ಹೋರಾಟದ ಪರಿಣಾಮ ಮೀಸಲಾತಿ ಪರವಾಗಿ ತೀರ್ಪು: ಉಡಚಪ್ಪ ಮಳಗಿ

ಹೋರಾಟದ ಪರಿಣಾಮ ಮೀಸಲಾತಿ ಪರವಾಗಿ ತೀರ್ಪು: ಉಡಚಪ್ಪ ಮಳಗಿ

ಹಾವೇರಿ: ಡಾ.ಬಾಬಾಸಾಹೇಬ ಅಂಬೇಡ್ಕರ್ ಆಶಯದಂತೆ ಸಂವಿಧಾನ ಬದ್ಧವಾಗಿ, ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಹಂಚಿಕೆ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಳೆದ 30 ವರ್ಷಗಳಿಂದ ನಿರಂತರ, ಜಿಲ್ಲಾ, ರಾಜ್ಯ ಮಟ್ಟದ ಸಂವಾದ, ಚರ್ಚಾಕೂಟ, ಸಮಾವೇಶ, ಮುತ್ತಿಗೆ, ಹಲವಾರು ರೀತಿ ಜನಪರ ಹೋರಾಟ ಹಾಗೂ ನ್ಯಾಯಾಲಯದ ಹೋರಾಟಕ್ಕೆ ರಾಷ್ಟ್ರೀಯ ವಿಷಯವಾಗಿ ಚಳುವಳಿ ಮಾಡಿದ ಪರಿಣಾಮ ದೇಶದ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠದಲ್ಲಿ ಒಳಮೀಸಲಾತಿ ಪರವಾಗಿ ತೀರ್ಪು ಬಂದಿದೆ ಎಂದು ಉಡಚಪ್ಪ ಮಳಗಿ ಹರ್ಷ ವ್ಯಕ್ತಪಡಿದರು.

ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ವತಿಯಿಂದ ದೇಶದ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠದಲ್ಲಿ ಒಳಮೀಸಲಾತಿ ಪರವಾಗಿ ತೀರ್ಪು ನೀಡಿದನ್ನು ಸ್ವಾಗತಿಸಿ ಸಿಹಿ ಹಂಚಿ ಡಿ ಎಸ್ ಎಸ್ ರಾಜ್ಯ ಸದಸ್ಯರು ಉಡಚಪ್ಪ ಮಾಳಗಿಮಾತನಾಡಿದರು.

ಇಂತಹ ಐತಿಹಾಸಿಕ ತೀರ್ಪು ನೀಡಿದ ಸಂವಿಧಾನ ಪೀಠದ 7ಜನ ನ್ಯಾಯಾಧೀಶರಿಗೆ, ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಸಂಘಟನೆಗಳಿಗೆ, ಜನಪರ ಚಳುವಳಿಯಲ್ಲಿ ಭಾಗವಹಿಸಿದ ದಲಿತ ಚಳುವಳಿ ಹಾಗೂ ಇನ್ನಿತರ ಸಾಮಾಜಿಕ ಪರಿವರ್ತನೆಯ ಸಂಘಟನೆಗಳ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ,ಎಂ ಆಂಜನೇಯ ಮಂಜಪ್ಪ ಮಾರೋಳ, ವೈ.ಎನ್.ಮಾಸೂರ, ಜಗದೀಶ್ ಹರಿಜನ, ಶಿವು ಮುದಿಮಲ್ಲಣ್ಣವರ, ರೇಣುಕಾ ಬಡಕಣ್ಣವರ, ಮಂಜುನಾಥ್ ದೊಡ್ಡಮರಿಯಮ್ಮನವರ, ಮಹೇಶಪ್ಪ ಶಾಕಾರ, ಬಸವಣ್ಣಪ್ಪ ಅರಳಿಹಳ್ಳಿ, ಶಂಭುಲಿಂಗಪ್ಪ ದಿವಟರ, ಕೃಷ್ಣಕಾಂತ ಹೊಳಿಯಪ್ಪನವರ, ಮಂಜುನಾಥ್ ಮಾಸೂರ, ಹನಮಂತಪ್ಪ ಹೌಶಿ, ಗೀತಾ ಹಳೆಶಿಡೆನೂರ, ರತ್ನವ್ವ ದೊಡ್ಡಮನಿ ಇತರರು ಇದ್ದರು.

