Tungabhadra dam Installation of five stop log gate element complete

Tungabhadra dam: ಐದೂ ಸ್ಟಾಪ್ ಲಾಗ್ ಗೇಟ್ ಎಲಿಮೆಂಟ್ ಅಳವಡಿಕೆ ಪೂರ್ಣ.. Good News

Tungabhadra dam: ಐದೂ ಸ್ಟಾಪ್ ಲಾಗ್ ಗೇಟ್ ಎಲಿಮೆಂಟ್ ಅಳವಡಿಕೆ ಪೂರ್ಣ.. Good News

ಕೊಪ್ಪಳ: ಟಿಬಿ ಡ್ಯಾಮ್ (Tungabhadra dam) ಗೆ ಎಲ್ಲಾ 5 ಸ್ವಾಪ್ ಲಾಗ್ ಗೇಟ್ ಗಳನ್ನ ಯಶಸ್ವಿಯಾಗಿ ಅಳವಡಿಕೆ ಮಾಡಲಾಗಿದ್ದು, ಸತತ ಮೂರು ದಿನಗಳ ಪರಿಶ್ರಮದ ಫಲವಾಗಿ ಶನಿವಾರ ಸಂಜೆ ಡ್ಯಾಮ್ ನ 19ನೇ ಗೇಟ್ ಗೆ ಸ್ಟಾಪ್ ಲಾಗ್ ಗೇಟ್ ಕೂರಿಸಲಾಗಿದೆ.

ಈ ಮೂಲಕ ಡ್ಯಾಂ ನಿಂದ ಹರಿದುಹೋಗುತ್ತಿದ್ದ ಅಪಾರ ಪ್ರಮಾಣದ ನೀಗವ ಸಂರಕ್ಷಿಸುವಲ್ಲಿ ಕನ್ನಯ್ಯ ನಾಯ್ಡು ಮತ್ತು ತಂಡ ಯಶಸ್ವಿಯಾಗಿದೆ.

Join Our Telegram: https://t.me/dcgkannada

ಟಿಬಿ ಡ್ಯಾಮ್ (Tungabhadra dam) ನ ಗೇಟ್ ನಂಬರ್ 19 ಮುರಿದ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಆತಂಕ ಮನೆ ಮಾಡಿತ್ತು. ಗೇಟ್ ರಿಪೇರಿ ಕಾರ್ಯ ಮಾಡಲು ಜಲಾಶಯದ ಅರ್ಧದಷ್ಟು ನೀರನ್ನ ಖಾಲಿ ಮಾಡಬೇಕು ಎಂದು ಅಂದಾಜಿಸಲಾಗಿತ್ತು. ಆದರೆ ಸುಮಾರು 90 ಟಿಎಂಸಿ ನೀರನ್ನು ಉಳಿಸಿಕೊಳ್ಳುವಲ್ಲಿ ತಜ್ಞರ ತಂಡ ಸಕ್ಸಸ್ ಆಗಿದೆ.

ಇದನ್ನೂ ಓದಿ: Death News: ವಿದ್ಯುತ್ ತಂತಿ ತುಳಿದು ವ್ಯಕ್ತಿಯೋರ್ವ ಸ್ಥಳದಲ್ಲಿಯೇ ದುರ್ಮರಣ..! (ವಿಡಿಯೋ ನೋಡಿ)

ಭಾರತದಲ್ಲಿಯೇ ಈ ರೀತಿಯ ಸ್ಟಾಪ್ ಲಾಲ್ ಗೇಟ್ ಅಳವಡಿಕೆ ವಿಧಾನ ಇದೇ ಮೊದಲ ಪ್ರಯತ್ನವಾಗಿದೆ. ಇದೀಗ ಈ ಕಾರ್ಯಾಚರಣೆ ಯಶಸ್ವಿಯಾಗಿರೋದು ಸರ್ಕಾರ, ರೈತರು ಮತ್ತು ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡದ ಖುಷಿ ತಂದಿದೆ. ಆದರೆ, ಇದು ತಾತ್ಕಾಲಿಕ ಪರಿಹಾರ‌ವಾಗಿದೆ. ಸದ್ಯಕ್ಕೆ ಜಲಾಶಯದ ನೀರನ್ನ ಉಳಿಸಿಕೊಳ್ಳುವಲ್ಲಿ ಉಪಯುಕ್ತವಾಗಿದೆ.

