ಪ್ರಚಾರಕ್ಕೆ ಸೀಮಿತವಾದ ಪ್ರವೇಶ ಪರೀಕ್ಷೆ ?: 3,555 ವಿದ್ಯಾರ್ಥಿಗಳಲ್ಲಿ ನಾಲ್ವರಿಗೆ ಮಾತ್ರ ಉಚಿತ ಶಿಕ್ಷಣದ ಭರವಸೆ..!

ಪ್ರಚಾರಕ್ಕೆ ಸೀಮಿತವಾದ ಪ್ರವೇಶ ಪರೀಕ್ಷೆ ?: 3,555 ವಿದ್ಯಾರ್ಥಿಗಳಲ್ಲಿ ನಾಲ್ವರಿಗೆ ಮಾತ್ರ ಉಚಿತ ಶಿಕ್ಷಣದ ಭರವಸೆ..!

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ) : ತಮ್ಮ ಮಕ್ಕಳು ಡಾಕ್ಟರ್ ಆಗಬೇಕು, ಎಂಜೀನಿಯರ್ ಆಗಬೇಕು ಎಂಬ ಆಸೆ ಇಟ್ಟುಕೊಂಡು ಮಕ್ಕಳ ಪ್ರತಿಭೆ ಅನಾವರಣಗೊಳ್ಳುತ್ತದೆ, ಉತ್ತಮ ಭವಿಷ್ಯ ರೂಪಿಸಲು ಹಲವಾರು ಕನಸುಗಳನ್ನು ಕಟ್ಟಿಕೊಂಡು ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿಗೆ ಭಾನುವಾರ ಆಗಮಿಸಿದ್ದ ಮೂರು ಸಾವಿರಕ್ಕೂ ಅಧಿಕ ಸಂಖ್ಯೆಯ ಪಾಲಕರಿಗೆ ಭಾನುವಾರ ನಿರಾಸೆ ಅನುಭವಿಸಬೇಕಾಯಿತು.

ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಟ್ಯಾಲೆಂಟ್ ಸರ್ಚ್ ಪರೀಕ್ಷೆ ನಿಜವಾಗಲೂ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕೆ ರೂಪಿಸಿದ ಪರೀಕ್ಷೆಯೋ ಅಥವಾ ಕಾಲೇಜಿನ ಪ್ರಚಾರಕ್ಕೆಂದು ರೂಪಿಸಿದ ಕಾರ್ಯಕ್ರಮವೋ ಎಂಬುದು ಗೊತ್ತಾಗಲಿಲ್ಲ ಎಂದು ದಾವಣಗೆರೆಯಿಂದ ಬಂದಿದ್ದ ಪಾಲಕರೊಬ್ಬರು ದೂರಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ 3555 ವಿದ್ಯಾರ್ಥಿಗಳು, ಅವರೊಂದಿಗೆ ಪಾಲಕರು ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಕಾಲೇಜಿನಿಂದ ಮುಂಚಿತವಾಗಿ ಪ್ರಕಟಣೆ ಕೊಟ್ಟಂತೆ ನಿಗದಿತ ಶೇ.ವಾರು ಅಂಕ ಪಡೆದುಕೊಳ್ಳುವಲ್ಲಿ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು ವೈಫಲ್ಯತೆ ಅನುಭವಿಸಿದರು.

ಫಲಿತಾಂಶ ಪ್ರಕಟಿಸುವ ಸಮಯದಲ್ಲಿ ಆರಂಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ್, 3555 ವಿದ್ಯಾರ್ಥಿಗಳಲ್ಲಿ ಕೇವಲ ನಾಲ್ವರಿಗೆ ಎರಡು ವರ್ಷದ ಉಚಿತ ಊಟ, ವಸತಿ,ಶಿಕ್ಷಣ ನೀಡುವುದಾಗಿ ಹೇಳಿ ಹುನಗುಂದ ಆರ್.ಎಂ.ಎಸ್.ಎ ಶಾಲೆಯ ಮಲ್ಲಿಕಾರ್ಜುನ ಕತನಿ(ಶೇ.58.33),ಶಹಾಪೂರಿನ ನಿಸರ್ಗ ಪೊಲೀಸಪಾಟೀಲ (ಶೇ.49.58),ಮುಂಡರಗಿ ಆರ್.ಎಂ.ಎಸ್.ಎ ಶಾಲೆಯ ಕಾವ್ಯಾ ಉಪ್ಪಾರ (ಶೇ.46.66), ಆತನೂರು ಆರ್.ಎಂ.ಎಸ್.ಎ ಶಾಲೆಯ ನಾಗೇಶ ಬಡಿಗೇರ(ಶೇ.46.25) ಅವರ ಹೆಸರುಗಳನ್ನು ಘೋಷಿಸಲಾಯಿತು.

