Kalburgi: Honeytrap racket, arrest of accused

Kalburgi: ಹನಿಟ್ರ್ಯಾಪ್ ದಂಧೆ, ಆರೋಪಿಗಳ ಬಂಧನ

Kalburgi: ಹನಿಟ್ರ್ಯಾಪ್ ದಂಧೆ, ಆರೋಪಿಗಳ ಬಂಧನ

ಕಲಬುರಗಿ: ಅಮಾಯಕ ಯುವತಿಯರನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಪರಿಚಯಿಸಿಕೊಂಡು ಕಲಬುರಗಿಯಲ್ಲಿನ ಸರಕಾರಿ ಅಧಿಕಾರಿಗಳ, ಉದ್ಯಮಿಗಳಿಗೆ ಹನಿಟ್ರ್ಯಾಪ್ ಮಾಡಿ ಲಕ್ಷ ಲಕ್ಷ ಹಣ ವಸೂಲಿ ಮಾಡುವ ದಂಧೆ ಎಗ್ಗಿಲ್ಲದೆ ಸಾಗಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

10ಕ್ಕೂ ಅಧಿಕ ಅಮಾಯಕ ಯುವತಿಯರನ್ನು ಬಳಸಿಕೊಂಡು ಹನಿಟ್ರಾಪ್ ದಂಧೆ ಮಾಡುತ್ತಿರುವ ಗ್ಯಾಂಗ್‌ನ ರಾಜು ಲೇಂಗಟಿ ಸೇರಿದಂತೆ 4 ಜನರ ವಿರುದ್ಧ ಇದೀಗ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನುಳಿದ, ಗ್ಯಾಂಗ್ ನ ಸದಸ್ಯರ ಹುಡುಕಾಟಕ್ಕಾಗಿ ಪೊಲೀಸರು ತಮ್ಮ ಜಾಲವನ್ನು ಬಿಸಾಡಿದ್ದಾರೆ.

ದಲಿತ ಸೇನೆಯ ಮುಖಂಡನ ಬಂಧನ:

ಯುವತಿಯರನ್ನು ಬಳಸಿಕೊಂಡು ಸರಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಆರೋಪದ ಹಿನ್ನಲೆಯಲ್ಲಿ ದಲಿತ ಸೇನೆಯ ಮುಖಂಡ ರಾಜು ಲೇಂಗಟಿ ಅವರನ್ನು ಇದೀಗ ಪೊಲೀ ಸರು ಬಂಧನ ಮಾಡಿದ್ದಾರೆ.

ಆಡಿಯೊ ಬಿಡುಗಡೆ:

ಕಲಬುರಿಗಿಯಲ್ಲಿ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ರಾಜು ಬೇಂಗಟಿ ಹಾಗೂ ಸಂತ್ರಸ್ತ ಯುವತಿಯ ನಡುವಿನ ಮಾತುಕತೆಯ ಅಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉದ್ಯಮಿಯೊಬ್ಬರ ಬಳಿ ಪಡೆದಿರುವ ಹಣದ ಕುರಿತಾಗಿ ಆರೋಪಿ ರಾಜು ಲೇಂಗಟಿ ಆಡಿಯೋದಲ್ಲಿ ಮಾತನಾಡಿದ್ದು, ಇದೀಗ ಬಹಿರಂಗವಾಗಿದೆ. 40 ಲಕ್ಷ ಡೀಲ್ ನಲ್ಲಿ ಹಣದ ಬಗ್ಗೆ ಗೊಂದಲವನ್ನು ಸೃಷ್ಟಿ ಮಾಡಿಕೊಂಡಿರುವ ಹನಿಟ್ರಾಪ್ ಗ್ಯಾಂಗ್, ಆಡಿಯೊದಲ್ಲಿ ಎಲ್ಲವೂ ಮಾತನಾಡಿರುವುದು ಬೆಳಕಿಗೆ ಬಂದಿದೆ.

