Popular MLA Dr. Vijayananda Kashapanavara

ನೇರ ನುಡಿಯ ಜನಪ್ರೀಯ ಶಾಸಕ ಡಾ. ವಿಜಯಾನಂದ ಕಾಶಪ್ಪನವರ

ನೇರ ನುಡಿಯ ಜನಪ್ರೀಯ ಶಾಸಕ ಡಾ. ವಿಜಯಾನಂದ ಕಾಶಪ್ಪನವರ

ಹುನಗುಂದ : ಕಾಶಪ್ಪನವರ ಮನೆತನದ ಹೆಸರು ಹುನಗುಂದ ವಿಧಾನ ಸಭಾ ಮತಕ್ಷೇತ್ರಕ್ಕೆ ಅಷ್ಟೇ ಸೀಮಿತವಾಗದೇ ಇಂದು ಜಿಲ್ಲೆ, ರಾಜ್ಯ, ದೇಶ ವಿದೇಶಗಳಲ್ಲಿ ಗುರುತಿಸುವಂತೆ ಬೆಳೆದು ನಿಂತಿರುವ ಮಾಜಿ ಸಚಿವ ದಿ. ಎಸ್. ಆರ್. ಕಾಶಪ್ಪನವರ ಮಾಡಿದ ಸಾರ್ವಜನಿಕ, ರೈತ ಪರವಾದ ಯೋಜನೆಯಾದ ಮರೋಳ ಏತ ನೀರಾವರಿ, ಹನಿ ನೀರಾವರಿ, ಏಷ್ಯಾ ಖಂಡದಲ್ಲಿಯೇ ಇಂದು ಈ ಯೋಜನೆ ಮಹತ್ವದಿಂದ ಹುನಗುಂದ ಕ್ಷೇತ್ರ ಗುರುತಿಸುವಂತಾಗಲೂ ಕಾಶಪ್ಪನವರ ದೂರದ ದೃಷ್ಟಿಯಿಂದ ಸಾಧ್ಯವಾಗಿದೆ. 

ತಂದೆ ಮಾಜಿ ಸಚಿವ ಎಸ್. ಆರ್. ಕಾಶಪ್ಪನವರ ಗುಡಿ ಕಟ್ಟಿದರೆ ತಂದೆಗೆ ತಕ್ಕ ಮಗ ಶಾಸಕ ವಿಜಯಾನಂದ ಕಾಶಪ್ಪನವರ ಕಳಸ ಇಡುವಲ್ಲಿ ಯಶಸ್ವಿಯಾಗಿ ಇಂದು ನೇರ ನುಡಿಯ ಜನ ನಾಯಕರಾಗಿದ್ದಾರೆ.
೧೯೭೨ ಜುಲೈ ೧ ರಂದು ಡಾ. ವಿಜಯಾನಂದ ಕಾಶಪ್ಪನವರ ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ಮಾಜಿ ಸಚಿವ ಶಿವಶಂಕ್ರಪ್ಪ ಮತ್ತು ಗೌರಮ್ಮ ಶರಣ ದಂಪತಿಗಳ ಉದರಲ್ಲಿ ಜನಿಸಿದರು. ಇಲಕಲ್ಲನ ಎಸಿಓ ಶಾಲೆಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಎಸ್.ವಿ.ಎಂ. ಕಾಲೇಜು ಇಲಕಲ್ಲನಲ್ಲಿ ಪಿಯು ಶಿಕ್ಷಣ, ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಪದವಿ ಪಡೆದು ನಂತರ ಬೆಂಗಳೂರಿನ ಪ್ರತಿಷ್ಠಿತ ಎಂ. ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದರು. ತಂದೆ ಹಾದಿಯಲ್ಲಿಯೇ ಬೆಳೆದು ೧೯೮೯ ರಲ್ಲಿ ಹುನಗುಂದ ತಾಲೂಕಿನ ವಿದ್ಯಾರ್ಥಿ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಹಾಗೂ ಮುಂದೆ ೧೯೯೦ರಲ್ಲಿ ವಿದ್ಯಾರ್ಥಿ ಕಾಂಗ್ರೆಸನ ಪ್ರಧಾನ ಕಾರ್ಯದರ್ಶಿಯಾಗಿ ೧೯೯೨ ರಲ್ಲಿ ಜಿಲ್ಲಾ ಯುವ ಘಟಕದ ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ ೨೦೦೭ ಮತ್ತು ೨೦೧೧ ವರೆಗೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಾಜಕೀಯ ತಂತ್ರಗಾರಿಕೆಯಲ್ಲಿ ನಿಸ್ಸಿಮರಾಗಿ ಜನ ಸಮಾನ್ಯರ ಮಧ್ಯದಲ್ಲಿ ಯುವ ನಾಯಕರಾಗಿ ಹೊರಹೊಮ್ಮಿದರು.

