ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಹಲವೆಡೆ ಎಸ್.ಆಯ್.ಆರ್ ಪ್ರಗತಿಯನ್ನು ತಹಶೀಲ್ದಾರ್ ಕೀರ್ತಿ ಚಾಲಕ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲ್ಲೂಕಿನ ನೇಬಗೇರಿಯ ಭಾಗ ಸಂಖ್ಯೆ 211 ಹಾಗೂ 212ರಲ್ಲಿ,ಮುದ್ದೇಬಿಹಾಳದ ಕಿಲ್ಲಾ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿರುವ ತಹಶೀಲ್ದಾರರು, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊAಡಿರುವ ತಹಶೀಲ್ದಾರ್ರು, ಜು.4ರವರೆಗೆ ಮತಕ್ಷೇತ್ರದಲ್ಲಿ 1,56,657 ಜನರಿಗೆ ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು 10,246 ಮತದಾರರ ಗಣತಿ ನಮೂನೆ ಗಣಕೀಕರಣಗೊಳಿಸಲಾಗಿದೆ.ಆನಲೈನ್ ಮೂಲಕ 39 ಜನ ಗಣತಿ ನಮೂನೆ ಸಲ್ಲಿಸಿದ್ದಾರೆ.93 ಮತದಾರರು ಮರಣ ಹೊಂದಿದ್ದು 39 ಜನ ಶಾಶ್ವತವಾಗಿ ಸ್ಥಳಾಂತರಗೊAಡಿದ್ದಾರೆ.ಈಗಾಗಲೇ 20 ಮತದಾರರು ನೋಂದಾಯಿಸಿಕೊAಡಿದ್ದಾರೆ ಎಂದು ಮಾಹಿತಿ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಆಗಿರುವ ತಹಶೀಲ್ದಾರ್ ಕೀರ್ತಿ ಚಾಲಕ್ ಮಾಹಿತಿ ನೀಡಿದ್ದಾರೆ. ಎಸ್.ಆಯ್.ಆರ್ ಪರಿಶೀಲನಾ ಕಾರ್ಯದಲ್ಲಿ ನಿರತರಾಗಿರುವ ಬಿಎಲ್ಒಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಚಾಚು ತಪ್ಪದೇ ನಿಭಾಯಿಸಬೇಕು.ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಕರ್ತವ್ಯ ನಿಭಾಯಿಸಬೇಕು ಎಂದು ಮತದಾರರ ನೋಂದಣಾಧಿಕಾರಿ,ವಿಜಯಪುರ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬಿ.ಎ.ಸೌದಾಗರ ತಿಳಿಸಿದ್ದಾರೆ.ಕಂದಾಯ ನಿರೀಕ್ಷಕ ಪವನ್ ತಳವಾರ, ತರಬೇತಿದಾರ ಜಿ.ಎಚ್.ಚವ್ಹಾಣ,ಶಿಕ್ಷಕ ಸಂಗಮೇಶ ಹೂಗಾರ, ಎ.ಡಿ.ಅಮರವಾಡಗಿ ಮೊದಲಾದವರು ಇದ್ದರು.
ಮನೆಗೆ ಬಾರದ ಬಿಎಲ್ಓ ಹೆಸರು,ಮೊಬೈಲ್ ನಂಬರ್ ಗಣತಿ ನಮೂನೆ ಮೇಲೆ..! :
ಮುದ್ದೇಬಿಹಾಳದ ಪಿಲೆಕೆಮ್ಮ ನಗರದ ವಾರ್ಡ ಸಂಖ್ಯೆ 10ರಲ್ಲಿ ಬರುವ 143ರ ಭಾಗ ಸಂಖ್ಯೆಯ ಬಿಎಲ್ಒ ಮನೆ ಮನೆಗೆ ಭೇಟಿ ನೀಡುತ್ತಿಲ್ಲ.ಇಲ್ಲಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಯೇ ಮನೆ ಮನೆಗೆ ಭೇಟಿ ಕೊಡುತ್ತಿದ್ದಾರೆ.ಗಣತಿ ನಮೂನೆ ಮೇಲೆ ಕೊಟ್ಟಿರುವ ಬಿಎಲ್ಒ ಮೊಬೈಲ್ ನಂಬರ್ಗೆ ಕರೆ ನನಗೆ ಯಾರೂ ತರಬೇತಿ ಕೊಟ್ಟಿಲ್ಲ.ನಾನು ಒಲ್ಲೆ ಎಂದರೂ ನನಗೆ ಕೆಲಸಕ್ಕೆ ನಿಯೋಜನೆ ಮಾಡಿದ್ದಾರೆ.ನನಗೆ ಸರ್ಕಾರಿ ಕೆಲಸ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.ಇಂತವರನ್ನು ಯಾಕೆ ಮತದಾರರ ಪಟ್ಟಿ ಪರಿಷ್ಕರಣೆಗೆ ನಿಯೋಜಿಸಬೇಕಿತ್ತು ಎಂದು ಯುವ ಮುಖಂಡ ಅನಿಲ್ ನಾಯಕ ಪ್ರಶ್ನಿಸಿದ್ದಾರೆ.ಪಾರದರ್ಶಕವಾಗಿ ನಮ್ಮ ಭಾಗದಲ್ಲಿ ಎಸ್.ಐ.ಆರ್ ಪ್ರಕ್ರಿಯೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ತಹಶಿಲ್ದಾರ್ ಕೀರ್ತಿ ಚಾಲಕ್ ಅವರನ್ನು ಸಂಪರ್ಕಿಸಿದಾಗ, ಸದರಿ ಬಿಎಲ್ಒ ಅವರನ್ನು ಬದಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.







