ಪ್ರಿಯತಮನಿಗಾಗಿ ಮನೆ ಬಿಟ್ಟು ಓಡಿ ಬಂದ ₹12 ಕೋಟಿ ಆಸ್ತಿ ಒಡತಿ!

ಪ್ರಿಯತಮನಿಗಾಗಿ ಮನೆ ಬಿಟ್ಟು ಓಡಿ ಬಂದ ₹12 ಕೋಟಿ ಆಸ್ತಿ ಒಡತಿ!


ಬೆಳಗಾವಿ: ಪ್ರೀತಿಸಿ ಮದುವೆಯಾದ ಜೋಡಿ ಭದ್ರತೆ ನೀಡುವಂತೆ ಎಸ್​ಪಿ ಮೊರೆ ಹೋಗಿದ್ದಾರೆ.

ಬೆಂಗಳೂರು (Bengaluru) ಮೂಲದ ಯುವತಿ ಪ್ರಿಯಾಂಕಾ ಹಾಗೂ ಬೆಳಗಾವಿ ಮೂಲದ ಯುವಕ ರೋಹಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನವದಂಪತಿಗಳಾಗಿದ್ದಾರೆ. ಖಾನಾಪುರದ ದೇವಸ್ಥಾನವೊಂದರಲ್ಲಿ (Temple) ವೈವಾಹಿತ ಜೀವನಕ್ಕೆ (Marriage Life) ಕಾಲಿಟ್ಟಿದ್ದ ಜೋಡಿ ನೇರ ಎಸ್​ಪಿ ಕಚೇರಿ ಆಗಮಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು ಮೂಲದ ಪ್ರಿಯಾಂಕಾ ಮೂರು ದಿನಗಳ ಹಿಂದೆಯಷ್ಟೇ ಮನೆ ಬಿಟ್ಟು ಪ್ರಿಯಕರನಿಗಾಗಿ ಬೆಳಗಾವಿಗೆ ಆಗಮಿಸಿದ್ದಾಳೆ. ಸದ್ಯ ರೋಹಿತ್, ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪ್ರಿಯಾಂಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಂದಹಾಗೇ, ಪ್ರಿಯಾಂಕಾಗೆ ಬೆಂಗಳೂರಲ್ಲಿ ಸುಮಾರು 12 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರಂತೆ. ಆಕೆಯ ಪೋಷಕರು ಚಿಕ್ಕವಯಸ್ಸಿನಲ್ಲಿರುವಾಗಲೇ ಸಾವನ್ನಪ್ಪಿದ್ದು, ಸೋದರ ಮಾವನ ಆಶ್ರಯದಲ್ಲಿ ಬೆಳೆದಿದ್ದರಂತೆ.

ಇನ್ನು, ಶಿವಮೊಗ್ಗ ‌ಹಾಗೂ ಬೆಂಗಳೂರಲ್ಲಿ ಪ್ರಿಯಂಕಾ ತಂದೆ ಆಸ್ತಿ ಹೊಂದಿದ್ದು, ಪ್ರಿಯಾಂಕಾಗೆ 18 ವರ್ಷ ತುಂಬಿದ ಬಳಿಕ ಈ ಎಲ್ಲಾ ಆಸ್ತಿಗಳು ಪ್ರಿಯಂಕಾ ಹೆಸರಿಗೆ ವರ್ಗಾವಣೆಯಾಗಿದೆಯಂತೆ. ಆದರೆ ಸೋದರ ಮಾವನ ಕಿರಿಕಿರಿಗೆ ಬೇಸತ್ತು ಪ್ರಿಯಾಂಕಾ ಪ್ರಿಯಕರ ಮನೆಗೆ ಬಂದಿದ್ದರಂತೆ. ಆದರೆ ಪ್ರಿಯಾಂಕಾ-ರೋಹಿತ್ ಮದುವೆಯಾಗದಂತೆ ತಡೆಯಲು ಆಕೆಯ ಸಹೋದರ ಮಾವನ ಮಗ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮದುವೆ ಬಳಿಕ ಬೆಳಗಾವಿ ಎಸ್ ಪಿ ಡಾ. ಭೀಮಾಶಂಕರ ಗುಳೇದ್ ಅವರನ್ನು ಭೇಟಿಯಾಗಿ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಖಾನಾಪುರ ಪೊಲೀಸರಿಂದ ಸೂಕ್ತ ಭದ್ರತೆ ನೀಡುವ ಭರವಸೆಯನ್ನು ಎಸ್​ಪಿ ನೀಡಿದ್ದಾರೆ.

