ಮುದ್ದೇಬಿಹಾಳ : ‘ಕೆಲವರು ನಾನು ಡಿಕೆಶಿ ಲಿಸ್ಟ್’ನಲ್ಲಿರುವೆ,ಇನ್ನು ಕೆಲವರು ಸಿದ್ಧರಾಮಯ್ಯ ಲಿಸ್ಟ್’ನಲ್ಲಿರುವೆ ಎನ್ನುತ್ತಿದ್ದಾರೆ.ನಾನು ಅವರಿಬ್ಬರ ಜೊತೆಗೆ ಖರ್ಗೆ ಲಿಸ್ಟ್’ನಲ್ಲಿ ಇದ್ದೇನೆ.ಕಾಂಗ್ರೆಸ್ ಹೈಕಮಾಂಡ್ ಲಿಸ್ಟ್’ನಲ್ಲೂ ಇದ್ದೇನೆ’ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ತಾಲ್ಲೂಕಿನ ಹಡಲಗೇರಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ,ಪಂಚಾಯತ್ ರಾಜ್ ಇಂಜಿನಿಯರಿOಗ್ ವಿಭಾಗದ ನೇತೃತ್ವದಲ್ಲಿ 1.50 ಕೋಟಿ ರೂ.ವೆಚ್ಚದಲ್ಲಿ ಹಡಲಗೇರಿ-ಆಲಮಟ್ಟಿ ಮುಖ್ಯರಸ್ತೆ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಡಿಕೆಶಿ,ಸಿದ್ಧರಾಮಯ್ಯ ಮಧ್ಯೆ ಹಾಗೆ ಹೀಗೆ ಎಂದು ಟಿವಿಯವರು ಬಿಂಬಿಸಿದರು. ಆದರೆ ಹೈಕಮಾಂಡ್ ಹೇಳಿದಂತೆ ಅವರು ಕೇಳುವುದಾಗಿ ಹೇಳಿದ್ದಾರೆ.ಸರ್ಕಾರ ಗಟ್ಟಿಯಾಗಿದೆ.134 ಶಾಸಕರು ಜೊತೆಗೆ ಇದ್ದು ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರದ್ದು ರಾಜ್ಯಗಳಲ್ಲಿ ಗಲಾಟೆ ಉಂಟು ಮಾಡುವ ಉದ್ದೇಶ ಹೊಂದಿದೆ ಎಂಬುದಕ್ಕೆ ಕಬ್ಬಿನ ಬೆಳೆಯ ಬೆಲೆಗಾಗಿ ನಡೆದ ಹೋರಾಟ ನಿದರ್ಶನ.ಬೆಂಬಲ ಬೆಲೆ ನಿಗದಿ ಮಾಡುವ ಅಧಿಕಾರ ಕೇಂದ್ರಕ್ಕಿದ್ದರೂ ರಾಜ್ಯ ಸರ್ಕಾರದ ಮೇಲೆ ಬೆರಳು ಮಾಡುವ ಕೆಟ್ಟ ಪ್ರವೃತ್ತಿ ಕೇಂದ್ರ ಸರ್ಕಾರದ್ದು ಎಂದು ಟೀಕಿಸಿದರು.
ಬೆಳೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಿಎಂ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದೇ ಅನ್ಯಾಯ,ತಾರತಮ್ಯ ಮಾಡುವುದಿಲ್ಲ.ಈಗಾಗಲೇ ರೈತರ ಖಾತೆಗಳಿಗೆ ಬೆಳೆ ಪರಿಹಾರದ ಹಣ ಜಮೆ ಮಾಡಿದೆ ಎಂದು ತಿಳಿಸಿದರು.
ಮುಖಂಡ ಬಿ.ಆರ್.ನಾಡಗೌಡ,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸಂತೋಷ ಚವ್ಹಾಣ(ಹುಲ್ಲೂರ),ಹಣಮಂತ ತಳ್ಳೀಕೇರಿ,ಗ್ರಾಪಂ ಅಧ್ಯಕ್ಷೆ ಲಕ್ಷಿö್ಮÃಬಾಯಿ ಬಿರಾದಾರ,ಉಪಾಧ್ಯಕ್ಷ ಅಬ್ದುಲರಜಾಕ್ ಮೊಕಾಶಿ, ಸಿದ್ದನಗೌಡ ಬಗಲಿ,ಶಿವಪುತ್ರ ಹರಿಂದ್ರಾಳ, ಮೌನೇಶ ಮಾದರ,ಮುತ್ತಪ್ಪ ಮುರಾಳ,ಗುತ್ತಿಗೆದಾರರಾದ ಯಲ್ಲಪ್ಪ ಚಲವಾದಿ, ಭೀಮಣ್ಣ ಹರಿಂದ್ರಾಳ, ಹಣಮಂತ ಖಿಲಾರಟ್ಟಿ,ಬಡಕಪ್ಪ ಹರಿಂದ್ರಾಳ,ತಾಪA ಅಧಿಕಾರಿ ಎಸ್.ಎಸ್.ಗಣಾಚಾರಿ, ನಾಗರಾಜ ಕುಲಕರ್ಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







