ಸಿಎಂ ಸಿದ್ಧರಾಮಯ್ಯಗೆ ಮತಿಭ್ರಮಣೆ- ಮಾಜಿ ಶಾಸಕ ನಡಹಳ್ಳಿ ಆರೋಪ

ಸಿಎಂ ಸಿದ್ಧರಾಮಯ್ಯಗೆ ಮತಿಭ್ರಮಣೆ- ಮಾಜಿ ಶಾಸಕ ನಡಹಳ್ಳಿ ಆರೋಪ

ಮುದ್ದೇಬಿಹಾಳ : ಮುಡಾ ಹಗರಣದ ತೂಗುಗತ್ತಿ ಯಾವಾಗ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ತೂಗಾಡುತ್ತಿದೆಯೋ ಅಲ್ಲಿಂದಲೇ ಅವರಿಗೆ ಮತಿಭ್ರಮಣೆಯಾದಂತಾಗಿದ್ದು ವಕ್ಭ್ಬೋರ್ಡ್ ಹೆಸರಲ್ಲಿ ರೈತರ ಮೇಲೆ ದ್ವೇಷದ ರಾಜಕಾರಣ ಶುರು ಮಾಡಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ರೈತಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಆರೋಪಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ತಾಲ್ಲೂಕಿನ ಕುಂಟೋಜಿ ಗ್ರಾಮದ ರೈತರು ವಕ್ಭ್ ಬೋರ್ಡ್ ವಿರುದ್ಧ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಎರಡನೇ ದಿನದ ಹೋರಾಟದಲ್ಲಿ ಅವರು ಬೆಂಬಲ ಸೂಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕದಲ್ಲಿ ಎರಡೇ ತಿಂಗಳಲ್ಲಿ ಶೇ.38 ರಷ್ಟು ವಕ್ಭ್ ಆಸ್ತಿ ಹೆಚ್ಚಳವಾಗಿದೆ. ಸಾರ್ವಜನಿಕರು, ಮಠಾಧೀಶರು, ಬಿಜೆಪಿ ಪಕ್ಷದಿಂದ ಹೋರಾಟ ತೀವ್ರಗೊಂಡಾಗ ಸಿಎಂ ರೈತರ ಪಹಣಿಗಳಲ್ಲಿನ ವಕ್ಭ್ ಬೋರ್ಡ ಪದ ತೆಗೆದು ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಆದರೂ ತಹÀಶೀಲ್ದಾರರು , ಡಿಸಿ ಮಲಗಿದ್ದಾರೆಯೇ ಸಿಎಂ ಆದೇಶಕ್ಕೆ ಬೆಲೆ ಇಲ್ಲವೇ ? ಸಿಎಂ ಆದೇಶ ಮಾಡಿದ್ದೇನೆ ಎಂದು ಹೇಳಿಕೆ ಕೊಟ್ಟರೂ ಅದಕ್ಕೆ ಸ್ಪಂದನೆ ಇಲ್ಲವಾಗಿದೆ.ಕಾಂಗ್ರೆಸ್ ಸರ್ಕಾರ ಜನವಿರೋಧಿ, ರೈತ ವಿರೋಧಿ ಸರ್ಕಾರ ಎಂದು ಹೇಳಿದರು.

ಕೇವಲ ಬಾಯಿ ಮಾತಿನ ಮೇಲೆ ನೋಟೀಸ್ ವಾಪಸ್ ಪಡೆದುಕೊಂಡಿದ್ದೇನೆ ಎಂದು ಹೇಳಿದರೆ ಸಾಲದು. ವಕ್ಭ್ ಬೋರ್ಡ್ ಎಂದು ಎಂಟ್ರಿ ಮಾಡಿದ್ದನ್ನು ತೆಗೆದು ಹಾಕಬೇಕು. ಒಂದು ಎಕರೆ ಜಮೀನು ವಕ್ಭ್ ಬೋರ್ಡ್ಗೆ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಗಂಗಾಧರ ನಾಡಗೌಡ , ಹೋರಾಟಗಾರ ನಾಗಲಿಂಗಯ್ಯ ಮಠ ಮಾತನಾಡಿ, ಸರ್ಕಾರದ ಕ್ರಮ ವಿರುದ್ಧ ಆಕ್ರೋಶ ಹೊರಹಾಕಿದರು. ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ 400 ಎಕರೆ ಜಮೀನುಗಳ ಮೇಲೆ ವಕ್ಭ್ ಬೋರ್ಡ್ ಹೆಸರು ಇರುವುದನ್ನು ತೆಗೆದು ಹಾಕಬೇಕು ಎಂದು ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಶಾಸಕ ಅಪ್ಪಾಜಿ ಮೌನವೇಕೆ ?: ತಾಲ್ಲೂಕಿನ ರೈತರಿಗೆ ಅನ್ಯಾಯವಾಗುತ್ತಿದ್ದರೂ ಶಾಸಕರು ಏನು ಮಾಡುತ್ತಿದ್ದೀರಿ ? ರೈತರ ಆಸ್ತಿ ಲೂಟಿ ಹೊಡೆಯುವವರ ಪರವಾಗಿದ್ದೀರಾ ? ಎಂದು ಮಾಜಿ ಶಾಸಕ ನಡಹಳ್ಳಿ ಪ್ರಶ್ನಿಸಿದರು.ಸಿಎಂ ಹೇಳಿಕೆ ಕೊಟ್ಟಿದ್ದು, ಆ ಬಗ್ಗೆ ಶಾಸಕರು ಹೋರಾಟಗಾರರಿಗೆ ಮನವರಿಕೆ ಮಾಡಿಕೊಡಬೇಕಿತ್ತು.ಆದರೆ ಈವರೆಗೂ ಅವರಿಂದ ರೈತರಪರವಾಗಿ ಒಂದು ಹೇಳಿಕೆ ಇಲ್ಲ.ತಹಶೀಲ್ದಾರ್‌ಗೆ ತಿಳಿಸಿ ವಕ್ಭ್ ಬೋರ್ಡ ಕರ್ನಾಟಕ ಸರ್ಕಾರ ತಗೆದುಹಾಕಲು ತಿಳಿಸಬೇಕು ಎಂದು ಹರಿಹಾಯ್ದರು.ಮುಖಂಡ ಕೆಂಚಪ್ಪ ಬಿರಾದಾರ, ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ, ಸಂಗಣ್ಣ ಕುಂಬಾರ,ರವಿ ಜಗಲಿ,ರವೀಂದ್ರ ಬಿರಾದಾರ, ರೈತ ಸಂಘಟನೆಯ ಮುಖಂಡ ಸಂಗಣ್ಣ ಬಾಗೇವಾಡಿ ಸೇರಿದಂತೆ ರೈತ ಮಹಿಳೆಯರು ಪಾಲ್ಗೊಂಡಿದ್ದರು.