೨೦೦೩ರಲ್ಲಿ ಜೂನ್ ೨೭ ರಂದು ಎಸ್. ಆರ್. ಕಾಶಪ್ಪನವರ ಆಕಸ್ಮಿಕ ರಸ್ತೆ ಅಪಘಾತದಲ್ಲಿ ನಿಧನರಾದ ಸಮಯಲ್ಲಿ ಕಾಶಪ್ಪನವರ ಕುಟುಂಬ ಉಪ ಚುನಾವಣೆ ಎದುರಿಸುವ ಹೊಣೆಗಾರಿಕೆಯಿಂದ ತಾಯಿ ಗೌರಮ್ಮ ಕಾಶಪ್ಪನವರ ಅವರನ್ನು ಹತ್ತು ಸಾವಿರ ಅಧಿಕ ಮತಗಳಿಂದ ಆಯ್ಕೆಯಾಗುವಲ್ಲಿ ಶ್ರಮಿಸಿದ ಛಲದಂಕ ಮಲ್ಲ ವಿಜಯಾನಂದ ಕಾಶಪ್ಪನವರ.
೨೦೧೩ ರ ವಿಧಾನ ಸಭೆ ಚುನಾವಣೆಯಲ್ಲಿ ಪ್ರತಿ ಸ್ಪರ್ಧಿ ದೊಡ್ಡನಗೌಡ ಪಾಟೀಲ ಅವರನ್ನು ಪರಾಭವಗೊಳಿಸಿ ೧೫೭೯೭ ಅಧಿಕ ಮತಗಳಿಂದ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನ ಸಭೆಗೆ ಪ್ರವೇಶ ಮಾಡಿದರು. ಜನ ಸಾಮಾನ್ಯರ ಹುನಗುಂದ ಮತಕ್ಷೇತ್ರದ ರೈತ, ನೇಕಾರ, ದಲಿತ, ಅಲ್ಪಸಂಖ್ಯಾತ, ಬಡ ವಿದ್ಯಾರ್ಥಿಗಳ ಶಿಕ್ಷಣ ಆರೋಗ್ಯ ಸೇವೆ ಒದಗಿಸುವಲ್ಲಿ, ಮೂಲಭೂತ ಸೌಕರ್ಯ, ಪ್ರವಾಸೋಧ್ಯಮ ಮರೋಳ ಏತ ನೀರಾವರಿ ಯೋಜನೆಯ ಎರಡನೇ ಹಂತದ ಹನಿ ನೀರಾವರಿ ವಿವಿಧ ಅಭಿವೃದ್ದಿಗಾಗಿ ಒಟ್ಟು ೩ ಸಾವಿರ ೫೦೦ ಕೋಟಿ ಅನುದಾನವನ್ನು ಪಡೆಯುವದರ ಮೂಲಕ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸಿದರು. ಅಭಿವೃದ್ದಿ ಹರಿಕಾರಾಗಿ ಮತ್ತೆ ಪ್ರಸ್ತುತ ೨೦೨೩ರ ವಿಧಾನ ಸಭೆ ಚುನಾವಣೆಯಲ್ಲಿ ಪ್ರತಿ ಸ್ಪರ್ದೆ ದೊಡ್ಡನಗೌಡ ಪಾಟೀಲ ಅವರುನ್ನು ಪರಾಗವಗೊಳಿಸಿ ೩೦೭೦೦ ಮತಗಳಿಂದ ಆಯ್ಕೆಯಾಗಿ ೨ನೇ ಬಾರಿಗೆ ಜನಪ್ರೀಯ ಶಾಸಕರಾಗಿ ಆಯ್ಕೆಯಾಗಿದ್ದು ಅವರ ಜನಸಾಮಾನ್ಯರ ಮಧ್ಯ ಬೆರೆತು ಸಮಸ್ಯೆಗಳಿಗೆ ಸ್ಪಂದಿಸುವ ಗುಣವೇ ಕಾರಣ.

