ನಾರಾಯಣಪುರ: ನಾರಾಯಣಪುರ ಮಾರ್ಗವಾಗಿ ರಾತ್ರಿ ವೇಳೆ ಕಲಬುರಗಿಯಿಂದ ವಿಜಯಪುರಕ್ಕೆ ಹಾಗೂ ಕೊಡೇಕಲ್ ಮಾರ್ಗವಾಗಿ ತಾಳಿಕೋಟಿಗೆ ಹೊಸ ಬಸ್ ಸಂಚಾರ ಶನಿವಾರ ಯಾದಗಿರಿ ಸಾರಿಗೆ ಡಿಸಿ (ಡಿವಿಜನಲ್ ಕಂಟ್ರೋಲರ್) ಅವರಿಗೆ ಬರೆದ ಮನವಿಯನ್ನು ಸಾರಿಗೆ ನಿಯಂತ್ರಕ ಐ.ಎ ಕರಣಿ ಅವರಿಗೆ ಗ್ರಾಮಸ್ಥರ ಸಲ್ಲಿಸಿದರು.
ಈ ವೇಳೆ ಮುಖಂಡ ಸಂಗಮೇಶ ತಾಳಿಕೋಟಿ ಮಾತನಾಡಿ ಜಿಲ್ಲೆಯ ಗಡಿಗ್ರಾಮವಾಗಿರುವ
ನಾರಾಯಣಪುರ ಸೇರಿ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಗ್ರಾಮಸ್ಥರಿಗೆ ರಾತ್ರಿ ವೇಳೆ ನಾರಾಯಣಪುರ ಮಾರ್ಗವಾಗಿ ಬಸ್ಸುಗಳ ಸಂಚಾರ ಇಲ್ಲದೆ ಇರುವದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಹೀಗಾಗಿ ರಾತ್ರಿ ವೇಳೆ ನಾರಾಯಣಪೂರ ಮಾರ್ಗವಾಗಿ ಕಲಬುರಗಿಯಿಂದ ವಿಜಯಪುರಕ್ಕೆ ಹಾಗೂ ಕೊಡೇಕಲ್ ಮಾರ್ಗವಾಗಿ ತಾಳಿಕೋಟಿಗೆ ಮತ್ತು ಶಹಾಪುರದಿಂದ ಧಾರವಾಡ ಹುಬ್ಬಳ್ಳಿಗೆ ನಾರಾಯಣಪುರ ಮಾರ್ಗವಾಗಿ ಬೆಳಿಗ್ಗೆ ಹಾಗೂ ರಾತ್ರಿ ವೇಳೆಗೆ ಹೊಸ ಬಸ್ ಸಂಚಾರ ಆರಂಭಿಸುವದರಿಂದ ಈ ಭಾಗದ ವ್ಯಾಪಾರಿಗಳಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ನಗರ ಪಟ್ಟಣದ ವೈದ್ಯಕೀಯ ಸೇವೆ ಪಡೆಯಲು ರೋಗಿಗಳಿಗೆ ತುಂಬಾ ಅನುಕೂಲವಾಗುತ್ತದೆ, ಇದನ್ನು ಸಾರಿಗೆ ಅಧಿಕಾರಿಗಳು ಮನಗಂಡು ಶೀಘ್ರವೇ ಹೊಸ ಬಸ್ಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ಹಣಮಗೌಡ ಪೊಲಿಸ್ ಪಾಟೀಲ್, ಪ್ರಶಾಂತ ರಾಠಿ, ಸಂಗಯ್ಯ ಹಿರೇಮಠ, ಹಣಮಂತರಾಯ, ನಾರಾಯಣ ನವಲೆ,ಗಜಾನನ ಮುತ್ತು, ಬಸವರಾಜ, ದೇವಣ್ಣ, ಶರಣು, ಇಬ್ರಾಹಿಂ, ಸದ್ದಾಂ, ವೀರಮುತ್ತು ಸೇರಿ ಇತರರು ಇದ್ದರು.