Leave politics and come to Mathadola - God Amareshwar

ರಾಜಕಾರಣ ಹೊರಗಿಟ್ಟು ಮಠದೊಳಕ್ಕೆ ಬನ್ನಿ-ಅಮರೇಶ್ವರ ದೇವರು

ರಾಜಕಾರಣ ಹೊರಗಿಟ್ಟು ಮಠದೊಳಕ್ಕೆ ಬನ್ನಿ-ಅಮರೇಶ್ವರ ದೇವರು

ಮುದ್ದೇಬಿಹಾಳ : ಆಸ್ತಿ ನೋಡಿಕೊಂಡು ನಾವು ಈ ಮಠಕ್ಕೆ ಬಂದಿಲ್ಲ. ಭಕ್ತರ ಭಕ್ತಿಯೇ ಶ್ರೀಮಠಕ್ಕೆ ಆಸ್ತಿ. ಹುನಗುಂದದಲ್ಲಿರುವ ಗಚ್ಚಿನಮಠಕ್ಕೆ ಹಿಂದೂ, ಮುಸ್ಲಿಂ, ಕ್ರೈಸ್ತ ಬಾಂಧವರನ್ನು ಕರೆಯುತ್ತೇವೆ. ಆ ಸಂಪ್ರದಾಯ ಮುದ್ದೇಬಿಹಾಳದ ಮಠದಲ್ಲೂ ಮುಂದುವರೆಸುತ್ತೇವೆ. ಮಠಕ್ಕೆ ಬರುವವರು ರಾಜಕಾರಣ ಹೊರಗಿಟ್ಟು ಸಾಮಾನ್ಯ ಭಕ್ತರಂತೆ ಬರಬೇಕು ಎಂದು ಮುದ್ದೇಬಿಹಾಳ ಹೊಸಮಠದ ನೂತನ ಸ್ವಾಮೀಜಿ ಅಮರೇಶ್ವರ ದೇವರು ಹೇಳಿದರು.

