ ಸಮರ್ಪಕ ಉತ್ತರ ಬರಲಿಲ್ಲ. ಇದು ನಮಗೆ ಅನುಮಾನಗಳಿಗೆ ಕಾರಣವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತೀರ್ಪುಗಾರರನ್ನು ಪ್ರಶ್ನಿಸಿದಾಗ, ರಂಗೋಲಿಯ ಆಕೃತಿ, ಚುಕ್ಕಿಗಳ ಇಡುವಿಕೆ ಹಾಗೂ ಬಣ್ಣದ ಅಂದವನ್ನು ಗಮನಿಸಿ ಆಯ್ಕೆ ಮಾಡಿದ್ದು ಇದರಲ್ಲಿ ಯಾವುದೇ ತಾರತಮ್ಮ ಮಾಡಿಲ್ಲ ಎಂದು ನಿರ್ಣಾಯಕರಾಗಿ ಬಂದಿದ್ದ ವಿದ್ಯಾ ತಡಸದ, ರೇಖಾ ಇಲ್ಲೂರ ಸ್ಪಷ್ಪಪಡಿಸಿದರು.

Latest News

ಗ್ರಾಮದೇವತೆ ಜಾತ್ರೆಯ ನಿಮಿತ್ಯ ಸ್ಪರ್ಧೆ: ರಂಗೋಲಿ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ

ಗ್ರಾಮದೇವತೆ ಜಾತ್ರೆಯ ನಿಮಿತ್ಯ ಸ್ಪರ್ಧೆ: ರಂಗೋಲಿ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ

ಮುದ್ದೇಬಿಹಾಳ : ಪಟ್ಟಣದ ಗ್ರಾಮ ದೇವತೆ ಜಾತ್ರೆಯ ಅಂಗವಾಡಿ ಅಂಬೇಡ್ಕರ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ

ಕ್ರೀಡಾಪಟುಗಳಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಿ-ಸಾವಳಗಿ

ಕ್ರೀಡಾಪಟುಗಳಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಿ-ಸಾವಳಗಿ

ಮುದ್ದೇಬಿಹಾಳ : ಕ್ರೀಡಾಪಟುಗಳನ್ನು ಅವರ ಕೌಟುಂಬಿಕ ಹಿನ್ನೆಲೆ, ಜಾತಿ, ಮತದ ಆಧಾರದ ಮೇಲೆ ಗುರುತಿಸದೇ

ಪರಿಸರ ದಿನಾಚರಣೆ ಅಂಗವಾಗಿ ಮಗುವಿಗೊಂದು ಮರ ಕಾರ್ಯಕ್ರಮ

ಪರಿಸರ ದಿನಾಚರಣೆ ಅಂಗವಾಗಿ ಮಗುವಿಗೊಂದು ಮರ ಕಾರ್ಯಕ್ರಮ

ಕುಳಗೇರಿ ಕ್ರಾಸ್: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೋಮನಕೊಪ್ಪದಲ್ಲಿ

ಆರ್‌ಸಿಬಿಗೆ ಕಪ್: ಮೇರೆ ಮೀರಿದ ಅಭಿಮಾನಿಗಳ ಉತ್ಸಾಹ

ಆರ್‌ಸಿಬಿಗೆ ಕಪ್: ಮೇರೆ ಮೀರಿದ ಅಭಿಮಾನಿಗಳ ಉತ್ಸಾಹ

ಸಂಭ್ರಮಾಚರಣೆ ವೇಳೆ ಪೊಲೀಸರಿಂದ ಲಾಠಿ ಪ್ರಹಾರ ಮುದ್ದೇಬಿಹಾಳ : ಬೆಂಗಳೂರಿನ ರಾಯಲ್ ಚಾಲೆಂರ‍್ಸ್ ತಂಡ

ಪೊಲೀಸರಿಂದ ಲಘುಲಾಠಿ ಪ್ರಹಾರ: ಡಿಜೆ ಜಾನಪದ ಜಾತ್ರೆಗೆ ಹರಿದು ಬಂದ ಜನಸಾಗರ

ಪೊಲೀಸರಿಂದ ಲಘುಲಾಠಿ ಪ್ರಹಾರ: ಡಿಜೆ ಜಾನಪದ ಜಾತ್ರೆಗೆ ಹರಿದು ಬಂದ ಜನಸಾಗರ

ಮುದ್ದೇಬಿಹಾಳ : ಪಟ್ಟಣದ ತಾಲ್ಲೂಕು ಪಂಚಾಯತಿ ಕ್ವಾರ್ಟರ್ಸ್ನಲ್ಲಿರುವ ಗ್ರಾಮದೇವತೆ ವೇದಿಕೆಯಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತು. ಸಂಘಟಕರ ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರಿಂದ ಕಾರ್ಯಕ್ರಮಕ್ಕೆಂದು ಹಾಕಿದ್ದ ಎಲ್‌ಇಡಿ ಪರದೆಗಳ ಸಂಪರ್ಕ ಕಡಿತಗೊಂಡಿತು. ಅಲ್ಲದೇ ಕೆಲವರು ಜನರೇಟರ್ ಮೇಲೆ ಹತ್ತಿ ಕೂತಿದ್ದರಿಂದ ಕಾರ್ಯಕ್ರಮವನ್ನು ಎರಡು ಬಾರಿ ಮುಂದೂಡಿ ಮತ್ತೆ ಆರಂಭಿಸಲಾಯಿತು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಸಮೀತಿಯ ಪ್ರಮುಖರಾದ ನೇತಾಜಿ ನಲವಡೆ, ಸಂಗಮೇಶ ನಾಲತವಾಡ,

ಪ್ರತಿಭಾನ್ವೇಷಣೆ, ಸಾಧಕರ ಸನ್ಮಾನ: ಮಕ್ಕಳ ಕೈಯ್ಯಲ್ಲಿ ಮೊಬೈಲ್ ಬದಲು ಪುಸ್ತಕ ಕೊಡಿ

ಪ್ರತಿಭಾನ್ವೇಷಣೆ, ಸಾಧಕರ ಸನ್ಮಾನ: ಮಕ್ಕಳ ಕೈಯ್ಯಲ್ಲಿ ಮೊಬೈಲ್ ಬದಲು ಪುಸ್ತಕ ಕೊಡಿ

ಮುದ್ದೇಬಿಹಾಳ : ಮಕ್ಕಳ ಕೈಯ್ಯಲ್ಲಿ ಮೊಬೈಲ್ ಕೊಡದೇ ಪುಸ್ತಕ ಕೊಟ್ಟರೆ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಲೊಟಗೇರಿಯ ಗುರುಮೂರ್ತಿ ಕಣಕಾಲಮಠ ಸ್ವಾಮೀಜಿ ಹೇಳಿದರು. ಪಟ್ಟಣದ ಎಸ್.ಎಸ್.ಶಿವಾಚಾರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಶನಲ್ ಸ್ಕೂಲ್ ಹಾಗೂ ಚಾಲೆಂಜ್ ನವೋದಯ ಕೋಚಿಂಗ ಕ್ಲಾಸಿಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾನ್ವೇಷಣೆ ಪರೀಕ್ಷೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಶಾಲೆಗೆ ಹೆಸರು ನೋಂದಣಿ ಮಾಡಿಬಿಟ್ಟರೆ ಆಯಿತು ಎಂಬ ಸ್ವಭಾವದಲ್ಲಿ