The recent murder case in Narayanpur police station is a new twist

ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಡೆದ ಕೊಲೆ ಪ್ರಕರಣ ಹೊಸ ಟ್ವಿಸ್ಟ್

ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಡೆದ ಕೊಲೆ ಪ್ರಕರಣ ಹೊಸ ಟ್ವಿಸ್ಟ್

ನಾರಾಯಣಪುರ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಂಡಬಾವಿ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಸೂಕ್ಷ್ಮವಾಗಿ ಕೊಲೆ ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸ್ ಇಲಾಖೆ ಅಧಿಕಾರಿಗಳು ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ಯಾದಗಿರಿ ಎಸ್‌ಪಿಯವರ ಆದೇಶದಂತೆ, ಸಿಪಿಐ ರವಿಕುಮಾರ್ ಹುಣಸಗಿ ವೃತ್ತ ಇವರ ತನಿಖೆ ಕೈಗೊಂಡು ಸತ್ಯಾಸತ್ಯತೆಯನ್ನು ಬಯಲಿಗೆಳೆದಿದ್ದಾರೆ.

ಮೃತ ವ್ಯಕ್ತಿಯ ಹೆಂಡತಿಯಾದ ರೇಣುಕಮ್ಮ ಗಂಡ ಗೌಡಪ್ಪ ಚವನಬಾವಿ ಸಾ. ಜೋಗಂಡಬಾವಿ ಅವರು ನೀಡಿದ ದೂರಿನ ಮೇರೆಗೆ ದಿನಾಂಕ 22 -4 – 2025 ರಂದು ಆರೋಪಿತರಾದ ನೀಲಪ್ಪ ತಂದೆ ಯಮನಪ್ಪ ಹಾಗೂ ಇನ್ನಿತರರು ಸಾ. ಜೋಗಂಡಬಾವಿ ಹಳೆಯ ವೈರತ್ವದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದರು.

ಈ ಕುರಿತು ತನಿಖೆ ಮುಂದುವರೆಸಿದ ಅಧಿಕಾರಿಗಳು ನಿಜ ಘಟನೆಯನ್ನು ಅರಿತು ದಿಗ್ಭ್ರಮೆಗೊಳಗಾಗಿದ್ದಾರೆ. ಗೌಡಪ್ಪನ ಅಕ್ಕನ ಮಗನಾದ ಸರಿಸುಮಾರು 14 ವರ್ಷದ ಬಾಲಕ (ಹೆಸರು ನಮೂದಿಸುವುದಿಲ್ಲ) ಬಡಿಗೆಯಿಂದ ತಲೆ ಹಿಂಬದಿಯಲ್ಲಿ ಹೊಡೆದಿರುತ್ತಾನೆ. ಈ ಪ್ರಕರಣವು ಕೆಂಭಾವಿ ಠಾಣೆ ವ್ಯಾಪ್ತಿಯ ಅಗತೀರ್ಥ ಸೀಮಾಂತರದಲ್ಲಿ ಕುರಿ ದೊಡ್ಡಿಯನ್ನು ಹಾಕಿರುತ್ತಾರೆ ಅಳಿಯ ಮತ್ತು ಮಾವನ ಮದ್ಯ ಯಾವುದೋ ವಿಷಯಕ್ಕೆ ಜಗಳವಾಡುತ್ತಾರೆ. ಆ ಜಗಳದಲ್ಲಿ ಅಳಿಯ ಮಾವನಿಗೆ ತಲೆ ಹಿಂಬದಿಯಲ್ಲಿ ಕಟ್ಟಿಗೆಯಿಂದ ಹೊಡೆದಿರುತ್ತಾನೆ. ಅದರೆ, ಈ ವಿಚಾರವನ್ನು ಸುಳ್ಳು ಕಟ್ಟುಕಥೆ ಕಟ್ಟಿ ಮತ್ತೊಬ್ಬರ ಮೇಲೆ ಪ್ರಕರಣ ದಾಖಲೆಯನ್ನು ಮಾಡಿಸಿರುತ್ತಾರೆ. ಈ ಘಟನೆಯಲ್ಲಿ ಕುಟುಂಬಸ್ಥರೇ ಆರೋಪಿಗಳಾಗಿದ್ದಾರೆ.

