ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕಾರ್ಯಕ್ಕೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು,ಎಸ್.ಡಿ.ಎಗಳನ್ನು ನಿಯೋಜಿಸಿರುವುದನ್ನು ಕೈ ಬಿಡಬೇಕು ಎಂದು ತಹಸೀಲ್ದಾರ್ರಗೆ ಗ್ರಾಪಂ ನೌಕರರು ಗುರುವಾರ ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಗ್ರಾಪಂ ನೌಕರರು, ತಹಸೀಲ್ದಾರ್ ಕೀರ್ತಿ ಚಾಲಕ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಗ್ರಾಮ ಪಂಚಾಯಿತಿಗೆ ಸಂಬAಧಿಸಿದAತೆ ಸಾಮಾನ್ಯ ಸಭೆ ನಿರ್ವಹಣೆ, ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿ,ಕರ ವಸೂಲಾತಿ ಆಂದೋಲನ, ಇಸ್ವತ್ತು ಉತಾರೆ ಜನನ-ಮರಣ ಉತಾರೆ ವಿತರಿಸುವುದು ಅವಶ್ಯವಿರುತ್ತದೆ.ಒಂದುವೇಳೆ ನಾವು ಪಂಚಾಯಿತಿಯಲ್ಲಿ ಇಲ್ಲದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.ರೈತರಿಗೆ ಸಂಬAಧಿಸಿದAತೆ ಬೆಳೆ ಕಟಾವು ಮಾಡುವುದು, ಇಲಾಖೆಯ ಆನಲೈನ್ ಸೇವೆಗಳು ನಿರ್ವಹಿಸುವುದು,ಸೆ.17 ರಿಂದ ಅ.2ರವರೆಗೆ ಗಾಂಧೀಜಿ ಜಯಂತಿ ನಿಮಿತ್ಯ ವಿಶೇಷ ಅಭಿಯಾನ ಸ್ವಚ್ಛತಾ ಅಭಿಯಾನ,ವಾರ್ಡಸಭೆ, ಗ್ರಾಮಸಭೆ ನಡೆಸಿ ತಾಪಂ ಕಚೇರಿಗೆ ಸಲ್ಲಿಸುವ ಜವಾಬ್ದಾರಿ ಕಾರ್ಯದರ್ಶಿಗಳು,ಎಸ್ಡಿಎಗಳಿಗೆ ಇರುತ್ತದೆ.ಆದ್ದರಿಂದ ಈ ಎಲ್ಲ ಕೆಲಸಗಳ ಒತ್ತಡದ ಮಧ್ಯೆ ನಮಗೆ ತರಬೇತಿಯನ್ನೂ ನೀಡದೇ ಕೇಂದ್ರಸ್ಥಾನದಲ್ಲಿಯೇ ಸಮೀಕ್ಷೆಗೆ ನಿಯೋಜಿಸದೇ ಬೇರೊಂದು ಸ್ಥಳಕ್ಕೆ ನೇಮಿಸಿರುವುದು ಹತ್ತಾರು ತೊಂದರೆಗೆ ಕಾರಣವಾಗುತ್ತದೆ.ಕೂಡಲೇ ಸಮೀಕ್ಷೆ ಕಾರ್ಯದಿಂದ ಗ್ರಾಪಂ ಕಾರ್ಯದರ್ಶಿ,ಎಸ್.ಡಿ.ಎ ಅವರನ್ನು ಕೈ ಬಿಡಬೇಕು ಎಂದು ವಿನಂತಿಸಿದರು.
ಮನವಿ ಸಲ್ಲಿಕೆ ಸಮಯದಲ್ಲಿ ಎಸ್.ವಾಯ್.ದ್ಯಾಮಗೊಂಡ, ಅಶೋಕ ಕೊರವೇರ, ಎ.ಎಸ್.ಬಿರಾದಾರ, ರಂಗರಾಜು, ಪಿ.ವಾಯ್.ಚಲವಾದಿ, ಜಿ.ಎಲ್.ಬಿರಾದಾರ, ಸಿ.ಬಿ.ಹೊಳಿ, ಟಿ.ಎಂ.ಕೋಲಕಾರ, ಎಸ್.ಎಸ್.ಬಂಗಾರಗುAಡ ,ಯಮನೂರಿ ಲಮಾಣಿ, ಸಿ.ಎನ್.ಊರನ್ನವರ,ಜಿ.ಎಸ್.ಬಿರಾದಾರ,ಬಿ.ಬಿ.ಬಿರಾದಾರ, ರವಿಕಾಂತ ಮೇಟಿ, ಬಾಬು ಪೋತೆಗೋಳ ಇದ್ದರು.