Protest by pro-Dalit coalition

ದಲಿತಪರ ಒಕ್ಕೂಟದಿಂದ ಪ್ರತಿಭಟನೆ, ಶಾಸಕ ಸ್ಥಾನದಿಂದ ಮುನಿರತ್ನ ವಜಾಕ್ಕೆ ಆಗ್ರಹ (ವಿಡಿಯೋ ನೋಡಿ)

ದಲಿತಪರ ಒಕ್ಕೂಟದಿಂದ ಪ್ರತಿಭಟನೆ, ಶಾಸಕ ಸ್ಥಾನದಿಂದ ಮುನಿರತ್ನ ವಜಾಕ್ಕೆ ಆಗ್ರಹ (ವಿಡಿಯೋ ನೋಡಿ)

ಮುದ್ದೇಬಿಹಾಳ : ದಲಿತ ಜನಾಂಗದವರಿಗೆ ಜಾತಿ ನಿಂದನೆ ಮಾಡಿದ ಆಪಾದನೆ ಎದರಿಸುತ್ತಿರುವ ಬಿಜೆಪಿಯ ಮುನಿರತ್ನ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂಬುದು ಸೇರಿದಂತೆ 10 ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ತಮಟೆ ಬಾರಿಸುತ್ತಾ ದಲಿತ ಜನಾಂಗದವರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಘೋಷಣೆಗಳನ್ನು ಕೂಗುತ್ತಾ ತಹಶೀಲ್ದಾರ್ ಕಚೇರಿಗೆ ಆಗಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡರಾದ ತಿಪ್ಪಣ್ಣ ದೊಡಮನಿ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ದಲಿತರ ಜಾತಿ ನಿಂದನೆ ಮಾಡಿದ್ದು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಡಿ.ಬಿ.ಮುದೂರ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ತಾರತಮ್ಯ ಎಸಗದೇ ಸರ್ಕಾರದ ಸೌಲಭ್ಯಗಳು ಎಲ್ಲ ದಲಿತ ಜನಾಂಗದವರಿಗೆ ಸರಿಯಾಗಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.

ಮುಖಂಡ ಹರೀಶ ನಾಟೀಕಾರ, ಪ್ರಕಾಶ ಚಲವಾದಿ(ಸರೂರ) ಮಾತನಾಡಿ, ಬ.ಬಾಗೇವಾಡಿ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಅವರು ದಲಿತ ಜನಾಂಗದವರ ಮೇಲೆ ವಿವಿಧ ರೀತಿಯ ದೌರ್ಜನ್ಯದ 21 ಪ್ರಕರಣಗಳು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.

ಮುದ್ದೇಬಿಹಾಳ ಪೊಲೀಸ್ ಠಾಣೆಯ ಸಿಪಿಐ, ಪಿಎಸ್‌ಐ,ಡಿವೈಎಸ್ಪಿ ಅವರಿಗೆ ಲಂಚದ ರೂಪದಲ್ಲಿ ಹಣವನ್ನು ಪೋನಪೇ ಮೂಲಕ ಮಾಡಿಸಿಕೊಂಡಿದ್ದು ಅದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಇನ್ನುಳಿದಂತೆ ತಾಳಿಕೋಟಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ಸಾವಿಗೆ ಕಾರಣರಾಗಿರುವವರ ಮೇಲೆ ಕ್ರಮ ಜರುಗಿಸಬೇಕು.ಗಂಗಾವತಿ ತಾಲ್ಲೂಕು ಸಂಕನಾಳ, ಬಾದಾಮಿ, ಹುಣಸಗಿ ತಾಲ್ಲೂಕು ಬಪ್ಪರಗಿಯಲ್ಲಿ ದಲಿತ ಜನಾಂಗದವರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಮುಖಂಡ ಚೆನ್ನಪ್ಪ ವಿಜಯಕರ್,ಸಿದ್ದು ಕಟ್ಟಿಮನಿ, ದೇವರಾಜ ಹಂಗರಗಿ ಮಾತನಾಡಿದರು.