ಈ ಘಟನೆಯು ದಿನಾಂಕ 19- 4- 2025 ರಂದು ಸುಮಾರು 9:00 ಗಂಟೆ ರಾತ್ರಿ ವೇಳೆಯಲ್ಲಿ ನಡೆದಿದೆ. ಕುಟುಂಬಸ್ಥರೇ ಕೊಲೆ ಮಾಡಿ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಸಾಯಂಕಾಲ 4 ಗಂಟೆವರೆಗೆ ಶವವನ್ನಿಟ್ಟು ಪ್ರತಿಭಟನೆ ಮಾಡುತ್ತಾರೆ. ಬಾಗಲಕೋಟ ಆಸ್ಪತ್ರೆಯಿಂದ ತಂದು ಪೊಲೀಸ್ ಠಾಣೆ ಮುಂದೆ ಶವ ಇಟ್ಟು ಪೊಲೀಸರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಪ್ರತಿಭಟನೆ ಮಾಡುದರ ಜೊತೆಗೆ ರಾತ್ರಿ 11 ಗಂಟೆ ನಂತರ ಶವವನ್ನು ತಗೆದುಕೊಂಡು ಹೋಗುತ್ತಾರೆ. ಪೊಲೀಸರೇ ಆರೋಪಿಗಳ ಎಂಬುವಂತೆ ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಾರೆ.

ದಕ್ಷ ಅಧಿಕಾರಿ ರಾಜಶೇಖರ್ ರಾಠೋಡ ಪಿ.ಎಸ್.ಐ ನಾರಾಯಣಪುರ ಅವರ ವಿರುದ್ಧ ಶವವಿಟ್ಟು ಪ್ರತಿಭಟನೆ ಮಾಡಿ ಸುಳ್ಳು ಆರೋಪ ಮಾಡುತ್ತಾರೆ.

ವರದಿ : ಶಿವು ರಾಠೋಡ

Latest News

ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ಕುಳಗೇರಿ ಕ್ರಾಸ್: ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಕೊಪ್ಪದಲ್ಲಿ ಸನ್ 2025-26ನೇ ಸಾಲಿನ

ಉತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ ಪುರಸ್ಕೃತ ಶಿವಕುಮಾರಗೆ ಸನ್ಮಾನ

ಉತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ ಪುರಸ್ಕೃತ ಶಿವಕುಮಾರಗೆ ಸನ್ಮಾನ

ಮುದ್ದೇಬಿಹಾಳ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದಿಂದ ಕೊಡಮಾಡುವ ಉತ್ತಮ

ಬಸ್‌ಗೆ ಅಟೋ ಡಿಕ್ಕಿ: ಓರ್ವನಿಗೆ ಗಾಯ

ಬಸ್‌ಗೆ ಅಟೋ ಡಿಕ್ಕಿ: ಓರ್ವನಿಗೆ ಗಾಯ

ಮುದ್ದೇಬಿಹಾಳ : ಹಾಲು ಪೂರೈಸುವ ಗೂಡ್ಸ್ ವಾಹನವನ್ನು ಅಜಾಗರೂಕತೆಯಿಂದ ಚಲಾಯಿಸಿ ಬಸ್‌ಗೆ ಡಿಕ್ಕಿ ಹೊಡೆದ

ಗ್ರಾಮದೇವತೆ ಜಾತ್ರೆಗೆ ಕ್ಷಣಗಣನೆ: ಮದುವಣಗಿತ್ತಿಯಂತೆ ಶೃಂಗಾರಗೊಂಡ ಮುದ್ದೇಬಿಹಾಳ ನಗರ

ಗ್ರಾಮದೇವತೆ ಜಾತ್ರೆಗೆ ಕ್ಷಣಗಣನೆ: ಮದುವಣಗಿತ್ತಿಯಂತೆ ಶೃಂಗಾರಗೊಂಡ ಮುದ್ದೇಬಿಹಾಳ ನಗರ

ಮುದ್ದೇಬಿಹಾಳ : ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವತೆ ಜಾತ್ರೆಗೆ ಮುದ್ದೇಬಿಹಾಳ ಪಟ್ಟಣ ಮದುವಣಗಿತ್ತಿಯಂತೆ

ಹೃದಯಾಘಾತದಿಂದ ಕುಸಿದು ಬಿದ್ದ ಯುವತಿ ಸಾವು!