ಮುದ್ದೇಬಿಹಾಳ ಭಕ್ತರ ಆಹ್ವಾನದ ಮೇರೆಗೆ ಪಟ್ಟಣದ ಕಿಲ್ಲಾದಲ್ಲಿರುವ ಹೊಸಮಠಕ್ಕೆ ಭಾನುವಾರ ಆಗಮಿಸಿದ್ದ ಅವರಿಗೆ ಮುದ್ದೇಬಿಹಾಳ ವೀರಶೈವ ಲಿಂಗಾಯತ ಸಮಾಜದಿಂದ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸಂಸ್ಕಾರ ಕೊಡಬೇಕು ಎಂದರೆ ಗುರು ಶಿಷ್ಯರ ಪರಂಪರೆ ಬಹುಮುಖ್ಯವಾದದ್ದು. ಶಿಷ್ಯ ನೀರು, ಗುರುಗಳು ಬೆಂಕಿ ಆಗಿರಬೇಕು, ಇಲ್ಲವೇ ಶಿಷ್ಯಂದಿರು ಬೆಂಕಿ ಗುರುಗಳು ನೀರಿನಂತಿರಬೇಕು. ಭಕ್ತರು ಇದ್ದ ಹಾಗೆ ನಾನು ಇರುತ್ತೇನೆ. ಯಾವುದೇ ವ್ಯಕ್ತಿಗಳು ಬಂದರೂ ಮಠಕ್ಕೆ ಅವರು ಭಕ್ತರಾಗಿ ಬಂದು ಭಕ್ತರಾಗಿ ಹೋಗಬೇಕು. ಇದು ಯಾವುದೇ ಪಕ್ಷಕ್ಕೆ ಸಿಮೀತವಾದ ಮಠವಲ್ಲ ಎಂದು ಹೇಳಬಯಸುತ್ತೇವೆ. ಅಂತಹ ಭಾವನೆ ಬರುವುದಕ್ಕೆ ನಾವು ಬಿಡುವುದಿಲ್ಲ. ಎಲ್ಲರೂ ತಿರುಗಿ ನೋಡುವ ಮಠವನ್ನಾಗಿ ಹೊಸಮಠವನ್ನು ಮಾಡುತ್ತೇವೆ. ಜೀರ್ಣೋದ್ಧಾರಗೊಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಸಾಹಿತಿ ರುದ್ರೇಶ ಕಿತ್ತೂರ ಮಾತನಾಡಿ, ಮುದ್ದೇಬಿಹಾಳದಲ್ಲಿ ಹಿಂದೆ ಏಳು ಮಠಗಳಿದ್ದವು. ಆದರೆ ಒಬ್ಬರೂ ಸ್ವಾಮೀಜಿಗಳಿರಲಿಲ್ಲ. ಧರ್ಮ ಮಾರ್ಗದರ್ಶಕರ ಅಗತ್ಯತೆ ಇದ್ದು ಆಧ್ಯಾತ್ಮಿಕ ಚಿಂತನೆ ಕೊರತೆಯನ್ನು ತುಂಬುವ ಸ್ವಾಮೀಜಿಯವರನ್ನು ನಾವು ಬರಮಾಡಿಕೊಂಡಿದ್ದೇವೆ. ಮುದ್ದೇಬಿಹಾಳ ಸೌಹಾರ್ದತೆಗೆ ಹೆಸರಾಗಿದ್ದು ಹೊಸಮಠವನ್ನು ಜೀರ್ಣೋದ್ಧಾರಗೊಳಿಸಿ ಅದರ ಇತಿಹಾಸ ಮರಳಿ ಜನತೆಗೆ ಅರಿವು ಮೂಡಿಸಬೇಕು. ಅಳಿವಿನಂಚಿನಲ್ಲಿದ್ದ ಮಠವನ್ನು ಜೀರ್ಣೋದ್ಧಾರಗೊಳಿಸುವ ಸವಾಲು ಸ್ವೀಕರಿಸಿರುವ ಅಮರೇಶ್ವರ ಶ್ರೀಗಳ ಕರ್ತೃತ್ವ ಶಕ್ತಿ ಬಗ್ಗೆ ಅಭಿಮಾನ,ಗೌರವ ಮುದ್ದೇಬಿಹಾಳದ ಭಕ್ತರು ಹೊಂದಿದ್ದೇವೆ ಎಂದರು.

ನಿವೃತ್ತ ಪ್ರೊ.ಎಸ್.ಎಸ್.ಹೂಗಾರ ಮಾತನಾಡಿ, ಹೊಸಮಠದ ಜೀರ್ಣೋದ್ಧಾರಕ್ಕೆ 25 ಸಾವಿರ ರೂ ದೇಣಿಗೆ ನೀಡುವುದಾಗಿ ತಿಳಿಸಿದರು. ಹುನಗುಂದ ತಾಲ್ಲೂಕಿನ ಭಕ್ತರಾದ ಅರುಣ ದುದ್ದಗಿ, ಪ್ರಭು ಮಾಲಗತ್ತಿಮಠ ಮಾತನಾಡಿ, ಹುನಗುಂದದಲ್ಲಿ ಗಚ್ಚಿನಮಠ ಬೃಹದಾಕಾರವಾಗಿ ಬೆಳೆದಿದೆ. ಮುದ್ದೇಬಿಹಾಳದ ಭಕ್ತರ ಅಪೇಕ್ಷೆಯ ಮೇರೆಗೆ ಇಲ್ಲಿನ ಮಠವನ್ನು, ಜನರನ್ನು ಉದ್ಧರಿಸಲು ಶ್ರೀಗಳು ತಮ್ಮ ಜ್ಞಾನದ ದಾಸೋಹ ಕಾರ್ಯ ಕೈಗೊಳ್ಳಲಿದ್ದು ಭಕ್ತರು ಪೂಜ್ಯರಿಗೆ ಬೆಂಬಲವಾಗಿ ನಿಲ್ಲಬೇಕು ಎಂದರು.

ವೀರೇಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಹುನಗುಂದದ ಮಹಾಂತೇಶ ಮಠ, ಮುಖಂಡರಾದ ವೆಂಕನಗೌಡ ಪಾಟೀಲ, ಶಿವಕುಮಾರ ಬಿರಾದಾರ, ಪತ್ರಕರ್ತ ಶಂಕರ ಹೆಬ್ಬಾಳ, ಪ್ರತಿಭಾ ಅಂಗಡಗೇರಿ, ದಾನಯ್ಯಸ್ವಾಮಿ ಹಿರೇಮಠ, ಬಸವರಾಜ ನಂದಿಕೇಶ್ವರಮಠ ಮಾತನಾಡಿದರು.

ಹುನಗುಂದ ಹಾಗೂ ಮುದ್ದೇಬಿಹಾಳದಿಂದ ಆಗಮಿಸಿದ್ದ ನೂರಾರು ಭಕ್ತರು ಇದ್ದರು. ಹೊಸಮಠಕ್ಕೆ ಮೊದಲ ಬಾರಿಗ ಆಗಮಿಸಿದ ಅಮರೇಶ್ವರ ದೇವರನ್ನು ಪುಷ್ಪಾರ್ಚನೆ ಮೂಲಕ ಭಕ್ತರು ಮಠಕ್ಕೆ ಸ್ವಾಗತಿಸಿದರು.

Latest News

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ :                 ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ : ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿ ಹಾಗೂ ಒಳ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಆದ್ಯತೆ ನೀಡುತ್ತಿದೆ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ಮುದ್ದೇಬಿಹಾಳ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ:   ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮುದ್ದೇಬಿಹಾಳ : ಹೋಳಿ ಹಬ್ಬದ ಅಂಗವಾಗಿ ಇಲ್ಲಿನ ಸಮಾನ ಮನಸ್ಕರ ಯುವ ಬಳಗದ ಸಹಯೋಗದಲ್ಲಿ 4 ರಂದು ಬೆಳಗ್ಗೆ 8 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಪಟ್ಟಣದ ಹುಡ್ಕೋದಲ್ಲಿರುವ ಗವಿಸಿದ್ದೇಶ್ವರ ವೇದಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮುದ್ದೇಬಿಹಾಳದ ಎಲ್ಲಾ ಬಾಂಧವರು ತಮ್ಮ ಮಕ್ಕಳನ್ನು ಕರೆತಂದು ಈ ಕಾರ್ಯಕ್ರಮದಲ್ಲಿ ತೊಡಗಿಸಿ ಹೋಳಿ ಆಚರಣೆ ಯಶಸ್ವಿಗೊಳಿಸುವಂತೆ ಬಳಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಮುದ್ದೇಬಿಹಾಳ : ಪಟ್ಟಣಕ್ಕೆ ಕುಡಿವ ನೀರು ಪೂರೈಕೆ ಎರಡು ದಿನ ವಿಳಂಬವಾಗಿದ್ದು ಮಾ.3 ರಿಂದ ಯತಾಸ್ಥಿತಿಯಲ್ಲಿ ವಿವಿಧ ವಾರ್ಡಗಳಿಗೆ ಸರದಿ ಮೇಲೆ ಪೂರೈಕೆ ಆಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕುಡಿವ ನೀರು ಪೂರೈಕೆ ವಿಭಾಗದ ಉಸ್ತುವಾರಿ, ಪುರಸಭೆ ಆರೋಗ್ಯ ನಿರೀಕ್ಷಕ ಜಾವೇದ ನಾಯ್ಕೋಡಿ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡು ದಿನಗಳಿಂದ ಇಲ್ಲಿನ ಜ್ಞಾನ ಭಾರತಿ ಶಾಲೆ ಮುಂದೆ ಮುಖ್ಯ ಕೊಳವೆ ಪೈಪ್‌ನಲ್ಲಿ ಸೋರಿಕೆ ಕಂಡು ಬಂದಿತ್ತು.ಅದನ್ನು