
ಕುಳಗೇರಿ ಕ್ರಾಸ್: ಸಮೀಪದ ನರಸಾಪೂರ ಗ್ರಾಮದಲ್ಲಿ ಸೋಮವಾರದಂದು ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿದ್ದರು. ರಥೋತ್ಸವ ನಂತರ ಅನ್ನ ಪ್ರಸಾದ ಸೇವೆ ನೆರವೇರಿಲಾಯಿತು. ರಾತ್ರಿ 10.30 ಕ್ಕೆ ನಾಟಕ ಕಾರ್ಯಕ್ರಮ ಜರುಗಿತು.

ಊರಿನ ರಥೋತ್ಸವ ಕಾರ್ಯಕ್ರಮವನ್ನು ಶ್ರೀ ಮರುಳ ಸಿದ್ದಲಿಂಗ ಮಹಾಸ್ವಾಮಿಗಳು ನರಸಾಪುರ ಹಾಗೂ ಊರಿನ ಗುರುಹಿರಿಯರು ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶೀಮತಿ ಜಿ ಬಿ ಗುಬ್ಬಿ ಸದಸ್ಯರಾದ ಆನಂದಗೌಡ ಪಾಟೀಲ್, ಶರಣಪ್ಪ ನಡಗಡ್ಡಿ ಮತ್ತು ಎಚ್ ಜೀ ಖಾನಾಪುರ (ನಿವೃತ್ತ ಶಿಕ್ಷಕರು) ಸುರೇಶ ಯೋಗಪ್ಪನವರ, ಪಿ ಎಸ್ ಕಲಾದಗಿ, ಎ, ಬಿ, ಪಾಟೀಲ್ ಹಾಗೂ ಮಹಾಂತೇಶ ಹಟ್ಟಿ ಕೆಪಿಸಿಸಿ ವಕ್ತರಾರು ಪೊಲೀಸ್ ಸಿಬ್ಬಂದಿ ಮತ್ತು ಹಿರಿಯರು ಯುವಕರು ಕರವೇ ಕಾರ್ಯಕರ್ತರು ಆಟೋ ಚಾಲಕರು ಉಪಸ್ಥಿತರಿದ್ದರು.