ಯುವತಿಯ ಜೊತೆಗೆ ಮಾತನಾಡುವಾಗಲೇ ಉದ್ಯಮಿಗೆ ಕರೆ ಮಾಡಿ ಡೀಲ್ ಹಣದ ಸ್ಪಷ್ಟತೆಯನ್ನು ಆರೋಪಿ ರಾಜು ಲೇಂಗಟಿ ನೀಡಿದ್ದಾನೆ. 40 ಲಕ್ಷ ಹಣ ಡೀಲ ಆಗಿದೆ. ಹತ್ತು ಲಕ ಹಣ ಈಗಾಗಲೇ ಕೊಟ್ಟಿದ್ದು, ಉಳಿದ ಹಣವನ್ನು ಆಮೇಲೆ ನೀಡುವುದಾಗಿ ಹೇಳಿದ್ದಾರೆ. ಎಲ್ಲರಿಗೂ ಎರಡು ಎರಡು ಲಕ್ಷ ಹಂಚಿಕೊಳ್ಳುವುದಾಗಿ ಅಂತ ಆಡಿಯೋದಲ್ಲಿ ರಾಜು ಮಾತನಾಡಿದ್ದು, ಪ್ರಭು ಹಿರೇಮಠ ನಿಮಗೆ ಗೊಂದಲ ಸೃಷ್ಟಿ ಮಾಡುತ್ತಿದ್ದಾನೆ ಎಂದು ಆಡಿಯೋ ಮಾಡಿ ಇದೀಗ ವಿವರಣೆ ನೀಡಿದೆ.

ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ:

ಅಮಾಯಕ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ

ಕರಾಳ ದಂಧೆಯ ಮುಖವಾಡ ಬಗೆದಷ್ಟೂ ಬಯಲಾಗುತ್ತಿದೆ. ಹನಿಟ್ರಾಪ್ ಪ್ರಕರಣದ ಆರೋಪಿ ಪ್ರಭು ಸ್ವಾಮಿ ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ್ದಾನೆ. ವಿಡಿಯೊ ಬಿಡುಗಡೆ ಮಾಡಿ, ಉದ್ಯಮಿಯಿಂದ ರಾಜು ಬೇಂಗತಿ ಅವರು 6 ಲಕ್ಷ ಹಣವನ್ನು ಪಡೆದು ನನ್ನ ಖಾತೆಗೆ ಆರ್ ಟಿ ಜಿ ಎಸ್ ಮೂಲಕ ಹಾಕಿದ್ದರು.

ಇದನ್ನೂ ಓದಿ: Shocking news: ಪತ್ನಿಯ ಹೆರಿಗೆ ಬಿಲ್ ಪಾವತಿಸಲು ಮಗನನ್ನೇ ಮಾರಲು ಮುಂದಾದ ತಂದೆ!

ಅದಾದ ಬಳಿಕ ನಮ್ಮ ಮಾವನ ಖಾತೆಗೆ 8 ಲಕ್ಷ ಹಣವನ್ನು ಪುನಃ ನೆಫ್ಟ್, ಆರ್‌ಟಿಜಿಎಸ್ ಮೂಲಕ ಹಾಕಿದ್ದಾರೆ. ಹೀಗೆ ನನ್ನ ಹಾಗೂ ನನ್ನ ಮಾವನ ಖಾತೆಗೆ ಹಾಕಿದ ಹಣವನ್ನು ರಾಜು ಲೇಂಗಟಿ ಅವರು ವಿತ್ ಡ್ರಾ ಮಾಡಿಕೊಂಡಿದ್ದಾರೆ. ಯಾರಿಗೋ ಕೊಡಬೇಕು ಅಂತ ಹೇಳಿ ನನ್ನ ಹಾಗೂ ನನ್ನ ಮಾವನ ಖಾತೆಗೆ ಹಾಕಿಸಿದ್ದು, ಹಣ ಹಾಕಿದ ಬಳಿಕ ಅವರೇ ವಿತ್ ಡ್ರಾ ಮಾಡಿಕೊಂಡಿದ್ದಾರೆ.ರಾಜು ಲೇಂಗಟಿ ಅವರನ್ನು ಕೇಳಿದಾಗ ಸಂಘಟನೆಯವರಿಗೆ ಕೊಡಬೇಕು ಎಂದು ಹೇಳಿದ್ದರು. ಸಾಲದಂತೆ ಹಣದ ವಿಚಾರದಲ್ಲಿ ಗಲಾಟೆ ಮಾಡಿ ನನ್ನ ಮೇಲೆ ಕೇಸ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಪ್ರಕರಣದ ಆರೋಪಿ ಪ್ರಭುಸ್ವಾಮಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದಾನೆ.