ಇನ್ ಸ್ಟಾದಲ್ಲಿ ಪರಿಚಯ, ಲವ್ !
ಇನ್ನು, ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಿಯಾಂಕಾ, ಇಂದು ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ. ನನ್ನ ಬಳಿ ಯಾವುದೇ ದಾಖಲೆ ಇಲ್ಲ. ಬೆಂಗಳೂರಿನಲ್ಲಿ ರಕ್ಷಣೆ ಬೇಕು ಎಂದರೇ ಕಮಿಷನರ್ ಅವರನ್ನು ಭೇಟಿ ಮಾಡಲು ಹೇಳಿದ್ದಾರೆ. ಆದ್ದರಿಂದ ಅವರಿಗೆ ರಕ್ಷಣೆ ನೀಡಲು ಮನವಿ ಮಾಡಿದ್ದೇನೆ. ಮನೆಯಲ್ಲಿ ನನ್ನನ್ನು ಗೃಹ ಬಂಧನದಲ್ಲಿ ಇಟ್ಟಿದ್ದರು. ಅಲ್ಲಿಂದ ನಾನು ಬೆಳಗಾವಿಗೆ ಬಂದೇ, ಖಾನಾಪುರಕ್ಕೆ ಹೋಗಿ ಅಲ್ಲಿಯೂ ಪೊಲೀಸರಿಗೆ ದೂರು ನೀಡಿದ್ದೇವು ಎಂದು ತಿಳಿಸಿದ್ದಾರೆ.

ಪ್ರಿಯಾಂಕಾ ಹಾಗೂ ರೋಹಿತ್ ಗೆ ಇನ್ ಸ್ಟಾದಲ್ಲಿ ಪರಿಚಯ ಆಗಿದ್ದು, ಮದುವೆ ನಿಮಿತ್ತ ಬೆಳಗಾವಿಗೆ ಬಂದ ವೇಳೆ ಆಕೆ ಆತನನ್ನು ಮೊದಲ ಬಾರಿಗೆ ಭೇಟಿ ಆಗಿದ್ದಳಂತೆ. ರೋಹಿತ್ ಮನೆಯವರ ಅಕ್ಕರೆ ಹಾಗೂ ಯುವಕನ ಪ್ರೀತಿಗೆ ಮೆಚ್ಚಿ ಆತನನ್ನೇ ಮದುವೆಯಾಗಬೇಕು ಅಂತ ನಿರ್ಧಾರ ಮಾಡಿದ್ದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

ಬೆಳಗಾವಿ ಎಸ್​ಪಿ ಹೇಳಿದ್ದೇನು?
ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಭೀಮಾಶಂಕರ ಗುಳೇದ್ ಅವರು, ಕಚೇರಿಗೆ ಯುವಕ-ಯುವತಿ ಆಗಮಿಸಿದ್ದರು. ಪ್ರೀತಿಸಿ ಮದುವೆಯಾಗಿದ್ದೇವೆ, ನಮಗೆ ಕಾನೂನು ರಕ್ಷಣೆ ಬೇಕು ಎಂದು ಮನವಿ ಮಾಡಿದ್ದರು. ಇದರಂತೆ ಖಾನಾಪುರ ಪೊಲೀಸರಿಗೆ ಸೂಕ್ತ ರಕ್ಷಣೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ತಿಂಗಳ ಹಿಂದೆಯೇ ಖಾನಾಪುರ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದರು. ಆಕೆಯ ದಾಖಲೆಗಳು ಹಾಗೂ ಆಸ್ತಿ ವಿಚಾರದ ಬಗ್ಗೆ ದೂರು ನೀಡಿದ್ದರು. ಆ ವೇಳೆ ಸಂಬಂಧಿಗಳನ್ನು ಕರೆದು ಕೇಳಿದಾಗ ಅವರು ಯಾವುದೇ ದಾಖಲೆಗಳು ನಮ್ಮ ಬಳಿ ಇಲ್ಲ ಎಂದು ತಿಳಿಸಿದ್ದರಂತೆ. ಆದ್ದರಿಂದ ಯುವತಿಗೆ ಸಂಬಂಧಪಟ್ಟ ಶಾಲಾ-ಕಾಲೇಜುಗಳಿಂದ ಮತ್ತೊಮ್ಮೆ ದಾಖಲೆ ಪಡೆದುಕೊಳ್ಳಲು ಸೂಚನೆ ನೀಡಿದ್ದೇವೆ. ಆಸ್ತಿ ವಿಚಾರ ಸಿವಿಲ್ ಕೇಸ್ ಆಗಿದ್ದು, ಕೋರ್ಟ್​ ಗೆ ಅರ್ಜಿ ಸಲ್ಲಿಕೆ ಮಾಡಲು ಸೂಚನೆ ನೀಡಿದ್ದೇವೆ ಎಂದು ವಿವರಿಸಿದರು.

