ಸಿಂಜೆಂಟಾ ಕಂಪನಿ ಅನ್ಯಾಯದ ವಿರುದ್ಧ ಕಾರ್ಮಿಕನ ಏಕಾಂಗಿ ಹೋರಾಟ!

ಸಿಂಜೆಂಟಾ ಕಂಪನಿ ಅನ್ಯಾಯದ ವಿರುದ್ಧ ಕಾರ್ಮಿಕನ ಏಕಾಂಗಿ ಹೋರಾಟ!



ಮುದ್ದೇಬಿಹಾಳ : ತಾಲ್ಲೂಕಿನ ಬಳಬಟ್ಟಿ ನಿವಾಸಿ ಬುಡ್ಡೇಸಾಬ ಚಪ್ಪರಬಂದ ಸಿಂಜೆಂಟಾ ಕಂಪನಿಯ (Syngenta Company) ಮೋಸದ ವಿರುದ್ಧ ಕಾರ್ಮಿಕ ಇಲಾಖೆಯ ಆಯುಕ್ತರಿಗೆ, ಇಲ್ಲಿನ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ಕುರಿತು ಸಲ್ಲಿಸಿದ ಮನವಿಯಲ್ಲಿ ಮೂರು ವರ್ಷಗಳ ಕಾಲ “ಸಿಂಜೆಂಟಾ” (Syngenta Company) ಎಂಬ ಖಾಸಗಿ ಕಂಪನಿಯಲ್ಲಿ ಎಂ.ಡಿ.ಓ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ಕರ್ನಾಟಕದ ಕಂಪನಿಯ ನನ್ನ ಮೇಲಾಧಿಕಾರಿಗಳು ಉದ್ದೇಶಪೂರ್ವಕವಾಗಿ ನನ್ನನ್ನು ದಿನಾಂಕ 06-03-2024 ರಂದು ನನಗೆ ನೋಟಿಸ್ ಪಿರಿಯಡ್ ನೀಡದೇ, ಕಾರ್ಮಿಕ ಕಾಯ್ದೆ ನಿಯಮಗಳನ್ನು ಅನುಸರಿಸದೇ ಹಾಗೂ ನನ್ನಿಂದ ರಾಜೀನಾಮೆ ಪಡೆಯದೇ ಏಕಾಏಕಿ ನನ್ನನ್ನು ಕೆಲಸದಿಂದ ವಜಾಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

Join Our Telegram: https://t.me/dcgkannada

ಈ ಕ್ರಮವನ್ನು ಪ್ರಶ್ನಿಸಿ ವಿಜಯಪುರ ಜಿಲ್ಲಾ ಕಾರ್ಮಿಕ ಸಂಧಾನಾಧಿಕಾರಿಗಳಿಗೆ ದೂರನ್ನು ನೀಡಿದ್ದೇನೆ.ನನ್ನ ದೂರಿನನ್ವಯ ಸಂಧಾನಾಧಿಕಾರಿಗಳು ಕಂಪನಿಯವರಿಗೆ ಮೊದಲನೇ ನೋಟಿಸ್‌ನ್ನು 27-3-2024 ರಂದು ಜಾರಿ ಮಾಡಿ ಅದರಲ್ಲಿ ದಿನಾಂಕ 15-4-2024 ರಂದು ಸಂಧಾನ ಸಭೆ ನಿಗದಿ ಮಾಡಿದ್ದರು.ಅದು ಕಂಪನಿಯ ಅಧಿಕಾರಿಗಳು ಹಾಗೂ ಅರ್ಜಿದಾರನಾದ ನನ್ನ ಬೇಡಿಕೆಗಳಿಗೆ ಸ್ಪಂದಿಸದೇ ಇದ್ದದ್ದರಿಂದ ಅದು ವಿಫಲವಾಯಿತು.