Latest News

ಕೂಲಿಕಾರರ ಅರೋಗ್ಯವೃದ್ಧಿಗೆ ನರೇಗಾ ಬದ್ಧ: ಪಿ. ಎಸ್. ಕಸನಕ್ಕಿ

ಕೂಲಿಕಾರರ ಅರೋಗ್ಯವೃದ್ಧಿಗೆ ನರೇಗಾ ಬದ್ಧ: ಪಿ. ಎಸ್. ಕಸನಕ್ಕಿ

ಮುದ್ದೇಬಿಹಾಳ : ಕೂಲಿಕಾರರ ಅರೋಗ್ಯ ವೃದ್ಧಿಗೆ ನರೇಗಾ ಯೋಜನೆ ಬದ್ಧವಾಗಿದ್ದು, ಇದಕ್ಕಾಗಿ ಕಾಮಗಾರಿ ಸ್ಥಳದಲ್ಲೆ

ಪರಿಸರ ರಕ್ಷಕ” ಪ್ರಶಸ್ತಿ ಪ್ರದಾನ ಭೂಮಿ ಮೇಲೆ ಸ್ವಾರ್ಥವಿಲ್ಲದೇ ಬದುಕು ನಡೆಸೋಣ: ಬಲರಾಮ ಕಟ್ಟಿಮನಿ

ಪರಿಸರ ರಕ್ಷಕ” ಪ್ರಶಸ್ತಿ ಪ್ರದಾನ ಭೂಮಿ ಮೇಲೆ ಸ್ವಾರ್ಥವಿಲ್ಲದೇ ಬದುಕು ನಡೆಸೋಣ: ಬಲರಾಮ ಕಟ್ಟಿಮನಿ

ಮುದ್ದೇಬಿಹಾಳ : ಭೂಮಿಯ ಮೇಳೆ ಮನುಷ್ಯ ಸ್ವಾರ್ಥವಿಲ್ಲದ ಜೀವನ ನಡೆಸಬೇಕು. ಈ ಭೂಮಿಯ ಮೇಲೆ

ನರೇಗಾ ಕೂಲಿಕಾರರಿಗೆ ಅರೋಗ್ಯ ಉಚಿತ ತಪಾಸಣೆ ಶಿಬಿರ

ನರೇಗಾ ಕೂಲಿಕಾರರಿಗೆ ಅರೋಗ್ಯ ಉಚಿತ ತಪಾಸಣೆ ಶಿಬಿರ

ಖಾತ್ರಿ ಯೋಜನೆಯಡಿ ನಿರಂತರ ಕೆಲಸ : ಗಣಾಚಾರಿ ಮುದ್ದೇಬಿಹಾಳ : ತಾಲ್ಲೂಕಿನ ಮುದ್ನಾಳ ಗ್ರಾಮದ

ಗ್ರಾಮದೇವತೆ ಜಾತ್ರೆಯ ನಿಮಿತ್ಯ ಸ್ಪರ್ಧೆ: ರಂಗೋಲಿ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ

ಗ್ರಾಮದೇವತೆ ಜಾತ್ರೆಯ ನಿಮಿತ್ಯ ಸ್ಪರ್ಧೆ: ರಂಗೋಲಿ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ

ಮುದ್ದೇಬಿಹಾಳ : ಪಟ್ಟಣದ ಗ್ರಾಮ ದೇವತೆ ಜಾತ್ರೆಯ ಅಂಗವಾಡಿ ಅಂಬೇಡ್ಕರ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಏರ್ಪಡಿಸಿದ್ದ

