ಇಂಗಳಗೇರಿ ಗ್ರಾ.ಪಂಗೆ ಮಾಲಗತ್ತಿ ಅಧ್ಯಕ್ಷ,ಶೀಲವಂತಿ ಉಪಾಧ್ಯಕ್ಷೆ

ಇಂಗಳಗೇರಿ ಗ್ರಾ.ಪಂಗೆ ಮಾಲಗತ್ತಿ ಅಧ್ಯಕ್ಷ,ಶೀಲವಂತಿ ಉಪಾಧ್ಯಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ಇಂಗಳಗೇರಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಪ್ರಕಾಶ ಮಾಲಗತ್ತಿ ಒಂದು ಮತದ ಅಂತರದಿAದ ಪೀರಣ್ಣಿ ಕೆಳಗಿನಮನಿ ಅವರ ವಿರುದ್ಧ ಜಯಸಾಧಿಸಿದರು.

ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಚುನಾವಣೆ ಪ್ರಕ್ರಿಯೆಲ್ಲಿ 15 ಸದಸ್ಯ ಬಲದಲ್ಲಿ ಎಲ್ಲ ಸದಸ್ಯರು ಹಾಜರಾಗಿದ್ದರು.ಎರಡೂ ಬಣದವರು ಕಾಂಗ್ರೆಸ್ ಪಕ್ಷದ ಬೆಂಬಲಿತರೇ ಆಗಿದ್ದರೂ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಮಾಲಗತ್ತಿ, ಪಿರಣ್ಣಿ ಕೆಳಗಿನಮನಿ ನಾಮಪತ್ರ ಸಲ್ಲಿಸಿದ್ದರು.ಅದರಲ್ಲಿ ಚುನಾವಣಾಧಿಕಾರಿಯೂ ಆಗಿದ್ದ ತಾಪಂ ಇಒ ವೆಂಕಟೇಶ ವಂದಾಲ, ಸದಸ್ಯರ ಸಹಮತದೊಂದಿಗೆ ಗೌಪ್ಯ ಮತದಾನ ಮಾಡುವ ತೀರ್ಮಾನದಂತೆ ಸದಸ್ಯರು ಗೌಪ್ಯವಾಗಿ ಮತ ಚಲಾಯಿಸಿದರು.ಅದರಲ್ಲಿ ಪ್ರಕಾಶ ಮಾಲಗತ್ತಿ ಅವರಿಗೆ 8, ಪೀರಣ್ಣಿ ಕೆಳಗಿನಮನಿ ಅವರಿಗೆ 7 ಮತಗಳು ಲಭಿಸಿ ಸೋಲನುಭವಿಸಿದರು.

ಉಪಾಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿದ್ದರಿಂದ ಶೀಲವಂತಿ ಮಾದರ ಒಬ್ಬರೇ ಸದಸ್ಯೆಯಾಗಿದ್ದು ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.ಚುನಾವಣಾ ಕಾರ್ಯಕ್ಕೆ ಪಿಡಿಒ ಮುಕ್ಕಣ್ಣ ನಾಯಕ,ಕಾರ್ಯದರ್ಶಿ ಜಿ.ಎಲ್.ಬಿರಾದಾರ,ಸಿಬ್ಬಂದಿ ಎಸ್.ಆಯ್.ಹೆಬ್ಬಾಳ,ಬಿ.ಎಲ್.ಮಾದರ,ಸಿ.ಎಸ್.ಬೇವಿನಗಿಡ,ಸಂಗಪ್ಪ ತಳವಾರ,ಕಾಶೀನಾಥ ಮಾದರ ಸಹಕಾರ ನೀಡಿದರು.


ಚುನಾವಾಣಾಧಿಕಾರಿಯೊಂದಿಗೆ ವಾಗ್ವಾದ :
ಪರಾಜಿತ ಅಭ್ಯರ್ಥಿ ಪಿರಣ್ಣಿ ಕೆಳಗಿನಮನಿ ಚುನಾವಣೆಯಲ್ಲಿ ತಮ್ಮ ಜೊತೆಗೆ ಗುರುತಿಸಿಕೊಂಡಿದ್ದ ಸದಸ್ಯರೊಬ್ಬರನ್ನು ಹೈಜಾಕ್ ಮಾಡಲಾಗಿದೆ ಎಂದು ಆರೋಪಿಸಿ ಗೌಪ್ಯ ಮತದಾನದ ವೇಳೆ ದಾರಿ ತಪ್ಪಿಸಲಾಗಿದೆ ಎಂದು ಚುನಾವಣಾಧಿಕಾರಿ ವೆಂಕಟೇಶ ವಂದಾಲ ಅವರೊಂದಿಗೆ ವಾಗ್ವಾದ ನಡೆಸಿದರು.ಚುನಾವಣಾಧಿಕಾರಿ ವಂದಾಲ ಚುನಾವಣಾ ಪ್ರಕ್ರಿಯೆಗಳ ಕುರಿತು ಆಕ್ರೋಶಗೊಂಡಿದ್ದ ಕೆಳಗಿನಮನಿ ಬೆಂಬಲಿಗರಿಗೆ ಮನವರಿಕೆ ಮಾಡಿದ ಬಳಿಕ ಪ್ರತಿಭಟಿಸಲು ಮುಂದಾದವರು ಸಮಾಧಾನಗೊಂಡರು.ಪಿಎಸೈ ಜ್ಯೋತಿ ಖೋತ ,ಎ.ಎಸ್.ಐ ಪಿ.ಬಿ.ದೊಡಮನಿ, ಸಿಬ್ಬಂದಿ ಬಿಗಿ ಬಂದೋಬಸ್ತ್ ವಹಿಸಿದ್ದರು.