 ೨೦೧೩ ರಿಂದ ೨೦೧೮ ವರೆಗೆ ಕಾಶಪ್ಪನವರ ಅಭಿವೃದ್ದಿಯ  ಪಕ್ಷ ನೋಟ - ಮರೋಳ ಏತ ನೀರಾವರಿ ಯೋಜನೆ, ೨ ನೇ ಹಂತದ ಹನಿ ನೀರಾವರಿ ಅನುಷ್ಠಾನಕ್ಕಾಗಿ ೭೮೬ ಕೋಟಿ, ಕೊಪ್ಪಳ ಏತ ನೀರಾವರಿ ಯೋಜನೆಗಾಗಿ ೨೨೦ ಕೆವಿ ಸ್ಟೇಷನ್,  ಕೂಡಲ ಸಂಗಮ ಯಾತ್ರಿ ಭವನಕ್ಕೆ ೧.೫೩ ಕೋಟಿ, ನಂದವಾಡಗಿ ಏತ ನೀರಾವರಿ ಮೊದಲ ಹಂತದ ಕಾಮಗಾರಿಗೆ ೨೦೭ ಕೋಟಿ ಅನುದಾನ, ಇಲಕಲ್ಲ ತಾಲೂಕಿನ ರಚನೆಗೆ  ಮೂಲಭೂತ ಸೌಕರ್ಯಗಳಿಗಾಗಿ ಅನುದಾನ ಬಿಡುಗಡೆ, ಕೂಡಲ ಸಂಗಮ ಅಡಿವಿಹಾಳ ಸೇತುವೆ ೫೮ ಕೋಟಿ, ಕೂಡಲ ಸಂಗಮದಲ್ಲಿ ದೆಹಲಿ ಮಾದರಿ ಅಕ್ಷಧಾಮ ಅಭಿವೃದ್ದಿಗಾಗಿ ೧೨೫ ಕೋಟಿ ಅನುದಾನ, ಜಿಟಿಡಿಸಿ ಕಾಲೇಜು ಮಹಿಳಾ ವಸತಿಗೃಹಕ್ಕೆ ೧.೨೮ ಕೋಟಿ ಅನುದಾನ, ಎಡಿಬಿ ಯೋಜನೆ ಅಡಿಯಲ್ಲಿ ಇಲಕಲ್ಲ ನಗರಕ್ಕೆ ೪೩ ಕೋಟಿಅಬಿವೃದ್ದಿ ಕಾಮಗಾರಿ, ನಗರೋತ್ತಾನ ಅನುದಾನ ದಲ್ಲಿ ೫೦ ಕೋಟಿ ರೂ ಅಭಿವೃದ್ದಿ ಕಾಮಗಾರಿಗಳು. ಹುನಗುಂದ ನಗರದ ಬಸ್ ಡಿಪೋ ೩.೫೦ ಕೋಟಿ ಪಿಎಂಜಿಎಸ್‌ವೈ ೨ನೇ ಹತಕ್ಕೆ ೧೧೮೨.೩೪ ಲಕ್ಷ ಮೂರನೇ ಹಂತಕ್ಕೆ ೮೨೩.೨೭ ಲಕ್ಷ ನಾಲ್ಕನೇ ಹಂಕ್ಕೆ ೭೦೧ ಲಕ್ಷಗಳ ರಸ್ತೆ ನಿರ್ಮಾಣ, ಹುನಗುಂದ ನಗರದಲ್ಲಿ ಪ್ರೌಢಶಾಲೆ, ಆದರ್ಶ ವಿದ್ಯಾಲಯ, ವಸತಿ ನಿಲಯಗಳ ನಿರ್ಮಾಣಕ್ಕಾಗಿ ನಿರ್ಮಿಸಿದ ೧೫.೭೫ ಕೋಟಿ ಇಲಕಲ್ಲ ಗ್ರಾಮೀಣ ಪೋಲಿಸ್ ಠಾಣಿ ಮತ್ತು ವಸತಿ ನಿಲಯ ಗೃಹ ನಿರ್ಮಾಣ, ಹುನಗುಂದ ನಗರಕ್ಕೆ ಕೆಪಿಟಿಸಿಎಲ್ ವಿಭಾಗೀಯ ಕಚೇರಿ ಮಂಜುರಾತಿ, ಕಂದಗಲ್ಲ ಗ್ರಾಮದಲ್ಲಿ ೧೧೦ ಕೆವಿ ಸ್ಟೇಷನ್ ನಿರ್ಮಾಣ, ಇಲಕಲ್ಲ ನಲ್ಲಿ ಎಂ.ಸಿ.ಎಚ್ ಆಸ್ಪತ್ರೆ ನಿರ್ಮಾಣ  ೩.೫೦ ಕೋಟಿಯಲ್ಲಿ ನಿರ್ಮಾಣ ಸಂಚಾರಿ ನ್ಯಾಯಲಯ ಮಂಜುರಾತಿ, ಸೂಳೆಭಾವಿ ಗ್ರಾಮದಲ್ಲಿ ರಾಣಿ ಚನ್ನಮ್ಮ ವಸತಿ ನಿಲಯ, ವಿವಿಧ ಇಲಾಖೆಗಳಿಗೆ ಸ್ವಂತ ಕಟ್ಟಡ, ವಿದ್ಯಾರ್ಥಿಗಳಿಗೆ ವಸತಿ ನಿಲಯ, ರೈತರಿಗಾಗಿ ಉಗ್ರಾಣ ನಿರ್ಮಾಣ ಹಾಗೂ ೫ ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಿದ ರೈತರ ನೆಚ್ಚಿನ ನಾಯಕ ವಿಜಯಾನಂದ ಕಾಶಪ್ಪನವರ.
ಇತ್ತಿಚೆಗೆ ಪ್ರಪಂಚವನ್ನೆ ತಲ್ಲಣಗೊಳಿಸಿದ ಕೋವಿಂಡ-೧೯ ವೈರಸ್ ತಡೆಗಟ್ಟಲು ಹುನಗುಂದ-ಇಲಕಲ್ಲ ಅವಳಿ ತಾಲೂಕಿನ ಆರೋಗ್ಯ ಇಲಾಖೆಗೆ ೨ ಅಂಬುಲೈನ್ ಮತ್ತು ಪೌರಕಾರ್ಮಿಕರಿಗೆ, ನಾಗರೀಕರಿಗೆ ಔಷಧಿಗಳ ಕಿಟ್ ಮತ್ತು ಆಹಾರ ಪೊಟ್ಟಣ ವಿತರಣೆ ಮಾಡಿ ಸದಾ ಕ್ಷೇತ್ರದ ಜನರ ಆರೋಗ್ಯ ಕಾಪಾಡಲು ಶ್ರಮಿಸಿದ ಆಪತ್ ಬಾಂಧವ. 

ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಡಾ. ವಿಜಯಾನಂದ ಕಾಶಪ್ಪನವರ ಅವರ ೫೩ನೇ ಜನ್ಮ ಜನ್ಮ ದಿನವನ್ನು ೧ ಜುಲೈ. ೨೦೨೫ರಂದು ನೋಟ್ ಬುಕ್ ವಿತರಣೆ, ಸಸಿ ನೆಡುವ ಕಾರ್ಯಕ್ರಮ, ಇನ್ನಿತರ ಕಾರ್ಯಕ್ರಮಗಳನ್ನು ಕ್ಷೇತ್ರದ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿರುವುದು ಜನಮಾನಸದಲ್ಲಿ ಅಚ್ಚಳಿಯದಂತಾಗುವುದು.

ಅಮರೇಶ ನಾಗೂರ

Latest News

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

ಮುದ್ದೇಬಿಹಾಳದ ಶಕುಂತಲಾಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ ಮುದ್ದೇಬಿಹಾಳ : ಕೊಪ್ಪಳ ಜಿಲ್ಲಾ ಹನುಮಸಾಗರ

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ಧಾರವಾಡ, ಜೂ.30: ನಗರದ ಸ್ವಚ್ಛತೆ ಪಾಲಿಕೆ, ನಗರ ಸಭೆ ಕೆಲಸ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನೂತನ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ

ಸಚಿವ ಲಾಡ್ ಅವರಿಂದ ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ

ಸಚಿವ ಲಾಡ್ ಅವರಿಂದ ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ

ಬೆಂಗಳೂರು, ಜೂನ್‌ 26: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ವಿವಿಧ ಕಾರ್ಖಾನೆಗಳು ಹಾಗೂ ಮನೆ ಕೆಲಸದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ಚರ್ಚಿಸಿದರು. ನುವೋಕೋ ವಿನ್ವಾಸ್ ಕಾರ್ಪೊರೇಷನ್ ಕಾರ್ಮಿಕರ ಸಮಸ್ಯೆ ಚರ್ಚೆ:ಕರ್ನಾಟಕ ಜನರಲ್ ಲೇಬರ್ ಯೂನಿಯನ್ ಬೆಂಗಳೂರು ಇವರ ಮನವಿ ಮೇರೆಗೆ ಮೆ. ನುವೋಕೋ ವಿನ್ವಾಸ್ ಕಾರ್ಪೊರೇಷನ್ ಲಿಮಿಟೆಡ್.. ಕಾರ್ಮಿಕರ ಸಮಸ್ಯೆಗಳ ಕುರಿತು ಸಭೆ ನಡೆಸಿ ಚರ್ಚಿಸಿದರು.

ಶಾಂತಿಸಭೆ : ಪಿಎಸ್‌ಐ ತಿಪರೆಡ್ಡಿ ಸಲಹೆಶಾಂತಿಯುತವಾಗಿ ಮೊಹರಂ ಆಚರಿಸಿ

ಶಾಂತಿಸಭೆ : ಪಿಎಸ್‌ಐ ತಿಪರೆಡ್ಡಿ ಸಲಹೆಶಾಂತಿಯುತವಾಗಿ ಮೊಹರಂ ಆಚರಿಸಿ

ಮುದ್ದೇಬಿಹಾಳ : ಜೂ.27 ರಿಂದ ಮೊಹರಂ ಹಬ್ಬದ ಆಚರಣೆ ಆರಂಭಗೊಳ್ಳಲಿದ್ದು ಶಾಂತಿಯುತವಾಗಿ ಆಚರಿಸುವಂತೆ ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೊಹರಂ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಜೂ.27 ರಂದು ಮೊಹರಂ ಹಬ್ಬದ ಆಚರಣೆ ಆರಂಭಗೊಂಡು 29 ರಂದು ದಫನ್ ಮಾಡಲಾಗುತ್ತದೆ. ಈ ಸಮಯದಲ್ಲಿ ಅಲಾಯ್ ದೇವರುಗಳನ್ನು ಪ್ರತಿಷ್ಠಾಪಿಸುವ ಸಮಿತಿಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಮೊಹರಂ ಹಬ್ಬ ಭಾವೈಕ್ಯತೆಯ ಸಂಕೇತವಾಗಿದ್ದು ಉಭಯ