ಗ್ರೇಡ್-2 ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

Protest by pro-Dalit coalition

ಪ್ರತಿಭಟನೆಯಲ್ಲಿ ದೌರ್ಜನ್ಯ ತಡೆ ಸಮಿತಿ ಸದಸ್ಯ ಮಲ್ಲು ತಳವಾರ, ಮುಖಂಡರಾದ ಪರಶುರಾಮ ನಾಲತವಾಡ, ಪ್ರಶಾಂತ ಕಾಳೆ, ಪರಶುರಾಮ ಮುರಾಳ, ಬಸವರಾಜ ಸರೂರ, ಭಗವಂತ ಕಬಾಡೆ,ಬಲಭೀಮ ನಾಯ್ಕಮಕ್ಕಳ, ಮಹೆಬೂಬ ಕುಂಟೋಜಿ, ರಾಮಣ್ಣ ರಾಜನಾಳ, ಮುತ್ತು ಚಲವಾದಿ, ಪ್ರಚಂಡಪ್ಪ ಚಲವಾದಿ, ಆನಂದ ಮುದೂರು, ಪುರಸಭೆ ಸದಸ್ಯ ಶಿವು ಶಿವಪೂರ, ಮಂಜುನಾಥ ಕಟ್ಟಿಮನಿ ಪಾಲ್ಗೊಂಡಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಡಿಸಿಜಿ ಕನ್ನಡ Facebook, Dailyhunt, ShareChat, Twitter ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Latest News

ಬಾಗಲಕೋಟೆಯಲ್ಲಿ ಪ್ಯಾಲಿಸ್ಟೈನ್ ಧ್ವಜ ಹಾರಾಟ, ಪ್ರಕರಣ ದಾಖಲು: ಎಸ್ಪಿ ಅಮರನಾಥ ರೆಡ್ಡಿ (ವಿಡಿಯೋ ನೋಡಿ)

ಬಾಗಲಕೋಟೆಯಲ್ಲಿ ಪ್ಯಾಲಿಸ್ಟೈನ್ ಧ್ವಜ ಹಾರಾಟ, ಪ್ರಕರಣ ದಾಖಲು: ಎಸ್ಪಿ ಅಮರನಾಥ ರೆಡ್ಡಿ (ವಿಡಿಯೋ ನೋಡಿ)

ಬಾಗಲಕೋಟೆ: ಈದ ಮಿಲಾದ ಹಬ್ಬದ ಆಚರಣೆ ವೇಳೆ ಪ್ಯಾಲಿಸ್ಟೈನ್ ಧ್ವಜ ಹಾರಾಟದ‌ ಹಿನ್ನೆಲೆ ಬಾಗಲಕೋಟೆಯ

ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದನ್ನು ಸುಳ್ಳು ಎಂದ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಡವೇ?

ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದನ್ನು ಸುಳ್ಳು ಎಂದ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಡವೇ?

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಸರ್ಕಾರದ ಗೊಡ್ಡು ಬೆದರಿಕೆಗೆ ನಾವು

ತಂದೆಯ ಶವ ಬೈಕ್ ನಲ್ಲಿಯೇ ಸಾಗಿಸಿದ ಮಕ್ಕಳು..! ವೈ.ಎನ್ ಹೊಸಕೋಟೆ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸಾರ್ವಜನಿಕರ ಆಕ್ರೋಶ

ತಂದೆಯ ಶವ ಬೈಕ್ ನಲ್ಲಿಯೇ ಸಾಗಿಸಿದ ಮಕ್ಕಳು..! ವೈ.ಎನ್ ಹೊಸಕೋಟೆ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಪಾವಗಡ: ಸಾವು ಒಂದು ಕಡೆಯಾದರೆ, ಕೊನೆಯ ಕ್ಷಣದಲ್ಲಿ ಗೌರವಯುತವಾಗಿ ಬೀಳ್ಕೊಡಲು ಆಗುತ್ತಿಲ್ಲ ಎಂಬ ಕೊರಗಿನಿಂದಲೇ

ಅಯ್ಯೋ ದುರ್ವಿಧಿಯೇ..! ತಂದೆ ಲಾರಿ ರಿವರ್ಸ್ ತೆಗೆಯೋವಾಗ ಡಿಕ್ಕಿ ಹೊಡೆದು ಮಗು ದುರ್ಮರಣ..!