ಇಳಕಲ್ಲ ನಗರದಲ್ಲಿ ಬಕ್ರೀದ್‌ ಶಾಂತಿ ಸಭೆ

ಇಳಕಲ್ಲ ನಗರದಲ್ಲಿ ಬಕ್ರೀದ್‌ ಶಾಂತಿ ಸಭೆ

ಇಳಕಲ್ಲ: ಹಬ್ಬಗಳನ್ನು ಖಷಿಯಾಗಿರಲು ಆಚರಣೆ ಮಾಡಬೇಕು ವಿನಃ ಸ್ವಾರ್ಥದಿಂದ ಸಮಾಜದ ಸ್ವಾಸ್ಥ ಕೆಡಿಸುವಂತೆ ಇರಬಾರದು. ಅಂಥವರಿಂದ ಎಚ್ಚರಿಕೆಯಿಂದ ಇರಬೇಕು. ಸಮಾಜದಲ್ಲಿ ಶಾಂತಿ ಕದಡುವವರನ್ನು ಇಲಾಖೆ ಬಿಡುವುದಿಲ್ಲ ಎಂದು ಸಿಪಿಐ ಸುನೀಲ್ ಸವದಿ ಹೇಳಿದರು. ಇಳಕಲ್ಲ ನಗರದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಮಂಗಳವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಮುಖಾಂತರ ಮತ್ತೊಬ್ಬರಿಗೆ ಮಾದರಿಯಾಗಿರಬೇಕು ಎಂದು ತಿಳಿಸಿದರು ಸಾಮಾಜಿಕ ಮಾಧ್ಯಮಗಳು

ಗ್ರಾಮದೇವತೆ ಜಾತ್ರೆ : ರಾಷ್ಟ್ರ, ರಾಜ್ಯಮಟ್ಟದ ಪೈಲ್ವಾನ್‌ಗಳಿಂದ ರಂಗೇರಿದ ಕುಸ್ತಿ

ಗ್ರಾಮದೇವತೆ ಜಾತ್ರೆ : ರಾಷ್ಟ್ರ, ರಾಜ್ಯಮಟ್ಟದ ಪೈಲ್ವಾನ್‌ಗಳಿಂದ ರಂಗೇರಿದ ಕುಸ್ತಿ

ಮುದ್ದೇಬಿಹಾಳ : ಪಟ್ಟಣದ ಗ್ರಾಮದೇವತೆ ಜಾತ್ರೆಯ ಅಂಗವಾಗಿ ಭಾನುವಾರ ಸಂಜೆ ಇಲ್ಲಿನ ಪ್ರಾರ್ಥನಾ ವಿದ್ಯಾಮಂದಿರದ ಹಿಂಭಾಗದಲ್ಲಿರುವ ಕುಸ್ತಿ ಮೈದಾನದಲ್ಲಿ ರಾಷ್ಟ್ರ, ರಾಜ್ಯಮಟ್ಟದ ಕುಸ್ತಿಪಟುಗಳಿಂದ ಭರ್ಜರಿ ಕುಸ್ತಿ ಪ್ರದರ್ಶನ ನಡೆಯಿತು. ಮಧ್ಯಪ್ರದೇಶ, ಮಹಾರಾಷ್ಟ್ರ, ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರಾಜ್ಯಮಟ್ಟದ ಕುಸ್ತಿಪಟುಗಳು ಪಾಲ್ಗೊಂಡು ಅಖಾಡವನ್ನು ರಂಗೇರಿಸಿದ್ದರು. ವಿಶೇಷವಾಗಿ ಕುಸ್ತಿಯನ್ನು ನಿಗದಿ ಮಾಡಿದ ಪೈಲ್ವಾನ್‌ರೊಂದಿಗೆ ಆಡಿಸಿದ್ದು ಕುಸ್ತಿ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಯಿತು. ಸಾವಿರಾರು ಜನರು ಕುಸ್ತಿಯನ್ನು ವೀಕ್ಷಿಸಿದರು.