Latest News

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಮಾ.20 ರಂದು ನಡೆಯಲಿರುವ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಸರ್ವ

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ

ಮುದ್ದೇಬಿಹಾಳ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ಪಟ್ಟಣದ ಬಿದರಕುಂದಿ ರಸ್ತೆಯಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಫಲಿತಾಂಶ

ಅಭ್ಯುದಯ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ;                                                                                 ದ್ವಿತೀಯ ಪಿಯುಸಿ ಫಲಿತಾಂಶ : ಮುದ್ದೇಬಿಹಾಳಕ್ಕೆ ಆಸೀಫಾ ಪ್ರಥಮ

ಅಭ್ಯುದಯ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ; ದ್ವಿತೀಯ ಪಿಯುಸಿ ಫಲಿತಾಂಶ : ಮುದ್ದೇಬಿಹಾಳಕ್ಕೆ ಆಸೀಫಾ ಪ್ರಥಮ

ಮುದ್ದೇಬಿಹಾಳ : ಪಟ್ಟಣದ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.100ರಷ್ಟಾಗಿದೆ.ಪರೀಕ್ಷೆಗೆ

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಮುದ್ದೇಬಿಹಾಳ : ಬಡ,ಕೂಲಿ ಕಾರ್ಮಿಕರ ಪ್ರತಿಭಾವಂತ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳಲು ನಮ್ಮ ವಿದ್ಯಾಸಂಸ್ಥೆಯಿoದ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು,ಸಮಾಜ ಸೇವಕರಾದ ಎಂ.ಎನ್.ಮದರಿ ಹೇಳಿದರು. ಪಟ್ಟಣದ ಅಭ್ಯುದಯ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಹಿಲ್ಯಾದೇವಿ ಹೋಳ್ಕರ್ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅವರು ಮಾತನಾಡಿದರು.2017ರಿಂದ ಇಲ್ಲಿವರೆಗೆ ವಿವಿಧ ಸಾಧನೆಗಳನ್ನು ಶಾಲೆ ಮಾಡುತ್ತ ಬಂದಿದೆ.ಇಬ್ಬರು

ಜೀನಿಯಸ್ ಅವಾರ್ಡ್ ಪರೀಕ್ಷೆ: 187 MBBS  ವಿದ್ಯಾರ್ಥಿಗಳ ಸನ್ಮಾನ                                                                         ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಜ್ಞಾನದ ಜ್ಯೋತಿಯಾಗಿ ಬೆಳೆದಿದೆ-ನಡಹಳ್ಳಿ

ಜೀನಿಯಸ್ ಅವಾರ್ಡ್ ಪರೀಕ್ಷೆ: 187 MBBS ವಿದ್ಯಾರ್ಥಿಗಳ ಸನ್ಮಾನ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಜ್ಞಾನದ ಜ್ಯೋತಿಯಾಗಿ ಬೆಳೆದಿದೆ-ನಡಹಳ್ಳಿ

ಮುದ್ದೇಬಿಹಾಳ : ಮುದ್ದೇಬಿಹಾಳ ತಾಲ್ಲೂಕು ಗುರುತಿಸಿಕೊಳ್ಳುವುದೇ ನಾಗರಬೆಟ್ಟದ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಾಧನೆಯ ಕಾರಣಕ್ಕಾಗಿ.ಈ ಭಾಗದಲ್ಲಿ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಜ್ಞಾನದ ಜ್ಯೋತಿಯಾಗಿ ಬೆಳೆದಿದೆ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಕ್ಸಫರ್ಡ್ ಪಾಟೀಲ್ಸ್ ಜೀನಿಯಸ್ ಅವಾರ್ಡ್ ಸ್ಪರ್ಧೆಯಲ್ಲಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಸಂಸ್ಕಾರ,ಸoಸ್ಕೃತಿ,ಪರoಪರೆ ನೀಡುವಲ್ಲಿ ನಾವು ಮರೆತಿದ್ದೇವೆ.ಅದನ್ನು ನೀಡುವ ಕಾರ್ಯ