ಇದನ್ನೂ ಓದಿ: ಅಂಗನವಾಡಿ ಬೆಲ್ಲದಲ್ಲಿ ಸತ್ತ ಇಲಿ ಪತ್ತೆ! ಮೊಟ್ಟೆ ಕೊಟ್ಟು ಕಿತ್ತುಕೊಂಡವರನ್ನು ಮನೆಗೆ ಕಳುಹಿಸಿದ ಸಚಿವೆ ಹೆಬ್ಬಾಳ್ಕರ್ ಈಗ ಏನು ಮಾಡ್ತಾರೆ? (ವಿಡಿಯೋ ನೋಡಿ)

ನಂತರ ಎರಡನೇ ಸಭೆಯನ್ನು 24-5-2024 ರಂದು ಮತ್ತೆ ಸಂಧಾನಕ್ಕೆ ಕರೆಯಲಾಯಿತು.ಅಂದಿನ ದಿನ ಕಂಪನಿಯವರು ಕೆಲಸ ಮತ್ತು ಬಾಕಿ ಇರುವ ಎರಡೂವರೆ ತಿಂಗಳ ಸಂಬಳ ನೀಡುತ್ತೇವೆ. ಆದರೆ ಪ್ರೋತ್ಸಾಹಕ ಹಣ(ಇನ್ಸೆಂಟಿವ್) ನೀಡುವುದಿಲ್ಲ ಎಂದು ವಾದ ಮಾಡಿದರು. ಎಲ್ಲ ವಿಚಾರಗಳನ್ನು ಗಮನಿಸಿದ ಮಾನ್ಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು,ಸಭೆಯಲ್ಲಿ ನಡೆದ ವಿಚಾರಗಳ ಬಗ್ಗೆ ಪತ್ರವೊಂದನ್ನು ಬರೆದರು.ಅದಕ್ಕೆ ಸಿಂಜೆಂಟಾ ಕಂಪನಿಯ ಅಧಿಕಾರಿಗಳು ಸಹಿ ಮಾಡಲು ಧಿಕ್ಕರಿಸಿ ವಾಪಸ್ ಹೋದರು.

ಮತ್ತೆ ಸಂಧಾನ ಅಧಿಕಾರಿಗಳು 24-6-2024 ರಂದು ಆ ಸಂಧಾನ ಸಭೆಗೆ ಕಂಪನಿಯವರು ಬಾರದೇ ಮ್ಯಾನಪವರ್ ಎಂಬ ಏಜೆನ್ಸಿಯವರನ್ನು ಕಳುಹಿಸಿ ನಿಮಗೆ ಕೆಲಸ ನೀಡಲಾಗುವುದಿಲ್ಲ.ನಿಮ್ಮ ಬಾಕಿ ಇರುವ ಪ್ರೋತ್ಸಾಹಕ ಹಣವನ್ನು ಮಾತ್ರ ನೀಡುತ್ತೇವೆ ಎಂದು ಸೂಚಿಸಿದರು.

ಆಗ ನನ್ನ ಸಂಬಳವನ್ನಾದರೂ ಇವರಿಂದ ಪಡೆದುಕೊಂಡು ಇವರು ತಪ್ಪು ಮಾಡಿದ್ದನ್ನು ಸಾಬೀತುಪಡಿಸುವಲ್ಲಿ ಸಹಮತ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.

ಅದರಂತೆ ದೀರ್ಘ ಕಾಲದ ನಂತರ ಅಂದರೆ 30-6-2024 ರಂದು ಮ್ಯಾನಪವರ್ ಏಜೆನ್ಸಿಯವರು ಬಂದು ಮೂರುವರೆ ತಿಂಗಳ ಸಂಬಳ ಮತ್ತು ನನ್ನ ಪ್ರೋತ್ಸಾಹಕ ಹಣವನ್ನು ಚೆಕ್(ಚೆಕ್ ನಂ.664898) ರೂಪದಲ್ಲಿ ನೀಡಿದ್ದಾರೆ.