ಮುಂದಿನ ದಿನಗಳಲ್ಲಿ ಜಲಾಶಯದ ನೀರಿನ ಮಟ್ಟ ಇಳಿಮುಖವಾದ ನಂತರ ಪೂರ್ಣ ಪ್ರಮಾಣದ ಗೇಟ್ ಅಳವಡಿಕೆ ಕಾಮಗಾರಿ ಕೈಗೊಳ್ಳಬೇಕಿದೆ. ಒಟ್ಟಾರೆ, ನೀರು ಪೋಲಾಗುವುದನ್ನು ತಡೆಯುವಲ್ಲಿ ತಂತ್ರಜ್ಞರ ತಂಡ ಯಶಸ್ಸು ಕಂಡಿದೆ.

Latest News

ಬ್ಯಾಂಡ್ಮಿಂಟನ್ :  ರಾಜ್ಯಮಟ್ಟಕ್ಕೆ ಎಂ.ಎಂ.ಲಕ್ಷ್ಮೀಶ್ ಆಯ್ಕೆ

ಬ್ಯಾಂಡ್ಮಿಂಟನ್ :  ರಾಜ್ಯಮಟ್ಟಕ್ಕೆ ಎಂ.ಎಂ.ಲಕ್ಷ್ಮೀಶ್ ಆಯ್ಕೆ

ವಿಜಯಪುರ : ದೇವರ ಹಿಪ್ಪರಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ  ದೈಹಿಕ ಶಿಕ್ಷಣ ನಿರ್ದೇಶಕ

ರಾಷ್ಟ್ರೀಯ ಸ್ವಚ್ಛತಾ ದಿನ ;                                                                   ‘ಪ್ಲಾಸ್ಟಿಕ್ ಮುಕ್ತ ಪರಿಸರ ಎಲ್ಲರ ಆದ್ಯತೆ ಆಗಲಿ’

ರಾಷ್ಟ್ರೀಯ ಸ್ವಚ್ಛತಾ ದಿನ ; ‘ಪ್ಲಾಸ್ಟಿಕ್ ಮುಕ್ತ ಪರಿಸರ ಎಲ್ಲರ ಆದ್ಯತೆ ಆಗಲಿ’

ಮುದ್ದೇಬಿಹಾಳ : ಮಾರುಕಟ್ಟೆಗೆ ಹೋಗುವ ಮುನ್ನ ನಿಮ್ಮ ಜೊತೆಗೆ ಕೈಯ್ಯಲ್ಲಿ ಬಟ್ಟೆಯ ಬ್ಯಾಗನ್ನು ತೆಗೆದುಕೊಂಡು

ಭಕ್ತರಿಗೆ ಹಾಲುಮತ ಸಮಾಜದ ಮನವಿ:                                   ಫೆ.1 ರಂದು  ಕಾಗಿನೆಲೆ ಕನಕ ಗುರುಪೀಠದ ದಿ.ಸಿದ್ದರಾಮನಂದಪುರಿ ಸ್ವಾಮೀಜಿ ನುಡಿನಮನ

ಭಕ್ತರಿಗೆ ಹಾಲುಮತ ಸಮಾಜದ ಮನವಿ: ಫೆ.1 ರಂದು ಕಾಗಿನೆಲೆ ಕನಕ ಗುರುಪೀಠದ ದಿ.ಸಿದ್ದರಾಮನಂದಪುರಿ ಸ್ವಾಮೀಜಿ ನುಡಿನಮನ

ಮುದ್ದೇಬಿಹಾಳ : ತಿಂಥಣಿ ಬ್ರಿಜ್‌ನ ಕಾಗಿನೆಲೆ ಕನಕ ಗುರುಪೀಠದ ದಿ.ಸಿದ್ಧರಾಮನಂದಪರಿ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮ

42 ಸಾಧಕರು,3 ಸಂಘಗಳಿಗೆ ಪ್ರಶಸ್ತಿ :                                      ಜ.31 ರಂದು ಸ್ವಾಮಿ ವಿವೇಕಾನಂದರ ಸದ್ಭಾವನಾ ಪ್ರಶಸ್ತಿ ಪ್ರದಾನ

42 ಸಾಧಕರು,3 ಸಂಘಗಳಿಗೆ ಪ್ರಶಸ್ತಿ : ಜ.31 ರಂದು ಸ್ವಾಮಿ ವಿವೇಕಾನಂದರ ಸದ್ಭಾವನಾ ಪ್ರಶಸ್ತಿ ಪ್ರದಾನ

ಮುದ್ದೇಬಿಹಾಳ : ಉತ್ತರ ಕರ್ನಾಟಕ ಭಾಗದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು ಅಶ್ಲೀಲತೆಯ ಸೋಂಕಿಲ್ಲದoತೆ

ಆರ್.ಎಂ.ಎಸ್.ಎ ಶಾಲೆಗೆ ಪ್ರವೇಶ ಪರೀಕ್ಷೆ: ಅರ್ಜಿ ಆಹ್ವಾನ

ಆರ್.ಎಂ.ಎಸ್.ಎ ಶಾಲೆಗೆ ಪ್ರವೇಶ ಪರೀಕ್ಷೆ: ಅರ್ಜಿ ಆಹ್ವಾನ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿ ಸರ್ಕಾರಿ ಆದರ್ಶ ವಿದ್ಯಾಲಯ(ಆರ್.ಎಂ.ಎಸ್.ಎ) -ದ ಸನ್ 2026-27ನೇ ಸಾಲಿನಲ್ಲಿ ಆರನೇ ತರಗತಿಗೆ ಪ್ರವೇಶ ಪಡೆದುಕೊಳ್ಳಲು ಅರ್ಹ ವಿದ್ಯಾರ್ಥಿಗಳಿಂದ ಆನಲೈನ್ ದಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಫೆ.26ರವರೆಗೆ ಸಲ್ಲಿಸಲು ಕೊನೆ ದಿನವಾಗಿದ್ದು ಆನಲೈನ್‌ದಲ್ಲಿ ಅರ್ಜಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗೆ ಶಾಲೆಯ ಮುಖ್ಯಗುರು ಅನೀಲಕುಮಾರ ರಾಠೋಡ ಮೊ.9945614301,9845762701,9611510632ನ್ನು ಸಂಪರ್ಕಿಸಬಹುದಾಗಿದೆ.ಅರ್ಜಿ ಸಲ್ಲಿಸಲು www.schooleducation.karnataka.gov.in, or www.vidyavahini.karnataka.in ವೆಬ್ ಸೈಟ್ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾಸ್ಪೂರ್ತಿ ಶಾಲೆಯಲ್ಲಿ 77 ನೇ ಅದ್ದೂರಿ ಗಣರಾಜ್ಯೋತ್ಸವ

ವಿದ್ಯಾಸ್ಪೂರ್ತಿ ಶಾಲೆಯಲ್ಲಿ 77 ನೇ ಅದ್ದೂರಿ ಗಣರಾಜ್ಯೋತ್ಸವ

ಮುದ್ದೇಬಿಹಾಳ : ಪಟ್ಟಣದ ವಿದ್ಯಾ ನಗರದಲ್ಲಿರುವ ವಿದ್ಯಾಸ್ಪೂರ್ತಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಶಾಲೆಯ ಅಧ್ಯಕ್ಷ ಬಸಮ್ಮ ಸಿದರಡ್ಡಿ ಧ್ವಜಾರೋಹಣ ಮಾಡಿದರು.ಸಂಸ್ಥಾಪಕರಾದ ರಾಮನಗೌಡ ಸಿದರಡ್ಡಿ, ಕಾರ್ಯದರ್ಶಿಗಳಾದ ಮಹಾಂತೇಶ ಸಿದರಡ್ಡಿ,ಮುಖ್ಯ ಅತಿಥಿಗಳಾಗಿ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ,ಮಾಜಿ ಸೈನಿಕ ಗೌಡಪ್ಪ ಚವನಬಾವಿ ಇದ್ದರು. ದೈಹಿಕ ಶಿಕ್ಷಕ ಚನ್ನಬಸು ಬಳವಾಟ ಧ್ವಜವಂದನೆ ಕಾರ್ಯಕ್ರಮ ನಡೆಸಿಕೊಟ್ಟರು.ದೇಶಭಕ್ತರ ವಿಶೇಷ ವೇಷಭೂಷಣಗಳಲ್ಲಿ ಮಕ್ಕಳು ಗಮನ ಸೆಳೆದರು.