ಹೃದಯಾಘಾತದಿಂದ ಕುಸಿದು ಬಿದ್ದ ಯುವತಿ ಸಾವು!

ಹಾಸನ: ಇತ್ತೀಚೆಗೆ ಯುವ ಜನರೇ ಹೃದಯಾಘತಕ್ಕೆ ಬಲಿಯಾಗುತ್ತಿರುವುದು ಹೆಚ್ಚಾಗಿದ್ದು, ಇದೀಗ ಹೃದಯಾಘಾತದಿಂದ ಕುಸಿದುಬಿದ್ದು ಪದವಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಹಾಸನ ತಾಲೂಕಿನ ಕೆಲವತ್ತಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ಕೆಲವತ್ತಿ ಗ್ರಾಮದ ಪಾಪಣ್ಣ ಹಾಗೂ ಗಾಯತ್ರಿ ದಂಪತಿ ಪುತ್ರಿ ಕವನಾ ಕೆ.ವಿ. (21) ಎಂದು ಗುರುತಿಸಲಾಗಿದೆ. ಈಕೆ ಹಾಸನ ಸರ್ಕಾರಿ ಕಾಲೇಜಿನಲ್ಲಿ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜು ಮುಗಿಸಿ ಸಂಜೆ ಮನೆಗೆ ಬಂದ ಕವನಾಗೆ ಧಿಡೀರ್ ಆಗಿ ಎದೆನೋವು

ನಿಗದಿಯಂತೆ ಕಾರ್ಯಕ್ರಮ: ಮೇ.30 ರಂದು ಗ್ರಾಮ ದೇವತೆ ಜಾತ್ರೆಗೆ ಸಿದ್ಧತೆ ಪೂರ್ಣ

ನಿಗದಿಯಂತೆ ಕಾರ್ಯಕ್ರಮ: ಮೇ.30 ರಂದು ಗ್ರಾಮ ದೇವತೆ ಜಾತ್ರೆಗೆ ಸಿದ್ಧತೆ ಪೂರ್ಣ

ಮುದ್ದೇಬಿಹಾಳ : ಮೇ.30 ರಿಂದ ಪಟ್ಟಣದಲ್ಲಿ ಗ್ರಾಮದೇವತೆ ಜಾತ್ರೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಕಮೀಟಿಯ ಮುಖಂಡ ಪ್ರಭುರಾಜ ಕಲ್ಬುರ್ಗಿ ಹೇಳಿದರು. ಪಟ್ಟಣದ ಹಳೆ ತಹಸೀಲ್ದಾರ್ ಕಚೇರಿ ಬಳಿ ಇರುವ ಪೊಲೀಸ್ ಕ್ವಾರ್ಟರ್ಸ್ನಲ್ಲಿ ಮುದ್ದೇಬಿಹಾಳ ಗ್ರಾಮ ದೇವತೆ ಜಾತ್ರಾ ಕಮೀಟಿ ನೇತೃತ್ವದಲ್ಲಿ ಬುಧವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅಂದು ಬೆಳಗ್ಗೆ 8 ರಿಂದ ಗ್ರಾಮದೇವತೆ ಹಾಗೂ ಶಾರದಾ ದೇವಿಯವರ ಮೂರ್ತಿಗಳ ಭವ್ಯ ಮೆರವಣಿಗೆ ಕಿಲ್ಲಾದ ಹೊಸಮಠದಿಂದ