Latest News

ಪರಿಸರ ರಕ್ಷಕ” ಪ್ರಶಸ್ತಿ ಪ್ರದಾನ ಭೂಮಿ ಮೇಲೆ ಸ್ವಾರ್ಥವಿಲ್ಲದೇ ಬದುಕು ನಡೆಸೋಣ: ಬಲರಾಮ ಕಟ್ಟಿಮನಿ

ಪರಿಸರ ರಕ್ಷಕ” ಪ್ರಶಸ್ತಿ ಪ್ರದಾನ ಭೂಮಿ ಮೇಲೆ ಸ್ವಾರ್ಥವಿಲ್ಲದೇ ಬದುಕು ನಡೆಸೋಣ: ಬಲರಾಮ ಕಟ್ಟಿಮನಿ

ಮುದ್ದೇಬಿಹಾಳ : ಭೂಮಿಯ ಮೇಳೆ ಮನುಷ್ಯ ಸ್ವಾರ್ಥವಿಲ್ಲದ ಜೀವನ ನಡೆಸಬೇಕು. ಈ ಭೂಮಿಯ ಮೇಲೆ

ನರೇಗಾ ಕೂಲಿಕಾರರಿಗೆ ಅರೋಗ್ಯ ಉಚಿತ ತಪಾಸಣೆ ಶಿಬಿರ

ನರೇಗಾ ಕೂಲಿಕಾರರಿಗೆ ಅರೋಗ್ಯ ಉಚಿತ ತಪಾಸಣೆ ಶಿಬಿರ

ಖಾತ್ರಿ ಯೋಜನೆಯಡಿ ನಿರಂತರ ಕೆಲಸ : ಗಣಾಚಾರಿ ಮುದ್ದೇಬಿಹಾಳ : ತಾಲ್ಲೂಕಿನ ಮುದ್ನಾಳ ಗ್ರಾಮದ

ಗ್ರಾಮದೇವತೆ ಜಾತ್ರೆಯ ನಿಮಿತ್ಯ ಸ್ಪರ್ಧೆ: ರಂಗೋಲಿ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ

ಗ್ರಾಮದೇವತೆ ಜಾತ್ರೆಯ ನಿಮಿತ್ಯ ಸ್ಪರ್ಧೆ: ರಂಗೋಲಿ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ

ಮುದ್ದೇಬಿಹಾಳ : ಪಟ್ಟಣದ ಗ್ರಾಮ ದೇವತೆ ಜಾತ್ರೆಯ ಅಂಗವಾಡಿ ಅಂಬೇಡ್ಕರ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ

ಕ್ರೀಡಾಪಟುಗಳಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಿ-ಸಾವಳಗಿ

ಕ್ರೀಡಾಪಟುಗಳಿಗೆ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಿ-ಸಾವಳಗಿ

ಮುದ್ದೇಬಿಹಾಳ : ಕ್ರೀಡಾಪಟುಗಳನ್ನು ಅವರ ಕೌಟುಂಬಿಕ ಹಿನ್ನೆಲೆ, ಜಾತಿ, ಮತದ ಆಧಾರದ ಮೇಲೆ ಗುರುತಿಸದೇ