Latest News

TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಧಾರವಾಡ ಅ.27: ಸುಮಾರು ವರ್ಷಗಳ ನಂತರ ಪ್ರಥಮ ಬಾರಿಗೆ ಜಿಲ್ಲಾ ಅಭಿವೃದ್ಧಿ ಯೋಜನೆ ರೂಪಿಸಲು

ಮುದ್ದೇಬಿಹಾಳ : TAPCMS  ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ :            ಕರ್ನಾಟಕ ತಂಡಕ್ಕೆ ಮುದ್ದೇಬಿಹಾಳದ ಮೂವರು ಆಟಗಾರರ ಆಯ್ಕೆ

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ : ಕರ್ನಾಟಕ ತಂಡಕ್ಕೆ ಮುದ್ದೇಬಿಹಾಳದ ಮೂವರು ಆಟಗಾರರ ಆಯ್ಕೆ

ಮುದ್ದೇಬಿಹಾಳ : ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ

ಸಚಿವ ಖರ್ಗೆಗೆ ಬೆದರಿಕೆಗೆ ಖಂಡನೆ :                       ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸದವರಿಂದ ದೇಶಪ್ರೇಮದ ಪಾಠ-ಸದ್ದಾಂ ಕುಂಟೋಜಿ ವ್ಯಂಗ್ಯ

ಸಚಿವ ಖರ್ಗೆಗೆ ಬೆದರಿಕೆಗೆ ಖಂಡನೆ : ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸದವರಿಂದ ದೇಶಪ್ರೇಮದ ಪಾಠ-ಸದ್ದಾಂ ಕುಂಟೋಜಿ ವ್ಯಂಗ್ಯ

ಮುದ್ದೇಬಿಹಾಳ : ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎನ್.ಎಸ್.ಯೂ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ ಒತ್ತಾಯಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಖರ್ಗೆಯವರು ತಮ್ಮ ಪತ್ರದಲ್ಲಿ ಎಲ್ಲಿಯೂ ಆರ್.ಎಸ್.ಎಸ್ ನಿಷೇಧಿಸಬೇಕು ಎಂದು ಹೇಳಿರಲಿಲ್ಲ.ಆದರೆ ಆ ಸಂಘಟನೆಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ತಿಳಿಸಿದ್ದರು.ಇದರ ಬಳಿಕ ಕೆಲವರು ಸಚಿವ ಖರ್ಗೆ ಅವರಿಗೆ ಕರೆ

ತಾ.ಪಂ ಕಾನೂನು ಸಲಹೆಗಾರರಾಗಿ ಎನ್.ಬಿ.ಮುದ್ನಾಳ ನೇಮಕ

ತಾ.ಪಂ ಕಾನೂನು ಸಲಹೆಗಾರರಾಗಿ ಎನ್.ಬಿ.ಮುದ್ನಾಳ ನೇಮಕ

ಮುದ್ದೇಬಿಹಾಳ : ಶಾಸಕ ಸಿ.ಎಸ್.ನಾಡಗೌಡ ಶಿಫಾರಸ್ಸಿನ ಮೇರೆಗೆ ಇಲ್ಲಿನ ಹಿರಿಯ ವಕೀಲರಾದ ಎನ್.ಬಿ.ಮುದ್ನಾಳ ಅವರನ್ನು ಮುದ್ದೇಬಿಹಾಳ ತಾಲ್ಲೂಕು ಪಂಚಾಯತನ ಕಾನೂನು ಸಲಹೆಗಾರರಾಗಿ ನೇಮಿಸಿರುವುದಾಗಿ ತಾಪಂ ಇಒ ಜಿ.ಪಂ ಸಿಇಒಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.