ಮುದ್ದೇಬಿಹಾಳ : ಪಟ್ಟಣದ ಗ್ರಾಮ ದೇವತೆ ಜಾತ್ರೆಯ ಅಂಗವಾಡಿ ಅಂಬೇಡ್ಕರ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನಗಳನ್ನು ಜಾತ್ರಾ ಕಮೀಟಿಯಿಂದ ಪ್ರದಾನ ಮಾಡಲಾಯಿತು.
ಸ್ಪರ್ಧೆಯಲ್ಲಿ ವಿಜಯಲಕ್ಷ್ಮಿ ಮೋಟಗಿ ಪ್ರಥಮ, ಶಾರದಾ ಬಿರಾದಾರ ದ್ವಿತೀಯ, ದೀಪಾ ಭಜಂತ್ರಿ ತೃತೀಯ, ಶಶಿಕಲಾ ಬಡಿಗೇರ ನಾಲ್ಕನೇ ಹಾಗೂ ಶೋಭಿತಾ ಹೊರಗಿನಮಠ ಐದನೇ ಬಹುಮಾನ ಪಡೆದುಕೊಂಡರು. ಪ್ರಶಸ್ತಿ ವಿಜೇತರಿಗೆ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಬಹುಮಾನ ಪ್ರದಾನ ಮಾಡಿದರು.
ಪುರಸಭೆ ಸದಸ್ಯರಾದ ಪ್ರತಿಭಾ ಅಂಗಡಗೇರಿ, ಶಹಜಾದಬಿ ಹುಣಸಗಿ, ಸಂಗಮ್ಮ ದೇವರಳ್ಳಿ, ಭಾರತಿ ಪಾಟೀಲ, ಅಶೋಕ ವನಹಳ್ಳಿ, ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ಮಂಜುಳಾ ಕೆಸರಟ್ಟಿ, ನಿವೃತ್ತ ದೈಹಿಕ ಶಿಕ್ಷಕ ಎಸ್. ಎಲ್. ಗುರವ, ತೀರ್ಪುಗಾರರಾದ ವಿದ್ಯಾ ತಡಸದ, ರೇಖಾ ಇಲ್ಲೂರ, ಡಿ.ಬಿ.ಮಟ್ಟಿಕಲ್ಲ ಇದ್ದರು.
ಫಲಿತಾಂಶದಲ್ಲಿ ತಾರತಮ್ಯ: ನಿರ್ಣಾಯಕರು ಅಂದವಾದ ರಂಗೋಲಿಯನ್ನು ವೀಕ್ಷಿಸಿ ತೀರ್ಪು ನೀಡದೇ ತಮಗೆ ಬೇಕಾದವರಿಗೆ ತೀರ್ಪು ನೀಡಿ ತಾರತಮ್ಯ ಮಾಡಿದ್ದಾರೆ ಎಂದು ಮಾರುತಿ ನಗರದಿಂದ ಸ್ಪರ್ಧೆಗೆ ಆಗಮಿಸಿದ್ದ ಲತಾ ಪೀರಾಪೂರ ದೂರಿದರು. ಸ್ಪರ್ಧೆಯ ನಿಯಮಗಳನ್ನು ಹಾಗೂ ಬಳಸಬೇಕಾದ ಆಕೃತಿಯ ಬಗ್ಗೆ ಮುಂಚಿತವಾಗಿ ತಿಳಿಸಿರಲಿಲ್ಲ. ಆದರೂ ಆಯ್ಕೆಯಾಗದವರು ತಮ್ಮ ರಂಗೋಲಿಗೆ ಏಕೆ ಬಹುಮಾನ ಬಂದಿಲ್ಲ ಎಂದು ಪ್ರಶ್ನಿಸಿದರೆ ನಿರ್ಣಾಯಕರಿಂದ ಸಮರ್ಪಕ ಉತ್ತರ ಬರಲಿಲ್ಲ. ಇದು ನಮಗೆ ಅನುಮಾನಗಳಿಗೆ ಕಾರಣವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೀರ್ಪುಗಾರರನ್ನು ಪ್ರಶ್ನಿಸಿದಾಗ, ರಂಗೋಲಿಯ ಆಕೃತಿ, ಚುಕ್ಕಿಗಳ ಇಡುವಿಕೆ ಹಾಗೂ ಬಣ್ಣದ ಅಂದವನ್ನು ಗಮನಿಸಿ ಆಯ್ಕೆ ಮಾಡಿದ್ದು ಇದರಲ್ಲಿ ಯಾವುದೇ ತಾರತಮ್ಮ ಮಾಡಿಲ್ಲ ಎಂದು ನಿರ್ಣಾಯಕರಾಗಿ ಬಂದಿದ್ದ ವಿದ್ಯಾ ತಡಸದ, ರೇಖಾ ಇಲ್ಲೂರ ಸ್ಪಷ್ಪಪಡಿಸಿದರು.