ಕುಡಿವ ನೀರು ಪೂರೈಸುವ ವಾಲ್ವ್ ನಲ್ಲಿ ಕೊಳೆತ ನಾಯಿ ಕಳೆಬರ ಪತ್ತೆ-ಗ್ರಾಮಸ್ಥರಲ್ಲಿ ಆತಂಕ

ಕುಡಿವ ನೀರು ಪೂರೈಸುವ ವಾಲ್ವ್ ನಲ್ಲಿ ಕೊಳೆತ ನಾಯಿ ಕಳೆಬರ ಪತ್ತೆ-ಗ್ರಾಮಸ್ಥರಲ್ಲಿ ಆತಂಕ

ಮುದ್ದೇಬಿಹಾಳ : ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮಕ್ಕೆ ಕುಡಿವ ನೀರು ಪೂರೈಸುವ ವಾಲ್ವ್ ಒಂದರಲ್ಲಿ ಸತ್ತಿರುವ ನಾಯಿಯ ಕೊಳೆತ ಕಳೆಬರ ಪತ್ತೆಯಾಗಿದ್ದು ನೀರು ಕುಡಿದಿರುವ ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟಾಗಿದೆ.

ತಾಲ್ಲೂಕಿನ ಇಂಗಳಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಜಮ್ಮಲದಿನ್ನಿ ಗ್ರಾಮಕ್ಕೆ ಜೆ.ಜೆ.ಎಂ ಕಾಮಗಾರಿಯಡಿ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ.ಕಳೆದ ಹದಿನೈದು ದಿನಗಳ ಹಿಂದೆಯೇ ನಾಯಿ ಸತ್ತು ಬಿದ್ದಿರುವ ಅನುಮಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಅದೇ ನೀರನ್ನು ಸೇವನೆ ಮಾಡಿದ್ದಾರೆ.ಇದರಿಂದ 8-10 ಜನರಿಗೆ ವಾಂತಿ ಬೇಧಿ ಆಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಜಮ್ಮಲದಿನ್ನಿ ಗ್ರಾಮಕ್ಕೆ ಕುಡಿವ ನೀರು ಪೂರೈಸುವ ಜಮ್ಮಲದಿನ್ನಿ ಕ್ರಾಸ್ ಬಳಿ ಇರುವ ವಾಲ್ ನಲ್ಲಿ ನಾಯಿ ಸತ್ತು ಬಿದ್ದಿದೆ.ಇದನ್ನು ಗಮನಿಸದೇ ವಾಟರ್ ಮನ್, ಪಂಚಾಯಿತಿ ಅಧಿಕಾರಿಗಳು ನೀರು ಪೂರೈಸಿದ್ದಾರೆ.ಇದರಿಂದ ಗ್ರಾಮದಲ್ಲಿ ಈ ನೀರು ಕುಡಿದಿರುವ ಹಲವರಿಗೆ ಆರೋಗ್ಯ ಸಮಸ್ಯೆಗಳು ಉಂಟಾಗಿದ್ದು ಆಸ್ಪತ್ರೆ ಸೇರಿದ್ದಾರೆ. ಆದರೆ ಸಂಬಂಧಿಸಿದ ಗ್ರಾಪಂ ಪಿಡಿಒ, ಅಧ್ಯಕ್ಷರು, ವಾಟರಮನ್ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅಲ್ಲದೇ ಆರೋಗ್ಯ ಇಲಾಖೆಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ಅಯ್ಯಪ್ಪ ಇಚಲಾಳ, ಆನಂದ ಮಂಗ್ಯಾಳ, ಸಂಗಣ್ಣ ನಾಗಾವಿ, ಬಸನಗೌಡ ಬಿರಾದಾರ, ಬಸವರಾಜ ಮಂಗ್ಯಾಳ ದೂರಿದ್ದಾರೆ.
ಈ ಕಲುಷಿತ ನೀರು ಕುಡಿದ ಗ್ರಾಮಸ್ಥರಿಗೆ ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಅದಕ್ಕೆ ಪಂಚಾಯಿತಿ ಅಧ್ಯಕ್ಷ,ಪಿಡಿಒ,ವಾಟರಮನ್ ಹೊಣೆಗಾರಾಗುತ್ತಾರೆ ಎಂದು ತಿಳಿಸಿದ್ದಾರೆ.

ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ಮಲ್ಲಪ್ಪ ಹಿರೇಕುರಬರ, ಪ್ರಭು ನಾಗಾವಿ, ಶ್ರೀಕಾಂತ ಗಬಸಾವಳಗಿ, ಸಿದ್ದಲಿಂಗಯ್ಯ ನಿಡಗುಂದಿಮಠ , ಯಲ್ಲಪ್ಪ ಸರೂರ, ಶ್ರೀಶೈಲ್ ಬಿರಾದಾರ, ದೇಸು ಮಾಲಗತ್ತಿ, ಚೆನ್ನಪ್ಪ ಹಾದಿಮನಿ, ಚಂದ್ರಶೇಖರ ತಳವಾರ ಆಗ್ರಹಿಸಿದ್ದಾರೆ.

ಕೊಳೆತ ನಾಯಿಯ ಕಳೆಬರ ಪತ್ತೆಯಾಗಿದ್ದರೂ ಸಂಬಂಧಿಸಿದ ಪಂಚಾಯಿತಿ ನೀರು ಪೂರೈಕೆ ಸಿಬ್ಬಂದಿ ಗಮನಿಸದೇ ಇರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ

.

Latest News

ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ

ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ

ಮುದ್ದೇಬಿಹಾಳ : ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ಬಾಯ್ಲರ್ ಪ್ರದೀಪನ

ಸಚಿವ ಖರ್ಗೆಗೆ ಬೆದರಿಕೆಗೆ ಖಂಡನೆ :                       ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸದವರಿಂದ ದೇಶಪ್ರೇಮದ ಪಾಠ-ಸದ್ದಾಂ ಕುಂಟೋಜಿ ವ್ಯಂಗ್ಯ

ಸಚಿವ ಖರ್ಗೆಗೆ ಬೆದರಿಕೆಗೆ ಖಂಡನೆ : ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸದವರಿಂದ ದೇಶಪ್ರೇಮದ ಪಾಠ-ಸದ್ದಾಂ ಕುಂಟೋಜಿ ವ್ಯಂಗ್ಯ

ಮುದ್ದೇಬಿಹಾಳ : ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ದ

ತಾ.ಪಂ ಕಾನೂನು ಸಲಹೆಗಾರರಾಗಿ ಎನ್.ಬಿ.ಮುದ್ನಾಳ ನೇಮಕ

ತಾ.ಪಂ ಕಾನೂನು ಸಲಹೆಗಾರರಾಗಿ ಎನ್.ಬಿ.ಮುದ್ನಾಳ ನೇಮಕ

ಮುದ್ದೇಬಿಹಾಳ : ಶಾಸಕ ಸಿ.ಎಸ್.ನಾಡಗೌಡ ಶಿಫಾರಸ್ಸಿನ ಮೇರೆಗೆ ಇಲ್ಲಿನ ಹಿರಿಯ ವಕೀಲರಾದ ಎನ್.ಬಿ.ಮುದ್ನಾಳ ಅವರನ್ನು

ರಾಯಚೂರು: ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

ರಾಯಚೂರು: ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

ರಾಯಚೂರು ಅಕ್ಟೋಬರ್ 15: ಇ- ಕಾಮರ್ಸ್‌ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ,

ಶಾಸಕ ನಾಡಗೌಡ ರಣತಂತ್ರ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ ಅವಿರೋಧ ಆಯ್ಕೆ

ಶಾಸಕ ನಾಡಗೌಡ ರಣತಂತ್ರ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ ಅವಿರೋಧ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ., ಇದರ ಆಡಳಿತ ಮಂಡಳಿಯ 12 ಜನ ನಿರ್ದೇಶಕರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ಚುನಾವಣಾಧಿಕಾರಿಯೂ ಆಗಿರುವ ವಿಜಯಪುರ ಸಹಕಾರ ಅಭಿವೃದ್ಧಿ ಅಧಿಕಾರಿ ರವೀಂದ್ರ ಆಳೂರ ಫಲಿತಾಂಶ ಘೋಷಿಸಿದರು. ಬ ವರ್ಗದ ಮತಕ್ಷೇತ್ರದಲ್ಲಿ ಸಾಮಾನ್ಯ ವರ್ಗದಿಂದ ಗುರುಲಿಂಗಪ್ಪ ಹಡಲಗೇರಿ(ಕೊಣ್ಣೂರ), ಬಸವರಾಜ ಬಗಲಿ(ತಮದಡ್ಡಿ), ಮಹಿಳಾ ವರ್ಗದಿಂದ ವನಮಾಲಾ ಮೇಟಿ(ಹಂದ್ರಾಳ), ಮಲ್ಲಮ್ಮ ಪಾಟೀಲ(ಗುಂಡಕರ್ಜಗಿ), ಹಿಂದುಳಿದ ಅ ವರ್ಗದಿಂದ ಮುತ್ತಪ್ಪ ಮುತ್ತಣ್ಣವರ(ಮಸೂತಿ),

ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ 78 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು. ಅವರು ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಾರಿಗೆ ಇಲಾಖೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು