Sangappa Mante, a freedom fighter neglected by the government

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ ಕಂಡವನಲ್ಲ. ಆಧುನಿಕ ರಾಜಕೀಯ ಪರಿಸ್ಥಿತಿನೇ ಈಗಿದೇ ನನಗೆ ಈವರೆಗೂ ಸರಕಾರ ಯಾವ ಸೌಲಭ್ಯ ಕೊಡುತ್ತಿಲ್ಲ. ಸಮೀಪದ ಕೊಡೇಕಲ್ ಗ್ರಾಮದ ಸುಮಾರು 102 ವರ್ಷದ ನೇಕಾರಿಗೆ ವೃತ್ತಿಯ ಸಂಗಪ್ಪ ಮಂಟೆ ಅವರ ಮನದಾಳದ ಮಾತುಗಳಿವು.

ದೇಶಕ್ಕೆ ಹೆಸರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಎಲ್ಲೆಂದರಲ್ಲಿ ನಾವೇ ಎನ್ನುವ ಟಿವಿಯ ಮಾತು. ಹಣ ಕೊಟ್ಟರೆ ಅಧಿಕಾರಿಗಳಿಂದ ಕೆಲಸ ಸಾಧ್ಯ. ಇವೆಲ್ಲ ನನಗೆ ಬೇಡ ಎಂದು ನಾನು ನನ್ನ ವೃತ್ತಿಯಲ್ಲಿದ್ದೇನೆ ಎನ್ನುವ ಸಂಗಪ್ಪ ಮಂಟೆ ಅವರು ನೊಂದುಕೊಂಡು ಬದುಕು ಕಟ್ಟಿಕೊಂಡಿದ್ದು ಇಂದಿಗೂ ಇಳಿ ವಯಸ್ಸಿನಲ್ಲಿ ಜಗ್ಗದೇ ನೇಕಾರಿಕೆ ಮಾಡುತ್ತಿದ್ದುದು ಅಚ್ಚರಿ ಮೂಡಿಸಿದೆ.

ಆಸರೆ ಇಲ್ಲ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಮಂಟೆ ಅವರು ಸುಮಾರು 15 ವರ್ಷದವರಿದ್ದಾಗಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದರು. ಮಂಟೆ ನೇರ ದಿಟ್ಟ ನಿರಂತರದ ವ್ಯಕ್ತಿತ್ವದವರು. ಸ್ವಾತಂತ್ರ್ಯಕ್ಕೋಸ್ಕರ ಪ್ರಾಣ ಬಿಟ್ಟವರಲ್ಲಿ ನಮ್ಮ ಭಾಗದಲ್ಲಿ ಅಂದಿನ ಗುಲಬರ್ಗಾ ಜೈಲಲ್ಲಿ 3 ತಿಂಗಳ ಕಾಲ ಕಳೆದಿದ್ದಾರೆ. ಬ್ರೀಟಿಷರು ಸಿಕ್ಕ ಸಿಕ್ಕವರ ಮನೆ ಮನೆಗಳಲ್ಲಿ ಹೊಕ್ಕು ಆಸ್ತಿ ಪಾಸ್ತಿ ಲೂಟಿ ಮಾಡಿದ್ದಲ್ಲದೇ ನಮ್ಮನ್ನು ಕಂಡು ಓಡಿ ಹೋದ ‘ರಜಾಕರು’ ಕ್ರೂರತನ ಮೆರೆದು ನಮ್ಮನ್ನು ಗುಲಾಮಗಿರಿ ಮಾಡಿಕೊಂಡಿದ್ದರು ಎನ್ನುತ್ತಾರೆ. ಆದರೂ ನಾ ಜಗ್ಗದೇ ಸುರುಪುರ ರಾಜಾ ವೆಂಕಟಪ್ಪ ನಾಯಕತ್ವದಲ್ಲಿ ಹೋರಾಡಿದ್ದು ನಿಜಕ್ಕೂ ಎದೆಗಾರಿಕೆಗೆ ಯಾವುದೂ ಸಾಟಿ ಇಲ್ಲದಂತೆ ಕತೆ ಬಿಚ್ಚಿಟ್ಟಿದ್ದಾರೆ.