ಅಯ್ಯೋ ದುರ್ವಿಧಿಯೇ..! ತಂದೆ ಲಾರಿ ರಿವರ್ಸ್ ತೆಗೆಯೋವಾಗ ಡಿಕ್ಕಿ ಹೊಡೆದು ಮಗು ದುರ್ಮರಣ..!

ಹೈದ್ರಾಬಾದ್: ಇಲ್ಲಿ ಹೃದಯ ತಲ್ಲಣಗೊಳಿಸುವ ಅಪಘಾತವೊಂದು ಸಂಭವಿಸಿದೆ. ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್

Accident: ಬದುಕಿನ ಸಂತೆ ಮುಗಿಸಿದ ವ್ಯಾಪಾರಿ: ಗೂಡ್ಸ್ ಅಟೋ-ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು

Accident: ಬದುಕಿನ ಸಂತೆ ಮುಗಿಸಿದ ವ್ಯಾಪಾರಿ: ಗೂಡ್ಸ್ ಅಟೋ-ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು

ಮುದ್ದೇಬಿಹಾಳ : ಗೂಡ್ಸ್ ಅಟೋ ಹಾಗೂ ಕ್ಯಾಂಟರ್ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅಟೋದಲ್ಲಿದ್ದ ಒರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿ ಅಟೋ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕವಡಿಮಟ್ಟಿ-ಹಿರೇಮುರಾಳ ಮಧ್ಯೆದಲ್ಲಿ ಬರುವ ಡಾಂಬರ್ ಪ್ಲಾಂಟ್ ಹತ್ತಿರ ಶನಿವಾರ ನಡೆದಿದೆ. ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada ಘಟನೆಯಲ್ಲಿ ಚವನಬಾವಿಯಲ್ಲಿ ಕಿರಾಣಿ ಅಂಗಡಿಯನ್ನಿಟ್ಟುಕೊಂಡಿದ್ದ ಕರಿಯಪ್ಪ ಡಿ.ನಾಲತವಾಡ(55) ಸ್ಥಳದಲ್ಲೇ ಅಸುನೀಗಿದರು. ಗೂಡ್ಸ್

TAPCMSಗೆ 4.40 ಲಕ್ಷ ರೂಪಾಯಿ ಲಾಭ: ಹೆಸರು ಕಾಳು ಖರೀದಿಗೆ ಕೇಂದ್ರ ಸ್ಥಾಪನೆ-ಸರಶೆಟ್ಟಿ

TAPCMSಗೆ 4.40 ಲಕ್ಷ ರೂಪಾಯಿ ಲಾಭ: ಹೆಸರು ಕಾಳು ಖರೀದಿಗೆ ಕೇಂದ್ರ ಸ್ಥಾಪನೆ-ಸರಶೆಟ್ಟಿ

ಮುದ್ದೇಬಿಹಾಳ : ರೈತರ ಸಹಕಾರದಿಂದ ಸನ್ 2023-24ನೇ ಸಾಲಿನಲ್ಲಿ 4.40 ಲಕ್ಷ ರೂ.ಲಾಭ ಗಳಿಸಿದೆ ಎಂದು TAPCMS ನಿರ್ದೇಶಕ ಎಂ.ಎಸ್.ಸರಶೆಟ್ಟಿ ಹೇಳಿದರು. ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada ಪಟ್ಟಣದ ಟಿಎಪಿಸಿಎಂಎಸ್‌ನ 67ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾಡಿದರು. ಹೆಸರು ಕಾಳು ಖರೀದಿ ಕೇಂದ್ರ ತೆರೆಯಲಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ನಮ್ಮ ಭಾಗದಲ್ಲಿ ಉದ್ದು ಬೆಳೆಯುವುದಿಲ್ಲ.ಸರ್ಕಾರ ಖರೀದಿ ಕೇಂದ್ರ