ಇದಾದ ಬಳಿಕ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ್ ಮತ್ತೆ ಮಧ್ಯೆಪ್ರವೇಶಿಸಿ, ಫಲಿತಾಂಶ ಪ್ರಕಟಿಸುತ್ತಿದ್ದ ಆಕ್ಸಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಗುರು ಇಸ್ಮಾಯಿಲ್ ಮನಿಯಾರ ಅವರಿಂದ ಅತೀ ಹೆಚ್ಚು ಅಂಕ ಪಡೆದ ಮೊದಲ 16 ವಿದ್ಯಾರ್ಥಿಗಳ ಹೆಸರುಗಳನ್ನು ಘೋಷಿಸಿದರು.ಅಲ್ಲದೇ ಅವರಿಗೆ ಪ್ರವೇಶ ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿಯೂ ತಿಳಿಸಿದರು.ಆದರೆ ಎಷ್ಟು ರಿಯಾಯಿತಿ ಕೊಡಲಾಗುತ್ತದೆ ಎಂಬುದನ್ನು ಬಹಿರಂಗವಾಗಿ ಹೇಳಲಿಲ್ಲ.ಒಟ್ಟಾರೆ ಟ್ಯಾಲೆಂಟ್ ಸರ್ಚ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಋಣಾತ್ಮಕ ಅಂಕಗಳನ್ನು ಇಟ್ಟಿದ್ದು ಹಾಗೂ ಪ್ರಶ್ನೆಗಳು ಅತೀ ಕಠಿಣವಾಗಿದ್ದರಿಂದಲೇ ವಿದ್ಯಾರ್ಥಿಗಳು ನಿರೀಕ್ಷಿತ ಅಂಕ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.ಸಂಸ್ಥೆಯವರಿAದ ಇದೊಂದು ಪ್ರಚಾರದ ಗಿಮಿಕ್ ಆಯಿತೇ ? ಎಂಬ ಮಾತುಗಳು ಪರೀಕ್ಷೆಗೆ ದೂರದ ಧಾರವಾಡ, ಬಾಗಲಕೋಟ,ವಿಜಯಪುರ,ಯಾದಗಿರಿ,ಕೊಪ್ಪಳ, ಗದಗ, ಗಂಗಾವತಿ ಭಾಗಗಳಿಂದ ಬಂದಿದ್ದ ಪೋಷಕರಿಂದ ಕೇಳಿ ಬಂದವು.

Latest News

ಹೆಸರು ನೋಂದಾಯಿಸಲು ಸೂಚನೆ:ಮಾ.21 ರಂದು ಉಚಿತ ಸಾಮೂಹಿಕ ವಿವಾಹ

ಹೆಸರು ನೋಂದಾಯಿಸಲು ಸೂಚನೆ:ಮಾ.21 ರಂದು ಉಚಿತ ಸಾಮೂಹಿಕ ವಿವಾಹ

ಮುದ್ದೇಬಿಹಾಳ : ಈಗಾಗಲೇ ತಾಲ್ಲೂಕಿನಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಕಡು ಬಡವರ ಮಕ್ಕಳಿಗೆ ಕೋವಿಡ್

‘ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಅಪ್ಪಂದಿರ,ಅಜ್ಜoದಿರ ಫೋಟೋ ಬೇಡ’

‘ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಅಪ್ಪಂದಿರ,ಅಜ್ಜoದಿರ ಫೋಟೋ ಬೇಡ’

ಮುದ್ದೇಬಿಹಾಳ : ಸೈನ್ಯಕ್ಕೆ ಸೇರುವವರು ಬಡವರ ಮಕ್ಕಳು ಎಂದು ಕೆಲವು ರಾಜಕಾರಣಿಗಳು ಕೆಲವೆಡೆ ಹೇಳಿಕೆ

ಛತ್ರಪತಿ ಶಿವಾಜಿ ಜಯಂತಿ:                                              ಶಿವಾಜಿ ಮಹಾರಾಜರ ಆದರ್ಶ ಮಕ್ಕಳಲ್ಲಿ ಬೆಳೆಸಿ