ಈ ಪ್ರಕ್ರಿಯೆಯನ್ನು ವಿಜಯಪುರ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಕೇವಲ ನನ್ನ ಸಂಬಳ ಮತ್ತು ಪ್ರೋತ್ಸಾಹಕ ಹಣವನ್ನು ಕೊಡಿಸುವ ಪ್ರಕ್ರಿಯೆ ಎಂದು ಪರಿಗಣಿಸಿ ಕಂಪನಿಯವರಿಗೆ ನನ್ನ ಕೆಲಸವನ್ನು ಮರಳಿ ನೀಡಲು ಸೂಚಿಸಬೇಕು. ಏಕಾಏಕಿ ಕೆಲಸದಿಂದ ತಗೆದು ಹಾಕಿದ್ದರಿಂದ ನನ್ನ ಕುಟುಂಬದ ಉಪಜೀವನ ನಡೆಸಲು ಕಷ್ಟಕರವಾಗಿತ್ತು. ಸದರಿ ವಿಷಯವಾಗಿ ಕಂಪನಿಯಿಂದ ನನಗಾದ ಅನ್ಯಾಯವನ್ನು ಮಾನ್ಯ ಗೌರವಾನ್ವಿತ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು, ಕಾರ್ಮಿಕ ಸಚಿವರು, ಉಸ್ತುವಾರಿ ಸಚಿವರು,ಕಾರ್ಮಿಕ ಇಲಾಖೆಯ ಆಯುಕ್ತರು ಇವರೆಲ್ಲರ ಗಮನಕ್ಕೆ ತಂದಿರುತ್ತೇನೆ. ಮಾನ್ಯ ದಯಾಳುಗಳಾದ ತಾವು ನನಗಾದ ಈ ಅನ್ಯಾಯವನ್ನು ಸರಿಪಡಿಸಿ ಕೆಲಸ ಕೊಡಿಸಬೇಕು ಇಲ್ಲದಿದ್ದಲ್ಲಿ ಸಿಂಜೆಂಟಾ ಕಂಪನಿಯ ಅಧಿಕಾರಿಗಳ ಏಕಚಕ್ರಾಧಿಪತ್ಯದ ಆಡಳಿತದ ವಿರುದ್ಧ ಮಾನ್ಯ ಘನ ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯ ಪಡೆದುಕೊಳ್ಳಲು ಅಧಿಕೃತವಾಗಿ ಇಲಾಖೆಯಿಂದ ಅವಕಾಶ ಮಾಡಿಕೊಡಬೇಕು ಎಂದು ವಿನಂತಿಸಿಕೊಳ್ಳುವುದಾಗಿ ತಹಶೀಲ್ದಾರ್‌ಗೆ ಶನಿವಾರ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

Latest News

ನಾನು ಸಿದ್ಧರಾಮಯ್ಯ ಏಜೆಂಟ್ ಅಲ್ಲ-ಯತ್ನಾಳ ಖಡಕ್ ಮಾತು

ನಾನು ಸಿದ್ಧರಾಮಯ್ಯ ಏಜೆಂಟ್ ಅಲ್ಲ-ಯತ್ನಾಳ ಖಡಕ್ ಮಾತು

ವಿಜಯಪುರ : ನಾನು ಯೋಗ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಹಾಗೆಂದು ನಾನು ಸಿದ್ಧರಾಮಯ್ಯ ಏಜೆಂಟ್ ಅಲ್ಲ,ಹಿಂದೆ ಸಿದ್ಧರಾಮಯ್ಯ

ವಿಜಯಪುರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ನಾಮಕರಣ ಮಾಡಿದ ಸಿಎಂ ಸಿದ್ದರಾಮಯ್ಯ

ವಿಜಯಪುರ ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ನಾಮಕರಣ ಮಾಡಿದ ಸಿಎಂ ಸಿದ್ದರಾಮಯ್ಯ

82 ಕೋಟಿ ರೂ.ವೆಚ್ಚದ ಕಾಮಗಾರಿ ಉದ್ಘಾಟನೆ,731 ಕೋಟಿ ಕೆಲಸಗಳಿಗೆ ಶಂಕುಸ್ಥಾಪನೆ ವಿಜಯಪುರ : ಜಿಲ್ಲೆಯ

ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ವೈದ್ಯರ ಸೂಚನೆ : ಉಲ್ಬಣಗೊಂಡ ನೆಗಡಿ,ಕೆಮ್ಮು,ಜ್ವರ : ದಿನಕ್ಕೆ 600 ಜನರ ತಪಾಸಣೆ

ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ವೈದ್ಯರ ಸೂಚನೆ : ಉಲ್ಬಣಗೊಂಡ ನೆಗಡಿ,ಕೆಮ್ಮು,ಜ್ವರ : ದಿನಕ್ಕೆ 600 ಜನರ ತಪಾಸಣೆ

