ಮುದ್ದೇಬಿಹಾಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಉದ್ದೇಶಕ್ಕೆ ಅಷ್ಟೇ ಸಾಲ ಕೊಡುವುದಕ್ಕೆ ಸಿಮೀತವಾಗದೇ ಅನ್ಯ ಉದ್ದೇಶಕ್ಕೂ ಸಾಲ ಸೌಲಭ್ಯ ಒದಗಿಸಬೇಕು ಎಂದು ವಿಡಿಸಿಸಿ ಬ್ಯಾಂಕ್ ಅಭಿವೃದ್ದಿ ಅಧಿಕಾರಿ ಎಂ.ಜಿ.ಪಾಟೀಲ ಹೇಳಿದರು.
ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ಈಚೇಗೆ ಏರ್ಪಡಿಸಿದ್ದ ತಾಲ್ಲೂಕು ಪ್ಯಾಕ್ಸುಗಳ ಮಟ್ಟದಲ್ಲಿ ವ್ಯಾಪಾರ ಅಭಿವೃದ್ದಿ ಯೋಜನೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಾಪಾರ ಅಭಿವೃದ್ಧಿಯ ಜಿಲ್ಲೆಯಲ್ಲಿ ಪ್ಯಾಕ್ಸ್ ಮಟ್ಟದಲ್ಲಿ ಉತ್ತಮವಾಗಿ ಪ್ರಗತಿಯಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ರಾಷ್ಟಿçÃಕೃತ ಬ್ಯಾಂಕುಗಳAತೆ ಉತ್ತಮ ಸೇವೆ ನೀಡಬೇಕು.ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಪಿಕೆಪಿಎಸಗಳ ಮೂಲಕ ಸೂಪರ್ ಬಜಾರ್, ಗೊಬ್ಬರ ವ್ಯಾಪಾರ,ಜನೌಷಧಿ ಕೇಂದ್ರ ಹೀಗೆ ಬ್ಯಾಂಕೇತರ ಚಟುವಟಿಕೆಗಳಿಗೆ ಒತ್ತು ನೀಡಿ ಗ್ರಾಮದ ಜನರಿಗೆ ಅನುಕೂಲಕರ ಸೇವೆಗಳನ್ನು ಪ್ಯಾಕ್ಸಗಳಿಂದಲೇ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಆರ್.ಬಿ.ಗುಡದಿನ್ನಿ ಮಾತನಾಡಿ, ಬಿಡಿಪಿ ವ್ಯವಹಾರವನ್ನು ಕಡ್ಡಾಯವಾಗಿ ಪಿಕೆಪಿಎಸ್ಗಳ ವ್ಯಾಪ್ತಿಯಲ್ಲಿ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು.43 ಪ್ಯಾಕ್ಸುಗಳು ಗಣಕೀಕೃತವಾಗುವ ಹಂತದಲ್ಲಿದ್ದು ಬೆಳೆಸಾಲ ಮಾತ್ರವಲ್ಲದೇ ಎಲ್ಲ ರೀತಿಯ ಸಾಲಗಳನ್ನು ವಿತರಿಸಬೇಕು ಎಂದು ತಿಳಿಸಿದರು.
ಕುದರಿ ಸಾಲವಾಡಗಿ ಮಾಜಿ ಕಾರ್ಯದರ್ಶಿ ಮಲ್ಲಣ್ಣ ಅಣೆಪ್ಪನವರ ಮಾತನಾಡಿದರು.ಆಡಳಿತ ಮಂಡಳಿ ಸಲಹೆಗಾರ ಜೆ.ಕೊಟ್ರೇಶಿ, ಮಾಜಿ ನಿರ್ದೇಶಕ ಎಸ್.ಬಿ.ಪಾಟೀಲ, ಸಹಾಯಕ ನಿಬಂಧಕ ಚೇತನ ಭಾವಿಕಟ್ಟಿ,ತರಬೇತಿ ಸಂಯೋಜಕ ಆರ್.ಎಂ.ಬಣಕಾರ, ಉಪಪ್ರಧಾನ ವ್ಯವಸ್ಥಾಪಕ ಎಂ.ಜಿ.ಬಿರಾದಾರ,ಮುಖAಡ ಸೋಮನಗೌಡ ಬಿರಾದಾರ,ಮುದ್ದೇಬಿಹಾಳ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪಿ.ಎಸ್.ಪಾಟೀಲ, ನೋಡಲ ಅಧಿಕಾರಿ ಎನ್.ಜಿ.ಜನಿವಾರ,ಮಲ್ಲಣ್ಣ ಅಗಸರ,ಸಿ.ಬಿ.ಮಲಘಾಣ ಮೊದಲಾದವರು ಇದ್ದರು.