ಛತ್ರಪತಿ ಶಿವಾಜಿ ಜಯಂತಿ: ಶಿವಾಜಿ ಮಹಾರಾಜರ ಆದರ್ಶ ಮಕ್ಕಳಲ್ಲಿ ಬೆಳೆಸಿ

ಮುದ್ದೇಬಿಹಾಳ : ಪ್ರಜೆಗಳ ಹಿತರಕ್ಷಣೆಗಾಗಿ ಪ್ರಾಣ ಕೊಡಲು ಲೆಕ್ಕಿಸದ ಧೀರ ಹೋರಾಟಗಾರ ಛತ್ರಪತಿ ಶಿವಾಜಿ

ಮುದೂರಿನಲ್ಲಿ ಸಂತಕವಿ ಸರ್ವಜ್ಞ ಜಯಂತಿ ಆಚರಣೆ

ಮುದೂರಿನಲ್ಲಿ ಸಂತಕವಿ ಸರ್ವಜ್ಞ ಜಯಂತಿ ಆಚರಣೆ

ಮುದ್ದೇಬಿಹಾಳ : ತಾಲೂಕಿನ ಮುದೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂತಕವಿ ಸರ್ವಜ್ಞ ಮಹರ್ಷಿಯ

ಜೆಇಇ-1 ಪರೀಕ್ಷೆ ಫಲಿತಾಂಶ :                                  ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಜಿಲ್ಲೆಯ ಟಾಪ್-3 ಸ್ಥಾನ

ಜೆಇಇ-1 ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಜಿಲ್ಲೆಯ ಟಾಪ್-3 ಸ್ಥಾನ

ಮುದ್ದೇಬಿಹಾಳ : ಜೆಇಇ ಸೆಷನ್-1 ರ ಪರೀಕ್ಷೆಯಲ್ಲಿ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಅಭಿಷೇಕ ಎಸ್.ಟಕ್ಕಳಕಿ ಶೇ.99.28, ಅದಿತಿ ಸವಣೂರ ಶೇ.99.23 ಹಾಗೂ ಪ್ರೀತಮ ಲಮಾಣಿ ಶೇ.99.12 ರಷ್ಟು ಪರ್ಸೆಂಟೈಲ್ ಅಂಕ ಪಡೆದು ಜಿಲ್ಲೆಗೆ ಕ್ರಮವಾಗಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಜೆಇಇ ಪರೀಕ್ಷೆ ಫಲಿತಾಂಶದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮೀತಗೌಡ

ಫೆ.19 ರಂದು ನೌಕಾಪಡೆ ನಿವೃತ ಯೋಧ ಸತೀಶ ನಾಯ್ಕಗೆ ಅಭಿನಂದನಾ ಸಮಾರಂಭ

ಫೆ.19 ರಂದು ನೌಕಾಪಡೆ ನಿವೃತ ಯೋಧ ಸತೀಶ ನಾಯ್ಕಗೆ ಅಭಿನಂದನಾ ಸಮಾರಂಭ

ಮುದ್ದೇಬಿಹಾಳ : 15 ವರ್ಷಗಳ ಕಾಲ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ಮರಳಿ ತವರಿಗೆ ಆಗಮಿಸುತ್ತಿರುವ ತಾಲ್ಲೂಕಿನ ಜಟ್ಟಗಿ ತಾಂಡಾದ ಸತೀಶ ನಾಯ್ಕ ಅವರ ಅಭಿನಂದನಾ ಸಮಾರಂಭ ಫೆ.19 ರಂದು ಪಟ್ಟಣದಲ್ಲಿ ಅವರ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದೆ. ಅಂದು ಮದ್ಯಾಹ್ನ 3ಕ್ಕೆ ಪಟ್ಟಣದ ಮಾರುತೇಶ್ವರ ದೇವಸ್ಥಾನದಿಂದ ತೆರೆದ ವಾಹನದಲ್ಲಿ ನಿವೃತ್ತ ಯೋಧ ಸತೀಶ ನಾಯ್ಕ ಅವರ ಮೆರವಣಿಗೆ ಆರಂಭಗೊಳ್ಳಲಿದ್ದು ಪ್ರಮುಖ ಬೀದಿಯಲ್ಲಿ ಹೊರಟು ಸೈನಿಕ ಮೈದಾನ ತಲುಪಿ, ಬಳಿಕ ಹಳೆ ತಹಶಿಲ್ದಾರ