ವರದಿಗಾರ : ಶಿವು ರಾಠೋಡ
ಹುಣಸಗಿ: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿಯನ್ನು ಭಾರತದ ಪ್ರತಿಯೊಬ್ಬ ಪ್ರಜೆಗಳು ಖಂಡಿಸುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹೇಳಿದರು.
ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಜನರುಜಮ್ಮು ಕಾಶ್ಮೀರ ದಲ್ಲಿ ಉಗ್ರರ ಗುಂಡಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಭೆಯಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ಹೇಡಿತನದ ಗುಂಡಿನ ದಾಳಿ ಕೃತ್ಯವನ್ನು ಈ ಘಟನೆಯನ್ನು ಪಕ್ಷಾತೀತವಾಗಿ ಖಂಡಿಸುತ್ತೇವೆ. ಜಾತಿ, ಊರು ಯಾವುದನ್ನು ಕೇಳದೆ ಧರ್ಮ ಹಿಂದು ಎಂದಿದ್ದಕೆ ಗುಂಡು ಹಾರಿಸಿ ಕೊಲ್ಲುವ ಮನಸ್ಥಿತಿಯ ಉಗ್ರರನ್ನು ಸದೆಬಡಿಯಬೇಕಾಗಿದೆ.
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆoಬುದು ಸಾರ್ವಕಾಲಿಕ ಸತ್ಯ, ಅಲ್ಲಿನ ಪ್ರತ್ಯೇಕತವಾದದ ಮನಸ್ಥಿತಿಯನ್ನು ಬದಲಾಯಿಸಲು ಹಾಗೂ ಜನ-ಜೀವನ ಸ್ಥಿತಿಗತಿಗಳನ್ನು ಸ್ಥಿರಗೊಳಿಸಿ ಶಾಂತಿಯುತ ಕಾಶ್ಮೀರವೆಂಬುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಈ ಘಟನೆಯಲ್ಲಿ ಬಾಗಿಯಾದ ಉಗ್ರರನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅವರನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿನಮನಿ ಹಾಗೂ ಆನಂದ ಬಾರಿಗಿಡದ ಮಾತನಾಡಿ, ಉಗ್ರರ ಸಂಹಾರಕ್ಕಾಗಿ ಪಕ್ಷಾತೀತವಾಗಿ ಒಗ್ಗೂಡಬೇಕು. ಉಗ್ರರನ್ನ ಮಟ್ಟಹಾಕಲು ಪ್ರಧಾನಿ ಮೋದಿ ಗೃಹ ಸಚಿವ ಅಮಿತ್ ಶಾ ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಹಿಂದುಗಳನ್ನೇ ಗುರಿಯಾಗಿಟ್ಟು ದಾಳಿ ಮಾಡಿರುವುದು ಖಂಡನೀಯ. ಉಗ್ರರನ್ನ ಗುಂಡಿಕ್ಕಿಕೊಲ್ಲಲು ನಮ್ಮ ಸೈನಿಕರಿಗೆ ಭಗವಂತ ಶಕ್ತಿ ನೀಡಲಿ. ಈಗಾಗಲೇ ಭಾರತೀಯ ಯೋಧರು ಇಬ್ಬರು ಉಗ್ರರನ್ನು ಸದೆಬಡಿದಿದ್ದಾರೆ. ಈ ಘಟನೆಯನ್ನ ಇಡೀ ವಿಶ್ವವೇ ಖಂಡಿಸುತ್ತದೆ. ಎಲ್ಲರನ್ನ ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಕ್ರಮ ಕೈಗೊಳ್ಳಲಿ ಎಂದರು.
ಡಾ. ಯುಸುಫ್ ಡೆಕ್ಕನ್ ಮಾತನಾಡಿ, ಉಗ್ರರಿಗೆ ಸಹಕಾರ ನೀಡುತ್ತಿರುವ ಸ್ಥಳೀಯ ದೇಶದ್ರೋಹಿಗಳನ್ನು ಮೊದಲು ಮೊಟ್ಟಹಾಕಬೇಕಾಗಿದೆ. ಉಗ್ರರಿಗೆ ಕಠಿಣವಾದ ಶಿಕ್ಷೆ ನಮ್ಮ ಸೈನಿಕರಿಂದ ಆಗಲಿ ಎಂದು ಹೇಳಿದರು.
ನಂತರ ಘಟನೆಯಲ್ಲಿ ಮೃತಪಟ್ಟವರಿಗೆ ಒಂದು ನಿಮಿಷದ ಮೌನಾಚರಣೆ ಮಾಡುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಂದುಲಾಲ ಠವಾಣಿ, ಬಸವರಾಜ ಸಜ್ಜನ್, ಸಂಗಮೇಶ ಸಜ್ಜನ್, ಮಲ್ಲಯ್ಯ ನಂದಿಕೋಲ, ಗುಂಡು ಅಂಗಡಿ, ರೇಣುಕಾ ಪೌಜದಾರ, ಲಕ್ಷ್ಮಿ ಮೇದಾ, ಪಾರ್ವತಿ ಯಾಳವಾರ, ಆನಂದ ಬಾರಿಗಿಡದ, ವೆಂಕಟೇಶ ಅರಳಿಗಿಡದ, ರಮೇಶ ಮಿರಜಕರ್, ಮಹೇಶ ಸ್ಥಾವರಮಠ, ಶರಣಗೌಡ ಗೆಣ್ಣೂರು, ದೇವು ಬೈಚಬಾಳ, ರಮೇಶ ವಾಲಿ, ಸೇರಿದಂತೆ ಪಟ್ಟಣದ ಮುಖಂಡರು ಯುವಕರು ಪಾಲ್ಗೊಂಡಿದ್ದರು.