ಗ್ರಾಮದೇವತೆ ಜಾತ್ರೆ : ರಾಷ್ಟ್ರ, ರಾಜ್ಯಮಟ್ಟದ ಪೈಲ್ವಾನ್‌ಗಳಿಂದ ರಂಗೇರಿದ ಕುಸ್ತಿ

ಗ್ರಾಮದೇವತೆ ಜಾತ್ರೆ : ರಾಷ್ಟ್ರ, ರಾಜ್ಯಮಟ್ಟದ ಪೈಲ್ವಾನ್‌ಗಳಿಂದ ರಂಗೇರಿದ ಕುಸ್ತಿ

ಮುದ್ದೇಬಿಹಾಳ : ಪಟ್ಟಣದ ಗ್ರಾಮದೇವತೆ ಜಾತ್ರೆಯ ಅಂಗವಾಗಿ ಭಾನುವಾರ ಸಂಜೆ ಇಲ್ಲಿನ ಪ್ರಾರ್ಥನಾ ವಿದ್ಯಾಮಂದಿರದ ಹಿಂಭಾಗದಲ್ಲಿರುವ ಕುಸ್ತಿ ಮೈದಾನದಲ್ಲಿ ರಾಷ್ಟ್ರ, ರಾಜ್ಯಮಟ್ಟದ ಕುಸ್ತಿಪಟುಗಳಿಂದ ಭರ್ಜರಿ ಕುಸ್ತಿ ಪ್ರದರ್ಶನ ನಡೆಯಿತು. ಮಧ್ಯಪ್ರದೇಶ, ಮಹಾರಾಷ್ಟ್ರ, ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರಾಜ್ಯಮಟ್ಟದ ಕುಸ್ತಿಪಟುಗಳು ಪಾಲ್ಗೊಂಡು ಅಖಾಡವನ್ನು ರಂಗೇರಿಸಿದ್ದರು. ವಿಶೇಷವಾಗಿ ಕುಸ್ತಿಯನ್ನು ನಿಗದಿ ಮಾಡಿದ ಪೈಲ್ವಾನ್‌ರೊಂದಿಗೆ ಆಡಿಸಿದ್ದು ಕುಸ್ತಿ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಯಿತು. ಸಾವಿರಾರು ಜನರು ಕುಸ್ತಿಯನ್ನು ವೀಕ್ಷಿಸಿದರು.

ಗ್ರಾಮದೇವತೆ ಜಾತ್ರೆ : ರಾಷ್ಟ್ರ, ರಾಜ್ಯಮಟ್ಟದ ಪೈಲ್ವಾನ್‌ಗಳಿಂದ ರಂಗೇರಿದ ಕುಸ್ತಿ

ಗ್ರಾಮದೇವತೆ ಜಾತ್ರೆ : ರಾಷ್ಟ್ರ, ರಾಜ್ಯಮಟ್ಟದ ಪೈಲ್ವಾನ್‌ಗಳಿಂದ ರಂಗೇರಿದ ಕುಸ್ತಿ

ಮುದ್ದೇಬಿಹಾಳ : ಪಟ್ಟಣದ ಗ್ರಾಮದೇವತೆ ಜಾತ್ರೆಯ ಅಂಗವಾಗಿ ಭಾನುವಾರ ಸಂಜೆ ಇಲ್ಲಿನ ಪ್ರಾರ್ಥನಾ ವಿದ್ಯಾಮಂದಿರದ ಹಿಂಭಾಗದಲ್ಲಿರುವ ಕುಸ್ತಿ ಮೈದಾನದಲ್ಲಿ ರಾಷ್ಟ್ರ, ರಾಜ್ಯಮಟ್ಟದ ಕುಸ್ತಿಪಟುಗಳಿಂದ ಭರ್ಜರಿ ಕುಸ್ತಿ ಪ್ರದರ್ಶನ ನಡೆಯಿತು. ಮಧ್ಯಪ್ರದೇಶ, ಮಹಾರಾಷ್ಟ್ರ, ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರಾಜ್ಯಮಟ್ಟದ ಕುಸ್ತಿಪಟುಗಳು ಪಾಲ್ಗೊಂಡು ಅಖಾಡವನ್ನು ರಂಗೇರಿಸಿದ್ದರು. ವಿಶೇಷವಾಗಿ ಕುಸ್ತಿಯನ್ನು ನಿಗದಿ ಮಾಡಿದ ಪೈಲ್ವಾನ್‌ರೊಂದಿಗೆ ಆಡಿಸಿದ್ದು ಕುಸ್ತಿ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಯಿತು. ಸಾವಿರಾರು ಜನರು ಕುಸ್ತಿಯನ್ನು ವೀಕ್ಷಿಸಿದರು.