ಮುದ್ದೇಬಿಹಾಳ : ಹೆಚ್ಚುತ್ತಿರುವ ಶೀತಗಾಳಿ,ಜ್ವರದಿಂದ ಮಕ್ಕಳು,ವೃದ್ಧರು,ಮಹಿಳೆಯರಲ್ಲಿ ನೆಗಡಿ,ಕೆಮ್ಮು,ಜ್ವರ ಉಲ್ಬಣಗೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳಲು

ಇಂದು ವಿಜಯಪುರ ನಗರಕ್ಕೆ  ಸಿಎಂ, ಡಿಸಿಎಂ ಭೇಟಿ:

ಇಂದು ವಿಜಯಪುರ ನಗರಕ್ಕೆ  ಸಿಎಂ, ಡಿಸಿಎಂ ಭೇಟಿ:

ಮುಖ್ಯಮಂತ್ರಿ,  ಉಪ ಮುಖ್ಯಮಂತ್ರಿಗಳಿಂದ ಹಲವು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ವಿಜಯಪುರ : ಬಸ್ ನಿಲ್ದಾಣದ

ಸಾರ್ವಜನಿಕರು,ವ್ಯಾಪಾರಿಗಳಿಗೆ ನಿತ್ಯ ಕಿರಿಕಿರಿ; ಮಂಗಗಳ ಹಾವಳಿಗೆ ಜನ ಹೈರಾಣು..!

ನಾಲತವಾಡ : ಪಟ್ಟಣದ ಹೃದಯಭಾಗವಾಗಿರುವ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಆಲದ ಮರದಲ್ಲಿ ಬಿಡಾರ ಹೂಡಿರುವ ಮಂಗಗಳಿOದ ನಿತ್ಯವೂ ಸಾರ್ವಜನಿಕರು,ವ್ಯಾಪಾರಿಗಳು ಹೈರಾಣಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಸೋಮವಾರ ಪಟ್ಟಣದಲ್ಲಿ ಸಂತೆ ನಡೆಯುತ್ತಿದ್ದು ಆಲದ ಮರದ ಸುತ್ತಮುತ್ತಲೂ ವೃದ್ಧರು,ಮಹಿಳೆಯರು ವ್ಯಾಪಾರಕ್ಕೆಂದು ಕಾಯಿಪಲ್ಯೆ,ಮಸಾಲೆ ಪದಾರ್ಥಗಳನ್ನು ಮಾರಾಟಕ್ಕೆ ಬರುವವರ ಮೇಲೆ ಈ ಮಂಗಗಳು ದಾಳಿ ಮಾಡುತ್ತಿವೆ. ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಐದಾರು ಜನರ ಮೇಲೆ ದಾಳಿ ಮಾಡಿ ಕಚ್ಚಿಗಾಯಗೊಳಿಸಿದ ಘಟನೆಗಳು ನಡೆದಿವೆ.ಸ್ವೀಟ್ ಮಾರ್ಟ್ ಅಂಗಡಿಯವರOತೂ

ಸಮಾಜ ಸೇವಕ ಪ್ರಭು ಭೈರಿ ಕಾರ್ಯ ಶ್ಲಾಘನೀಯ: ಮುಖಂಡ ಭೋವಿ.

ತಾಳಿಕೋಟಿ: ಸಮಾಜ ಸೇವೆಯ ಹೆಸರಿನಲ್ಲಿ ಕೇವಲ ತಮ್ಮ ಸ್ವಾರ್ಥವನ್ನೇ ಈಡೇರಿಸಿಕೊಳ್ಳುವ ಇಂದಿನ ದಿನಮಾನದಲ್ಲಿ ತಾನು ಜನಿಸಿದ ಗ್ರಾಮ ಅಭಿವೃದ್ಧಿಯಾಗಬೇಕು ಎಂಬ ಕಳಕಳಿಯಿಂದ ರೂ.25 ಲಕ್ಷ ಸ್ವಂತ ಹಣದಲ್ಲಿ ಸಿಸಿ ರಸ್ತೆ ಹಾಗೂ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಿ ಪ್ರಭು ಭೈರಿಯವರು ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಮುಖಂಡ ಅಶೋಕ ಭೋವಿ ಹೇಳಿದರು. ತಾಲೂಕಿನ ಕಲಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂತೆ ಮಾರಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳ ಆವರಣದಲ್ಲಿ