ಮುದ್ದೇಬಿಹಾಳ : ತಾಲ್ಲೂಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಣೆ ಆರಂಭಿಸಿ ಹತ್ತು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈಚೇಗೆ ಸಂಸ್ಥೆಯ ಕಚೇರಿಯಲ್ಲಿ ಚೈತನ್ಯ ಸ್ವಸಹಾಯ ಗುಂಪಿನ 10ನೇ ವರ್ಷದ ದಶಮಾನೋತ್ಸವದ ಅಂಗವಾಗಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಶಿವಾನಂದ ಪಿ ಮಾತನಾಡಿ, ಮುದ್ದೇಬಿಹಾಳ ತಾಲೂಕಿಗೆ ಧರ್ಮಸ್ಥಳ ಯೋಜನೆ ಬಂದು 10 ವರ್ಷ ಪೂರ್ಣಗೊಂಡಿದ್ದು ಸ್ವ ಸಹಾಯ ಸಂಘದ ಸದಸ್ಯರು ಸಂಘಗಳನ್ನು ರಚನೆ ಮಾಡಿಕೊಂಡು ಸಾಲ ಪಡೆದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಸ್ವಾವಲಂಬನೆ ಜೀವನ ಸಾಗಿಸುತ್ತಿದ್ದಾರೆ.ಸಂಸ್ಥೆಯಿAದ ಹತ್ತು ಹಲವು ಅಭಿವೃದ್ದಿ ಯೋಜನೆ ಕಾರ್ಯಕ್ರಮಗಳು,ಯೋಜನೆಯಿಂದ ಸದಸ್ಯರುಗಳಿಗೆ ಹಾಗೂ ಗ್ರಾಮಗಳಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ತಂಡದ ಸದಸ್ಯರಾಧ ಗಿರಿಜಾ ಮಾತನಾಡಿ, ನಾವು ಸಂಘ ರಚನೆ ಮಾಡಿಕೊಂಡು ಇದುವರೆಗೆ 12 ಜನ ಸದಸ್ಯರು ಸೇರಿ ವಿವಿಧ ಸ್ವ ಉದ್ಯೋಗ ,ಮಕ್ಕಳ ಶಿಕ್ಷಣಕ್ಕೆ ಮನೆ ಕಟ್ಟಡಕ್ಕೆ, ಕೃಷಿಗೆ ಎಂದು ಇಲ್ಲಿವರೆಗೆ 16 ಲಕ್ಷದ ಸಾಲದ ವ್ಯವಹಾರ ಮಾಡುತ್ತಿದ್ದೇವೆ. ಸಂಘದಲ್ಲಿ ಸೇರಿದ ಮೇಲೆ ನಮಗೆ ಸ್ವಂತ ಉದ್ಯೋಗ ಮಾಡಲು ಅವಕಾಶ ಸಿಕ್ಕಿದೆ. ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆ ಅವರಿಗೆ ಅಭಿನಂದಿಸುವುದಾಗಿ ಹೇಳಿದರು.
ಯೋಜನೆ ಅಧಿಕಾರಿಗಳನ್ನು. ತಂಡದ ಹಳೆಯ ಪ್ರತಿನಿಧಿಗಳಾದ ಶ್ರೀಮತಿ ಅಮರಮ್ಮ ಹಾಗೂ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕಿ ವಿಜಯಲಕ್ಷಿö್ಮÃ ಬೂದಿಹಾಳಮಠ,ಹಿರಿಯ ಶಿಕ್ಷಕರಾದ ಸರೋಜಮ್ಮ ಶಿವಯೋಗಿಮಠ ಅವರನ್ನು ಸನ್ಮಾನಿಸಲಾಯಿತು.ಮೇಲ್ವಿಚಾರಕರಾಧ ನಾಗೇಶ್ ಎಸ್ ಕೆ. , ದೇವೇಂದ್ರಪ್ಪ ಹಾಗೂ ಸೇವಾಪ್ರತಿನಿಧಿ ಶ್ರೀಮತಿ ವಿಜಯಲಕ್ಷಿö್ಮÃ ಹಾಗೂ ತಂಡದ ಸದಸ್ಯರು ಇದ್ದರು.