ಕಾಗದ ಹಿಡಿದು ಅಲೆದಾಡಿದ್ದರು: ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರನ್ನು ಭೇಟಿ ಮಾಡಿದ್ದ ಮಂಟೆ ಅವರು ಈಗಿನ ಅಧಿಕಾರಿಗಳು ರಾಜಕೀಯ ನಾಯಕರು ಅವರ ಮಾತುಗಳೇ ಬಂಡವಾಳ, ಯಾವದೇ ಸರಕಾರ ಅಥವಾ ಪಕ್ಷ ಒಳ್ಳೆಯದ್ದೇ ಇರುತ್ತೆ ಆದರೆ ಆಡಳಿತ ನಡೆಸೋರೇ ಭ್ರಷ್ಟರು, ಸ್ವತಂತ್ರ ಸಿಕ್ಕ ನಂತರ ಸೌಲಭ್ಯಗಳು ಸಿಗಬಹುದು ಎಂದು ದಾಖಲೆಗಳನ್ನು ಹಿಡಿದು ಅಲೆದಾಡಿದೆ. ಎಲ್ಲೆ ಹೋದರೂ ಲಂಚವೇ ಕೇಳಿ ಬಂದಿತು. ಈಗ ಮಾಸಿಕ 10 ಸಾವಿರ ಹೊರತು ಈವರೆಗೂ ಆಸರೆ ಮನೆ ಅಥವಾ ನನ್ನ ಕಾಯಕದ ನೇಕಾರಿಕೆಗೆ ಸಂಬಂಧಿಸಿದ ಯಾವದೇ ಸೌಲಭ್ಯ ಕೊಡಲು ಭ್ರಷ್ಟ ಅಧಿಕಾರಿಗಳು ಮುಂದೆ ಬರಲಿಲ್ಲ. ಒಂದು ಮನೆ ಕೇಳಿದರೆ 20 ಸಾವಿರ ಕೇಳುತ್ತಾರೆ ಯಾಕೆ ಹಣ ಕೊಡಬೇಕು ಎನ್ನುತ್ತಾರೆ ಹೋರಾಟಗಾರ ಸಂಗಪ್ಪ ಮಂಟೆ.

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

Latest News

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಸಂತೋಷ್ ಲಾಡ್

ಉಡುಪಿ ಅಕ್ಟೋಬರ್ ೧೦: ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಿತ ರಕ್ಷಣೆಗೆ ನಮ್ಮ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ರಾಜ್ಯದಲ್ಲೂ ವೇತನ ಸಹಿತ ಋತುಚಕ್ರ ರಜೆ

ಬೆಂಗಳೂರು : ಋತುಚಕ್ರ ರಜೆ ನೀತಿ - 2025ಕ್ಕೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಕುಂಟೋಜಿಗೆ ಶಾಸಕ ನಾಡಗೌಡ ಭೇಟಿ: ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮದ ರೈತ ಸಂಗಪ್ಪ ಗೌಡರ ಸಾಲದ ಬಾಧೆ ತಾಳದೇ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಪಂಚಮಸಾಲಿಗರಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಚೆನ್ನಮ್ಮ ವೃತ್ತದ ಸುತ್ತಮುತ್ತ ಅನ್ಯ ವೃತ್ತಕ್ಕೆ ಅವಕಾಶ ಬೇಡ

ಮುದ್ದೇಬಿಹಾಳ : ಪಟ್ಟಣದ ಹುಡ್ಕೋಗೆ ತೆರಳುವ ದ್ವಾರದಲ್ಲಿ ಸ್ಥಾಪಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತದ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಯೋಜನೆಗಳ ಜಾರಿ

ತುಮಕೂರು, ಅ.8: ಅಸಂಘಟಿತ ವಲಯದಲ್ಲಿ ದುರ್ಬಲರಾಗಿರುವ ಕಾರ್ಮಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಆಶಾ ದೀಪ ಯೋಜನೆ, ಗಿಗ್ ಕಾರ್ಮಿಕರ ವಿಮಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಹೇಳಿದರು. ನಗರ ಹೊರವಲಯದ ಶ್ರೀ ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದ ʼತುಮಕೂರು ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ;                             ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ರೈತ; ಅತೀವೃಷ್ಟಿಗೆ ನಲುಗಿದ ಅನ್ನದಾತನ ಬದುಕು….!

** ಹೆಬ್ಬಾಳ** ಮುದ್ದೇಬಿಹಾಳ : ಆಗಷ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಹಲವಾರು ಬೆಳೆಗಳು ನೀರಲ್ಲಿ ನಿಂತಿದ್ದು ಅನ್ನದಾತ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗೇರಿ ಭಾಗದಲ್ಲಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದಿರುವ ಬಹುತೇಕ ಎಲ್ಲ ಬೆಳೆಗಳು ಕೊಳೆತಿವೆ. ಉಳ್ಳಾಗಡ್ಡಿ, ಹತ್ತಿ, ತೊಗರಿ,ಮೆಕ್ಕೆಜೋಳ,ದ್ರಾಕ್ಷಿ,ಬಾಳೆ,ಟೊಮ್ಯಾಟೋ ಅತಿವೃಷ್ಟಿಯಿಂದ ಹೊಲದಲ್ಲಿಯೇ ಹಾಳಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ರೈತ ಬಸವರಾಜ ಕುಂಟೋಜಿ, ಅತೀವೃಷ್ಟಿಯಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೇವೆ.ಮಳೆ