Dharma Sabha at Padmavati Temple: Raise children to be useful to society-Dandavati

ಪದ್ಮಾವತಿ ದೇವಸ್ಥಾನದಲ್ಲಿ ಧರ್ಮಸಭೆ:ಮಕ್ಕಳನ್ನು ಸಮಾಜಕ್ಕೆ ಉಪಯುಕ್ತರಾಗುವಂತೆ ಬೆಳೆಸಿ-ದಂಡಾವತಿ

ಪದ್ಮಾವತಿ ದೇವಸ್ಥಾನದಲ್ಲಿ ಧರ್ಮಸಭೆ:ಮಕ್ಕಳನ್ನು ಸಮಾಜಕ್ಕೆ ಉಪಯುಕ್ತರಾಗುವಂತೆ ಬೆಳೆಸಿ-ದಂಡಾವತಿ

ಮುದ್ದೇಬಿಹಾಳ : ಮಕ್ಕಳಿಗೆ ಅನುಕಂಪ, ದಯೆ ಹಾಗೂ ಸಮಾಜದ ಭಾಗ ತಾನು ಎಂಬುದನ್ನು ಕಲಿಸಿಕೊಡಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಹೇಳಿದರು.

ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿ ದೇವಿ ಜಾತ್ರಾ ಮಹೋತ್ಸವ ಶನಿವಾರ ಹಮ್ಮಿಕೊಂಡಿದ್ದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಕಣ್ಣೀರು ಒರೆಸುವ ಕಾರ್ಯ ತಾವು ಹೆತ್ತ ಮಕ್ಕಳು ಮಾಡಬೇಕು ಎಂಬುದು ತಾಯಂದಿರ ಗುರಿಯಾಗಿರಬೇಕು ಎಂದರು.
ಹುಲಕೋಟಿ ಕೆ. ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಅಪ್ಪಣ್ಣ ಹಂಜಿ ಉಪನ್ಯಾಸ ನೀಡಿ, ಪದ್ಮಾವತಿ ಹಾಗೂ ಪಾರ್ಶ್ವನಾಥ ತೀರ್ಥಂಕರ ಮೂರ್ತಿಗಳ ಬಗ್ಗೆ ವಿವರಿಸಿದರು.

ಅಧ್ಯಕ್ಷತೆಯನ್ನು ಪದ್ಮಾವತಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಅಭಿನಂದನ ಗೋಗಿ ವಹಿಸಿದ್ದರು. ಹಿರಿಯ ಸಾಹಿತಿ ಅಶೋಕ ಮಣಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ದೇವಸ್ಥಾನ ಟ್ರಸ್ಟ್ ಉಪಾಧ್ಯಕ್ಷ ಗೊಮ್ಮಟೇಶ್ವರ ಸಗರಿ, ಮಾಣಿಕಚಂದ ದಂಡಾವತಿ ಇದ್ದರು. ವಿವಿಧ ಕ್ಷೇತ್ರದ ಸಾಧಕರಾದ ಅಶೋಕ ಮಣಿ, ಮಹಾವೀರ ಸಗರಿ, ಅನಂತರಾಜ ಉಪಾಧ್ಯೆ, ಅನಿಲಕುಮಾರ ಇರಾಜ, ಕಲಗೌಡ ಪಾಟೀಲ, ದಿಲೀಪಕುಮಾರ ಕಿವಡೆ, ಮಹಾವೀರ ರಾಸನೆ, ಜಂಭುಕುಮಾರ ಬಾಗೇವಾಡಿ, ಶೈಲಾ ಗೊಂಗಡಿ, ನಿಖಿತಾ ಶೆಟ್ಟಿ, ಸುನೀಲ ಹಿಪ್ಪರಗಿ,ರವಿ ನಂದೆಪ್ಪನವರ, ಗುಲಾಮಮೊಹ್ಮದ ದಫೇದಾರ ಅವರನ್ನು ಸನ್ಮಾನಿಸಲಾಯಿತು.

Latest News

ಅಸ್ಕಿ ಫೌಂಡೇಶನ್ ಜನಸೇವೆ ಶ್ಲಾಘನೀಯ:              ಪವನಸುತನ ನಾಡಲ್ಲಿ ಅಸ್ಕಿ ಫೌಂಡೇಶನ್ ದಿನದರ್ಶಿಕೆ ಬಿಡುಗಡೆ

ಅಸ್ಕಿ ಫೌಂಡೇಶನ್ ಜನಸೇವೆ ಶ್ಲಾಘನೀಯ: ಪವನಸುತನ ನಾಡಲ್ಲಿ ಅಸ್ಕಿ ಫೌಂಡೇಶನ್ ದಿನದರ್ಶಿಕೆ ಬಿಡುಗಡೆ

ಆಲಮಟ್ಟಿ : ಇಲ್ಲಿಗೆ ಸಮೀಪದ ಯಲಗೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡ,

ಮುದ್ದೇಬಿಹಾಳ ಸಾರಿಗೆ ಘಟಕಕ್ಕೆ ಕೆಕೆಆರ್‌ಟಿಸಿ ಎಂ.ಡಿ ಭೇಟಿ: 40 ಲಕ್ಷ ರೂ.ವೆಚ್ಚದಲ್ಲಿ ನಿಲ್ದಾಣದ ಕಾಂಕ್ರಿಟ್,ಶೌಚಗೃಹ ನಿರ್ಮಾಣ

ಮುದ್ದೇಬಿಹಾಳ ಸಾರಿಗೆ ಘಟಕಕ್ಕೆ ಕೆಕೆಆರ್‌ಟಿಸಿ ಎಂ.ಡಿ ಭೇಟಿ: 40 ಲಕ್ಷ ರೂ.ವೆಚ್ಚದಲ್ಲಿ ನಿಲ್ದಾಣದ ಕಾಂಕ್ರಿಟ್,ಶೌಚಗೃಹ ನಿರ್ಮಾಣ

ಮುದ್ದೇಬಿಹಾಳ : ಪಟ್ಟಣದ ಸಾರಿಗೆ ಘಟಕದಲ್ಲಿ ಶೌಚಾಲಯ ನಿರ್ಮಾಣ ಹಾಗೂ ನಿಲ್ದಾಣದ ಆವರಣದಲ್ಲಿ ಕಾಂಕ್ರಿಟ್

ಮುಳುಗಡೆ ಸಂತ್ರಸ್ತ ರೈತರಿಗೆ ಎಕರೆಗೆ 35-40 ಲಕ್ಷ ಪರಿಹಾರ:                                                                           ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅಸಹಕಾರ : ಡಿಸಿಎಂ ಡಿ.ಕೆ.ಶಿ ಅಸಮಾಧಾನ

ಮುಳುಗಡೆ ಸಂತ್ರಸ್ತ ರೈತರಿಗೆ ಎಕರೆಗೆ 35-40 ಲಕ್ಷ ಪರಿಹಾರ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅಸಹಕಾರ : ಡಿಸಿಎಂ ಡಿ.ಕೆ.ಶಿ ಅಸಮಾಧಾನ

ವಿಜಯಪುರ : “ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲ. ಈ ಯೋಜನೆಗೆ

ನಾನು ಸಿದ್ಧರಾಮಯ್ಯ ಏಜೆಂಟ್ ಅಲ್ಲ-ಯತ್ನಾಳ ಖಡಕ್ ಮಾತು

ನಾನು ಸಿದ್ಧರಾಮಯ್ಯ ಏಜೆಂಟ್ ಅಲ್ಲ-ಯತ್ನಾಳ ಖಡಕ್ ಮಾತು

ವಿಜಯಪುರ : ನಾನು ಯೋಗ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಹಾಗೆಂದು ನಾನು ಸಿದ್ಧರಾಮಯ್ಯ ಏಜೆಂಟ್ ಅಲ್ಲ,ಹಿಂದೆ ಸಿದ್ಧರಾಮಯ್ಯ

ಮಹಿಳೆಯರು ಹಿಂದೂ ಸಮ್ಮೇಳನ ಯಶಸ್ವಿಗೊಳಿಸಿ-ಕಾಶೀಬಾಯಿ ರಾಂಪೂರ

ಮಹಿಳೆಯರು ಹಿಂದೂ ಸಮ್ಮೇಳನ ಯಶಸ್ವಿಗೊಳಿಸಿ-ಕಾಶೀಬಾಯಿ ರಾಂಪೂರ

ಮುದ್ದೇಬಿಹಾಳ : ಪಟ್ಟಣದಲ್ಲಿ ಜ.11 ರಂದು ನಡೆಯಲಿರುವ ಹಿಂದೂ ಮಹಾ ಸಮ್ಮೇಳನ ಯಶಸ್ವಿಗೊಳಿಸುವಂತೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕಿತ್ತೂರ ಕರ್ನಾಟಕ ಮಹಿಳಾ ಘಟಕದ ಅಧ್ಯಕ್ಷೆ ಕಾಶೀಬಾಯಿ ರಾಂಪೂರ ವಿನಂತಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮ್ಮೇಳನದಲ್ಲಿ ಎಲ್ಲ ಜಾತಿ ಜನಾಂಗದವರು ಪಾಲ್ಗೊಳ್ಳಲಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.ಹಿಂದೂ ಸಮ್ಮೇಳನದ ಅಂಗವಾಗಿ ವಿವಿಧ ಕಡೆಗಳಲ್ಲಿ ಸ್ವತಃ ತಿರುಗಾಡಿ ಸಮ್ಮೇಳನದ ಕರಪತ್ರಗಳನ್ನು ವಿತರಿಸಿ ಸಮ್ಮೇಳನಕ್ಕೆ ಆಹ್ವಾನಿಸಿದ್ದಾರೆ.

ಜನಪರ ಸೇವೆಯಲ್ಲಿ ಅಸ್ಕಿ ಫೌಂಡೇಶನ್ ಸದಾ ಮುಂದೆ-ಸಿದ್ಧಲಿಂಗ ದೇವರು

ಜನಪರ ಸೇವೆಯಲ್ಲಿ ಅಸ್ಕಿ ಫೌಂಡೇಶನ್ ಸದಾ ಮುಂದೆ-ಸಿದ್ಧಲಿಂಗ ದೇವರು

ತಾಳಿಕೋಟಿ :  ಕೊಡುಗೈ ದಾನಿಗಳಲ್ಲಿ ಈ ಭಾಗದಲ್ಲಿ ಒಳ್ಳೆಯ ಹೆಸರು ಸಂಪಾದಿಸಿರುವ ಸಿ.ಬಿ.ಅಸ್ಕಿ ಅವರ ನೇತೃತ್ವದಲ್ಲಿ ಅಸ್ಕಿ ಫೌಂಡೇಶನ್ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಪೀಠಾಧಿಕಾರಿ ಸಿದ್ಧಲಿಂಗ ದೇವರು ನುಡಿದರು.        ತಾಳಿಕೋಟಿ ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಗುರುವಾರ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.         ಮಠದ ಆಡಳಿತಾಧಿಕಾರಿ ವೇ.ಮರುಗೇಶ ವಿರಕ್ತಮಠ ಮಾತನಾಡಿ, ಹಣವುಳ್ಳವರು ಸಮಾಜದಲ್ಲಿ