Latest News

Boat Online such broker bear blast slot free spins as Yahtzee

BlogsBroker bear blast slot free spins: The brand new Dice:Yahtzee ThumbAdded

Păcănele Online Sweet nv casino Bonanza Gratis În Dans Pacanele

ContentNv casino | Caracteristica Bonus Roata Grămadă Să BaniSă Sunt Pacanele

Hra Chicken Road od InOut Games se blíží k velikosti velkého města.

Theme a Design Hra Chicken Road je netradiční online herní automat

Hühnerrad-Münzspiel im Stil von Casino Slot Machine – Die Ernte des Glücks bei Chicken Cross

In den letzten Jahren haben sich Online-Casinos um die Welt zu

ವಿಜಯಪುರ ಜಿಲ್ಲೆಯ ಕಾಲೇಜುಗಳನ್ನು ಅಕ್ಕಮಹಾದೇವಿ ಮ.ವಿ.ವಿ ಸಂಯೋಜನೆಗೊಳಪಡಿಸಿ-ಎಂ.ಬಿ.ಸಗರಿ

ವಿಜಯಪುರ ಜಿಲ್ಲೆಯ ಕಾಲೇಜುಗಳನ್ನು ಅಕ್ಕಮಹಾದೇವಿ ಮ.ವಿ.ವಿ ಸಂಯೋಜನೆಗೊಳಪಡಿಸಿ-ಎಂ.ಬಿ.ಸಗರಿ

ಮುದ್ದೇಬಿಹಾಳ : ಪ್ರಸ್ತುತ ವಿಜಯಪುರ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾರಹಿತ ಪದವಿ ಕಾಲೇಜುಗಳು ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗ ವಿಜಯಪುರ ಜಿಲ್ಲೆಯ ಎಲ್ಲ ಪದವಿ ಕಾಲೇಜುಗಳನ್ನು ಬಾಗಲಕೋಟಿ ಜಿಲ್ಲೆಯ ಜಮಖಂಡಿಯಲ್ಲಿರುವ ವಿಶ್ವವದ್ಯಾಲಯಕ್ಕೆ ಸೇರಿಸುವ ಬಹಳಷ್ಟು ಹುನ್ನಾರ ನಡೆದಿದೆ ಎಂದು ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಸಗರಿ ಆರೋಪಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ಜಿಲ್ಲೆಯ ಎಲ್ಲ ಕಾಲೇಜುಗಳನ್ನು ವಿಜಯಪುರದಲ್ಲಿ ಈಗಾಗಲೇ

ಕೋವಿಡ್ ಸಮಯದಲ್ಲಿ ನಿರ್ವಹಿಸಿದ ಸೇವೆ ಅನುಪಮ-ಡಾ.ಶೇಗುಣಸಿ

ಕೋವಿಡ್ ಸಮಯದಲ್ಲಿ ನಿರ್ವಹಿಸಿದ ಸೇವೆ ಅನುಪಮ-ಡಾ.ಶೇಗುಣಸಿ

ಮುದ್ದೇಬಿಹಾಳ : ಕೋವಿಡ್ ಸಮಯದಲ್ಲಿ ಜೀವ ಒತ್ತೆ ಇಟ್ಟು ಸೇವೆ ಸಲ್ಲಿಸಿದ ವೈದ್ಯರು,ಶುಶ್ರೂಷಕರ ಸೇವೆ ಅನುಪಮವಾದದ್ದು ಎಂದು ಕಾಳಗಿ ಸಮುದಾಯ ಕೇಂದ್ರದ ವೈದ್ಯ ಡಾ.ಅನೀಲಕುಮಾರ ಶೇಗುಣಸಿ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಾಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದಿಂದ ನೂತನ ವರ್ಷದ ದಿನದರ್ಶಿಕೆ ಉದ್ಘಾಟನೆ,ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪರಶುರಾಮ ವಡ್ಡರ ಮಾತನಾಡಿ, ವೈದ್ಯಕೀಯ ಸೇವೆಯನ್ನು